Showing posts with label consumer court. Show all posts
Showing posts with label consumer court. Show all posts

Saturday, July 5, 2025

PARYAYA: ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲ...

 ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲಕ್ಷ ದಂಡ

ತಿರುವಾರೂರು: ತಿರುವಾರೂರು ಜಿಲ್ಲಾ ಗ್ರಾಹಕ ನ್ಯಾಯಾಲಯವು (ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ) ಒಂದು ಮಹತ್ವದ ಆದೇಶ ಹೊರಡಿಸಿದೆ. ಚಿಕಿತ್ಸೆಯಲ್ಲಿ ವಿಳಂಬವಾದುದನ್ನು ಸೇವಾ ನ್ಯೂನತೆ ಎಂಬುದಾಗಿ ಪರಿಗಣಿಸಿ ಸರ್ಕಾರಿ ವೈದ್ಯರೊಬ್ಬರ ತಂದೆಯ ಸಾವಿಗೆ ಕಾರಣರಾದುದಕ್ಕಾಗಿ ₹20 ಲಕ್ಷ ಪರಿಹಾರ ನೀಡುವಂತೆ ಖಾಸಗಿ ವೈದ್ಯರೊಬ್ಬರಿಗೆ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ

ಈ ಪ್ರಕರಣವು 2022ರಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ. ಸರ್ಕಾರಿ ವೈದ್ಯರ ತಂದೆ, 67 ವರ್ಷದವರಾಗಿದ್ದುಅವರಿಗೆ ಕ್ಷಯ ರೋಗಕ್ಕೆ ಚಿಕಿತ್ಸೆಯಾಗಿ 2022ರ ಜುಲೈನಲ್ಲಿ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಶಸ್ತ್ರಚಿಕಿತ್ಸೆ ಆದ ಕೆಲವೇ ವಾರಗಳಲ್ಲಿ ಅವರ ಆರೋಗ್ಯ ಹದಗೆಟ್ಟಿತು. ಆಗ ಅವರ ಮಗ 2022ರ ಆಗಸ್ಟ್ 8ರಂದು ರಕ್ತದ ಮಾದರಿಗಳನ್ನು ತಿರುವಾರೂರಿನ ಖಾಸಗಿ ಲ್ಯಾಬೋರೇಟರಿಗೆ ಕಳುಹಿಸಿದ್ದರು.

ಚಿಕಿತ್ಸೆಯಲ್ಲಿ ವಿಳಂಬ ಮತ್ತು ಸಾವು

ಪರೀಕ್ಷಾ ವರದಿಗಳಲ್ಲಿ ಅವರಿಗೆ ಕಾಮಾಲೆ (jaundice) ಇರುವುದು ದೃಢಪಟ್ಟಿತು. ಕೂಡಲೇ, 2022ರ ಆಗಸ್ಟ್ 9ರಂದು ಬೆಗ್ಗೆ ಸುಮಾರು 9:30ಕ್ಕೆ ತಿರುವಾರೂರಿನ ಕಮಲಾಲಯಂ ಟ್ಯಾಂಕ್ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಗೆ ದಾಖಲಾದ ನಂತರರೋಗಿಯ ರಕ್ತದ ಮಾದರಿಗಳನ್ನು ಮತ್ತೆ ಸಂಗ್ರಹಿಸಿ ಅದೇ ಲ್ಯಾಬೋರೇಟರಿಗೆ ಮಧ್ಯಾಹ್ನ 3:30ರ ವೇಳೆಗೆ ಕಳುಹಿಸಲಾಯಿತು.

ಈ ನಡುವೆರೋಗಿಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಖಾಸಗಿ ವೈದ್ಯರು ಆಗಸ್ಟ್ 9ರ ರಾತ್ರಿ ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರು. ತಕ್ಷಣ ತಿರುಚಿಯಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲು ಸಲಹೆ ನೀಡಿದರು.

