Showing posts with label Indian army. Show all posts
Showing posts with label Indian army. Show all posts

Sunday, June 16, 2024

PARYAYA: ಗೊತ್ತಾ ನಿಮಗೆ ಸೇನಾ ಬತ್ತಳಿಕೆ ಸೇರಿದ ನಾಗಾಸ್ತ್ರ-1ರ ವಿಶೇ...

 ಗೊತ್ತಾ ನಿಮಗೆ ಸೇನಾ ಬತ್ತಳಿಕೆ ಸೇರಿದ ನಾಗಾಸ್ತ್ರ-1ರ ವಿಶೇಷತೆ?

ಇದರ ನಿರ್ಮಾಣದಲ್ಲಿ ಉಂಟು ಕರ್ನಾಟಕದ ಪಾಲು..

ನಾಗಪುರ ಮೂಲದ ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 120 ತ್ಮಾಹುತಿ ಡ್ರೋನ್‌ಗಳ ಮೊದಲ  ಕಂತನ್ನು ಭಾರತೀಯ ಸೇನೆಗೆ ತಲುಪಿಸಿದೆ. ನಾಗಾಸ್ತ್ರ-1 ಎಂದು ಕರೆಯಲಾಗುವ  ಈ ಆತ್ಮಾಹುತಿ ಡ್ರೋನ್‌ಗಳು ಈಗ ಭಾರತೀಯ ರಕ್ಷಣಾ ಪಡೆಗಳ ಅಡ್ಡಾದಿಡ್ಡಿ ಯುದ್ಧಸಾಮಗ್ರಿಗಳ ಒಂದು ಭಾಗವಾಗಿ ಸೇರ್ಪಡೆಗೊಂಡಿವೆ. ಈ ಡ್ರೋನ್‌ಗಳನ್ನು ಪುಲ್ಗಾಂವ್‌ನ ಶಸ್ತ್ರಾಸ್ತ್ರ 2024ರ ಜೂನ್‌ 16ರಂದು ಸಂಗ್ರಹಾಗಾರಕ್ಕೆ ತಲುಪಿಸಲಾಗಿದೆ.

ಹಾಗಾದರೆ ಈ ನಾಗಾಸ್ತ್ರ-1 ರ ಸಾಮರ್ಥ್ಯ ಏನು ಅಥವಾ ವಿಶಿಷ್ಟತೆ ಏನು?

ಸ್ವಲ್ಪ ಹಿಂದಕ್ಕೆ ಹೋಗೋಣ. ಎರಡನೇ ಮಹಾಯುದ್ಧದ ಸಮಯ ಜಪಾನ್ ತನ್ನ ವಿಶೇಷ ದಾಳಿ ಘಟಕಗಳಲ್ಲಿ ಮಿಲಿಟರಿ ಏವಿಯೇಟರ್‌ಗಳನ್ನು ಒಳಗೊಂಡ ಕಾಮಿಕೇಜ್ ಎಂಬ ವಿಶೇಷ ಘಟಕವನ್ನು ಹೊಂದಿತ್ತು. ಕಾಮಿಕೇಜ್ ಪೈಲಟ್‌ಗಳು ಯುದ್ಧದ ಪೆಸಿಫಿಕ್ ಅಭಿಯಾನದ ಮುಕ್ತಾಯದ ಹಂತಗಳಲ್ಲಿ ಮಿತ್ರ ಪಡೆಗಳ ನೌಕಾ ಹಡಗುಗಳ ಮೇಲೆ ಜಪಾನ್ ರಕ್ಷಣೆಗಾಗಿ ಆತ್ಮಾಹುತಿ ದಾಳಿ ನಡೆಸಿದರು. ಸಾಂಪ್ರದಾಯಿಕ ವಾಯು ದಾಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಯುದ್ಧನೌಕೆಗಳನ್ನು ನಾಶಮಾಡುವ ಉದ್ದೇಶವನ್ನು ಇದು ಹೊಂದಿತ್ತು. ಯುದ್ಧದ ಸಮಯದಲ್ಲಿ ಸುಮಾರು 3,800 ಕಾಮಿಕೇಜ್ ಪೈಲಟ್‌ಗಳು ಸಾವನ್ನಪ್ಪಿದರು ಮತ್ತು ಮಿತ್ರ ಪಡೆಗಳ 7,000 ಕ್ಕೂ ಹೆಚ್ಚು ನೌಕಾ ಸಿಬ್ಬಂದಿ ಕಾಮಿಕೇಜ್ ದಾಳಿಯಿಂದ ಹತರಾದರು.

