Showing posts with label ಸ್ವಾರಸ್ಯಕರ ಸುದ್ದಿ. Show all posts
Showing posts with label ಸ್ವಾರಸ್ಯಕರ ಸುದ್ದಿ. Show all posts

Wednesday, August 1, 2018

ಇದು ಚಿನ್ನಮೋಹಿ ‘ಗೋಲ್ಡನ್ ಬಾಬಾ’ ಕೊನೆಯ ಕನ್ವರ್ ಯಾತ್ರೆ!


ಇದು ಚಿನ್ನಮೋಹಿ ‘ಗೋಲ್ಡನ್ ಬಾಬಾ’ ಕೊನೆಯ ಕನ್ವರ್ ಯಾತ್ರೆ!

ನವದೆಹಲಿ/ ಗಾಜಿಯಾಬಾದ್:  ಗೋಲ್ಡನ್ ಬಾಬಾ ಎಂದೇ ಖ್ಯಾತರಾಗಿರುವ ಬಂಗಾರದ ಬಾಬಾ ಸುಧೀರ್ ಮಕ್ಕರ್ ಮತ್ತೆ ತಮ್ಮ ಸುಪ್ರಸಿದ್ದ ಕನ್ವರ್ ಯಾತ್ರೆಗೆ ಸಜ್ಜಾಗಿದ್ದಾರೆ. ಈ ಬಾರಿ ಬಾಬಾ ಅಂದಾಜು ೬ ಕೋಟಿ ರೂಪಾಯಿ ಮೌಲ್ಯದ ೨೦ ಕಿ.ಗ್ರಾಂ. ಚಿನ್ನಾಭರಣ ಧರಿಸಿಕೊಂಡು ಕನ್ವರ್ ಯಾತ್ರೆ ನಡೆಸಲಿದ್ದಾರೆ. ಇದು ಅವರ ೨೫ನೆಯ ಹಾಗೂ ಕೊನೆಯ ಕನ್ವರ್ ಯಾತ್ರೆ.

ವರ್ಷದಿಂದ ವರ್ಷಕ್ಕೆ ಬಾಬಾ ಅವರು ಯಾತ್ರೆ ಕಾಲದಲ್ಲಿ ಧರಿಸುವ ಚಿನ್ನಾಭರಣದ ಪ್ರಮಾಣ ಏರುತ್ತಲೇ ಇದೆ. ೨೦೧೬ರಲ್ಲಿ ಅವರು ೧೨ ಕಿಲೋ ಗ್ರಾಂ ಚಿನ್ನಾಭರಣ ಧರಿಸಿ ಕನ್ವರ್ ಯಾತ್ರೆ ನಡೆಸಿದ್ದರು. ಕಳೆದ ವರ್ಷ ಅವರು ೧೪.೫ ಕಿ.ಗ್ರಾಂ ಚಿನ್ನಾಭರಣ ಧರಿಸಿ ಯಾತ್ರೆ ನಡೆಸಿದ್ದರು. ಈ ಚಿನ್ನಾಭರಣದಲ್ಲಿ ೨೧ ಚಿನ್ನದ ನಾಣ್ಯಗಳು, ೨೧ ದೇವತೆಗಳ ಲಾಕೆಟ್ ಗಳು, ಕೈ ಕಡಗಗಳು, ಚಿನ್ನದ ಜಾಕೆಟ್ ಇತ್ಯಾದಿ ಸೇರಿವೆ.

ಬಾಬಾ ಎಸ್ ಯುವಿ ಕಾರಿನಲ್ಲಿ ಕುಳಿತು ತಮ್ಮ ಯಾತ್ರೆ ನಡೆಸುತಾರೆ. ಅವರ ಈ ಯಾತ್ರೆಯಲ್ಲಿ ಪೊಲೀಸರಲ್ಲದೆ ಅಂಗರಕ್ಷಕರೂ ಇರುತ್ತಾರೆ.

ಈ ಬಾರಿ ಬಾಬಾ ಅವರು ಧರಿಸಲಿರುವ ಹೊಸ ಚಿನ್ನದ ಸರ ೨ ಕಿಗ್ರಾಂ ತೂಕವಿದ್ದು ಶಿವನ ಲಾಕೆಟ್ ಹೊಂದಿದೆ. ಕತ್ತು ನೋವು ಬರುವುದರ ಜೊತೆಗೆ ಒಂದು ಕಣ್ಣಿನ ದೃಷ್ಟಿ ಮಂದವಾಗಿರುವುದರಿಂದ ನಾನು ಈ ಬಾರಿ ಹೆಚ್ಚು ಚಿನ್ನ ಧರಿಸುವುದಿಲ್ಲ. ಇದು ನನ್ನ ೨೫ನೆಯ ವರ್ಷದ ಹಾಗೂ ಕೊನೆಯ ಕನ್ವರ್ ಯಾತ್ರೆ ಎಂದು ಬಾಬಾ ಹೇಳುತ್ತಾರೆ. ಚಿನ್ನಾಭರಣಗಳ ಜೊತೆಗೆ ಅಂದಾಜು ೨೭ ಲಕ್ಷ ರೂಪಾಯಿ ಬೆಲೆಯ ರೊಲೆಕ್ಸ್ ವಾಚನ್ನೂ  ಬಾಬಾ ಧರಿಸುತ್ತಾರೆ.