ರೋಗಿಯನ್ನು ತಕ್ಷಣ ತಿರುಚಿಗೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆದುರದೃಷ್ಟವಶಾತ್ ಆಗಸ್ಟ್ 14ರಂದು ಅವರು ಮೃತರಾದರು.

ಗ್ರಾಹಕ ನ್ಯಾಯಾಲಯದ ಮೊರೆ

ತಿರುವಾರೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಲ್ಲಿ ಆದ 'ವಿಳಂಬ'ದಿಂದ ಅಸಮಾಧಾನಗೊಂಡ ಸರ್ಕಾರಿ ವೈದ್ಯರುಈ ವರ್ಷದ ಜನವರಿಯಲ್ಲಿ ತಿರುವಾರೂರು ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು. ಖಾಸಗಿ ವೈದ್ಯರ 'ಸೇವಾ ನ್ಯೂನತೆ'ಯಿಂದ ತಮಗೆ ಉಂಟಾದ ಮಾನಸಿಕ ತೊಂದರೆ ಮತ್ತು ಒತ್ತಡಕ್ಕೆ ಪರಿಹಾರ ನೀಡುವಂತೆ ಕೋರಿದರು.

ಗ್ರಾಹಕ ನ್ಯಾಯಾಲಯವು ಚೆನ್ನೈ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯ ಹೆಪಟಾಲಜಿಸ್ಟ್‌ಗಳ (ಯಕೃತ್ ತಜ್ಞರು) ತಂಡದಿಂದ ಅಭಿಪ್ರಾಯಗಳನ್ನು ಪಡೆದುಕೊಂಡಿತು. ತಜ್ಞರ ವರದಿಗಳು ಮತ್ತು 2022ರ ಆಗಸ್ಟ್‌ 14ರಂದು ರೋಗಿಯ ಮರಣಕ್ಕೆ ಕಾರಣವಾದ ಘಟನೆಗಳ ವಿವರಗಳನ್ನು ಪರಿಶೀಲಿಸಿದ ನಂತರಅಧ್ಯಕ್ಷರಾದ ಮೋಹನ್‌ದಾಸ್ ಮತ್ತು ಸದಸ್ಯರಾದ ಬಾಲು ನೇತೃತ್ವದ ನ್ಯಾಯಾಲಯವುಖಾಸಗಿ ವೈದ್ಯರಿಂದ 'ಸೇವಾ ನ್ಯೂನತೆಆಗಿದೆ ಎಂದು ತೀರ್ಮಾನಿಸಿತು.

ನ್ಯಾಯಾಲಯದ ಆದೇಶ

ಆದ್ದರಿಂದನ್ಯಾಯಾಲಯವು ಸರ್ಕಾರಿ ವೈದ್ಯರಿಗೆ ₹20 ಲಕ್ಷ ಪರಿಹಾರದ ಜೊತೆಗೆವ್ಯಾಜ್ಯದ ವೆಚ್ಚವಾಗಿ ₹10,000 ಪಾವತಿ ಮಾಡುವಂತೆ ಖಾಸಗಿ ಆ ವೈದ್ಯರಿಗೆ ಆಜ್ಞಾಪಿಸಿತು. 

PARYAYA: ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲ...:   ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲಕ್ಷ ದಂಡ ತಿ ರುವಾರೂರು: ತಿರುವಾರೂರು ಜಿಲ್ಲಾ ಗ್ರಾಹಕ ನ್ಯಾಯಾಲಯ ವು ( ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹ...

Monday, October 21, 2019

ರವಾನೆಯಲ್ಲಿ ಚೆಕ್ ಕಳೆದುಕೊಂಡ ಬ್ಯಾಂಕ್..!