ಇದೀಗ ಭಾರತಕ್ಕೆ ಬರೋಣ. 21 ನೇ ಶತಮಾನದಲ್ಲಿಭಾರತವು ಈಗ ತನ್ನದೇ ಆದ ಬಹತೇಕ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕಾಮಿಕೇಜ್ ವೈಮಾನಿಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿದೆ. ಇದೇ  ನಾಗಾಸ್ತ್ರ-1 ಎಂಬ ವೈಮಾನಿಕ ಡ್ರೋನ್. ನಾಗಾಸ್ತ್ರ-1 ಚಲನೆಯಲ್ಲಿರುವಾಗ ಮತ್ತು ದಾಳಿಯನ್ನು ಮಾಡುವಾಗ  ಯಾರೇ ಪೈಲಟ್ ಸಾಯಬೇಕಾಗಿಲ್ಲ. ಇದೇ ಈ ನಾಗಾಸ್ತ್ರದ ವೈಶಿಷ್ಟ್ಯ.

ನಾಗಪುರ ಮೂಲದ ಸೋಲಾರ್ ಇಂಡಸ್ಟ್ರೀಸ್‌ ಎಂಬ ಸಂಸ್ಥೆ ತಯಾರಿಸಿದ ಈ ನಾಗಾಸ್ತ್ರ-1 ಒಂದು ಕೆಜಿ ಸಿಡಿತಲೆಯನ್ನು ಹೊತ್ತೊಯ್ಯಬಲ್ಲದು ಮತ್ತು ಎರಡು ಮೀಟರ್‌ಗಳ ಒಳಗೆ ಅತ್ಯಂತ ನಿಖರತೆಯೊಂದಿಗೆ GPS ನೆರವಿನಿಂದ ನಿಖರವಾದ ದಾಳಿಯನ್ನು ನಡೆಸಬಲ್ಲುದು. ಗುರಿಯ ಮೇಲೆ ಸುಳಿದಾಡುವ ಮತ್ತು ಅದರ ವಿರುದ್ಧ ಅಪ್ಪಳಿಸುವ ಸಾಮರ್ಥ್ಯ ಇದಕ್ಕಿದೆ. ಹೀಗಾಗಿ ಇದನ್ನು ಅಡ್ಡಾದಿಡ್ಡಿ ಯುದ್ಧಸಾಮಗ್ರಿ ಎಂಬುದಾಗಿ ಕರೆಯಲಾಗುತ್ತದೆ. ಇಂತಹ 120 ಡ್ರೋನ್ ಗಳ ಮೊದಲ ಕಂತನ್ನು ಇದೀಗ ಭಾರತೀಯ ಸೇನೆಗೆ ಸೇರ್ಪಡೆ ಮಾಡಲಾಗಿದೆ.

ಬೆಂಗಳೂರಿನ ಪಾಲೂ ಉಂಟು

ನಾಗಾಸ್ತ್ರವನ್ನು ನಿರ್ಮಿಸಿದ ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆಯು ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್‌ನ (ಇಇಎಲ್) ಅಂಗಸಂಸ್ಥೆ.  ಎಕನಾಮಿಕ್‌ ಎಕ್ಸ್‌ಪ್ಲೋಸಿವ್ಸ್‌ ಲಿಮಿಟೆಡ್‌ ಸಂಸ್ಥೆಗೆ ಭಾರತೀಯ ಸೇನೆಯು 420 ಅಡ್ಡಾದಿಡ್ಡಿ ಯುದ್ಧಸಾಮಗ್ರಿಗಳಿಗೆ ಆರ್ಡರ್ ಮಾಡಿದೆ.

ವಿಶೇಷವೆಂದರೆ ಈ ನಾಗಾಸ್ತ್ರ ನಿರ್ಮಾಣದಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ಕರ್ನಾಟಕದ ಬೆಂಗಳೂರಿನ ಯಲಹಂಕ ಉಪನಗರದ (ನ್ಯೂಟೌನ್)‌ ಝಡ್‌ ಮೋಷನ್‌ ಅಟಾನಮಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ವಹಿಸಿದೆ. ಏಕೆಂದರೆ ಎಕನಾಮಿಕ್‌ ಎಕ್ಸ್‌ ಪ್ಲೋಸಿವ್ಸ್‌ ಲಿಮಿಟೆಡ್‌ ಸ್ಫೋಟಕ ವಸ್ತುಗಳನ್ನು ಅಭಿವೃದ್ಧಿ ಪಡಿಸುವ ಸಂಸ್ಥೆಯಾಗಿದ್ದರೆ, ಬೆಂಗಳೂರಿನ ಝಡ್‌ ಮೋಷನ್‌ ಈ ಸ್ಫೋಟಕಗಳನ್ನು ಸಾಗಿಸಬಲ್ಲ ಡ್ರೋನ್‌ಗಳನ್ನು ನಿರ್ಮಿಸುವಲ್ಲಿ ಸೋಲಾರ್‌ ಸಂಸ್ಥೆಗೆ ಸಹಯೋಗ ನೀಡಿದೆ.