ಹರದ್ವಾರದಿಂದ ದೆಹಲಿಯವರೆಗೆ ೨೦೦ ಕಿಮೀ ದೂರ ಸಾಗುವ ಕನ್ವರ್ ಯಾತ್ರೆಯಲ್ಲಿ, ಬಾಬಾ ಅವರ ಸ್ವಂತ ವಾಹನಗಳಾದ ಬಿಎಂಡಬ್ಲ್ಯೂ, ಮೂರು ಪಾರ್ಚುನರ್‌ಗಳು, ಎರಡು ಆಡಿ ಮತ್ತು ಎರಡು ಇನ್ನೋವಾ ಕಾರುಗಳೂ ಸಾಗುತ್ತವೆ. ಯಾತ್ರೆಗಾಗಿ ಅವರು ಹಲವಾರು ಬಾರಿ ಹಮ್ಮರ್, ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಗಳನ್ನು ಬಾಡಿಗೆಗೆ ಪಡೆದು ಬಳಸಿದ್ದಾರೆ.

ನನ್ನ ಚಿನ್ನ ಮತ್ತು ಕಾರುಗಳ ವ್ಯಾಮೋಹ ಸಾಯುವುದಿಲ್ಲ. ೧೯೭೨-೭೩ರಲ್ಲಿ ಚಿನ್ನದ ಬೆಲೆ ತೊಲೆಗೆ (೧೦ ಗ್ರಾಮ್) ೨೦೦ ರೂ ಇದ್ದಾಗ ನಾನು ಚಿನ್ನಾಭರಣಗಳನ್ನು ಧರಿಸಲು ಆರಂಭಿಸಿದೆ ಎಂಬುದು ನನ್ನ ನೆನಪು. ಆಗ ನಾನು ೪ ತೊಲೆಯಷ್ಟು ಚಿನ್ನಾಭರಣ ಧರಿಸಿ ಯಾತ್ರೆ ಗೈದಿದ್ದೆ. ಕ್ರಮೇಣ ನನ್ನ ಬಳಿ ಬಂಗಾರ ಹೆಚ್ಚಿತು. ನಾನು ಸಾಯುವವರೆಗೂ ಚಿನ್ನಾಭರಣಗಳನ್ನು ನನ್ನ ಬಳಿಯೇ ಇಟ್ಟುಕೊಳ್ಳುವೆ. ಈ ಜಗತ್ತನ್ನು ತ್ಯಜಿಸುವಾಗ ನನ್ನ ಯಾರಾದರೂ ಒಬ್ಬ ಪ್ರಿಯ ಶಿಷ್ಯನಿಗೆ ಅವುಗಳನ್ನು ಹಸ್ತಾಂತರಿಸುವೆ ಎಂದು ಮಕ್ಕರ್ ಹೇಳುತ್ತಾರೆ.

ಆಧ್ಯಾತ್ಮದೆಡೆಗೆ ವಾಲುವ ಮುನ್ನ ಮಕ್ಕರ್ ಅವರು ದೆಹಲಿಯ ಗಾಂಧಿ ನಗರ ಮಾರುಕಟ್ಟೆಯಲ್ಲಿ ಒಬ್ಬ ಯಶಸ್ವೀ ಬಟ್ಟೆ ಹಾಗೂ ಆಸ್ತಿ ವ್ಯವಹಾರಗಾರರಾಗಿದ್ದರು. ಈಗ ಅವರು ಗಾಜಿಯಾಬಾದಿನ ಇಂದಿರಾಪುರದಲ್ಲಿ ಬಹುಮಹಡಿಗಳ ಬೃಹತ್ ಐಷಾರಾಮೀ ಫ್ಲಾಟ್ ಹೊಂದಿದ್ದಾರೆ.

ಬಾಬಾ ಅವರ ಆರಂಭದ ಬದುಕು ಅತ್ಯಂತ ಕಷ್ಟಮಯವಾಗಿತ್ತು. ಆರನೇ ವಯಸ್ಸಿನಲ್ಲಿ ಅವರು ಹರಿದ್ವಾರದಲ್ಲಿ ಬದುಕಿನ ದಾರಿ ಹುಡುಕುತ್ತಾ ಗುರುಕುಲ ಸೇರಿದ್ದರು. ರಸ್ತೆ ಬದಿಯಲ್ಲಿ ಗುಲಾಬಿ ಹೂ ಮತು ಬಟ್ಟೆ ಮಾರಾಟ ಮಾಡಿ ಅವರು ಬದುಕು ಸಾಗಿಸಿದ್ದರು.
ಬಳಿಕ ಭಗವಾನ್ ಶಿವನ ಕೃಪೆಯಿಂದ ನನ್ನ ವಹಿವಾಟು ಬೆಳೆಯಿತು. ನಾನು ಜೀನ್ಸ್, ಶರ್ಟ್ ಮತ್ತು ಜಾಕೆಟ್ ಗಳನ್ನು ’ಬಿಟ್ಟು ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಿದೆ. ಆಸ್ತಿ ವಹಿವಾಟೂ ಬೆಳೆಯಿತು. ನಾನು ಸಂಪೂರ್ಣವಾಗಿ ಶಿವನ ಭಕ್ತನಾದೆ ಎಂದು ಬಾಬಾ ಹೇಳುತ್ತಾರೆ.

