Tuesday, November 5, 2019

ಇಂದಿನ ಇತಿಹಾಸ History Today ನವೆಂಬರ್ 05

2019: ನವದೆಹಲಿ: ವಕೀಲರು ಪೊಲೀಸರನ್ನು ಥಳಿಸಿದ ಹಿನ್ನೆಲೆಯಲ್ಲಿ ರಾಷ್ಟ್ರದ ರಾಜಧಾನಿಯಲ್ಲಿ ಪೊಲೀಸ್ ಸಿಬ್ಬಂದಿ ೨೦೧೯ ನವೆಂಬರ್ ೦೫ರ ಮಂಗಳವಾರ ಪೊಲೀಸ್ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದ್ದಲ್ಲದೆ, ವಾಹನ ನಿಬಿಡ ರಸ್ತೆಯಲ್ಲಿ ೧೧ ಗಂಟೆಗಳ ಕಾಲ ಅಭೂತಪೂರ್ವವಾದ  ಭಾರೀ ಪ್ರತಿಭಟನೆಯನ್ನು ನಡೆಸಿದ್ದು, ಬೇಡಿಕೆ ಈಡೇರಿಕೆ ಬಗ್ಗೆ ಹಿರಿಯ ಅಧಿಕಾರಿಗಳ ಭರವಸೆಯ ಬಳಿಕ ರಾತ್ರಿ  ಪ್ರತಿಭಟನೆ ಹಿಂತೆಗೆದುಕೊಂಡರು. ಮಧ್ಯೆ ಕೇಂದ್ರ ಗೃಹ ಸಚಿವಾಲಯವು ಬಿಕ್ಕಟ್ಟು ಶಮನಗೊಳಿಸುವ ಸಲುವಾಗಿ ವಕೀಲರನ್ನು ಬಂಧಿಸದಂತೆ ಪೊಲೀಸರಿಗೆ ಆಜ್ಞಾಪಿಸಿದ ಆದೇಶದ ಬಗ್ಗೆ ಸ್ಪಷ್ಟನೆ ನೀಡುವಂತೆ ದೆಹಲಿ ಹೈಕೋರ್ಟಿಗೆ ಮನವಿ ಮಾಡಿತು. ದೆಹಲಿ ಹೈಕೋರ್ಟ್ ಪ್ರಕರಣದ ಮರುವಿಮರ್ಶೆಯನ್ನು ನವೆಂಬರ್ ೬ರ ಬುಧವಾರ ನಡೆಸಲಿದೆ. ಕಳೆದ ವಾರ ವಕೀಲರಿಂದ ಹಲ್ಲೆಗೆ ಒಳಗಾದ ಪೊಲೀಸರಿಗೆ ನ್ಯಾಯ ಒದಗಿಸುವಂತೆ ಕೋರಿ ನೂರಾರು ಮಂದಿ ಪೊಲೀಸ್ ಸಿಬ್ಬಂದಿ ದೆಹಲಿಯ ವಾಹನ ನಿಬಿಡ ರಸ್ತೆಯೊಂದರಲ್ಲಿ ಮಲಗಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಸರ್ಕಾರವು ಹೈಕೋರ್ಟಿಗೆ ಅದರ ಆದೇಶದ ಬಗ್ಗೆ ಸ್ಪಷ್ಟನೆ ಕೇಳಿ ಮನವಿ ಸಲ್ಲಿಸಿತು. ಕೇಂದ್ರದ ನೋಟಿಸಿಗೆ ಸ್ಪಂದಿಸುವಂತೆ ಹೈಕೋರ್ಟ್ ಬಾರ್ ಅಸೋಸಿಯೇಶನ್ ಮತ್ತು ಬಾರ್ ಕೌನ್ಸಿಲ್ಗೆ ಸೂಚನೆ ನೀಡಿದ್ದು, ತನ್ನ ಸದಸ್ಯರನ್ನು ಸಂಯಮವಹಿಸುವಂತೆ ನಿಯಂತ್ರಿಸಲೂ ನಿರ್ದೇಶನ ನೀಡಿತು.   ಶನಿವಾರ ಪೊಲೀಸರು ಮತ್ತು ವಕೀಲರು ಪಾರ್ಕಿಂಗ್ ವಿವಾದವನ್ನು ಅನುಸರಿಸಿ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ಹಿಂಸಾತ್ಮಕ ಘರ್ಷಣೆಗೆ ಇಳಿದಿದ್ದರು. ಘರ್ಷಣೆಯ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ಇಬ್ಬರು ಆಧೀನ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದ ದೆಹಲಿ ಹೈಕೋರ್ಟ್ ವಕೀಲರ ವಿರುದ್ಧ ದಮನಕಾರೀ ಕ್ರಮಗಳನ್ನು ಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ‘ ದಮನಕಾರಿ ಕ್ರಮಗಳು ನಂತರದ ಘಟನೆಗಳಲ್ಲಿ ಶಾಮೀಲಾದ ವಕೀಲರನ್ನೂ ಬಂಧಿಸದಂತೆ ಪೊಲೀಸರನ್ನು ತಡೆಯುತ್ತದೆಯೇ?’ ಎಂಬುದಾಗಿ ಸ್ಪಷ್ಟ ಪಡಿಸುವಂತೆ ಗೃಹ ಸಚಿವಾಲಯವು ಇದೀಗ ಹೈಕೋರ್ಟನ್ನು ಕೋರಿತು.  (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದಂದಿನಿಂದ ಅಧಿಕಾರಕ್ಕಾಗಿ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ನಡೆಯುತ್ತಿರುವ ಘರ್ಷಣೆ ಇನ್ನೂ ಇತ್ಯರ್ಥ ಕಾಣದ ಹಿನ್ನೆಲೆಯಲ್ಲಿ ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವುಕಾಯುವ ಆಟವನ್ನು ಆಯ್ಕೆ ಮಾಡಿಕೊಂಡಿತು. ಶಿವಸೇನಾ ನಾಯಕ ಸಂಜಯ್ ರಾವತ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆ ಮಾತುಕತೆಗಳನ್ನು ನಡೆಸಿದ ಬಳಿಕ ಪವಾರ್ ಅವರು ತಮ್ಮ ನಿರ್ಧಾರವನ್ನು ತಮ್ಮಲ್ಲೇ ರಹಸ್ಯವಾಗಿ ಇರಿಸಿಕೊಂಡರು. ಆದಾಗ್ಯೂ, ೨೦೧೯ರ ವಿಧಾನಸಭಾ ಚುನಾವಣೆಯಲ್ಲಿ ೨೦೧೪ರ ಚುನಾವಣೆಗಿಂತ ೧೩ ಸ್ಥಾನಗಳನ್ನು ಹೆಚ್ಚು ಪಡೆದುಕೊಂಡು ತನ್ನ ಬಲವನ್ನು ೫೪ಕ್ಕೆ ಏರಿಸಿಕೊಂಡಿರುವ ಎನ್ಸಿಪಿಯು, ಮೋದಿ ಸಂಪುಟದಲ್ಲಿರುವ ಏಕೈಕ ಶಿವಸೇನಾ ಸಚಿವ ರಾಜೀನಾಮೆ ನೀಡಿದರೆ, ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ಸಿನಿಂದ ಬಾಹ್ಯ ಬೆಂಬಲ ಪಡೆಯಲು ಇಚ್ಛಿಸಿದೆ ಎಂದು ಎನ್ಸಿಪಿ ಮೂಲಗಳು ಹೇಳಿದವು. ಬಿಜೆಪಿ ಜೊತೆಗಿನ ಮೈತ್ರಿಕೂಟದಿಂದ ಶಿವಸೇನೆಯು ಹೊರಕ್ಕೆ ಬಂದರೆ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷಕ್ಕೆ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆಯಕೊಡುಗೆನೀಡಲು ಎನ್ಸಿಪಿ ಸಿದ್ಧವಿದೆ ಎಂದು ಮೂಲಗಳು ಹೇಳಿದವು. ಇನ್ನೊಂದು ಸಂಭಾವ್ಯತೆಯೆಂದರೆ ಶಿವಸೇನೆ ಮತ್ತು ಎನ್ಸಿಪಿಯಿಂದ ತಲಾ ಒಬ್ಬರಂತೆ ಇಬ್ಬರು ಉಪ ಮುಖ್ಯಮಂತ್ರಿಗಳ ನೆರವಿನೊಂದಿಗೆ ಶಿವಸೇನೆಯು ಮುಖ್ಯಮಂತ್ರಿ ಸ್ಥಾನವನ್ನು ಪಡೆಯುವುದು. ‘ಎನ್ಸಿಪಿಯು ಮುಖ್ಯಮಂತ್ರಿ ಸ್ಥಾನವನ್ನು ಬಯಸುವುದಿಲ್ಲ. ನಮಗೆ ಪ್ರಮುಖ ಖಾತೆಗಳು ಲಭಿಸಿದರೆ ಸಾಕುಎಂದು ಎನ್ಸಿಪಿ ಮೂಲ ಹೇಳಿದೆ. ಆದರೆ ಸೇನೆಯಿಂದ ಇನ್ನೂ ಇಂತಹ ಯಾವ ಪ್ರಸ್ತಾಪಗಳೂ ಬಂದಿಲ್ಲ  ಎಂದೂ ಮೂಲ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ: ಬಿಜೆಪಿಯ ಜೊತೆ ಅಧಿಕಾರದ ಸಮಾನ ಹಂಚಿಕೆಗಾಗಿ ಹೋರಾಟಕ್ಕೆ ಇಳಿದಿರುವ ಮಿತ್ರ ಪಕ್ಷ ಶಿವಸೇನೆ 2019 ನವೆಂಬರ್ 05ರ ಮಂಗಳವಾರ ಮುಖ್ಯಮಂತ್ರಿ ದೇವೇಂದ್ರ  ಫಡ್ನವಿಸ್ ಅವರನ್ನುಹೊರ ಹೋಗುತ್ತಿರುವ ಮುಖ್ಯಮಂತ್ರಿಎಂಬುದಾಗಿ ಕರೆಯುವ ಮೂಲಕ ಬಿಜೆಪಿಯತ್ತ ಇನ್ನೊಂದು ಬಾಣ ಬಿಟ್ಟಿತು. ಶಿವಸೇನೆಯ ಮುಖವಾಣಿಸಾಮ್ನಾ2019 ನವೆಂಬರ್ 04ರ ಸೋಮವಾರ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ಫಡ್ನವಿಸ್ ಅವರು  ’ಮಾತು ಕಳೆದುಕೊಂಡಂತೆ’  ಕಾಣುತ್ತಿದೆ ಎಂದು ಹೇಳಿತು. ಸೇನಾ ಮತ್ತು ಬಿಜೆಪಿ ಕಳೆದ ೩೦ ವರ್ಷಗಳಿಂದ ಮಿತ್ರ ಪಕ್ಷಗಳಾಗಿದ್ದು ರಾಜ್ಯದಲ್ಲಿ ಮೈತ್ರಿಕೂಟ ರಚಿಸಿಕೊಂಡು ಸೆಣಸಿವೆ. ಮಿತ್ರಪಕ್ಷಗಳು ಅಕ್ಟೋಬರ್ ೨೪ರಂದು ಮಹಾರಾಷ್ಟ್ರ ವಿಧಾನಸಭೆಯ ಚುನಾವಣಾ ಫಲಿತಾಂಶ ಪ್ರಕಟವಾದಂದಿನಿಂದ ನಿರಂತರ ಜಗಳಾಡುತ್ತಿವೆ. ಅಧಿಕಾರವನ್ನು ೫೦:೫೦ ಸೂತ್ರದ ಪ್ರಕಾರ ಹಂಚಿಕೊಳ್ಳಬೇಕು ಮತ್ತು ಉಭಯ ಪಕ್ಷಗಳು ತಲಾ ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಹೊಂದಿರಬೇಕು ಎಂದು ಸೇನೆ ಪಟ್ಟು ಹಿಡಿದಿದೆ. ಸೇನೆಯ ಜೊತೆಗೆ ಅಂತಹ ಯಾವುದೇ ಒಪ್ಪಂದವೂ ಆಗಿಲ್ಲ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದರು. 2019 ನವೆಂಬರ್ 4ರ ಸೋಮವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿರುವ ಫಡ್ನವಿಸ್ ಅವರ ಮೇಲೆ ಈಗ ಮುಂದಿನ ಹೆಜ್ಜೆ ಇರಿಸಬೇಕಾದ ಹೊಣೆ ಇದೆ ಎಂದು ಸೇನಾ ಮುಖವಾಣಿ ಈದಿನ  ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಕರ್ನಾಟಕದ ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಸಿದ್ಧವಿದೆ ಎಂದು 2019 ನವೆಂಬರ್ 05ರ ಮಂಗಳವಾರ ಹೇಳಿದ ಸುಪ್ರೀಂಕೋರ್ಟ್, ತೀರ್ಪಿಗಾಗಿ ಕಾಯುವಂತೆ ಕಾಂಗ್ರೆಸ್ ಪಕ್ಷಕ್ಕೆ ಸೂಚಿಸಿತು. ಆದಾಗ್ಯೂ, ೧೭ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಯಿರುವ ಆಡಿಯೋ ಟೇಪನ್ನು ದಾಖಲೆಗೆ ತೆಗೆದುಕೊಳ್ಳಬೇಕು ಎಂಬ ಕಾಂಗ್ರೆಸ್ ಮನವಿಯನ್ನು ಪರಿಶೀಲಿಸುವುದಾಗಿ ಕೋರ್ಟ್ ಹೇಳಿತು. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾತುಗಳು ಇವೆ ಎನ್ನಲಾಗಿರುವ ಆಡಿಯೋ ಟೇಪನ್ನು ಶಾಸಕರ ಅನರ್ಹತೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಾಕ್ಷಿಯಾಗಿ ದಾಖಲೆಗೆ ತೆಗೆದುಕೊಳ್ಳಬೇಕು ಎಂಬುದಾಗಿ ಕಾಂಗ್ರೆಸ್ ವಕೀಲ ಕಪಿಲ್ ಸಿಬಲ್ ಅವರ ಸಲ್ಲಿಸಿದ ಮನವಿ ಮೇಲಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಪೀಠವು ಈದಿನ  ನಡೆಸಿತು. ಈದಿನ,  ಅರ್ಜಿದಾರ ದಿನೇಶ ಗುಂಡೂರಾವ್ ಅವರ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮುಖ್ಯಮಂತ್ರಿಯವರು ಇತ್ತೀಚೆಗೆ ಬಿಜೆಪಿಯ ಕೋರ್ ಸಮಿತಿ ಸಭೆಯಲ್ಲಿ ಸಂಪೂರ್ಣ ಪ್ರಕರಣ ಕೇಂದ್ರ ಗೃಹ ಸಚಿವರ ಸೂಚನೆ ಮೇರೆಗೆ ನಡೆದಿದೆ ಎಂಬುದಾಗಿ ಹೇಳಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಕಾಂಗ್ರೆಸ್ ವಕೀಲ ಕಪಿಲ್ ಸಿಬಲ್ ಅವರು ಸಲ್ಲಿಸಿದ ಆಡಿಯೋ ಟೇಪಿನ ಪ್ರಸ್ತುತತೆ ಏನು ಎಂಬುದಾಗಿ ಸುಪ್ರೀಂಕೋರ್ಟ್ ಆರಂಭದಲ್ಲೇ ಪ್ರಶ್ನಿಸಿತು. ’ನಾವು ವಿಸ್ತೃತವಾಗಿ ಎಲ್ಲವನ್ನೂ ಪರಿಶೀಲಿಸಿದ್ದೇವೆ. ಈಗ ಇದರ ಪ್ರಸ್ತುತತೆ ಏನು?’ ಎಂದು ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ನ್ಯಾಯಪೀಠವು ಕೇಳಿತು. ಶಾಸಕರನ್ನು ಮುಂಬೈಗೆ ಒಯ್ಯಲಾಗಿತ್ತು ಎಂದು ನೀವು ಈಗಾಗಲೇ ವಾದಿಸಿದ್ದೀರಿ. ನಾವು ಎಲ್ಲವನ್ನೂ ಗಮನಕ್ಕೆ ತೆಗೆದುಕೊಂಡಿದ್ದೇವೆ. ನಾವು ಅದನ್ನು ಪರಿಶೀಲಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೂ ಒಳಗೊಂಡ ಪೀಠ ಹೇಳಿತು. ರಾಜೀನಾಮೆ ನೀಡುವಂತೆ ಬಂಡಾಯ ಶಾಸಕರ ಒತ್ತಡ ಹೇರುವಲ್ಲಿ ಬಿಜೆಪಿಯ ಪಾತ್ರ ಇರುವುದನ್ನು  ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆಡಿಯೋ ಟೇಪ್ ಮತ್ತು ಪತ್ರಿಕಾ ವರದಿಗಳು ಸಾಬೀತು ಪಡಿಸಿವೆ ಎಂದು ಕಪಿಲ್ ಸಿಬಲ್ ಅವರು ವಾದಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)



Monday, November 4, 2019

ಇಂದಿನ ಇತಿಹಾಸ History Today ನವೆಂಬರ್ 04

2019: ನವದೆಹಲಿ: ರಾಜಧಾನಿ ದೆಹಲಿ ಮತ್ತು ಉತ್ತರ ಭಾರತದ ಬಹಳಷ್ಟು ಕಡೆಗಳಲ್ಲಿ ವಾಯುಮಾಲಿನ್ಯವು ವಿಷಮ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು 2019 ನವೆಂಬರ್ 05ರ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್, ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ತ್ಯಾಜ್ಯ ಸುಟ್ಟರೆ ಒಂದು ಲಕ್ಷ ರೂಪಾಯಿ ದಂಡ ವಿಧಿಸುವಂತೆ ಆಜ್ಞಾಪಿಸಿತು. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ತ್ಯಾಜ್ಯಗಳನ್ನು ತಂದು ಸುರಿದವರಿಗೆ ೫೦೦೦ ರೂಪಾಯಿಗಳ ದಂಡ ವಿಧಿಸುವಂತೆಯೂ ಆದೇಶ ನೀಡಿದ ಸುಪ್ರೀಂಕೋರ್ಟ್ ಪೀಠವು, ತಾನು ಮುಂದಿನ ಆದೇಶ ನೀಡುವವರೆಗೆ ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಬಾರದು ಎಂದೂ ಕಟ್ಟು ನಿಟ್ಟಿನ ಆಜ್ಞೆ ಮಾಡಿತು. ವಿದ್ಯುತ್ ಜನರೇಟರ್‌ಗಳ ಬಳಕೆಯನ್ನು ಸ್ಥಗಿತಗೊಳಿಸುವಂತೆಯೂ ಆಜ್ಞೆ ಮಾಡಿದ ಸುಪ್ರೀಂಕೋರ್ಟ್ ತನ್ನ ಆದೇಶಗಳನ್ನು ವ್ಯಾಪಕ ಪ್ರಮಾಣದಲ್ಲಿ ಪ್ರಸಾರ ಮಾಡುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಿತು. ದೆಹಲಿಯ ವಾಯುಮಾಲಿನ್ಯ ವಿಷಯಕ್ಕೆ ಸಂಬಂಧಿಸಿದಂತೆ ನವೆಂಬರ್ ೬ರ ಬುಧವಾರ ಪೀಠವು ಮತ್ತೆ ವಿಚಾರಣೆ ನಡೆಸಲಿದೆ. ಇದಕ್ಕೆ ಮುನ್ನ ದೆಹಲಿ ಮತ್ತು ಇತರ ಕಡೆಗಳಲ್ಲಿ ಪ್ರತಿವರ್ಷವೂ ವಾಯುಮಾಲಿನ್ಯ ಇದೇ ರೀತಿ ಪುನರಾವರ್ತನೆಯಾಗುತ್ತಿದೆ ಎಂದು ಹೇಳಿದ ಸುಪ್ರೀಂಕೋರ್ಟ್, ಸಮಸ್ಯೆ ಬಗೆ ಹರಿಸಲು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಕ್ಕೆ ಒಂದಿಷ್ಟೂ ಕಾಳಜಿ ಇಲ್ಲ. ಕೇವಲ ಬೂಟಾಟಿಕೆ (ಗಿಮಿಕ್) ಮಾಡುತ್ತಾ ಕಾಲ ತಳ್ಳುತ್ತಿವೆ ಎಂದು ಚಾಟಿ ಬೀಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ದೆಹಲಿಯಲ್ಲಿ ಒಂದು ವಾರ ಉಸಿರಾಡಿದರೆ ಸಾಕು, ಅದು ೧೪೮ ಸಿಗರೇಟ್