2022 ಏಪ್ರಿಲ್‌ 25ರಷ್ಟು ಹಿಂದೆಯೇ ಝಡ್‌ ಮೋಷನ್‌ ಸಂಸ್ಥೆಗೆ ಭೇಟಿ  ನೀಡಿದ್ದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಇಲ್ಲಿ ನಿರ್ಮಿಸಲಾಗುವ ಡ್ರೋನ್‌ಗಳ ಬಗ್ಗೆ ಮಾಹಿತಿ ಪಡೆದಿದ್ದರು. ಝಡ್‌ ಮೋಷನ್‌ ಸಂಸ್ಥೆಯು ಸುರಕ್ಷತೆಕೈಗಾರಿಕಾ ಮೇಲ್ವಿಚಾರಣೆ ಮತ್ತು ಕೃಷಿಯಲ್ಲಿ ಬಳಸಬಹುದಾದ ಡ್ರೋನ್‌ಗಳ ಸ್ಥಳೀಯ ತಯಾರಿಕೆಗಾಗಿ ಮಾನವರಹಿತ ವೈಮಾನಿಕ ವ್ಯವಸ್ಥೆಗಳನ್ನು (UAS) ರೂಪಿಸುತ್ತದೆ.

ಬೆಂಗಳೂರಿನ ಝಡ್‌ ಮೋಷನ್‌ ಸಂಸ್ಥೆಯು ನಿರ್ಮಿಸಿದ ಲಂಬಾಕಾರವಾಗಿ ಬಾನಿಗೆ ಏರಿ ಕೆಳಕ್ಕೆ ಇಳಿಯಬಲ್ಲ ಡ್ರೋನ್‌ ಸಾಮರ್ಥ್ಯ ವೀಕ್ಷಿಸಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ. 

ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ ಸಂಸ್ಥೆಯು ಬೃಹತ್ ಮತ್ತು ಕಾರ್ಟ್ರಿಡ್ಜ್ ಸ್ಫೋಟಕಗಳುಡಿಟೋನೇಟರ್‌ಗಳು ಮತ್ತು ಸ್ಫೋಟಿಸುವ ಹಗ್ಗಗಳು ಮತ್ತು ಘಟಕಗಳಂತಹ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಕಂಪನಿ ತಯಾರಕ ಮತ್ತು ಪೂರೈಕೆದಾರ ಸಂಸ್ಥೆಯಾಗಿದೆ.

ಇವೆರಡು ಸಂಸ್ಥೆಗಳ ಸಹಯೋಗದಿಂದ ಇದೀಗ ಭಾರತೀಯ ಸೇನೆಯು ಯೋಧರ ನಷ್ಟವಿಲ್ಲದೆ, ವೈರಿಗಳನ್ನು ಧ್ವಂಸಗೊಳಿಸಬಲ್ಲ ನಾಗಾಸ್ತ್ರವನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ.

ಅಡ್ಡಾಡುವ ಯುದ್ಧಸಾಮಗ್ರಿಗಳು ಯಾವುವು?

ಒಂದು ಅಡ್ಡಾದಿಡ್ಡಿ ಯುದ್ಧಸಾಮಗ್ರಿಯನ್ನು ಆತ್ಮಹತ್ಯಾ ಡ್ರೋನ್ಕಾಮಿಕೇಜ್ ಡ್ರೋನ್ ಅಥವಾ ಸ್ಫೋಟಿಸುವ ಡ್ರೋನ್ ಎಂಬುದಾಗಿಯೂ ಕರೆಯಲಾಗುತ್ತದೆ. ಇದು ಅಂತರ್ನಿರ್ಮಿತ ಸಿಡಿತಲೆ ಹೊಂದಿರುವ ಒಂದು ರೀತಿಯ ವೈಮಾನಿಕ ಆಯುಧ. ಗುರಿಯ ಪ್ರದೇಶದ ಸುತ್ತಲೂ ಅಡ್ಡಾಡಲು ಸಾಧ್ಯವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಗುರಿಯನ್ನು ಖಚಿತ ಪಡಿಸಿದ ನಂತರ ಗುರಿಯ ಮೇಲೆ ಇದು ಅಪ್ಪಳಿಸುತ್ತದೆ.