ವಾರ್ಷಿಕ ಕನ್ವರ್ ಯಾತ್ರೆಯಲ್ಲಿ ಬಾಬಾ ಅತ್ಯಂತ ಜನಪ್ರಿಯರಾದ ಕೇಂದ್ರ ವ್ಯಕ್ತಿಯಾಗಿದದಾರೆ. ಮಕ್ಕಳು, ಮಹಿಳೆಯರು, ಯುವಕರು ಅವರ ಯಾತ್ರೆಯಲ್ಲಿ ಪಾಲ್ಗೊಳ್ಳಲು ದುಂಬಾಲು ಬೀಳುತ್ತಾರೆ. ಅವರ ವಿಡಿಯೋಗಳನ್ನು ಮಾಡುವುದು, ಅವರ ಜೊತೆಗೆ ಸೆಲ್ಫೀ ತೆಗೆದುಕೊಳ್ಳುವುದು ಮತ್ತು ಅವರ ಆಶೀರ್ವಾದಕ್ಕಾಗಿ ಪಾದ ಮುಟ್ಟಿ ನಮಸ್ಕರಿಸುವುದೇ ಇತ್ಯಾದಿ ಚಟುವಟಿಕೆಗಳು ಅವರ ಯಾತ್ರೆಯುದ್ದಕ್ಕೂ ನಡೆಯುತ್ತಲೇ ಇರುತ್ತವೆ.

Wednesday, July 4, 2018

ಇದು ‘ಪಿಲಿಮಂಡೆ’ ಹೆಲ್ಮೆಟ್!


ಇದು ‘ಪಿಲಿಮಂಡೆ’ ಹೆಲ್ಮೆಟ್!

ಮಂಗಳೂರು:  ಮಂಗಳೂರು ನಗರದಲ್ಲಿ ಯುವಕನೊಬ್ಬ ಬೈಕ್ ಓಡಿಸುತ್ತಿದ್ದರೆ ಹತ್ತಾರು ಜನ ಆತನನ್ನೇ ತಿರು ತಿರುಗಿ ನೋಡುತ್ತಾರೆ- ಏಕೆ ಗೊತ್ತೆ? ಈ ಮಹರಾಯ ‘ಪಿಲಿಮಂಡೆ’ ಧರಿಸಿಕೊಂಡು ನಿತ್ಯ ಬೈಕಿನಲ್ಲಿ ಓಡಾಡುತ್ತಾನೆ!

ಕರಾವಳಿಯಲ್ಲಿ ನವರಾತ್ರಿ ಅಥವಾ ಅಷ್ಟಮಿ ಸಂದರ್ಭದಲ್ಲಿ ಹುಲಿವೇಷ ಕುಣಿತಗಳು ಸಾಮಾನ್ಯ. ಹುಲಿವೇಷಗಳ ಮುಖವಾಡ ಅತ್ಯಂತ ಆಕರ್ಷಕ.  ನುರಿತ ಕಲಾವಿದರಷ್ಟೇ ಮುಖವಾಡವನ್ನು ವಿಶೇಷ ರೀತಿಯಲ್ಲಿ ತಯಾರಿಸುತ್ತಾರೆ.

ಆದರೆ ನಗರದ ಆಕಾಂಕ್ಷ್  ಎಂಬ ಯುವಕರೊಬ್ಬರು ಹುಲಿಯ ಮುಖವಾಡ ಹಾಕಿಕೊಂಡು ಮಂಗಳೂರು ಸುತ್ತ ಸುತ್ತಾಡುತ್ತಾರೆ. ಹೌದು. ಆದರೆ ಅವರು ಹಾಕುತ್ತಿರುವುದು ಹುಲಿವೇಶದ ಮುಖವಾಡವಲ್ಲ, ಬದಲಿಗೆ ಅದರಂತೆಯೇ ರೂಪಿಸಲಾಗಿರುವ ಹೆಲ್ಮೆಟ್ !

ಕುತ್ತಾರಿನ ಯುವಕ ಆಕಾಂಕ್ಷ್ ಹುಲಿಮುಖದ ಹೆಲ್ಮೆಟ್ಡಿಸೈನ್ ಮಾಡಿ ಯುವಕರಲ್ಲಿ ಹೊಸ ಕ್ರೇಜ್ಹುಟ್ಟಿಸಿದ್ದಾರೆ. ವ್ಯಾಘ್ರ ಘರ್ಜಿಸುವಾಗ ಕಂಡು ಬರುವ ದೃಶ್ಯವನ್ನು ಪ್ರತಿಬಿಂಬಿಸುವಂತೆ ಹೆಲ್ಮೆಟ್ವಿನ್ಯಾಸಗೊಂಡಿದೆ ನೈಜ ಐಎಸ್ ಮಾರ್ಕ್ ಹೆಲ್ಮೆಟ್ಗೆ ವಿನ್ಯಾಸವನ್ನು ಮಾಡಿರುವುದರಿಂದ ಕಾನೂನು ಪ್ರಕಾರ ಇದನ್ನು ಧರಿಸಲು ಯಾವುದೇ ತೊಂದರೆ ಇಲ್ಲ.