ಸೇದಿದ್ದಕ್ಕೆ ಸಮವಾಗುತ್ತದೆ. ಹೌದು ವಾಯುಮಾಲಿನ್ಯ ಮಟ್ಟವನ್ನು ಸೂಚಿಸುವ ಆಪ್ ಇದನ್ನು ಬಹಿರಂಗ ಗೊಳಿಸಿದೆ. ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದ ವಾಯುಮಾಲಿನ್ಯ ತೀವ್ರಗೊಂಡಿದ್ದು,  ವಾಯುಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಸೋಮವಾರ ೫೦೦ ಅಂಕಗಳಿಗೆ ತಲುಪಿದೆ. ವಾರಾಂತ್ಯದಲ್ಲಿ ಸುರಿದ ಮಳೆ ಪರಿಸರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಏನೇನೂ ಅನುಕೂಲ ಮಾಡಿಕೊಟ್ಟಿಲ್ಲ ಎಂಬುದು ರಾಜಧಾನಿಯಲ್ಲಿ ಕರಿಯ ಹೊಗೆ ಮತ್ತು ದೂಳಿನ ಪದರ ಹೆಚ್ಚುತ್ತಲೇ ಇರುವುದರಿಂದ ಖಚಿತಗೊಂಡಿದೆ. ದಿನದಿಂದ ದಿನಕ್ಕೆ ಕುಸಿಯುತ್ತಲೇ ಇರುವ ವಾಯುಗುಣಮಟ್ಟ ಸಹಜ ಬದುಕನ್ನು ಅಸ್ತವ್ಯಸ್ತಗೊಳಿಸಿದ್ದು,  ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಸಾರಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ದಟ್ಟ ಹೊಗೆ, ದೂಳಿನ ಪದರದಿಂದಾಗಿ ಉಂಟಾಗಿರುವ ಪ್ರತಿಕೂಲ ಹವಾಮಾನದಲ್ಲಿ ಇಳಿಯಲು ಸಾಧ್ಯವಾಗದೆ ವಿಮಾನಗಳ ಹಾರಾಟ ಮಾರ್ಗಗಳನ್ನೇ ಬದಲಿಸಲಾಗುತ್ತಿದೆ. ದೆಹಲಿಯಿಂದ ಹೊರಡಬೇಕಾದ ಹಲವಾರು ವಿಮಾನಗಳ ಹಾರಾಟ ವಿಳಂಬಗೊಂಡಿದೆ.  ಉಸಿರಾಟಕ್ಕೇ ಪರದಾಡಬೇಕಾದ ಸನ್ನಿವೇಶದಲ್ಲಿ ನಗರದಿಂದ ಹೊರಕ್ಕೆ ಹೋಗುವುದೇ ಬುದ್ಧಿವಂತಿಕೆಯ ಕ್ರಮ ಎಂದು ಹಲವರು ಸಲಹೆ ಮಾಡಲಾರಂಭಿಸಿದ್ದಾರೆ. ಕಣ್ಣುಗಳಲ್ಲಿ ಉರಿ, ತುರಿಕೆ, ಗಂಟಲು ಒಣಗುವಿಕೆ ಮತ್ತು ಉಸಿರಾಟದ ಸಮಸ್ಯೆ ನಗರದಾದ್ಯಂತ ಮಾತುಕತೆಯ ಪ್ರಮುಖ ವಿಷಯವಾಗಿ ಬದಲಾಗುತ್ತಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


2019: ಬ್ಯಾಂಕಾಕ್:  ಸೇವಾ ನೌಕರರು ಮತ್ತು ರೈತರ ರಕ್ಷಣೆಯ ಸಲುವಾಗಿ ಪ್ರಾದೇಶಿಕ ಸಮಗ್ರ
ಆರ್ಥಿಕ ಪಾಲುದಾರಿಕೆ ಅಥವಾ ಆರ್‌ಸಿಇಪಿಯನ್ನು  ಸೇರದೇ ಇರಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ. ‘ಕೊರತೆಗಳ ಬಗ್ಗೆ ಗಮನ ಹರಿಸುವಂತೆ  ಮುತ್ತು ಭಾರತದ ಸೇವೆಗಳು ಮತ್ತು ಹೂಡಿಕೆಗಳಿಗೆ ತಮ್ಮ ಮಾರುಕಟ್ಟೆಗಳನ್ನು ತೆರೆಯುವಂತೆ ಭಾರತವು ಇತರ ೧೫ ರಾಷ್ಟ್ರಗಳನ್ನು ಆಗ್ರಹಿಸಿದೆ ಎಂದು ಭಾರತದ ಅಧಿಕಾರಿಯೊಬ್ಬರು 2019 ನವೆಂಬರ್  4ರ ಸೋಮವಾರ ನವದೆಹಲಿಯಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಾ ಹೇಳಿದರು.  ‘ಇತ್ಯರ್ಥವಾಗದೇ ಇರುವ ಮಹತ್ವದ ವಿಷಯಗಳಿವೆ ಅವುಗಳನ್ನು ಮೊದಲು ಇತ್ಯರ್ಥ ಪಡಿಸಬೇಕಾಗಿದೆ ಎಂದು ಆರ್‌ಸಿಇಪಿ ರಾಷ್ಟ್ರಗಳಿಗೆ ಭಾರತ ಆಗ್ರಹಿಸಿತು ಎಂದು ಆರ್‌ಸಿಇಪಿ ರಾಷ್ಟ್ರಗಳು ಕೂಡಾ ಸೋಮವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿದವು. ‘ಪರಸ್ಪರ ಒಪ್ಪಿಗೆಯಾಗುವ ರೀತಿಯಲ್ಲಿ ಎಲ್ಲ ಆರ್‌ಸಿಇಪಿ ರಾಷ್ಟ್ರಗಳು ಬಾಕಿ ಉಳಿದಿರುವ ವಿಷಯಗಳ ಇತ್ಯರ್ಥಕ್ಕೆ ಒಟ್ಟಾಗಿ ಶ್ರಮಿಸಲಿವೆ. ಭಾರತದ ಅಂತಿಮ ನಿರ್ಧಾರವು ಈ ವಿಷಯಗಳ ಸಮಾಧಾನಕರ ಇತ್ಯರ್ಥವನ್ನು ಅವಲಂಬಿಸಿದೆ ಎಂದೂ ಹೇಳಿಕೆ ತಿಳಿಸಿತು.  ‘ಯಾವಾಗ ಬೇಕಿದ್ದರೂ ಆರ್‌ಸಿಇಪಿ ಸೇರಲು ಭಾರತಕ್ಕೆ ಸ್ವಾಗತವಿದೆ ಎಂದು ಉಪ ವಿದೇಶಾಂಗ ಸಚಿವ ಲೆ ಯುಚೆಂಗ್ ಅವರು ಸೋಮವಾರ ಬ್ಯಾಂಕಾಕಿನಲಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ವಾಣಿಜ್ಯ ಒಪ್ಪಂದದ ಪ್ರಗತಿ ಬಗ್ಗೆ ಈ ವಾರದಲ್ಲಿ ಪ್ರಕಟಣೆ ಬರಬಹುದು ಎಂದು ಏಷ್ಯಾದ ನಾಯಕರು ಆಶಯ ವ್ಯಕ್ತ ಪಡಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


