Thursday, April 24, 2025

PARYAYA:  ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..!ನಾನು ಹಬ...

 ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..!

ನಾನು ಹಬಲ್.‌ ಕಳೆದ 35 ವರ್ಷಗಳಿಂದ ಬಾಹ್ಯಾಕಾಶದಲ್ಲಿ ಇದ್ದುಕೊಂಡೇ ದೂರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

35 ವರ್ಷಗಳ ಹಿಂದೆ 1990ರ ಏಪ್ರಿಲ್ 24ರಂದು ಅಮೆರಿಕದ ನಾಸಾ ಬಾಹ್ಯಾಕಾಶ ಕೇಂದ್ರವು ಡಿಸ್ಕವರಿ ಬಾಹ್ಯಾಕಾಶ ನೌಕೆಯ ಮೂಲಕ ನನ್ನನ್ನು ಬಾಹ್ಯಾಕಾಶಕ್ಕೆ ಏರಿಸಿತು ಮತ್ತು ಬಾಹ್ಯಾಕಾಶದ ವಿವಿಧ ಮಜಲುಗಳ ಚಿತ್ರ ತೆಗೆಯುವ ಕಾರ್ಯಕ್ಕೆ ನನ್ನನ್ನು ನಿಯೋಜಿಸಿತು.

ಈ 35 ವರ್ಷಗಳಲ್ಲಿ ನಾನು ಬಾಹ್ಯಾಕಾಶದ ಲಕ್ಷಾಂತರ ಚಿತ್ರಗಳನ್ನು ತೆಗೆದು ಭೂಮಿಗೆ ಕಳುಹಿಸಿದ್ದೇನೆ. ನಾನು ಬಾಹ್ಯಾಕಾಶಕ್ಕೆ ಏರಿದ ಈದಿನದ ಆಚರಣೆಗೆ ಈ ಚಿತ್ರಗಳು ಅಪೂರ್ವವಾಗಿದ್ದು ಬ್ರಹ್ಮಾಂಡಕ್ಕೆ ಹೊಸ ಉಡುಗೊರೆಯಾಗಿವೆ ಎಂದು ನನ್ನನ್ನು ಇಲ್ಲಿಗೆ ಕಳುಹಿಸಿದ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಬ್ರಹ್ಮಾಂಡದ ರಹಸ್ಯಗಳನ್ನು ಅರಿಯಲು ನಾನು ಕಳುಹಿಸಿದ ಚಿತ್ರಗಳು ಅನುಕೂಲಕರವಾಗಿವೆಯಂತೆ. ಬಾಹ್ಯಾಕಾಶ ಪಯಣದ ಇತಿಹಾಸದಲ್ಲಿ ನಾನು ಅತ್ಯಂತ ಪ್ರತಿಮಾರೂಪದ ವೈಜ್ಞಾನಿಕ ಸಾಧನಗಳಲ್ಲಿ ಒಂದಾಗಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ.

ʼಬ್ರಹ್ಮಾಂಡದ ಅಸ್ಪಷ್ಟ ರಹಸ್ಯವನ್ನು ಸ್ಪಷ್ಟ ಕಣ್ಣಿನ ಅನ್ವೇಷಣೆಯಾಗಿ ಪರಿವರ್ತಿಸಿದ ಯಂತ್ರ ನಾನುʼ ಎಂದೂ ವಿಜ್ಞಾನಿಯೊಬ್ಬರು ಬಣ್ಣಿಸಿದ್ದಾರೆ.

"35 ವರ್ಷಗಳ ಹಿಂದೆ ಉಡಾವಣೆಯಾದಾಗ ಹಬಲ್ ವಿಶ್ವಕ್ಕೆ ಹೊಸ ಕಿಟಕಿಯನ್ನು ತೆರೆಯಿತು" ಎಂದು ನಾಸಾ ಪ್ರಧಾನ ಕಚೇರಿಯಲ್ಲಿರುವ ಖಗೋಳ ಭೌತಶಾಸ್ತ್ರ ವಿಭಾಗದ ಕಾರ್ಯಕಾರಿ ನಿರ್ದೇಶಕ ಶಾನ್ ಡೊಮಗಲ್-ಗೋಲ್ಡ್‌ಮನ್ ಹೇಳಿದರಂತೆ.