ಅರ್ಜಿದಾರರು ಚೆಕ್ ನೀಡಿದವರ ವಿರುದ್ಧ ಬರಬೇಕಾದ ಹಣ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಬಹುದು ಎಂಬುದು ಪ್ರತಿವಾದಿ ಬ್ಯಾಂಕಿನ ವಾದ. ಆದರೆ ಎಂತಹ ಕ್ರಮ ಕೈಗೊಳ್ಳಬೇಕು ಎಂಬುದು ಅರ್ಜಿದಾರನ ಇಚ್ಛೆಗೆ ಬಿಟ್ಟ ವಿಷಯ. ಬಗ್ಗೆ ಪ್ರತಿವಾದಿ ಬ್ಯಾಂಕು ಆತನಿಗೆ ಸಲಹೆ ನೀಡಬೇಕಾದ ಅಗತ್ಯ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಹಣ ವರ್ಗಾವಣೆಗೆ ಬ್ಯಾಂಕುಗಳಲ್ಲಿ  ಬಳಸುವ ಸುಲಭ ವಿಧಾನ ಚೆಕ್ ಇಲವೇ ಡಿಡಿ. ಬ್ಯಾಂಕಿಗೆ ಸ್ಲಲಿಸಲಾದ ಇಂತಹ ಚೆಕ್ ರವಾನೆ ಕಾಲದಲ್ಲಿ  ಕಳೆದುಹೋದರೆ ಹೊಣೆಗಾರರು ಯಾರು? ಗ್ರಾಹಕರು ಇಂತಹ ಸಂದರ್ಭದಲ್ಲಿ ಬ್ಯಾಂಕಿನ ವಿರುದ್ಧ ಕ್ರಮ ಕೈಗೊಳ್ಳಬಹುದೇ? ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯ್ಲಲಿ ಅವರಿಗೆ ಪರಿಹಾರ ದೊರೆಯುವುದೇ?

ಹೌದು. ಆದರೆ ಗ್ರಾಹಕ ಅಪೇಕ್ಷಿಸಿದಷ್ಟು ಪರಿಹಾರ ದೊರೆಯಬಹುದು ಎಂದೇನೂ ಇಲ್ಲ. ತಮ್ಮ ಮುಂದೆ ಬಂದ ಇಂತಹ ಪ್ರಕರಣದ್ಲಲಿ ಬೆಂಗಳೂರು ನಗರ ಜ್ಲಿಲಾ ಗ್ರಾಹಕ ನ್ಯಾಯಾಲಯವು ಗ್ರಾಹಕರೊಬ್ಬರಿಗೆ ಭಾಗಶಃ ಪರಿಹಾರ ನೀಡಿದ ಪ್ರಕರಣ ಇದು.

ಪ್ರಕರಣದ ಅರ್ಜಿದಾರರು: ಬೆಂಗಳೂರು ಹುಳಿಮಾವು ನಿವಾಸಿ ಎಸ್.ಸಿ.ಬಿ. ಪಾಟೀಲ್. ಪ್ರತಿವಾದಿ: ಶಾಖಾ ಮ್ಯಾನೇಜರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹುಳಿಮಾವು ಶಾಖೆ, ಬೆಂಗಳೂರು.

ಅರ್ಜಿದಾರರು ಪ್ರತಿವಾದಿ ಬ್ಯಾಂಕಿನಲ್ಲಿ  ಚಾಲ್ತಿ ಖಾತೆಯೊಂದನ್ನು ೨೦೦೬ರ ಆಗಸ್ಟ್ ೨೮ರಂದು ತೆರೆದಿದ್ದರು. ೨೦೦೭ರ ಮಾರ್ಚ್ ೮ರಂದು ಅವರು ಖಾತೆಗೆ ೨೬,೦೦೦ ರೂಪಾಯಿಗಳ ಚೆಕ್ ಒಂದನ್ನು ನಗದೀಕರಣದ ಸಲುವಾಗಿ ಹಾಕಿದರು. ಅದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಇಂದಿರಾನಗರ ಶಾಖೆ, ಬೆಂಗಳೂರು ಇಲ್ಲಿನ ಚೆಕ್.

ಕೆಲವು ದಿನಗಳ ಬಳಿಕ ವಿಚಾರಿಸಿದಾಗ ಚೆಕ್ ನೀಡಿದಾತನ ಖಾತೆಯಲ್ಲಿ ಸಾಕಷ್ಟು ಹಣ ಇಲದ ಕಾರಣ ಚೆಕ್ ಪಾಸ್ ಆಗದೆ ವಾಪಸಾದುದು ಅರ್ಜಿದಾರರಿಗೆ ಗೊತ್ತಾಯಿತು. ಮಾಹಿತಿ ಲಭಿಸುವಷ್ಟರಲ್ಲಿ ಎರಡು ತಿಂಗಳುಗಳು ಕಳೆದುಹೋಗಿದ್ದವು. ಅವರು ತತ್ಕ್ಷಣವೇ ಚೆಕ್ ನೀಡಿದ್ದ ಅಶೋಕನ್ ಅವರನ್ನು ಸಂಪರ್ಕಿಸಿ ವಿಚಾರಿಸಿದರು. ಅಶೋಕನ್ ಅವರು ೧೩--೨೦೦೭ರಂದು ಅದೇ ಚೆಕ್ಕನ್ನು ಮತ್ತೆ ಬ್ಯಾಂಕಿನಲ್ಲಿ  ಹಾಜರು ಪಡಿಸುವಂತೆ ಕೋರಿದರು. ಒಪ್ಪಿದ ಅರ್ಜಿದಾರರು ೧೩--೨೦೦೭ರಂದು ಮತ್ತೆ ಅದೇ ಚೆಕ್ಕನ್ನು ಬ್ಯಾಂಕಿಗೆ ಹಾಕಿದರು.

ಬಳಿಕ ಖಾತೆಗೆ ಹಣ ಜಮಾ ಆಗಬಹುದು ಎಂದು ಅರ್ಜಿದಾರರು ಒಂದೆರಡು ತಿಂಗಳ ಕಾಲ ಸಹನೆಯಿಂದ ಕಾದರು. ಎರಡು ತಿಂಗಳ ಬಳಿಕ ೧೬--೨೦೦೭ರಂದು ಅರ್ಜಿದಾರರಿಗೆ ಬ್ಯಾಂಕಿನಿಂದ ಒಂದು ಪತ್ರ ಬಂತು. ಅದರಲ್ಲಿ ಅವರು ನೀಡಿದ್ದ ಚೆಕ್ ರವಾನೆ ಕಾಲದಲ್ಲಿ  ಕಳೆದುಹೋಗಿದೆ ಎಂದು ತಿಳಿಸಲಾಗಿತ್ತು.

ಇದು ಪ್ರತಿವಾದಿ ಪಾಲಿನ ನಿರ್ಲಕ್ಷ್ಯ ಹಾಗೂ ಸೇವಾ ಲೋಪ ಎಂಬುದಾಗಿ ಭಾವಿಸಿದ ಅರ್ಜಿದಾರರು ತಮಗಾದ ಆರ್ಥಿಕ ನಷ್ಟ ಮತ್ತು ಮಾನಸಿಕ ಯಾತನೆಗಾಗಿ ಪರಿಹಾರ ನೀಡುವಂತೆ ಪ್ರತಿವಾದಿ ಬ್ಯಾಂಕಿಗೆ ಲೀಗಲ್ ನೋಟಿಸ್ ಕಳುಹಿಸಿದರು. ಅದಕ್ಕೆ ಸೂಕ್ತ ಉತ್ತರ ಬರದೇ ಹೋದಾಗ ಅರ್ಜಿದಾರರು ಬೆಂಗಳೂರು ನಗರ ಜ್ಲಿಲಾ ಗ್ರಾಹಕ ನ್ಯಾಯಾಲಯದ ಮೆಟ್ಟಲೇರಿದರು.