ಹುಲಿ ವೇಷದ ಬಗ್ಗೆ ಚಿಕ್ಕಂದಿನಲ್ಲೇ ವಿಶೇಷ ಆಸಕ್ತಿ ಮತ್ತು ಒಲವು ಹೊಂದಿದ್ದ ಆಕಾಂಕ್ಷ್ ಅವರ ಅಜ್ಜ ಹುಲಿವೇಷ ಹಾಕಿ ಕುಣಿಯುವುದರಲ್ಲಿ ಖ್ಯಾತಿ ಪಡೆದಿದ್ದರು. ಇವರ ಇಡೀ ಕುಟುಂಬಕ್ಕೆ ಹುಲಿವೇಷದ ಬಗ್ಗೆ ಅತ್ಯಂತ ಹೆಚ್ಚು ಆಸಕ್ತಿ.

ಇದೀಗ ಆಕಾಂಕ್ಷ್ ಅವರ ಹೆಲ್ಮೆಟ್ ಮಂಗಳೂರು ಸುತ್ತಮುತ್ತ ಹೊಸ ಕ್ರೇಜ್ ಸೃಷ್ಟಿಸಿದೆ. ರಸ್ತೆಯಲ್ಲಿ ಹೋಗುವಾಗಲೆಲ್ಲ ಸುತ್ತಮುತ್ತಲಿನ ಜನರು ಇವರ ಕಡೆಗೇ ದೃಷ್ಟಿ ಹಾಯಿಸುತ್ತಿದ್ದಾರೆ.

ವಾಹನದಲ್ಲಿ ಹೋಗುವ ಪ್ರಯಾಣಿಕರು ಕೂಡಾ ಪಿಲಿ ಮಂಡೆಯನ್ನು ನೋಡಿ ಆಶ್ಚರ್ಯದಿಂದ ತಿರು ತಿರುಗಿ ನೋಡಿ ಹೋಗುತ್ತಿದ್ದಾರೆ.

ಮೂಲತಃ ಕಲಾವಿದ ಆಗಿರುವ ಆಕಾಂಕ್ಷ್ ತಾನು ನಿತ್ಯ ಧರಿಸುವ ಹೆಲ್ಮೆಟ್ಗೆ ಹುಲಿವೇಷ ಮುಖವಾಡದ ಬಣ್ಣ ಬಳೆಯುವ ಕನಸು ಹೊಂದಿದ್ದರು. ಬಗ್ಗೆ ಅವರು ಹುಲಿವೇಷದ ಮುಖವಾಡ ರಚಿಸುವಲ್ಲಿ ಪ್ರಸಿದ್ಧರಾಗಿರುವ ಉಮೇಶ್ ಬೋಳಾರ್ ಅವರನ್ನು ಸಂಪರ್ಕಿಸಿದರು. ಆದರೆ ಅವರು ತನ್ನದೇ ಐಡಿಯಾ ಬಳಸಿಕೊಂಡು ನೈಜ ಹೆಲ್ಮೆಟ್ಗೆ ಹುಲಿವೇಷ ಮುಖವಾಡದ ಆಕಾರ ನಿರ್ಮಿಸಿಕೊಟ್ಟರು.

ಈಗ ನಿರ್ಮಾಣಗೊಂಡಿರುವ ಹೆಲ್ಮೆಟ್ ನೈಜವೇ ಅಥವಾ ನವರಾತ್ರಿಯ ಹುಲಿ ಮುಖವಾಡವೇ ಎಂದು ಅನುಮಾನ ಬರುವಷ್ಟು ಸುಂದರವಾಗಿ ಮೂಡಿಬಂದಿದೆ. ಆಕಾಂಕ್ಷ್ ಬೈಕ್ ನಿಲ್ಲಿಸಿದ ಕಡೆ ಯುವಕರ ಗುಂಪು ಹೆಲ್ಮೆಟ್ನ್ನು ಒಮ್ಮೆ ಮುಟ್ಟಿ ನೋಡುವುದು ಮಾಮೂಲಾಗಿದೆ. ಅಲ್ಲದೆ ಕೆಲವು ಯುವಕರು ಕೂಡಾ ತಮ್ಮ ಬೈಕ್ಗೆ ಇದೇ ಮಾದರಿಯ ಡಿಸೈನ್ ಮಾಡಿಸಲು ಮುಂದಾಗಿದ್ದಾರೆ.