"ಅದರ ಬೆರಗುಗೊಳಿಸುವ ಚಿತ್ರಣವು ಪ್ರಪಂಚದಾದ್ಯಂತ ಜನರಿಗೆ ಸ್ಫೂರ್ತಿ ನೀಡಿತು ಮತ್ತು ಆ ಚಿತ್ರಗಳ ಹಿಂದಿನ ದತ್ತಾಂಶವು ಆರಂಭಿಕ ಗ್ಯಾಲಕ್ಸಿಗಳಿಂದ ಹಿಡಿದು ನಮ್ಮದೇ ಸೌರವ್ಯೂಹದ ಗ್ರಹಗಳವರೆಗೆ ಎಲ್ಲದರ ಬಗ್ಗೆ ಹಲವಾರು ಅಚ್ಚರಿಗಳನ್ನು ಬಹಿರಂಗ ಪಡಿಸಿತು” ಎಂದು ಹೇಳಿದ್ದು ಗೋಲ್ಡಮನ್ ಮಾರಾಯರೇ -‌ ನಾನಲ್ಲ.”

ಏನೋ, ನನಗೆ ಗೊತ್ತಿಲ್ಲ. ಈ ವರ್ಷ ನನ್ನ ಬಾನಿಗೇರಿದ ವರ್ಷಾಚರಣೆಗಾಗಿ ಒಂದಷ್ಟು ಚಿತ್ರಗಳನ್ನು ವಿಶ್ವಕ್ಕೆ ಕಳುಹಿಸಿಬಿಡಬೇಕು ಎಂದು ತೀರ್ಮಾನಿಸಿ, ನಾಸಾ ಒಂದಷ್ಟು ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ನನಗೆ ಪ್ರಮುಖ ಅನ್ನಿಸಿದ ಚಿತ್ರಗಳಲ್ಲಿ ಕೆಲವು ಇಲ್ಲಿವೆ ನೋಡಿ.

ಮೇಲಿನಿಂದ ಎಡಕ್ಕೆ: ಡಿಸೆಂಬರ್ 2024 ರ ಕೊನೆಯಲ್ಲಿ ಭೂಮಿಯಿಂದ ಸರಿಸುಮಾರು 61 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದ್ದಾಗ ಕಂಡು ಬಂದ ಮಂಗಳ ಗ್ರಹ ಇದು. ನನ್ನ ವಿಶಿಷ್ಟ ನೇರಳಾತೀತ ಸಾಮರ್ಥ್ಯದಿಂದ ಬಹಿರಂಗಗೊಂಡ ತೆಳುವಾದ ನೀರು-ಮಂಜುಗಡ್ಡೆಯ ಮೋಡಗಳು ಕೆಂಪು ಗ್ರಹಕ್ಕೆ ಹಿಮಭರಿತ ನೋಟವನ್ನು ನೀಡಿವೆ.

ಮೇಲಿನಿಂದ ಬಲಕ್ಕೆಇದು ಗ್ರಹ ನೀಹಾರಿಕೆ NGC 2899. ನೋಡಲು ಪತಂಗದಂತೆ ಕಾಣುವ ನೀಹಾರಿಕೆಯು ಮಧ್ಯದಲ್ಲಿ ಸುಮಾರು 40,000-ಡಿಗ್ರಿ-ಫ್ಯಾರನ್‌ಹೀಟ್ ಉಷ್ಣಾಂಶದೊಂದಿಗೆ ಸಾಯುತ್ತಿರುವ ನಕ್ಷತ್ರ ಅಂದರೆ ʼಬಿಳಿ ಕುಬ್ಜʼದಿಂದ ಬರುತ್ತಿರುವ ವಿಕಿರಣ ಮತ್ತು ನಾಕ್ಷತ್ರಿಕ ಗಾಳಿಗಳ ಹೊರಹರಿವಿನಿಂದಾಗಿ ಹೀಗೆ ಪತಂಗವನ್ನು ಕೆತ್ತಿ ಇಟ್ಟಿರುವಂತೆ ಕಾಣುತ್ತಿದೆ.

ಕೆಳಗಿನಿಂದ ಎಡಕ್ಕೆ: ರಕ್ಕಸನಂತೆ ಕಾಣುತ್ತಿದೆಯಲ್ಲ? ಇದು ರೋಸೆಟ್ ನೀಹಾರಿಕೆ. ಇದು ಬೃಹತ್ ನಕ್ಷತ್ರವೊಂದು ರೂಪುಗೊಳ್ಳುತ್ತಿರುವ ಪ್ರದೇಶದ  ಸಣ್ಣ ಭಾಗ. ಧೂಳಿನಿಂದ ಕೂಡಿದ ಹೈಡ್ರೋಜನ್ ಅನಿಲದ ಕರಿಯ ಮೋಡಗಳು ಇಂತಹ ರೂಪವನ್ನು ಇದಕ್ಕೆ ನೀಡಿವೆ.