2019: ನವದೆಹಲಿ: ಅನರ್ಹ ಶಾಸಕರ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು
ಮಾತನಾಡಿದ್ದಾರೆ ಎನ್ನಲಾಗಿರುವ ಹೊಸ ಆಡಿಯೋ ಟೇಪ್ ಪ್ರಕರಣ 2019 ನವೆಂಬರ್ 04ರ ಸೋಮವಾರ ಸುಪ್ರೀಂಕೋರ್ಟಿನಲ್ಲಿ ಪ್ರತಿಧ್ವನಿಸಿದ್ದು, ಶಾಸಕರ ಅನರ್ಹತೆ ಪ್ರಕರಣದಲ್ಲಿ ಇದನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ಕರ್ನಾಟಕ ಕಾಂಗ್ರೆಸ್ ಪಕ್ಷವು ನ್ಯಾಯಪೀಠಕ್ಕೆ ಮನವಿ ಮಾಡಿತು. ಕರ್ನಾಟಕ ಕಾಂಗ್ರೆಸ್ ನೀಡಿರುವ ಹೊಸ ಸಾಕ್ಷ್ಯವನ್ನು ಪರಿಗಣಿಸಲು ವಿಶೇಷ ಪೀಠ ರಚಿಸುವ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರ ಜೊತೆ ಸಮಾಲೋಚಿಸುವುದಾಗಿ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು ಹೇಳಿತು.  2019 ನವೆಂಬರ್ 05ರ ಮಂಗಳವಾರ ವಿಷಯವನ್ನು ಎತ್ತಿಕೊಳ್ಳಲು ಸುಪ್ರೀಂಕೋರ್ಟ್ ಪೀಠ ಸಮ್ಮತಿಸಿತು. ಜನತಾದಳ -ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ೧೭ ಮಂದಿ ಕಾಂಗ್ರೆಸ್ ಮತ್ತು ಜನತಾ ದಳ (ಎಸ್) ಶಾಸಕರ ಬಂಡಾಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪಾತ್ರವಿದೆ ಎಂಬುದಾಗಿ ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ  ಎಂಬುದನ್ನು ಹೊಸ ಆಡಿಯೋ ಟೇಪ್ ಬಹಿರಂಗ ಪಡಿಸಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿತು. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠದ ಮುಂದೆ ಸೋಮವಾರ ವಿಷಯವನ್ನು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರ ಪರವಾಗಿ ಪ್ರಸ್ತಾಪಿಸಿದರು. ಕರ್ನಾಟಕದ ಅನರ್ಹ ಶಾಸಕರು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ಇತ್ಯರ್ಥ ಪಡಿಸುವಲ್ಲಿ ಈ ವಿಷಯವು ಪರಿಣಾಮ ಬೀರಬಲ್ಲುದು ಎಂದು ಸಿಬಲ್ ಹೇಳಿದರು. ಅದಕ್ಕೆ ಪೀಠವು ಆಗಿನ ವಿಧಾನಸಭಾಧ್ಯಕ್ಷರ ವಿರುದ್ಧ ಅನರ್ಹ ಶಾಸಕರು ಸಲ್ಲಿಸಿದ್ದ ಮನವಿ ಕುರಿತ ತೀರ್ಪನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಎಂದು ಹೇಳಿತು. ‘ಸಾರ್ವಜನಿಕ ಬದುಕಿನಲ್ಲಿ ರಾಜಕಾರಣಿಗಳು ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ ಎಂದೂ ಪೀಠ ಹೇಳಿತು. ಆದರೆ ಸಿಬಲ್ ಅವರು ಸಂಭಾಷಣೆ ದಾಖಲಾಗಿರುವ ಆಡಿಯೋ ಟೇಪನ್ನು ದಾಖಲೆಗೆ ಸೇರ್ಪಡೆ ಮಾಡಬೇಕು ಎಂಬುದಾಗಿ ಆಗ್ರಹಿಸಿದಾಗ, ನ್ಯಾಯಮೂರ್ತಿ ರಮಣ ಅವರು ಮಂಗಳವಾರ ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೂ ಒಳಗೊಂಡ ವಿಶೇಷ ಪೀಠ ರಚಿಸುವಂತೆ ತಾವು ಸಿಜೆಐ ಅವರಿಗೆ ಮನವಿ ಮಾಡುವುದಾಗಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

ಇಂದಿನ ಇತಿಹಾಸ   History Today 
ನವೆಂಬರ್ 04 (2018+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)