 ಉಮೇಶ ಬೋಳಾರ್ ಅವರು ನಿರ್ಮಿಸಿಕೊಟ್ಟ ‘ಪಿಲಿಮಂಡೆ ಹೆಲ್ಮೆಟ್’ ಧರಿಸಿ ಹೋಗುವುದು ಎಂದರೆ ಈಗ ನನಗೆ ಬಲು ಹೆಮ್ಮೆ ಎನ್ನುತ್ತಾರೆ ಆಕಾಂಕ್ಷ್ ಕುತ್ತಾರ್.

Wednesday, May 30, 2018

ಪೆಟ್ರೋಲ್‌, ಡೀಸೆಲ್‌ ಬೆಲೆ ಕಾಂಗ್ರೆಸ್ ಕಾಲದಲ್ಲೂ ಅಷ್ಟೇ, ಈಗಲೂ ಅಷ್ಟೆ!


ಪೆಟ್ರೋಲ್‌, ಡೀಸೆಲ್ಬೆಲೆ ಕಾಂಗ್ರೆಸ್ ಕಾಲದಲ್ಲೂ ಅಷ್ಟೇ, ಈಗಲೂ ಅಷ್ಟೆ!

ನವದೆಹಲಿ : ಹದಿನಾರು ದಿನಗಳಿಂದ ಸತತ ಏರುತ್ತಾ ಬಂದ ಪೆಟ್ರೋಲ್ಮತ್ತು ಡೀಸೆಲ್ದರಗಳು 30 ಮೇ 2018ರ ಬುಧವಾರ  ಕೊನೆಗೂ ಇಳಿದವು.  ಆದರೆ  ಇಳಿದದ್ದು ಕೇವಲ 1 ಪೈಸೆಯಷ್ಟುಅಂದರೆ ಬೆಲೆ ಲೀಟರಿಗೆ 78ರಿಂದ 82ರ ಆಸುಪಾಸಿನಲ್ಲೇ ಇದೆ. ಅಚ್ಚರಿ ಪಡಬೇಡಿ, 5 ವರ್ಷಗಳ ಹಿಂದೆ ಕಾಂಗ್ರೆಸ್ ಕಾಲದಲ್ಲೂ ಪೆಟ್ರೋಲ್ ಬೆಲೆ ಇದ್ದದ್ದು ಹೆಚ್ಚು ಕಡಿಮೆ ಇದೇ ಮಟ್ಟದಲ್ಲಿ!

ಇಂಡಿಯನ್ ಆಯಿಲ್  ಕಾರ್ಪೋರೇಷನ್ (ಐಓಸಿ) ತನ್ನ  ವೆಬ್ಸೈಟಿನಲ್ಲಿ ಈದಿನ  ದೆಹಲಿ  ಮತ್ತು ಮುಂಬಯಿ ಯಲ್ಲಿ ಪೆಟ್ರೋಲ್ಮತ್ತು ಡೀಸೆಲ್ದರಗಳು ಅನುಕ್ರಮವಾಗಿ ಲೀಟರ್ಗೆ 60 ಮತ್ತು 59 ಪೈಸೆ ಇಳಿದಿರುವುದಾಗಿ ಪ್ರಕಟಿಸಿತ್ತು.

ಅದಾಗಿ ಸ್ವಲ್ಪವೇ ಹೊತ್ತಿನ ಬಳಿಕ ಐಓಸಿ ತನ್ನ ಪ್ರಕಟಣೆಯನ್ನು ಸರಿಪಡಿಸಿ ಪೆಟ್ರೋಲ್‌ , ಡೀಸೆಲ್ದರ ಕೇವಲ 1 ಪೈಸೆ ಇಳಿದಿರುವುದಾಗಿ ಸ್ಪಷ್ಟಪಡಿಸಿತು.

ಅಂತೆಯೇ ನಾಲ್ಕು ಮೆಟ್ರೋಪಾಲಿಟನ್ನಗರಗಳಾಗಿರುವ  ದೆಹಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಪೆಟ್ರೋಲ್ದರ ಲೀಟರಿಗೆ ಅನುಕ್ರಮವಾಗಿ 78.42, 81.05, 86.25 ಮತ್ತು 81.42 ರೂ ಇರುವುದಾಗಿ ಐಓಸಿ ಅಧಿಕೃತವಾಗಿ ತಿಳಿಸಿತು.

ಹಾಗೆಯೇ ದೆಹಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಡೀಸೆಲ್ಲೀಟರ್ದರ ಅನುಕ್ರಮವಾಗಿ 69.30, 71.85, 73.78 ಮತ್ತು 73.17 ರೂ. ಇರುವುದಾಗಿ ಅದು ತಿಳಿಸಿತು.