ಕೆಳಗಿನಿಂದ ಬಲಭಾಗಕ್ಕೆಇದು NGC 5335 ನಕ್ಷತ್ರಪುಂಜಇದು ಒಂದು ಚಪ್ಪಟೆಯಾದ ಸುರುಳಿಯಾಕಾರದ ನಕ್ಷತ್ರಪುಂಜ. ಇದರ ಡಿಸ್ಕ್‌ನಾದ್ಯಂತ ನಕ್ಷತ್ರ ರಚನೆಯ ತೇಪೆಯ ಸ್ಟ್ರೀಮರ್‌ಗಳಿವೆ. ನಕ್ಷತ್ರಪುಂಜದ ಮಧ್ಯಭಾಗವನ್ನು ಗಮನಾರ್ಹವಾದ ಲಟ್ಟಣಿಗೆಯಂತಹ ರಚನೆಯು ವಿಭಜಿಸುತ್ತದೆ.

ಈ ಚಿತ್ರಗಳಿಗೆ ಸಂಬಂಧಿಸಿದಂತೆ ನಾಸಾದ ವಿಜ್ಞಾನಿಯೊಬ್ಬರು ನೀಡಿದ ವಿವರಣೆಯ ವಿಡಿಯೋ 👇👇👇 ಒಂದನ್ನು ಕೂಡಾ ನಾಸಾ ಬಿಡುಗಡೆ ಮಾಡಿದೆ.


ಹೆಚ್ಚಿಲ್ಲ, ಒಂದೈದು ನಿಮಿಷ ಬಿಡುವು ಮಾಡಿಕೊಂಡು ಈ ವಿಡಿಯೋ ಒಳಹೊಕ್ಕು ನೋಡಿ. ನಿಮ್ಮ ಭೂಮಿಯಾಚೆ ಇರುವ ಈ ನಭೋ ಮಂಡಲದಲ್ಲಿ ಎಂತೆಂತಹ ವಿಸ್ಮಯಗಳಿವೆ ಎಂಬುದು ನಿಮಗೆ ಗೊತ್ತಾಗುತ್ತದೆ. ಈ ಬಾಹ್ಯಾಕಾಶ ಯಾನ ಅದೆಷ್ಟು ಸುಂದರ ಎಂದು ನಂತರ ನೀವೇ ಮೂಗಿನ ಮೇಲೆ ಬೆರಳು ಇಡುತ್ತೀರಿ. ಖಂಡಿತ.

-ನೆತ್ರಕೆರೆ ಉದಯಶಂಕರ.

ಇವುಗಳನ್ನೂ ಓದಿ:

ಇಸ್ರೋದಿಂದ ಕೋವಿಡ್ ಲಾಕ್‌ಡೌನ್ ನಂತರ ಮೊದಲ ಭೂ ವೀಕ್ಷಣೆ ಉಪಗ್ರಹ ಉಡಾವಣೆ
ಮೂರ್ಜೆ ಸುನಿತಾ ಪ್ರಭುವಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ

Indian-American Scientist to Get Rare Honour
Prestigious INSA Teachers Award to Prof. R Vasudeva
Ancient India had Planes: Claim at Indian Science Congress

PARYAYA:  ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..!ನಾನು ಹಬ...:   ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..! ನಾ ನು ಹಬಲ್ .‌ ಕಳೆದ 35 ವರ್ಷಗ ಳಿಂದ ಬಾಹ್ಯಾಕಾಶದಲ್ಲಿ ಇದ್ದುಕೊಂಡೇ ದೂರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದ...

Wednesday, April 23, 2025

PARYAYA: ಬಿರಡಹಳ್ಳಿಗೆ ಏಕೆ ರಾಷ್ಟ್ರ ಪ್ರಶಸ್ತಿ ಬಂತು?‌

 ಬಿರಡಹಳ್ಳಿಗೆ ಏಕೆ ರಾಷ್ಟ್ರ ಪ್ರಶಸ್ತಿ ಬಂತು?‌

ರ್ನಾಟಕದ ಹಾಸನ ಜಿಲ್ಲೆಯ ಸಕ್ಲೇಶಪುರ ಸುಂದರವಾದ ನಿಸರ್ಗದ ಮಡಿಲ ತಾಣ. ಇದು ಕಾಫಿ ತೋಟಗಳು, ಬೆಟ್ಟ ಗುಡ್ಡಗಳನ್ನು ಒಳಗೊಂಡಿರುವ ಸುಂದರವಾದ ಪಶ್ಚಿಮ ಘಟ್ಟದ ಹಚ್ಚ ಹಸಿರಿನ ಪ್ರದೇಶ. ಇಲ್ಲಿನ ಕಾಡೊಳಗೆ ಇರುವ ಪುಟ್ಟ ಗ್ರಾಮ ಬಿರಹಳ್ಳಿ. ಈ ಪುಟ್ಟ ಹಳ್ಳಿಯು ಭರವಸೆ ಮತ್ತು ದೃಢ ಸಂಕಲ್ಪದ ಬೆಳಕಾಗಿ ಸೂರ್ಯನಂತೆ ಕಂಗೊಳಿಸುತ್ತಿದೆ.