ಅಡ್ಡಾದಿಡ್ಡಿ ಯುದ್ಧಸಾಮಗ್ರಿಗಳನ್ನು ನೆಲದ ಮೇಲಿನ ವಾಹನಗಳುವಿಮಾನಗಳುಹಡಗುಗಳುಅಥವಾ ಕೈಯಿಂದ ಸೇರಿದಂತೆ ವಿವಿಧ ವೇದಿಕೆಗಳಿಂದ ಹಾರಿಸಬಹುದು. ಉಡಾವಣೆಯಾದ ನಂತರಯುದ್ಧಸಾಮಗ್ರಿಯು ಪೂರ್ವನಿರ್ಧರಿತ ಪ್ರದೇಶದಲ್ಲಿ ವಿಸ್ತೃತ ಅವಧಿಯವರೆಗೆ ಇದು ಅಡ್ಡಾಡಬಹುದುಗುರಿ ಕಾಣಿಸಿಕೊಳ್ಳಲು ಅಥವಾ ನಿರ್ವಾಹಕರು ಗುರಿಯನ್ನು ಗೊತ್ತುಪಡಿಸುವವರೆಗೆ ಕಾಯಬಹುದು.

ಆನ್‌ಬೋರ್ಡ್ ಸಂವೇದಕಗಳುಆಪರೇಟರ್‌ಗಳು ಅಥವಾ ಸ್ವಾಯತ್ತ ಕ್ರಮಾವಳಿಗಳನ್ನು ಬಳಸುವ ಮೂಲಕ ಇದು ಸಂಭಾವ್ಯ ಗುರಿಗಳನ್ನು ಗುರುತಿಸುತ್ತದೆ ಮತ್ತು ಪತ್ತೆ ಹಚ್ಚುತ್ತದೆ. ಗುರಿಯನ್ನು ಗೊತ್ತುಪಡಿಸಿದ ನಂತರಯುದ್ಧಸಾಮಗ್ರಿಯು ಅದರ ಆನ್‌ಬೋರ್ಡ್ ಸಿಡಿತಲೆಯೊಂದಿಗೆ ಗುರಿಯನ್ನು ನಾಶಮಾಡಲು ಹೆಚ್ಚಿನ-ವೇಗವನ್ನು ಗಳಿಸಿಕೊಳ್ಳುತ್ತದೆ.

ಅಡ್ಡಾಡುವ ಯುದ್ಧಸಾಮಗ್ರಿಗಳಲ್ಲಿ ಮೂರು ವಿಧಗಳಿವೆ - ಅಲ್ಪ-ಶ್ರೇಣಿಮಧ್ಯಮ-ಶ್ರೇಣಿ ಮತ್ತು ದೀರ್ಘ-ಶ್ರೇಣಿ.

ಅಲ್ಪ-ಶ್ರೇಣಿಯ ಯುದ್ಧಸಾಮಗ್ರಿಗಳು ಸಾಮಾನ್ಯವಾಗಿ 10-20 ಕಿಮೀ ವ್ಯಾಪ್ತಿಯನ್ನು ಹೊಂದಿರುತ್ತವೆ ಮತ್ತು ಯುದ್ಧತಂತ್ರದ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಂಡಿರುತ್ತವೆ. ಮಧ್ಯಮ-ಶ್ರೇಣಿಯ ಅಡ್ಡಾದಿಡ್ಡಿ ಯುದ್ಧಸಾಮಗ್ರಿ 100 ಕಿಮೀ ದೂರದಲ್ಲಿ ಕಾರ್ಯನಿರ್ವಹಿಸುತ್ತದೆಇದು ವ್ಯಾಪ್ತಿ ಮತ್ತು ಅಡ್ಡಾದಿಡ್ಡಿ ಸಮಯದ ನಡುವೆ ಸಮತೋಲನವನ್ನು ನೀಡುತ್ತದೆ.

ದೀರ್ಘ-ಶ್ರೇಣಿಯ ಅಡ್ಡಾದಿಡ್ಡಿ ಯುದ್ಧಸಾಮಗ್ರಿ ನೂರಾರು ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ಹೊಡೆಯಲು ಮತ್ತು ಹಲವಾರು ಗಂಟೆಗಳ ಕಾಲ ಅಡ್ಡಾಡಲು ಸಮರ್ಥವಾಗಿದೆ.

ನಾಗಾಸ್ತ್ರ-1 ರ ಸಾಮರ್ಥ್ಯಗಳೇನು?