ಆದರೆ ಇದಕ್ಕಿಂತಲೂ ಕುತೂಹಲಕರವಾದ ಮಾಹಿತಿ ಪ್ರಕಾರ ಐದು ವರ್ಷದ ಹಿಂದೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ (ಯುಪಿಎ) ಸರ್ಕಾರ ಇದ್ದ 2013ನೇ ಸಾಲಿನಲ್ಲೂ ಪೆಟ್ರೋಲ್ ಬೆಲೆ ಈದಿನ ದರಕ್ಕಿಂತ ಕಡಿಮೆ ಏನೂ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಇಲ್ಲಿ ಇರುವ ಎರಡು ಚಿತ್ರಗಳು 2013ರಲ್ಲಿನ ಪೆಟ್ರೋಲ್ ಬೆಲೆಯನ್ನು ತಿಳಿಸುತ್ತವೆ. ಅದಕ್ಕೆ ಸಮರ್ಥನೆಯಾಗಿ 17 ಸೆಪ್ಟೆಂಬರ್ 2013ರ ಪೆಟ್ರೋಲ್ ಬೆಲೆಯ ನೈಜ ಬಿಲ್ಲಿನ ಚಿತ್ರವೂ ಇಲ್ಲಿದೆ. ಆದಿನ ಗ್ರಾಹಕರೊಬ್ಬರು ಪಾವತಿ ಮಾಡಿದ ಪೆಟ್ರೋಲ್ ದರ ಲೀಟರಿಗೆ 82.87 ರೂಪಾಯಿ!


ದೆಹಲಿ, ಕೋಲ್ಕತಾ, ಮುಂಬೈ, ಚೆನ್ನೈಯಲ್ಲಿ 20 ಡಿಸೆಂಬರ್ 2013ರಂದು ಇದ್ದ ಪೆಟ್ರೋಲ್ ದರ ಲೀಟರಿಗೆ ಕ್ರಮವಾಗಿ 71.51, 78.6, 78.56 ಮತ್ತು 74.71 ರೂಪಾಯಿಗಳು.

ಇಂಧನ ದರ ಏರಿಕೆ ಮನಮೋಹನ್ ಸಿಂಗ್ ಕಾಲದಲ್ಲೂ ಹೀಗೆಯೇ ಇತ್ತು, ಈಗ ನರೇಂದ್ರ ಮೋದಿ ಕಾಲದಲ್ಲೂ ಹೀಗೆಯೇ ಇದೆ. ಬಹಳ  ವ್ಯತ್ಯಾಸವೇನೂ  ಇಲ್ಲ.

Saturday, July 22, 2017

“ತೆಂಗಿನ ಕಾಯಿ”ಗೆ ಮತ, ಬೆಳಗಿತು “ಕಮಲ”ದ ಬಲ್ಬ್!

“ತೆಂಗಿನ ಕಾಯಿ”ಗೆ ಮತ,
ಬೆಳಗಿತು “ಕಮಲ”ದ ಬಲ್ಬ್!
ಮುಂಬೈ: ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಸಂಪೂರ್ಣ ದೋಷಮುಕ್ತ ಎಂಬುದಾಗಿ ಭಾರತದ ಚುನಾವಣಾ ಆಯೋಗ ನಿರಂತರ ಪ್ರತಿಪಾದಿಸುತ್ತಿದ್ದರೂ, ಇವಿಎಂ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ಪ್ರಕರಣ ಮಹಾರಾಷ್ಟ್ರದಲ್ಲಿ ಘಟಿಸಿದೆ.
ಮಾಹಿತಿ ಹಕ್ಕು ಕಾಯ್ದೆಯ ಅಡಿ ಒದಗಿಸಲಾದ ಮಾಹಿತಿಯಿಂದ ಇದು ಬೆಳಕಿಗೆ ಬಂದಿದೆ.
ಬುಲ್ದಾನ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಸುಲ್ತಾನಪುರ ಮತಗಟ್ಟೆಯಲ್ಲಿ ಈ ಘಟನೆ ಘಟಿಸಿದೆ. ಯಾರೇ ವ್ಯಕ್ತಿ ಪಕ್ಷೇತರ ಅಭ್ಯರ್ಥಿ ಒಬ್ಬರ ತೆಂಗಿನಕಾಯಿ ಚಿಹ್ನೆಗೆ ಮತ ಹಾಕಿದಾಗಲೆಲ್ಲ, ಬಿಜೆಪಿಯ ಕಮಲ ಚಿಹ್ನೆಯ ಮುಂಭಾಗದ ಎಲ್ಇಡಿ ಬಲ್ಬ್ ಮಿನುಗುತ್ತಿತ್ತು ಎಂದು ಆರ್ ಟಿಐ ಮಾಹಿತಿ ಹೇಳಿದೆ.
ಚುನಾವಣಾಧಿಕಾರಿ ಈ ವಿಷಯವನ್ನು ಜಿಲ್ಲಾಧಿಕಾರಿಗೆ ವರದಿ ಮಾಡಿದ್ದರು ಎಂದು ಆರ್ ಟಿ ಐ ಮಾಹಿತಿ ತಿಳಿಸಿದೆ.
Voted for Coconut, But Lotus Lit Up!
For details Visit: www.paryaya.com 