ದಟ್ಟ ಹಸಿರಿನ ಮಧ್ಯೆ ಇರುವ ಈ ಗ್ರಾಮ ಅಂಗಾರಾಮ್ಲ ಮುಕ್ತ ಪರಿಸರಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ.


ಗ್ರಾಮ ಪಂಚಾಯಿತಿ ಕಚೇರಿ ಛಾವಣಿ ಮೇಲೆ ಸೌರ ಫಲಕಗಳಿವೆ.ಇವು ಇಡೀ ಕಚೇರಿಗೆ ವಿದ್ಯುತ್‌ ಉತ್ಪಾದಿಸುತ್ತಿವೆ. ಅಲ್ಲದೆ ಸುತ್ತ ಮುತ್ತಲಿನ ಪ್ರದೇಶಕ್ಕೂ ʼಶೂನ್ಯ ಮಾಲಿನ್ಯ ಕಾರ್ಬನ್‌ ಚಿನ್ನʼವನ್ನು ಒದಗಿಸಿಕೊಡುತ್ತಿವೆ. ತೋಟದ ಬೇಲಿ, ಸಿಸಿಟಿವಿ ಕ್ಯಾಮರಾ, ಅಂಚೆ ಕಚೇರಿಗಳು ಕೂಡಾ ಈ ಸೌರ ವಿದ್ಯುತ್ತಿನಿಂದಲೇ ನಡೆಯುತ್ತಿವೆ. ರಸ್ತೆಗಳಲ್ಲಿ ಬೀದಿ ದೀಪಗಳಿಗಾಗಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಸೌರಶಕ್ತಿಯ ೨೧ ಹೈ ಮಾಸ್ಕ್‌ ಬೀದಿ ದೀಪಗಳು ಮತ್ತು ೧೯೦ ಮಿನಿ ಸೋಲಾರ್‌ ದೀಪಗಳನ್ನು ಅಳವಡಿಸುವ ಮೂಲಕ ಬೀದಿ ದೀಪಗಳ ವಿದ್ಯುತ್‌ ವೆಚ್ಚವನ್ನು ನಿಯಂತ್ರಿಸಲಾಗಿದೆ.

ಗ್ರಾಮದ ಹಲವಾರು ಮನೆಗಳು ಸೌರ ಫಲಕಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್‌ ಸ್ವಾವಲಂಬನೆ ಸಾಧಿಸಿವೆ. ತೋಟಗಳಲ್ಲಿ ಕೂಡಾ ಸೌರ ಫಲಕಗಳು ತುಂತುರು ನೀರಾವರಿಗೆ ಮೋಟಾರು ಚಲಾಯಿಸಲು ಬೇಕಾದ  ವಿದ್ಯುತ್ತು ಉತ್ಪಾದಿಸುತ್ತಿವೆ.

ಕಳೆದ ೫ ವರ್ಷಗಳಿಂದ ಪಂಪ್‌ ಓಡಿಸಲು ಸೌರ ವಿದ್ಯುತ್‌ ಬಳಸುತ್ತಿದ್ದೇವೆ. ಇದು ಅತ್ಯಂತ ಉಪಯುಕ್ತ. ಲೈಟಿಂಗ್‌, ಫ್ರಿಡ್ಜ್‌, ೫ ಎಚ್‌ ಪಿಯ ನೀರೆತ್ತುವ ಮೋಟಾರು ಪಂಪ್‌ ಚಾಲನೆಗೂ ಅನುಕೂಲವಾಗಿದೆ ಎನ್ನುತ್ತಾರೆ ಎನ್ನುತ್ತಾರೆ ಬಿರಡಹಳ್ಳಿಯ ನಿವಾಸಿ ಡಬ್ಲ್ಯೂ. ಕುಲಾಸೋ.

ಗ್ರಾಮದ ದುರ್ಬಲ ವರ್ಗಗಳಿಗೆ ಪಂಚಾಯಿತಿ ಸೌರ ದೀಪಗಳನ್ನು ಒದಗಿಸಿದೆ. ಗ್ರಾಮದ ಇಡೀ ಸಮುದಾಯ ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿವೆ. ಹಲವು ಮನೆಗಳು ಸೌರ ದೀಪದ ವ್ಯವಸ್ಥೆ, ನೀರು ಕಾಯಿಸಲು ಸೌರ ಆಧಾರಿತ ವ್ಯವಸ್ಥೆ ಮಾಡಿಕೊಂಡಿವೆ.