ನಾಗಾಸ್ತ್ರ-1 ರಕ್ಷಣಾ ಸಚಿವಾಲಯದ ಮೇಡ್ ಇನ್ ಇಂಡಿಯಾ ಕಾರ್ಯಕ್ರಮದ ಸಂಕೇತ ಇದು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಂದ ಚಾಲಿತವಾದ ಅಡ್ಡಾಡುವ (ಸ್ಥಿರ-ವಿಂಗ್ ಲೊಟರಿಂಗ್) ಯುದ್ಧಸಾಮಗ್ರಿ ಇದನ್ನು 15-ಕಿಮೀ ವ್ಯಾಪ್ತಿಯಲ್ಲಿ ನಿರ್ವಾಹಕರು ನಿಯಂತ್ರಿಸಬಹುದು. ಇದು ಗರಿಷ್ಠ 30 ಕಿಮೀ ದೂರವನ್ನು ಕ್ರಮಿಸಬಲ್ಲುದು. ಡ್ರೋನ್ ಮೂಲಕ ಮೊದಲೇ ಸ್ಥಾಪಿಸಲಾಗಿರುವ ಗ್ರಿಡ್ ನಿರ್ದೇಶಾಂಕಗಳ ಆಧಾರದ ಮೇಲೆ ನಿಗದಿತ ಗುರಿಯನ್ನು ಹೊಡೆಯಬಹುದು. GPS ಮೂಲಕ ಇದಕ್ಕೆ ಮಾರ್ಗದರ್ಶನ ಮಾಡಬಹುದು. ಇದು ಗುರಿಯ ಎರಡು ಕಿಮೀ ಒಳಗಿನ ನಿಖರತೆಯನ್ನು ಖಚಿತಪಡಿಸುತ್ತದೆ. ಅದು ಗುರಿಯನ್ನು ಪತ್ತೆಹಚ್ಚಲು ವಿಫಲವಾದರೆನಿಧಾನವಾಗಿ ಕೆಳಕ್ಕೆ ಇಳಿಸಲು ಅದರ ಅಂತರ್ನಿರ್ಮಿತ ಪ್ಯಾರಾಚೂಟ್ ಬಳಸಬಹುದು.

ಹಾಗಂತನಾಗಾಸ್ತ್ರ-1 ಭಾರತೀಯ ರಕ್ಷಣಾ ಪಡೆಗಳು ಹೊಂದಿರುವ ಮೊದಲ ಆತ್ಮಹತ್ಯಾ ಡ್ರೋನ್ ಅಲ್ಲ. ಮೇ 2023 ರಲ್ಲಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಪಿಸಿ ಕಟೋಚ್ ಅವರು ಬರೆದಿರುವ ಲೇಖನವೊಂದರ ಪ್ರಕಾರಭಾರತೀಯ ವಾಯುಪಡೆಯು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ತಯಾರಿಸಿದ ALS-50 ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (VTOL) ಅಡ್ಡಾದಿಡ್ಡಿ ಯುದ್ಧಸಾಮಗ್ರಿಗಳನ್ನು ಹೊಂದಿದೆ. (TASL). ಇಸ್ರೇಲ್ ಭಾರತೀಯ ರಕ್ಷಣಾ ಪಡೆಗಳಿಗೆ ಐಎಐ ಹಾರ್ಪಿ ಮತ್ತು ಐಎಐ ಹಾರ್ಪೋಗಳನ್ನು ಸಹ ಪೂರೈಸಿದೆ. ಆದರೆ ನಾಗಾಸ್ತ್ರ-1 ಇದರ ವಿಶಿಷ್ಟತೆ ಏನು ಅಂದರೆ ಇದು ಭಾರತೀಯ ಸೇನೆಗೆ ಸೇರ್ಪಡೆಯಾದ ಮೊತ್ತ ಮೊದಲ ದೇಶೀ ನಿರ್ಮಿತ ಕಾಮಿಕೇಜ್ ಡ್ರೋನ್ ಆಗಿದೆ ಎಂಬುದು. ಇದು ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ವಿಷಯ.

-          - ನೆತ್ರಕೆರೆ ಉದಯಶಂಕರ

-          ಮಾಹಿತಿ: ವಿವಿಧ ಮೂಲಗಳು, ಚಿತ್ರ: ಎಎನ್‌ಐ, ಝಡ್‌ ಮೋಷನ್‌ ಅಟಾನಮಸ್‌ ಪ್ರೈವೇಟ್‌ ಲಿಮಿಟೆಡ್‌ 

ಇವುಗಳನ್ನೂ ಓದಿ:

ಕಿಸಾನ್ ‘ದ್ರೋಣ’ ನಿನಗಿದೋ ಸಲಾಂ…!