Friday, July 14, 2017

ತ್ರಾಲ್‌ನಲ್ಲಿ ಗುಂಡಿನ ಕಾಳಗ: ಇಬ್ಬರು ಭಯೋತ್ಪಾದಕರ ಹತ್ಯೆ

ತ್ರಾಲ್‌ನಲ್ಲಿ ಗುಂಡಿನ ಕಾಳಗ: ಇಬ್ಬರು ಭಯೋತ್ಪಾದಕರ ಹತ್ಯೆ

ಶ್ರೀನಗರ: ದಕ್ಷಿಣ ಕಾಶ್ಮೀರದ ತ್ರಾಲ್‌ ಪ್ರದೇಶದ ಸತೋರಾದಲ್ಲಿ ಶನಿವಾರ 15 ಜುಲೈ 2017ರಂದು  ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಗೈದಿವೆ. 
ಭಯೋತ್ಪಾದಕರ ವಾಸ್ತವ್ಯ ಬಗ್ಗೆ ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ಸೇನಾ ಪಡೆಗಳು ಇಬ್ಬರನ್ನು ಹತ್ಯೆಗೈದು ಕಾರ್ಯಾಚರಣೆ ಮುಂದುವರೆಸಿದವು. ಇನ್ನೂ ಕೆಲ ಭಯೋತ್ಪಾಕದರು ಅಡಗಿರುವ ಬಗ್ಗೆ ವರದಿಯಾಗಿದೆ. 
ಇದೇ ಭಯೋತ್ಪಾದಕರು ಜೂನ್‌ 9 ರಂದು ತ್ರಾಲ್‌ನ  ಅರಿಬಾಲ್‌ನ ಸಿಆರ್‌ಪಿಎಫ್ ಕ್ಯಾಂಪ್‌ಗೆ ಗ್ರೆನೇಡ್‌ ಎಸೆದಿದ್ದರು ಎನ್ನಲಾಗಿದ್ದು, ಈ ದಾಳಿಯಲ್ಲಿ ಓರ್ವ ಬಿಎಸ್‌ಎಫ್ ಜವಾನ ಗಾಯಗೊಂಡಿದ್ದ. 

ಪ್ರಸಕ್ತ ವರ್ಷ ಸೇನಾ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು  ಕಾಶ್ಮೀರದಲ್ಲಿ 102 ಉಗ್ರರನ್ನು ಹತ್ಯೆಗೈದಿರುವ ಅಂಕಿ ಅಂಶ ಲಭ್ಯವಾಗಿದೆ. 
Two Terrorists gunned down at Tral, J & K.

Saturday, July 1, 2017

ಈ ಮಗುವಿನ ಹೆಸರು “ಜಿ ಎಸ್ ಟಿ’ ಏಕೆ ಎಂದು ಗೊತ್ತೆ?

ಈ ಮಗುವಿನ ಹೆಸರು “ಜಿ ಎಸ್ ಟಿ’
ಏಕೆ ಎಂದು ಗೊತ್ತೆ?

ಜೈಪುರ:  ಈ ಮಗುವಿಗೆ ಅದರ ತಾಯಿ “ಜಿಎಸ್ ಟಿ’ ಎಂಬುದಾಗಿ ನಾಮಕರಣ ಮಾಡಿದ್ದಾಳೆ.  ಏಕೆ ಗೊತ್ತೇ? ಏಕೆಂದರೆ ಈ ಮಗು 2017ರ ಜೂನ್ 30 ಮತ್ತು ಜುಲೈ 1ರ ನಡುವಣ ಮಧ್ಯರಾತ್ರಿಯಲ್ಲಿ ಜನಿಸಿತು.

ಹೌದು. ರಾಜಸ್ಥಾನದ ಬೇವಾದಲ್ಲಿ 2017ರ ಜೂನ್ 30 ಮತ್ತು ಜುಲೈ 1ರ ನಡುವಣ ಮಧ್ಯರಾತ್ರಿಯಲ್ಲಿ ಜನಿಸಿದ ಈ ಗಂಡು ಮಗುವಿಗೆ ಅದರ ತಾಯಿ “ಜಿಎಸ್ ಟಿ’ ಎಂಬುದಾಗಿ ಹೆಸರು ಇಟ್ಟಿದ್ದಾಳೆ.

ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಟ್ವೀಟ್ ಮಾಡಿ “ಮಗು ಜಿಎಸ್ ಟಿ ದೀರ್ಘಕಾಲ ಆರೋಗ್ಯಶಾಲಿಯಾಗಿ ಬದುಕಿ ಬಾಳಲಿ’ ಎಂದು ಹಾರೈಸಿದ್ದಾರೆ.

ಭಾರತದ ಹೊಸ “ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ತೆರಿಗೆ ವ್ಯವಸ್ಥೆಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು 2017ರ ಜೂನ್ 30 ಮತ್ತು ಜುಲೈ 1ರ ನಡುವಣ ಮಧ್ಯರಾತ್ರಿಯಲ್ಲಿ ಸಂಸತ್ತಿನ ಸೆಂಟ್ರಲ್ ಸಭಾಂಗಣದಲ್ಲಿ ಉದ್ಘಾಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Tuesday, December 13, 2016

ದೃಶ್ಯಕಾವ್ಯವಾಗಿ ಹೊರಹೊಮ್ಮಿದ ಸ್ವಾತಂತ್ರ್ಯ ಹೋರಾಟ!