ಹಲವು ಮನೆಗಳು ಎಲ್‌ ಪಿಜಿ ಜೊತೆಗೆ ಜೈವಿಕ ಅನಿಲ ಉತ್ಪಾದನೆಯ ವ್ಯವಸ್ಥೆ ಮಾಡಿಕೊಂಡು ಮಾಲಿನ್ಯವನ್ನು ನಿಯಂತ್ರಿಸುತ್ತಿವೆ. ಗ್ರಾಮ ಸಭೆ ಮತ್ತು ಇತರ ಸಭೆಗಳಲ್ಲಿ ಜನರಿಗೆ ಎಲೆಕ್ಟ್ರಿಕ್‌ ಕಾರು ಮತ್ತು ಬೈಕು ಇತ್ಯಾದಿಗಳ  ಬಳಕೆ ಬಗ್ಗೆ,  ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇದದ ಬಗ್ಗೆ ಮಾಹಿತಿ ನೀಡಿ ಶಿಕ್ಷಣ ನೀಡುವ ಕೆಲಸಗಳನ್ನೂ ಪಂಚಾಯಿತಿ ಮಾಡುತ್ತಿದೆ.

ಗ್ರಾಮದ ತ್ಯಾಜ್ಯ ವಿಲೇವಾರಿಗೂ ಪಂಚಾಯಿತಿಯೂ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿಕೊಂಡಿದೆ.

ಸಭೆಗಳಲ್ಲಿ ಮಾಲಿನ್ಯ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಪ್ರತಿಜ್ಞೆ ಸ್ವೀಕಾರ, ಮಕ್ಕಳಿಂದ ಸ್ವಚ್ಛತಾ ಹೀ ಸೇವಾ ಆಂದೋಲನ, ರಸ್ತೆ ಬದಿಗಳಲ್ಲಿ ಎಚ್ಚರಿಕೆಯ ಫಲಕ ಹಾಕುವ ಮೂಲಕವೂ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಜಾಗೃತಿ ಮೂಡಿಸಲಾಗುತ್ತಿದೆ.

ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ವನಮಹೋತ್ಸವ ಆಚರಣೆ ಮೂಲಕ ಗಿಡಮರಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ವಿವಿಧ ತಳಿಗಳ ಒಂದು ಲಕ್ಷ ಸಸಿಗಳನ್ನು ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ನೆಡಲಾಗಿದೆ.ಇದರಿಂದಾಗಿ ಸುತ್ತ ಮುತ್ತ ಹಸಿರಿನ ಛಾಯೆ ಎದ್ದು ಕಾಣುತ್ತದೆ. ತುಂತುರು ಮತ್ತು ಹನಿ ನೀರಾವರಿಗೆ ಸೌರವಿದ್ಯುತ್‌ ನಿರಂತರ ಒದಗಿಸುವ ಮೂಲಕ ರೈತರಲ್ಲಿ ಹೊಸ ಭರವಸೆ ತುಂಬಲಾಗಿದೆ.

ಘನ ತ್ಯಾಜ್ಯ ಘಟಕವನ್ನು ಪಂಚಾಯಿತಿ ವತಿಯಿಂದಲೇ ನಿರ್ಮಿಸಿ ಅದಕ್ಕೆ ಸ್ವಚ್ಛ ಸಂಕೀರ್ಣ ಎಂಬ ಹೆಸರು ಇಡಲಾಗಿದೆ. ಇಲ್ಲಿ ವೈಜ್ಞಾನಿಕವಾಗಿ ಹಸಿ ಕಸ, ಒಣ ಕಸಗಳನ್ನು ವಿಂಗಡಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಇದೆ.

ಗ್ರಾಮಗಳಲ್ಲಿ ಸ್ವಚ್ಚತೆಯನ್ನು ಕಾಪಾಡಲು ಮನೆಗಳಿಗೆ ಶೌಚಾಲಯ, ಹಿತ್ತಲ ಕೈ ತೋಟಗಳನ್ನು ಮಾಡಲು ಹೇಳಿಕೊಡಲಾಗಿದೆ. ಪರಿಸರ ಸಂರಕ್ಷಣೆಯ ಇಂತಹ ಹತ್ತಾರು ಕಾರ್ಯಕ್ರಮಗಳಿಗಾಗಿ ಜಿಲ್ಲೆ ಮತ್ತು ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳೂ ಬಿರಡಹಳ್ಳಿ ಗ್ರಾಮ ಪಂಚಾಯಿತಿಯ ಮುಡಿಗೇರಿವೆ.