PARYAYA: ಗೊತ್ತಾ ನಿಮಗೆ ಸೇನಾ ಬತ್ತಳಿಕೆ ಸೇರಿದ ನಾಗಾಸ್ತ್ರ-1ರ ವಿಶೇ...:   ಗೊತ್ತಾ ನಿಮಗೆ ಸೇನಾ ಬತ್ತಳಿಕೆ ಸೇರಿದ ನಾಗಾಸ್ತ್ರ-1ರ ವಿಶೇಷತೆ? ಇದರ ನಿರ್ಮಾಣದಲ್ಲಿ ಉಂಟು ಕರ್ನಾಟಕದ ಪಾಲು.. ನಾ ಗಪುರ ಮೂಲದ ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆಯು ಸ್...

Sunday, September 30, 2018

‘ಪಿಒಕೆ ಪ್ರಧಾನಿ’ ಇದ್ದ ಹೆಲಿಕಾಪ್ಟರಿನಿಂದ ಭಾರತದ ವಾಯುಪ್ರದೇಶ ಉಲ್ಲಂಘನೆ

ಪಿಒಕೆ ಪ್ರಧಾನಿ ಇದ್ದ ಹೆಲಿಕಾಪ್ಟರಿನಿಂದ 
ಭಾರತದ ವಾಯುಪ್ರದೇಶ ಉಲ್ಲಂಘನೆ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಪ್ರಧಾನಿ ರಜಾ ಫರೂಖ್ ಹೈದರ್ ಖಾನ್ ಇದ್ದ ಪಾಕಿಸ್ತಾನಿ ಹೆಲಿಕಾಪ್ಟರ್ ಒಂದು 30 ಸೆಪ್ಟೆಂಬರ್ 2018 ಭಾನುವಾರ ಮಧ್ಯಾಹ್ನ 12.13 ವೇಳೆಗೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತದ ವಾಯಪ್ರದೇಶ ಉಲ್ಲಂಘಿಸಿ ಭಾರತದ ಆಕಾಶದಲ್ಲಿ ಸ್ವಲ್ಪ ಹೊತ್ತು ಹಾರಾಡಿದ ಘಟನೆ ಭಾನುವಾರ ಘಟಿಸಿತು.

ಮೂಲಗಳ ಪ್ರಕಾರ ಹೆಲಿಕಾಪ್ಟರ್ ಮಧ್ಯಾಹ್ನ 12.13 ವೇಳೆಗೆ ಪಾಕ್ ವಾಯುಪ್ರದೇಶದ ಗಡಿ ದಾಟಿ ಭಾರತದ ಮೇಲೆ ಹಾರಾಟ ನಡೆಸಿತು. ತತ್ ಕ್ಷಣವೇ ಭಾರತೀಯ ಸೇನೆ ಸಣ್ಣ ಶಸ್ತ್ರಗಳಿಂದ ಗುಂಡು ಹಾರಿಸಿತು.

ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಎಂದು ಹೇಳಿಕೊಳ್ಳುತ್ತಿರುವ ಪಾಕಿಸ್ತಾನ ಮುಸ್ಲಿಮ್ ಲೀಗ್- ನವಾಜ್ (ಪಿಎಂಎಲ್-ಎನ್) ನಾಯಕನನ್ನು ಹೊತ್ತಿದ್ದ ಹೆಲಿಕಾಪ್ಟರ್ ಭಾನುವಾರ ಮಧ್ಯಾಹ್ನ ಭಾರತದ ವಾಯುಪ್ರದೇಶ ಪ್ರವೇಶಿಸಿದ ವೇಳೆಯಲ್ಲಿ ಅವರು ಗಡಿಗೆ ಸಮೀಪವಾಗಿ ಹೋದಾಗ ಗಡಿಯಾಚೆಯಿಂದ ಅದರತ್ತ ಗುಂಡು ಹಾರಿಸಲಾಯಿತು ಎಂದು ಪಾಕಿಸ್ತಾನಿ ಸುದ್ದಿ ಸಂಸ್ಥೆ ಆಜ್ ನ್ಯೂಸ್ ವರದಿ ಮಾಡಿತು.

ಜಮ್ಮು ವರದಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಹೆಲಿಕಾಪ್ಟರ್ ಒಂದು ಗಡಿ ನಿಯಂತ್ರಣ ರೇಖೆಯಲ್ಲಿ ವಾಯು ಪ್ರದೇಶವನ್ನು ಉಲ್ಲಂಘಿಸಿ ಕೆಲ ಕಾಲ ಹಾರಾಟ ನಡೆಸಿದ ಘಟನೆ ಭಾನುವಾರ ಮಧ್ಯಾಹ್ನ ಘಟಿಸಿದೆ.