ಅಧ್ಯಕ್ಷ .ಎಂ. ಬೆನ್ನೂರು, ಸದಸ್ಯರಾದ ಸೈಯದ್ ಉಸ್ಮಾನ್ ರಜ್ವಿ ಮತ್ತು ಶ್ರೀಮತಿ ಎಂ. ಯಶೋದಮ್ಮ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಕೆ.ಪಿ. ಜಯಸಿಂಹ ಮತ್ತು ಪ್ರತಿವಾದಿ ಬ್ಯಾಂಕಿನ ಪರ ವಕೀಲ ದೀಪಕ್ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಪ್ರತಿವಾದಿ ಬ್ಯಾಂಕು ಅರ್ಜಿದಾರರ ಎಲ ಆಪಾದನೆಗಳನ್ನೂ ನಿರಾಕರಿಸಿ, ಚೆಕ್ ರವಾನೆ ಕಾಲದಲ್ಲಿ  ಕಳೆದುಹೋದೊಡನೆಯೇ ಪೊಲೀಸರಲ್ಲಿ  ದೂರು ದಾಖಲಿಸುವುದರ ಜೊತೆಗೆ ಅರ್ಜಿದಾರರಿಗೂ ಮಾಹಿತಿ ನೀಡಲಾಗಿದೆ. ಅರ್ಜಿದಾರರು ಚೆಕ್ ನೀಡಿದವರಿಂದ ಹಣ ಪಡೆಯಲು ಅಥವಾ ಬೇರೆ ಚೆಕ್ ಪಡೆಯಲು ಕ್ರಮ ಕೈಗೊಳ್ಳುವ ಬದಲು ತನ್ನ ವಿರುದ್ದ ಸುಳ್ಳು ಖಟ್ಲೆ ದಾಖಲಿಸಿದ್ದಾರೆ ಎಂದು ಪ್ರತಿಪಾದಿಸಿತು.

ಕಳೆದು ಹೋಗಿರುವ ಚೆಕ್ ಪತ್ತೆಗಾಗಿ ತಾವು ಯತ್ನಿಸುತ್ತಿದ್ದು, ಅದು ಪತ್ತೆಯಾದೊಡನೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅರ್ಜಿದಾರರು ಬ್ಯಾಂಕಿನ ವಿರುದ್ಧ ದೂರು ನೀಡುವ ಬದಲು ಚೆಕ್ ನೀಡಿದವರ ವಿರುದ್ಧವೇ ಹಣಕ್ಕಾಗಿ ದಾವೆ ಹೂಡಬಹುದು. ಅವರು ಬ್ಯಾಂಕಿನ ವಿರುದ್ಧ ಸೇವಾಲೋಪದ ಆರೋಪ ಮಾಡಿದ್ದು ಸರಿಯಲ್ಲ ಎಂದು ವಾದಿಸಿದ ಬ್ಯಾಂಕು ಅರ್ಜಿಯನ್ನು ತಳ್ಳಿಹಾಕುವಂತೆ ಮನವಿ ಮಾಡಿತು.