Sunday, November 3, 2019

ಇಂದಿನ ಇತಿಹಾಸ History Today ನವೆಂಬರ್ 03

2019: ಬ್ಯಾಂಕಾಕ್: ಚೀನಾದಿಂದ ಅಗ್ಗದ ವಸ್ತುಗಳು ಪ್ರವಾಹದೋಪಾದಿಯಲ್ಲಿ ಹರಿದು ಬರಬಹುದು ಎಂಬ ಹಿನ್ನೆಲೆಯಲ್ಲಿ ಭಾರತವು ಹೊಸ ಬೇಡಿಕೆಗಳನ್ನು ಮುಂದಿಟ್ಟ ಪರಿಣಾಮವಾಗಿ ೧೬ ರಾಷ್ಟ್ರಗಳ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್ಸಿಇಪಿ) ಒಪ್ಪಂದಕ್ಕೆ ಸಹಿ ಬೀಳುವುದು ೨೦೨೦ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ಆಗ್ನೇಯ ಏಷ್ಯಾ ನಾಯಕರ ಕರಡು ಹೇಳಿಕೆಯು 2019 ನವೆಂಬರ್ 03ರ ಭಾನುವಾರ ತಿಳಿಸಿತು. ಭಾರತದಿಂದ ನ್ಯೂಜಿಲೆಂಡ್ವರೆಗಿನ ದೇಶಗಳನ್ನು ಒಳಗೊಳ್ಳುವ ಆರ್ಸಿಇಪಿ ವಾಣಿಜ್ಯ ಒಪ್ಪಂದವು ಜಾಗತಿಕ ಜಿಡಿಪಿಯ ಶೇಕಡಾ ೩೦ರಷ್ಟು ಮತ್ತು ವಿಶ್ವದ ಜನರ ಅರ್ಧದಷ್ಟು ಜನರಿಗೆ ಅನ್ವಯವಾಗಲಿದೆ. ಭಾರತದ ಆಕ್ಷೇಪಗಳ ಪರಿಣಾಮವಾಗಿ ಬ್ಯಾಂಕಾಕಿಲ್ಲಿ ನಡೆಯುವ ಅಸಿಯಾನ್ ಶೃಂಘಸಭೆಯಲ್ಲಿ ಒಪ್ಪಂದಕ್ಕೆ ಅಂತಿಮ ರೂಪ ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ಒಪ್ಪಂದದ ಪರಿಣಾಮವಾಗಿ ಚೀನಾದ ಅಗ್ಗದ ವಸ್ತುಗಳು ಭಾರತಕ್ಕೆ ಪ್ರವಾಹದೋಪಾದಿಯಲ್ಲಿ ಹರಿದು ಬರಬಹುದು. ಇದರಿಂದಾಗಿ ದೇಶದ ಸಣ್ಣ ಉದ್ಯಮಕ್ಕೆ ಭಾರೀ ಧಕ್ಕೆ ಆಗಬಲ್ಲುದು ಎಂದು ಭಾರತ ಚಿಂತೆ ವ್ಯಕ್ತಪಡಿಸಿತು.  ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಸಿಯಾನ್ ನಾಯಕರ ಸಭೆಯಲ್ಲಿ ತಮ್ಮ ದೇಶದ ಕಳವಳವನ್ನು ಪುನರಾವರ್ತನೆ ಮಾಡಿದರು ಎಂದು ಮೂಲಗಳು ಹೇಳಿದವು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ: ಮುಖ್ಯಮಂತ್ರಿ ಸ್ಥಾನ ಮತ್ತು ಅಧಿಕಾರದ ಸಮಾನ ಹಂಚಿಕೆಗಾಗಿ ಮಿತ್ರ ಪಕ್ಷ ಬಿಜೆಪಿ ಜೊತೆಗಿನ ತನ್ನ ಪಟ್ಟನ್ನು 2019 ನವೆಂಬರ್ 3ರ ಭಾನುವಾರ ಇನ್ನಷ್ಟು ಬಿಗಿಗೊಳಿಸಿದ ಶಿವಸೇನೆಯು, ಇದೇ ಮೊದಲನೇ ಬಾರಿಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಅಜಿತ್ ಪವಾರ್ ಅವರಿಗೆಮೊಬೈಲ್ ಸಂದೇಶಕಳುಹಿಸಿತು.  ಇದೇ ವೇಳೆಗೆ ಶಿವಸೇನೆಯು ಮೊದಲು ಸರ್ಕಾರ ರಚಿಸುವುದಿಲ್ಲ ಎಂದು ಸೇನಾ ಮುಖವಾಣಿಸಾಮ್ನಾಸಂಪಾದಕೀಯದಲ್ಲಿ ಬರೆಯಿತು. ಶಿವಸೇನೆಯಿಂದ ತನಗೆ ಮೊತ್ತ ಮೊದಲ ಸಂದೇಶ ಬಂದಿರುವುದನ್ನು ಅಜಿತ್ ಪವಾರ್ ಅವರು ದೃಢ ಪಡಿಸಿದ್ದು, ಸಂಜಯ್ ರಾವತ್ ಅವರನ್ನು ಸಂಪರ್ಕಿಸುವುದಾಗಿ ಹೇಳಿದರು.  ಮುಖ್ಯಮಂತ್ರಿ ಸ್ಥಾನ ಮತ್ತು ಅಧಿಕಾರದ ಸಮಾನ ಹಂಚಿಕೆಗಾಗಿ ಬಿಜೆಪಿ-ಶಿವಸೇನೆ ನಡುವಣ ಹಗ್ಗ ಜಗ್ಗಾಟವು ಈದಿನ ೧೦ನೇ ದಿನಕ್ಕೆ ಕಾಲಿರಿಸಿದ್ದು, ತನ್ನ ಬೇಡಿಕೆ ಈಡೇರಿಕೆಗೆ ಬಿಜೆಪಿ ಸಿದ್ಧವಿಲ್ಲವಾದರೆ ಬೇರೆ ಆಯ್ಕೆಗಳನ್ನು ತಾನು ಪರಿಶೀಲಿಸುವುದಾಗಿ ಹೇಳಿದೆ. ಕಾಂಗ್ರೆಸ್ ಮತ್ತು ಎನ್ಸಿಪಿ ಹಾಗೂ ಕೆಲವು ಪಕ್ಷೇತರರ ಜೊತೆಗೆ ಬಹುಮತ ಗಳಿಸಲು ತಾನು ಹೊಂದಬಹುದಾದ ಸಂಖ್ಯಾಬಲವನ್ನು ಉಲ್ಲೇಖಿಸಿದ ಸೇನೆಯ ಮುಖವಾಣಿಸಾಮ್ನಾ, ಆದರೆ ಸೇನೆಯು ಮೊದಲ ಸರ್ಕಾರ ರಚಿಸುವುದಿಲ್ಲ ಎಂದು ಸಂಪಾದಕೀಯದಲ್ಲಿ ಘೋಷಿಸಿತು. ರಾಷ್ಟ್ರಪತಿ ಆಳ್ವಿಕೆ ಹೇರುವ ಧೈರ್ಯ ಮಾಡಿ, ಅಥವಾ ಸದನದಲ್ಲಿ ಬಹುಮತ ಸಾಬೀತು ಪಡಿಸಿಎಂದು ಸೇನೆಯು ತನ್ನ ಮುಖವಾಣಿಯ ಸಂಪಾದಕೀಯದಲ್ಲಿ ಬಿಜೆಪಿಗೆ ಸವಾಲು ಹಾಕಿತು.ಬಿಜೆಪಿಯು ಸದನದಲ್ಲಿ ಬಹುಮತ ಸಾಬೀತು ಪಡಿಸಲು ವಿಫಲವಾದರೆ ಅಗ ಸೇನೆಯು ಎರಡನೇ ದೊಡ್ಡ ಪಕ್ಷವಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವುದುಎಂದು ಸಂಪಾದಕೀಯ ಹೇಳಿತು.  (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಬಳಕೆದಾರರ ಮೇಲೆ ಬೇಹುಗಾರಿಕೆ ನಡೆಸುವ ಉದ್ದೇಶಕ್ಕಾಗಿ ನಡೆದ ಫೋನ್ ಕನ್ನದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನೂ ಗುರಿಮಾಡಲಾಗಿತ್ತು ಎಂದು ಕಾಂಗ್ರೆಸ್ ಪಕ್ಷವು 2019 ನವೆಂಬರ್ 03ರ ಭಾನುವಾರ ಗಂಭೀರ ಆರೋಪ ಮಾಡಿತು. ’ಇದು ಇಲ್ಲದೇ ಇದ್ದುದರ ಕಲ್ಪನೆ ಮಾತ್ರಎಂದು ಬಿಜೆಪಿ ಇದಕ್ಕೆ ಪ್ರತಿಕ್ರಿಯಿಸಿತುಪ್ರಿಯಾಂಕಾ ಗಾಂಧಿ ಅವರಿಗೆ ವಾಟ್ಸಪ್ನಿಂದ ಆಕೆಯ ಫೋನ್ ಹ್ಯಾಕ್ ಬಗ್ಗೆಸಂದೇಶ (ಮೆಸ್ಸೇಜ್) ಬಂದಿತ್ತು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದರು.  ‘ನಿಮ್ಮ ಫೋನ್ಗಳು ಹ್ಯಾಕ್ ಆಗಿವೆ ಎಂಬುದಾಗಿ ವಾಟ್ಸಪ್ ಸಂದೇಶಗಳನ್ನು ಕಳಿಸಿತ್ತು. ಪ್ರಿಯಾಂಕಾ ಗಾಂಧಿ ಅವರ ಫೋನಿಗೂ ಅಂತಹ ಒಂದು ಸಂದೇಶ ಬಂದಿತ್ತುಎಂದು ಸುರ್ಜೆವಾಲ ನುಡಿದರು. ಹ್ಯಾಕ್ಗೆ ಗುರಿಯಾದವರ ಪಟ್ಟಿಯಲ್ಲಿ ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್ ಮತ್ತು ಮಾಜಿ ಲೋಕಸಭಾ ಸದಸ್ಯ ಸಂತೋಷ ಭಾರತೀಯ ಅವರೂ ಇದ್ದರು ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಇಸ್ರೇಲ್ ಸಂಸ್ಥೆಯೊಂದು ವಿಶ್ವಾದ್ಯಂತ ಸುಮಾರು ೧೪೦೦ ಜನರ ಮೇ ಬೇಹುಗಾರಿಕೆ ನಡೆಸುವ ಸಲುವಾಗಿ ತನ್ನ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ವಾಟ್ಸಪ್ ಆಪಾದಿಸಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ತಮ್ಮ ಫೋನಿಗೂ ಕನ್ನ ಹಾಕಲಾಗಿದ್ದು ಇದಕ್ಕೆ ತಮ್ಮ ಬಳಿ ಸಾಕ್ಷ್ಯ ಇದೆ ಎಂದು ಹೇಳಿದ್ದರು. ‘ಇದು ಅತ್ಯಂತ ಗಂಭೀರ ವಿಷಯ. ಇಬ್ಬರು ರಾಜಕಾರಣಿಗಳು ಈವರೆಗೆ ತಮ್ಮ ಫೋನುಗಳು ಹ್ಯಾಕ್ ಆಗಿರುವ ಬಗ್ಗೆ ಹೇಳಿದ್ದಾರೆಎಂದು ಕಾಂಗ್ರೆಸ್ ನಾಯಕ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯನ್ನು ಕಾಡುತ್ತಿರುವ ವಾಯುಮಾಲಿನ್ಯ ಸ್ಥಿತಿ 2019 ನವೆಂಬರ್ 3ರ ಭಾನುವಾರ ಗಂಭೀರ ಮಟ್ಟಕ್ಕೆ ಹೋಗಿದ್ದು, ಅತಿಯಾದ ಹೊಗೆ, ದೂಳಿನ ಮಬ್ಬು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ೩೭ ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಯಿತು. ರಾಜಧಾನಿಯ ಹಾನಿಕಾರ ಅಂಶಗಳ ಪ್ರಮಾಣ ವಾತಾವರಣದಲ್ಲಿ ಹೆಚ್ಚಿದ್ದರಿಂದ ಗಾಳಿಯಲ್ಲಿನ ಆಮ್ಲಜನಕದ ಪ್ರಮಾಣ ತಗ್ಗಿದ್ದು, ಉಸಿರಾಟಕ್ಕೆ ಕಷ್ಟಕರವಾಗುವ ಭೀತಿ ಉದ್ಭವವಾಯಿತು. ದಟ್ಟ ಹೊಗೆಯಿಂದಾಗಿ ಅಂದಾಜು ೩೭ ವಿಮಾನಗಳ ಹಾರಾಟ ಮಾರ್ಗವನ್ನು ಬದಲಿಸಲಾಗಿದೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು. ನಗರದ ಹಲವು ಭಾಗಗಳಲ್ಲಿ ಹೊಗೆಯ ಪದರ ಆವರಿಸಿಕೊಂಡು, ಏನೂ ಕಾಣದಂತಹ ಸ್ಥಿತಿ ನಿರ್ಮಾಣಗೊಂಡಿತು. ಈದಿನ  ಮಧ್ಯಾಹ್ನದ ವೇಳೆಗೆ ದೆಹಲಿಯ ಹಲವು ಪ್ರದೇಶಗಳಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ ಸಿಆರ್) ಮಾಲಿನ್ಯ ಸ್ಥಿತಿ ಸೂಚ್ಯಂಕವು ೧೬೦೦ ಅಂಕಗಳನ್ನು ದಾಟಿದ್ದು ಇದು ಗಂಭೀರ ಅಪಾಯದ ಸೂಚನೆಯಾಗಿದೆ ಎಂದು ವರದಿಗಳು ಹೇಳಿದವು. ಜಹಾಂಗೀರಪುರಿಯಲ್ಲಿ ವಾಯು ಗುಣಮಟ್ಟ ಮಾಪನದಲ್ಲಿ ಸೂಚ್ಯಂಕವು ೧೬೯೦, ದೆಹಲಿ ವಿಮಾನ ನಿಲ್ದಾಣ ಪ್ರದೇಶದಲ್ಲಿ ೧೧೨೦, ಗುಡಗಾಂವ್ನಲ್ಲಿ  ೯೯೦ ಮತ್ತು ನೋಯ್ಡಾದಲ್ಲಿ ೧೯೭೪ ಅಂಕಗಳು ದಾಖಲಾದವು. ದೀಪಾವಳಿ ಆಚರಣೆಯ ಬಳಿಕ ದೆಹಲಿ ನಗರ ಪರಿಸರದಲ್ಲಿ ವಾಯು ಗುಣಮಟ್ಟ ಪಾತಾಳಕ್ಕೆ ಇಳಿದಿದೆ. ಇದು ಕಳೆದ ಐದು ವರ್ಷಗಳಲ್ಲೇ ಅತೀ ಕಳಪೆ ಗುಣಮಟ್ಟವಾಗಿದೆ. ವಿಚಾರದಲ್ಲಿ ಕೇಂದ್ರ ಸರ್ಕಾರ ತತ್ ಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ರಾಷ್ಟ್ಟೀಯ ರಾಜಧಾನಿ ಪ್ರದೇಶ ಮತ್ತು ದೆಹಲಿ ಸುತ್ತು ಮುತ್ತಣ ಉಪನಗರಗಳಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟ ತಲುಪಿದ ಹಿನ್ನೆಲೆಯಲ್ಲಿ 2019 ನವೆಂಬರ್ 3ರ ಭಾನುವಾರ ತುರ್ತು ಸಭೆ ನಡೆಸಿದ ಕೇಂದ್ರ ಸರ್ಕಾರವು ಸುಡುವಿಕೆಯನ್ನು ಕಡಿಮೆಗೊಳಿಸಿ, ದೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಸೂಚನೆ ನೀಡಿತು. ಪ್ರಧಾನ ಮಂತ್ರಿಯವರ ಪ್ರಿನ್ಸಿಪಲ್ ಕಾರ್ಯದರ್ಶಿ ಮತ್ತು ಸಂಪುಟ ಕಾರ್ಯದರ್ಶಿಯವರು ಉನ್ನತ ಮಟ್ಟದ ಸಭೆ ನಡೆಸಿ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದರು. ದೆಹಲಿಯ ಅಧಿಕಾರಿಗಳಲ್ಲದೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ಪ್ರತಿನಿಧಿಗಳು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಸಭೆಗೆ ಹಾಜರಾದರು. ಪ್ರಧಾನಿಯವರ ಪ್ರಿನ್ಸಿಪಲ್ ಕಾರ್ಯದರ್ಶಿ ಪಿ.ಕೆ. ಮಿಶ್ರ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಸಭೆಯನ್ನು ನಡೆಸಿದರು. ಸಂಪುಟ ಕಾರ್ಯದರ್ಶಿಯವರು ರಾಜ್ಯಗಳಲ್ಲಿನ ಪರಿಸ್ಥಿತಿಯ ಮೇಲೆ ಪ್ರತಿದಿನವೂ ನಿಗಾ ಇಡಬೇಕು ಎಂದು ಸಭೆಯು ನಿರ್ಧರಿಸಿತು. ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ತಮ್ಮ ತಮ್ಮ ರಾಜ್ಯಗಳ ವಿವಿಧ ಜಿಲ್ಲೆಗಳ ಪರಿಸ್ಥಿತಿ ಮೇಲೆ ಪ್ರತಿದಿನವೂ ನಿರಂತರ ನಿಗಾ ಇಟ್ಟುಕೊಳ್ಳುವಂತೆ ಸೂಚನೆ ನೀಡಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಇಸ್ಲಾಮಾಬಾದ್:  ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ಜಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ ವಿಭಜನೆ ಅಕ್ಟೋಬರ್ ೩೧ರಂದು ಕಾರ್ಯಗತವಾದ ಬಳಿಕ, ಕೇಂದ್ರ ಸರ್ಕಾರವು ಹಿಂದಿನ ದಿನ  ಬಿಡುಗಡೆ ಮಾಡಿದ ಹೊಸ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಒಳಗೊಂಡ ಭಾರತದ ಭೂಪಟವು ಪಾಕಿಸ್ತಾನದ ನಿದ್ದೆಗೆಡಿಸಿತು. ಕಾಶ್ಮೀರದ ಸಂಪೂರ್ಣ ಭೂಭಾಗವು ಭಾರತಕ್ಕೇ ಸೇರಿದ್ದು ಎಂದು ಭೂಪಟದಲ್ಲಿ ಚಿತ್ರಿಸಿದ್ದಕ್ಕೆ ಪಾಕಿಸ್ತಾನ 2019 ನವೆಂಬರ್ 3ರ ಭಾನುವಾರ ಆಕ್ಷೇಪ ವ್ಯಕ್ತಪಡಿಸಿತು. ‘ಇದೊಂದು ಅಸಮರ್ಪಕ ಮತ್ತು ಕಾನೂನುಬದ್ಧವಾಗಿ ಒಪ್ಪಲಾಗದ ನಕ್ಷೆಎಂದು ಪಾಕಿಸ್ತಾನ ಹೇಳಿತು. ಭಾರತ ಬಿಡುಗಡೆ ಮಾಡಿದ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಹೊಸ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದೊಳಗೆ ಹಾಗೂ ಗಿಲ್ಗಿಟ್ -ಬಾಲ್ಟಿಸ್ತಾನವನ್ನು ಲಡಾಖ್ ಒಳಗೆ ಸೇರಿಸಿ ಚಿತ್ರಿಸಿದ್ದು, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಪಾಕ್ ವಿದೇಶಾಂಗ ಇಲಾಖೆ, ಇದೊಂದು ಕಾನೂನುಬಾಹಿರ ಕೃತ್ಯ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಸಂಪೂರ್ಣ ಉಲ್ಲಂಘನೆ ಎಂದು ಆರೋಪಿಸಿತು. ಅಲ್ಲದೆ, ಭೂಪಟವನ್ನು ಪಾಕಿಸ್ತಾನವು ನಿರಾಕರಿಸುತ್ತದೆ ಎಂದೂ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)