ಬಿಳಿ ಬಣ್ಣದ ಪಾಕಿಸ್ತಾನಿ ಹೆಲಿಕಾಪ್ಟರ್ ಮಧ್ಯಾಹ್ನ ೧೨.೧೩ರ ವೇಳೆಯಲ್ಲಿ ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿ ಸ್ವಲ್ಪ ಹೊತ್ತು ಹಾರಾಟ ನಡೆಸಿತು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೆಂದರ್ ಆನಂದ್ ಹೇಳಿದರು.

ಅದು ನಾಗರಿಕ ಹೆಲಿಕಾಪ್ಟರ್ ಆಗಿರುವ ಸಾಧ್ಯತೆ ಇದೆ ಎಂದು ಸೇನಾ ಅಧಿಕಾರಿ ನುಡಿದರು.

ಭಾರತ ಗಡಿಯ ಮುಂಚೂಣಿ ಪ್ರದೇಶದ ಏರ್ ಸೆಂಟ್ರಿಗಳು ಸಣ್ಣ ಶಸ್ತ್ರಗಳಿಂದ ಹೆಲಿಕಾಪ್ಟರಿನತ್ತ ಗುಂಡು ಹಾರಿಸಿದರು. ಪೈಲಟ್ ಗೆ ವಾಯುಪ್ರದೇಶದ ಉಲ್ಲಂಘನೆ ಆಗಿರುವ ಬಗ್ಗೆ ಎಚ್ಚರಿಸಿ ಹಿಂದಕ್ಕೆ ಹೋಗುವಂತೆ ಒತ್ತಡ ಹಾಕುವ ಸಲುವಾಗಿ ಹೆಲಿಕಾಪ್ಟರಿನತ್ತ ಗುಂಡು ಹಾರಿಸಲಾಯಿತು ಎಂದು ಅವರು ನುಡಿದರು.

ಜಮ್ಮು ಮತ್ತು ಕಾಶ್ಮೀರದ ಕೃಷ್ಣಾ ಘಾಟಿ ವಿಭಾಗದಲ್ಲಿ ಗುಲ್ಪುರ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಮಧ್ಯಾಹ್ನ ೧೨.೧೩ರ ವೇಳೆಗೆ ಹೆಲಿಕಾಪ್ಟರ್ ವಾಯು ಗಡಿಯನ್ನು ಉಲ್ಲಂಘಿಸಿ ಭಾರತೀಯ ಪ್ರದೇಶದಲ್ಲಿ ಹಾರಾಟ ನಡೆಸಿತು ಎಂದು ರಕ್ಷಣಾ ಮೂಲಗಳು ಹೇಳಿದವು. ಪ್ರತಿರೋಧದ ಬಳಿಕ ಹೆಲಿಕಾಪ್ಟರ್ ಪಾಕಿಸ್ತಾನಿ ವಾಯುಪ್ರದೇಶಕ್ಕೆ ಹಿಂತಿರುಗಿತು.

ಭಾರತೀಯ ವಾಯುಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಿದ ೩೦ ಸೆಕೆಂಡ್ ಗಳ ವಿಡಿಯೋವನ್ನು ಎಎನ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿತು.

ನೆರೆ ರಾಷ್ಟ್ರಗಳ ಬಾಂಧವ್ಯ ಕದಡಿರುವ ವೇಳೆಯಲ್ಲಿ ಘಟನೆ ಘಟಿಸಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಶನಿವಾರವಷ್ಟೇ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಅದು ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುವುದರ ಜೊತೆಗೆ ಅವರನ್ನು ವೈಭವೀಕರಿಸುತ್ತಿದೆ ಎಂದು ಆಪಾದಿಸಿದ್ದರು. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕದೇ ಇದ್ದಲ್ಲಿ ಅದು ಮಹಾಜ್ವಾಲೆಯಾದೀತು ಎಂದೂ ಅವರು ಎಚ್ಚರಿಸಿದ್ದರು.

ಪಾಕ್ ಹೆಲಿಕಾಪ್ಟರ್ ವಾಯುಪ್ರದೇಶ ಉಲ್ಲಂಘಿಸುವುದಕ್ಕೆ ಕೇವಲ ಒಂದು ಗಂಟೆ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕಮನ್ ಕಿ ಬಾತ್ಮಾಸಿಕ ಬಾನುಲಿ ಕಾರ್ಯಕ್ರಮದಲ್ಲಿ ಶಾಂತಿ ಬಗೆಗಿನ ಭಾರತದ ಬದ್ಧತೆಯನ್ನು ಒತ್ತಿ ಹೇಳಿದ್ದರು. ಇದೇ ವೇಳೆಗೆ ಶಾಂತಿಗಾಗಿ ನಮ್ಮ ರಾಷ್ಟ್ರದ ಆತ್ಮಗೌರವ ಮತ್ತು ಸಮಗ್ರತೆಯನ್ನು ಬಲಿಗೊಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.