ಅರ್ಜಿದಾರರು ಪ್ರತಿವಾದಿ ಬ್ಯಾಂಕಿನ ಖಾತೆದಾರರಾಗಿದ್ದು, ನಗದೀಕರಣಕ್ಕಾಗಿ ಎರಡೆರಡು ಸಲ ಬ್ಯಾಂಕಿಗೆ ಚೆಕ್ ಸಲ್ಲಿಸಿದ್ದನ್ನು ಬ್ಯಾಂಕು ನಿರಾಕರಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು. ತನ್ನ ಗ್ರಾಹಕನಿಗೆ ಸಮರ್ಪಕ ಸೇವೆ ಒದಗಿಸಬೇಕಾದದ್ದು ಬ್ಯಾಂಕಿನ ಕರ್ತವ್ಯ. ರವಾನೆ ಕಾಲದಲ್ಲಿ ಚೆಕ್ ಕಳೆದುಹೋದರೆ ಗ್ರಾಹಕನನ್ನು ಸಂತೃಪ್ತಿ ಪಡಿಸಲು ಪೊಲೀಸರಿಗೆ ದೂರು ಕೊಟ್ಟು ಬಿಟ್ಟರೆ ಅದು ತನ್ನ ಕರ್ತವ್ಯ ನಿರ್ವಹಿಸಿದಂತಾಗುವುದಿಲ್ಲ. ಚೆಕ್ ಕಳೆದುಹೋಗಿದೆ ಎಂದು ಒಪ್ಪಿಕೊಂಡಾಗ ಅದು ಸೇವಾಲೋಪ ಎಂದೇ ಅರ್ಥವಾಗುತ್ತದೆ ಎಂದು ನ್ಯಾಯಾಲಯ ಭಾವಿಸಿತು. 
ಅರ್ಜಿದಾರರು ಚೆಕ್ ನೀಡಿದವರ ವಿರುದ್ಧ ಬರಬೇಕಾದ ಹಣ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಬಹುದು ಎಂಬುದು ಪ್ರತಿವಾದಿ ಬ್ಯಾಂಕಿನ ವಾದ. ಆದರೆ ಎಂತಹ ಕ್ರಮ ಕೈಗೊಳ್ಳಬೇಕು ಎಂಬುದು ಅರ್ಜಿದಾರನ ಇಚ್ಛೆಗೆ ಬಿಟ್ಟ ವಿಷಯ. ಬಗ್ಗೆ ಪ್ರತಿವಾದಿ ಬ್ಯಾಂಕು ಆತನಿಗೆ ಸಲಹೆ ನೀಡಬೇಕಾದ ಅಗತ್ಯ ಇಲ. ಇಲ್ಲಿ ಅರ್ಜಿದಾರರು ತನಗೆ ಚೆಕ್ ನೀಡಿದಾತನ ಜೊತೆ ಸೇರಿ ಬ್ಯಾಂಕು ಚೆಕ್ ಕಳೆದುಕೊಂಡದ್ದರ ದುರುಪಯೋಗ ಪಡೆಯುವ ಬಗ್ಗೆ ಚಿಂತಿಸಿದ ಸಾಧ್ಯತೆಯನ್ನೂ ಅಲಗಳೆಯಲಾಗುವುದಿಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಇದೇನೇ ಇದ್ದರೂ ಪ್ರಕರಣದ್ಲದಲ್ಲಿ ಚೆಕ್ ಕಳೆದುಕೊಳ್ಳುವ ಮೂಲಕ ಪ್ರತಿವಾದಿ ಬ್ಯಾಂಕು ಸೇವಾಲೋಪ ಎಸಗಿದ್ದು ಖಚಿತವಾದ ಕಾರಣ, ಅರ್ಜಿದಾರರು ಪರಿಹಾರಕ್ಕೆ ಅರ್ಹರಾಗುತ್ತಾರೆ. ಆದರೆ ಅವರು ಕೇಳಿದಷ್ಟು ಪರಿಹಾರವನ್ನು ಪ್ರತಿವಾದಿ ಕೊಡಬೇಕಾಗಿಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯವು ಬಂದಿತು.

ಹಿನ್ನೆಲೆಯಲ್ಲಿ ಅರ್ಜಿಯನ್ನು ಭಾಗಶಃ ಅಂಗೀಕರಿಸಿದ ನ್ಯಾಯಾಲಯವು, ೫೦೦೦ ರೂಪಾಯಿಗಳ ಪರಿಹಾರವನ್ನು ೧೦೦೦ ರೂಪಾಯಿ ಖಟ್ಲೆ ವೆಚ್ಚ ಸೇರಿಸಿ ಅರ್ಜಿದಾರನಿಗೆ ಪಾವತಿ ಮಾಡುವಂತೆ ಪ್ರತಿವಾದಿ ಬ್ಯಾಂಕಿಗೆ ಆದೇಶ ನೀಡಿತು.