ಪರಿಸರವನ್ನು ಹಸಿರಾಗಿಸಿ ಭೂಮಿಯ ರಕ್ಷಣೆಗಾಗಿ ನಿರಂತರ ಶ್ರಮಿಸುತ್ತಿರುವ ಈ ಪಂಚಾಯಿತಿಯ ಈ ಸಾಧನೆಗೆ ಈಗ ಕೇಂದ್ರ ಸರ್ಕಾರದ ರಾಷ್ಟ್ರೀಯ ಪಂಚಾಯಿತಿ ಪ್ರಶಸ್ತಿಯೂ ಲಭಿಸಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ.

ಇವುಗಳನ್ನೂ ಓದಿರಿ: 

ಪರಿಸರ ರಕ್ಷಣೆ: ಬಿರಡಹಳ್ಳಿಗೆ ರಾಷ್ಟ್ರೀಯ ಪ್ರಶಸ್ತಿ ಕಿರೀಟ
ರೆಸ್ಪಾನ್ಸಿವ್‌ ಗವರ್ನೆನ್ಸ್‌ ಗೆ ʼಸಂಪೂರ್ಣʼ ಸಹಕಾರ

ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್‌ ಭರವಸೆ
ಭ್ರಷ್ಟಾಚಾರಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ
ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ
ಏನಿದೆ ಈ ಪುಸ್ತಕಗಳಲ್ಲಿ?
ಪುಸ್ತಕಗಳ ಬಿಡುಗಡೆ ಸಮಾರಂಭ
ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?
ಇದೀಗ ಬಿಡುಗಡೆಯಾಗಿದೆ……
ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ
ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ
ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

ಆತ್ಮ ನಿರ್ಭರ ಗ್ರಾಮ ಪಂಚಾಯ್ತಿ ಪುಸ್ತಕ ಮತ್ತು ಅದರ ಇಂಗ್ಲಿಷ್‌ ಆವೃತ್ತಿ ರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ ಪಂಚಾಯತ್ಸ್‌ ಪುಸ್ತಕದ ಡಿಜಿಟಲ್‌ ಆವೃತ್ತಿಯೂ ಇದೀಗ ಲಭ್ಯ. ಶೇಕಡಾ 50ರಷ್ಟು ದರ ಪಾವತಿಸಿ ಡಿಜಿಟಲ್‌ ಪುಸ್ತಕವನ್ನು ಪಡೆಯಬಹುದು. ಪುಸ್ತಕ ಪಡೆಯಲು ಸಂಪರ್ಕಿಸಿ: ಮೊಬೈಲ್‌ ನಂಬರ್‌ 9480215706 ಅಥವಾ 9845049970.
ಡಿಜಿಟಲ್‌ ಪುಸ್ತಕ ನೋಡಲು ಕೆಳಗಿನ ಚಿತ್ರಗಳನ್ನು ಕ್ಲಿಕ್‌ ಮಾಡಿರಿ:


Click the Image to view Digital Books

PARYAYA: ಬಿರಡಹಳ್ಳಿಗೆ ಏಕೆ ರಾಷ್ಟ್ರ ಪ್ರಶಸ್ತಿ ಬಂತು?‌:   ಬಿರಡಹಳ್ಳಿಗೆ ಏಕೆ ರಾಷ್ಟ್ರ ಪ್ರಶಸ್ತಿ ಬಂತು?‌ ಕ ರ್ನಾಟಕದ ಹಾಸನ ಜಿಲ್ಲೆಯ ಸಕ್ಲೇಶಪುರ ಸುಂದರವಾದ ನಿಸರ್ಗದ ಮಡಿಲ ತಾಣ. ಇದು ಕಾಫಿ ತೋಟಗಳು, ಬೆಟ್ಟ ಗುಡ್ಡಗಳನ್ನು ಒಳಗ...

Monday, April 21, 2025

PARYAYA: ಪರಿಸರ ರಕ್ಷಣೆ: ಬಿರಡಹಳ್ಳಿಗೆ ರಾಷ್ಟ್ರೀಯ ಪ್ರಶಸ್ತಿ ಕಿರೀಟ

 ಪರಿಸರ ರಕ್ಷಣೆ: ಬಿರಡಹಳ್ಳಿಗೆ ರಾಷ್ಟ್ರೀಯ ಪ್ರಶಸ್ತಿ ಕಿರೀಟ

ಬೆಂಗಳೂರು: ಪರಿಸರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರದಿಂದ ನೀಡಲಾಗುವ ೨೦೨೫ರ ಸಾಲಿನ ರಾಷ್ಟ್ರೀಯ ಪಂಚಾಯಿತಿ ವಿಶೇಷ ಪ್ರಶಸ್ತಿಯ ಕಿರೀಟ ಕರ್ನಾಟಕದ ಹಾಸನ ಜಿಲ್ಲೆ ಸಕಲೇಶಪುರ ಬ್ಲಾಕಿನ ಬಿರಡಹಳ್ಳಿ ಗ್ರಾಮದ ಮುಡಿಗೆ ಏರಿದೆ.