ದೃಶ್ಯಕಾವ್ಯವಾಗಿ ಹೊರಹೊಮ್ಮಿದ
ಸ್ವಾತಂತ್ರ್ಯ ಹೋರಾಟ!


ಆರ್ಕಿಡ್ಸ್ ಇಂಟರ್ನ್ಯಾಷನಲ್ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಚಿಣ್ಣರು..
ಬೆಂಗಳೂರು: ಆರ್ಕಿಡ್ಸ್ ದಿ ಇಂಟರ್ನ್ಯಾಷನಲ್ ಸ್ಕೂಲ್ ಶಾಲಾ ವಾರ್ಷಿಕೋತ್ಸವ ಸ್ವಾತಂತ್ರ್ಯದ ಸಂಭ್ರಮವಾಗಿ ರೂಪುಗೊಂಡಿತ್ತುವಾರ್ಷಿಕೋತ್ಸವದ ಅಂಗವಾಗಿ ಮಕ್ಕಳು ಪ್ರದರ್ಶಿಸಿದ ಟ್ರಿಸ್ಟ್ ವಿದ್ ಡೆಸ್ಟಿನಿ ಎಂಬ ವಿಶಿಷ್ಟ ನೃತ್ಯ ರೂಪಕ ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳನ್ನು ಮನೋಜ್ಞವಾಗಿ ಬಿಂಬಿಸಿತು.

ಭಾರತದ ಸ್ವಾತಂತ್ರಕ್ಕಾಗಿ ಸ್ವಾತಂತ್ರ್ಯಸೇನಾನಿಗಳು ಪಟ್ಟ ಶ್ರಮವನ್ನು ಪುಟಾಣಿಗಳು ಹೃದಯಸ್ಪರ್ಶಿಯಾಗಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಮಹಾನ್ ನಾಯಕರು ನಡೆಸಿದ ಹೋರಾಟ, ತ್ಯಾಗ ಪರಿಶ್ರಮಗಳು ಎಂತಹವು ಎಂಬುದನ್ನು ವಿದ್ಯಾರ್ಥಿಗಳು ನೃತ್ಯರೂಪಕದ ಮೂಲಕ ಮತ್ತೊಮ್ಮೆ ನೆನಪಿಸಿದರು. ತಮ್ಮ ಅಮೋಘ ನಟನೆ ಮತ್ತು ನೃತ್ಯ ಕೌಶಲ್ಯದ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಕಥನವನ್ನು ಎಲ್ಲರ ಹೃದಯ ತುಂಬುವ ದೃಶ್ಯಕಾವ್ಯವಾಗಿಸಿದರು.

ಡಿಜಿಟಲ್ ತಂತ್ರಜ್ಞಾನದೆಡೆಗೆ ಆರ್ಕಿಡ್ಸ್ ಇಂಟರ್ನ್ಯಾಷನಲ್ ಸ್ಕೂಲ್ ದಾಪುಗಾಲು:
ಆರ್ಕಿಡ್ಸ್ ದಿ ಇಂಟರ್ನ್ಯಾನಷಲ್ ಸ್ಕೂಲ್ ಗರಿಷ್ಠ ಮಟ್ಟದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ರಾಜ್ಯದ ಗಮನ ಸೆಳೆದಿದೆಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಆಶಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವ ಸಂಸ್ಥೆ ದೈನಂದಿನ ವ್ಯವಹಾರಗಳಲ್ಲಿ ಕಾಗದ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವ ಪ್ರಯತ್ನದಲ್ಲಿ ಈಗಾಗಲೇ ಯಶಸ್ವಿಯಾಗಿದೆ. ಇಲ್ಲಿನ ತರಗತಿಗಳು ಡಿಜಿಟಲ್ ಕಲಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ಐಸಿಟಿ ಬೋರ್ಡ್ಗಳೊಂದಿಗೆ ಸುಸಜ್ಜಿತವಾಗಿವೆ. ಮಕ್ಕಳ ಹಾಜರಾತಿ, ಹೋಂವರ್ಕ್, ಶುಲ್ಕ ಇತ್ತಾದಿ ವಿವರಗಳನ್ನು ಶಾಲಾ ವೆಬ್ಸೈಟ್ನಲ್ಲೇ ಪೋಷಕರಿಗೆ ಒದಗಿಸಲಾಗುತ್ತಿದೆ.   

ತಂತ್ರಜ್ಞಾನ ಮಾತ್ರವಲ್ಲ, ಸಾಂಸ್ಕೃತಿಕವಾಗಿಯೂ ದೇಶಭಕ್ತಿಯನ್ನು ಸ್ಫುರಿಸುವಂತಹ ವಾತಾವರಣವನ್ನು ಕಲ್ಪಿಸಿದೆ. ಅಲ್ಲದೆ ವಿದ್ಯಾರ್ಥಿಗಳನ್ನು ಸಮರ್ಥ ರೀತಿಯಿಂದ ಸಜ್ಜುಗೊಳಿಸಿ, ಹೊಸ ಯುಗಕ್ಕೆ ಪರಿಚಯಿಸುವ ಕೆಲಸವನ್ನೂ ಮಾಡುತ್ತಿದೆ.