ನಮ್ಮ ರಾಷ್ಟ್ರದ ಪ್ರಗತಿ ಮತ್ತು ಶಾಂತಿಯ ಪರಿಸರವನ್ನು ಹಾಳುಗೆಡವಲು ಯಾರೇ ಪ್ರಯತ್ನ ಮಾಡಿದರೂ ಅದಕ್ಕೆ ನಮ್ಮ ಯೋಧರು ತಕ್ಕ ಉತ್ತರ ನೀಡಬೇಕು ಎಂದು ಈಗ ನಿರ್ಧರಿಸಲಾಗಿದೆಎಂದು ಮೋದಿ ಸಂದೇಶ ನೀಡಿದ್ದರು. ಮೋದಿ ಅವರ ಎಚ್ಚರಿಕೆ ಪಾಕಿಸ್ತಾನವನ್ನು ಗುರಿಇಟ್ಟೇ ನೀಡಿದ ಎಚ್ಚರಿಕೆ ಎಂದೇ ವ್ಯಾಖ್ಯಾನಿಸಲಾಗಿದೆ.

ವರ್ಷ ಫೆಬ್ರುವರಿಯಲ್ಲಿ ಪಾಕಿಸ್ತಾನಿ ಸೇನಾ ಹೆಲಿಕಾಪ್ಟರ್ ಒಂದು ಪೂಂಚ್ ಜಿಲ್ಲೆಯ ಖಾರಿ ಕರ್ಮಾರ ಪ್ರದೇಶದಲ್ಲಿ ಅಪಾಯಕಾರಿ ಮಟ್ಟದಲ್ಲಿ ಹಾರಾಟ ನಡೆಸಿತ್ತು. ಜನವರಿ ೧೮ರಂದು ಭಾರೀ ಶಸ್ತ್ರಾಸ್ತ್ರ ಹೊಂದಿದ್ದ ಭಯೋತ್ಪಾದಕನನ್ನು ಕೊಲ್ಲುವ ಮೂಲಕ ಪಾಕಿಸ್ತಾನದ ಗಡಿ ಕಾರ್ಯಾಚರಣಾ ತಂಡದ (ಬಿಎಟ್) ದಾಳಿಯನ್ನು ವಿಫಲಗೊಳಿಸಿತ್ತು.

ಪಾಕಿಸ್ತಾನಿ ಹೆಲಿಕಾಪ್ಟರ್ ಗಡಿ ನಿಯಂತ್ರಣ ರೇಖೆಯನ್ನು ದಾಟಿ ೩೦೦ ಮೀಟರುಗಳಷ್ಟು ಭಾರತೀಯ ವಾಯುಪ್ರದೇಶದಲ್ಲಿ ನುಗ್ಗಿ ಬಂದಿತ್ತು ಎಂದು ಗುಪ್ತಚರ ಅಧಿಕಾರಿಯೊಬ್ಬರು ಆಗ ಹೇಳಿದ್ದರು. ಇದು ಅಂತಾರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಅವರು ಹೇಳಿದ್ದರು.

ಭಾನುವಾರ ಬೆಳಗ್ಗೆ ಕುಪ್ವಾರ ಜಿಲ್ಲೆಯ ತಂಗ್ ಧರ್ ವಿಭಾಗದಲ್ಲಿ ಪಾಕಿಸ್ತಾನಿ ಸೇನೆಯ ಬೆಂಬಲದೊಂದಿಗೆ ನಡೆದ ನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಕದನ ವಿರಾಮ ಉಲ್ಲಂಘನೆ ಮತ್ತು ನುಸುಳುವಿಕೆ ಯತ್ನಕ್ಕೆ ಭಾರತ ಪ್ರಬಲ ಉತ್ತರ ನೀಡಿತ್ತು.

ಭಾರತ-ಪಾಕಿಸ್ತಾನ ನಡುವಣ ಒಪ್ಪಂದದ ಪ್ರಕಾರ ಉಭಯ ದೇಶಗಳ ವಾಯುಪ್ರದೇಶವನ್ನು ಉಲ್ಲಂಘಿಸಿ ಹೆಲಿಕಾಪ್ಟರ್, ವಿಮಾನಗಳು ಹಾರಾಟ ನಡೆಸುವಂತಿಲ್ಲ.