ಕೇಂದ್ರ ಸರ್ಕಾರವು ವಿಶ್ವಸಂಸ್ಥೆಯು ನಿಗದಿ ಪಡಿಸಿರುವ ೧೭ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ವಿವಿಧ ಪ್ರಶಸ್ತಿಗಳನ್ನು ನೀಡುತ್ತಿದ್ದು ಅದರಲ್ಲಿ ಹವಾಮಾನ/ ಪರಿಸರ ರಕ್ಷಣೆ ವಿಚಾರದಲ್ಲಿ ಮಾಡಿರುವ ಸಾಧನೆಗಾಗಿ ಬಿರಡಹಳ್ಳಿ ಗ್ರಾಮ ಪಂಚಾಯಿತಿ ವಿಶೇಷ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ.

ಇಡೀ ಗ್ರಾಮದ ಕಚೇರಿ, ಮನೆ, ರಸ್ತೆಗಳಲ್ಲಿ ಸೌರ ದೀಪಗಳ ಅಳವಡಿಕೆ, ತೋಟಗಳಲ್ಲಿ ಮೋಟಾರುಗಳ ಚಾಲನೆಗೆ ಸೌರಶಕ್ತಿಯ ಬಳಕೆ, ಮನೆಗಳಲ್ಲಿ ಪರ್ಯಾಯ ಇಂಧನಕ್ಕಾಗಿ ಜೈವಿಕ ಅನಿಲದ ಬಳಕೆಯಂತಹ ಕ್ರಮಗಳ ಅನುಷ್ಠಾನಕ್ಕಾಗಿ ಬಿರಡಹಳ್ಳಿ ಗ್ರಾಮಕ್ಕೆ ಕೇಂದ್ರದ ಈ ಪುರಸ್ಕಾರ ಲಭ್ಯವಾಗಿದೆ.  

ಬಡತನ ಮುಕ್ತ ಮತ್ತು ವರ್ಧಿತ ಜೀವನೋಪಾಯ ಪಂಚಾಯತ್ಆರೋಗ್ಯಪೂರ್ಣ ಪಂಚಾಯತ್ಮಕ್ಕಳ ಸ್ನೇಹಿ ಪಂಚಾಯತ್, ಜಲ ಸಮೃದ್ಧ ಪಂಚಾಯತ್ಸ್ವಚ್ಛ ಮತ್ತು ಹಸಿರು ಪಂಚಾಯತ್ಪಂಚಾಯಿತಿಯಲ್ಲಿ ಸ್ವಾವಲಂಬಿ ಮೂಲಸೌಕರ್ಯಸಾಮಾಜಿಕವಾಗಿ ನ್ಯಾಯಯುತ ಮತ್ತು ಸಾಮಾಜಿಕವಾಗಿ ಸುರಕ್ಷಿತ ಪಂಚಾಯತ್, ಉತ್ತಮ ಆಡಳಿತವುಳ್ಳ ಪಂಚಾಯತ್ ಹಾಗೂ ಮಹಿಳಾ ಸ್ನೇಹಿ ಪಂಚಾಯತ್- ಈ ೯ ವಿಷಯಗಳಲ್ಲಿ ಯಾವುದಾದರೂ ವಿಷಯದಲ್ಲಿ ವಿಶೇಷ ಸಾಧನೆ ಮಾಡಿದ ಪಂಚಾಯಿತಿಗಳಿಗೆ ೭ ವಿಶೇಷ ವರ್ಗದ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ.

ಮೇಲೆ ಹೇಳಿದ ೯ ವಿಷಯಗಳಲ್ಲಿ ಉನ್ನತ ಸಾಧನೆ ಮಾಡಿದ ೩ ಗ್ರಾಮ ಪಂಚಾಯಿಗಳಿಗೆ ದೀ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ.

ಲ್ಲ ವಿಷಯಗಳ ಅಡಿಯಲ್ಲಿ ಅತ್ಯಧಿಕ ಸರಾಸರಿ ಅಂಕಗಳನ್ನು ಪಡೆದು ಉನ್ನತ ಸಾಧನೆ ಮಾಡಿದ ಮೂರು 3 ಗ್ರಾಮ ಪಂಚಾಯತಿಗಳು, ಬ್ಲಾಕ್‌ ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ,

