Friday, January 9, 2026

PARYAYA: ಆರೋಗ್ಯ ರಕ್ಷಣೆ ಏಕೆ ಮುಖ್ಯ?

 ಆರೋಗ್ಯ ರಕ್ಷಣೆ ಏಕೆ ಮುಖ್ಯ?

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದೇವಾಲಯದ ಆಡಳಿತ ಮಂಡಳಿ ಮತ್ತು ಕಂಪಾನಿಯೋ ಸಹಯೋಗದಲ್ಲಿ ನಡೆಯುತ್ತಿರುವ ಉಚಿತ ಆಕ್ಯೂ ಪ್ಲಸ್‌ ಥೆರೆಪಿ ಶಿಬಿರದಲ್ಲಿ ೨೦೨೬ ಜನವರಿ ೯ರ ಶುಕ್ರವಾರ ಒಂದು ವಿಶೇಷ ಕಾರ್ಯಕ್ರಮ.

ಆರೋಗ್ಯ ತಜ್ಞ ಹಾಗೂ ಖ್ಯಾತ ಟಿವಿ ಶೋ ಸಂಪನ್ಮೂಲ ವ್ಯಕ್ತಿ ಶ್ರೀ ರತ್ನಾಕರ ಶೆಟ್ಟಿ ಅವರಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ. ಆರೋಗ್ಯ ರಕ್ಷಣೆಯ ಸೂತ್ರಗಳನ್ನು ಅತ್ಯಂತ ಸರಳವಾಗಿ, ಮನ ಮುಟ್ಟುವಂತೆ ನಿರರ್ಗಳವಾಗಿ ವಿವರಿಸಿದ ಅವರು ಆರೋಗ್ಯ ಕಾಪಾಡಿಕೊಳ್ಳುವಿಕೆಯ ಮಹತ್ವವನ್ನು ಒತ್ತಿ ಹೇಳಿದರು.

ಶ್ರೀ ಬಾಲಾಜಿ ಮಹಾಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಎನ್.‌ ಚೌಡರೆಡ್ಡಿ, ಉಪಾಧ್ಯಕ್ಷ ಶಿವಪ್ಪ ಶಾಂತಪ್ಪನವರ, ಕಾರ್ಯದರ್ಶಿ ರಾಜೇಶ ಹೆಗಡೆ ಮತ್ತಿತರರು ಹಾಜರಿದ್ದರು. ಕಂಪಾನಿಯೋ ಪ್ರತಿನಿಧಿ ಕಾರ್ತಿಕ್‌ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಬಳಿಕ ಕಂಪಾನಿಯೋ ಕಾರ್ಯಕರ್ತೆ ಪ್ರಫುಲ್ಲ ಹಾಗೂ ಕಾರ್ತಿಕ್‌ ದೇವಾಡಿಗ ಶಿಬಿರವನ್ನು ಮುಂದುವರೆಸಿದರು.

ಈ ಸಂದರ್ಭದ ಕೆಲವು ಫೊಟೋಗಳು ಹಾಗೂ ವಿಡಿಯೋಗಳು ಇಲ್ಲಿವೆ. ಶ್ರೀ ರತ್ನಾಕರ ಶೆಟ್ಟಿ ಅವರ ಮಾತುಗಳ ಇನ್ನಷ್ಟು ವಿಡಿಯೋ ಮುಂದಿನ ದಿನಗಳಲ್ಲಿ ಇಲ್ಲಿ ಮೂಡಿ ಬರಲಿದೆ.

PARYAYA: ಆರೋಗ್ಯ ರಕ್ಷಣೆ ಏಕೆ ಮುಖ್ಯ?:   ಆರೋಗ್ಯ ರಕ್ಷಣೆ ಏಕೆ ಮುಖ್ಯ? ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥ...

No comments:

Post a Comment