ಸ್ವತಃ ಆದಾಯದ ಮೂಲವನ್ನು (OSR) ಸಜ್ಜುಗೊಳಿಸಲು ಮತ್ತು ವೃದ್ಧಿಸಲು ಮಾಡಿದ ಪ್ರಯತ್ನಗಳಿಗಾಗಿ 3 ಗ್ರಾಮ ಪಂಚಾಯತಿಗಳಿಗೆ ಆತ್ಮ ನಿರ್ಭರ್ ಪಂಚಾಯತ್ ವಿಶೇಷ ಪ್ರಶಸ್ತಿ,

ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆ ಮತ್ತು ನವೀಕರಿಸಬಹುದಾದ ಇಂಧನ ಮೂಲದ ಬಳಕೆಯನ್ನು ಸಾಧಿಸಿದ 3 ಗ್ರಾಮ ಪಂಚಾಯತಿಗಳಿಗೆ ಹವಾಮಾನ ಕ್ರಮ ಅಥವಾ ಪರಿಸರ ರಕ್ಷಣಾ ವಿಶೇಷ ಪ್ರಶಸ್ತಿ,

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಗ್ರಾಮ ಪಂಚಾಯತಿಗಳಿಗೆ ಸಾಂಸ್ಥಿಕ ಬೆಂಬಲವನ್ನು ನೀಡಿದ 3 ಸಂಸ್ಥೆಗಳಿಗೆ ಪಂಚಾಯತ್ ಕ್ಷಮತಾ ನಿರ್ಮಾಣ್ ಸರ್ವೋತ್ತಮ್ ಸಂಸ್ಥಾನ ಪುರಸ್ಕಾರ,

ನಂತರದ ವರ್ಷಗಳಲ್ಲಿ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳಿಗೆ ಅರ್ಹತೆ ಪಡೆದ ಮತ್ತು ಶಾರ್ಟ್‌ಲಿಸ್ಟ್ ಮಾಡಲಾದ ಒಂದು ಗ್ರಾಮ ಪಂಚಾಯತಿಗೆ ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ,

ಹಾಗೂ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿಗಳಿಂದ ಶೇಕಡಾ ೯೦ಕ್ಕಿಂತ ಉತ್ತಮ ಪಾಲ್ಗೊಳ್ಳುವಿಕೆಗಾಗಿ ಒಂದು ಪಂಚಾಯಿತಿಗೆ  ಅತ್ಯುತ್ತಮ ಪಾಲ್ಗೊಳ್ಳುವಿಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ.

ಕೇಂದ್ರ ಸರ್ಕಾರ ನೀಡುತ್ತಿರುವ ಈ ಪ್ರಶಸ್ತಿಗಳಲ್ಲಿ ಹವಾಮಾನ ಕ್ರಮ ಅಥವಾ ಪರಿಸರ ರಕ್ಷಣೆಗಾಗಿ ನೀಡುವ ಇನ್ನೆರಡು ಪ್ರಶಸ್ತಿಗಳನ್ನು ಮಹಾರಾಷ್ಟ್ರದ ಡವ್ವಾ ಎಸ್‌ ಗ್ರಾಮ ಪಂಚಾಯಿತಿ ಮತ್ತು ಬಿಹಾರಿನ ಮೋತಿಪುರ ಗ್ರಾಮ ಪಂಚಾಯಿತಿ ಹಂಚಿಕೊಂಡಿವೆ.

ಆತ್ಮ ನಿರ್ಭರ ಗ್ರಾಮ ಪಂಚಾಯಿತಿ ಪ್ರಶಸ್ತಿಯನ್ನು ತೆಲಂಗಾಣದ ಮಾಲ್‌ ಗ್ರಾಮ ಪಂಚಾಯಿತಿ, ಒಡಿಶಾದ ಹತ್ಬದ್ರಾ ಗ್ರಾಮ ಪಂಚಾಯಿತಿ, ಆಂದ್ರ ಪ್ರದೇಶದ ಗೊಲ್ಲಪುಡಿ ಗ್ರಾಮ ಪಂಚಾಯಿತಿ ಪಡೆದುಕೊಂಡಿವೆ.

ಪಂಚಾಯತ್‌ ಕ್ಷಮತಾ ನಿರ್ಮಾಣ ಸರ್ವೋತ್ತಮ ಸಂಸ್ಥಾನ ಪುರಸ್ಕಾರಕ್ಕೆ  ಕೇರಳದ ಸ್ಥಳೀಯ ಆಡಳಿತ ಸಂಸ್ಥೆ, ಒಡಿಶಾದ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಮತ್ತು ಅಸ್ಸಾಮಿನ ರಾಜ್ಯ ಪಂಚಾಯತ್‌ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಪಾತ್ರವಾಗಿದೆ.

ಅಭಿನಂದನೆ

ಆತ್ಮ ನಿರ್ಭರ ಗ್ರಾಮ ಪಂಚಾಯಿತಿಗಳ ಸಲುವಾಗಿ ಶ್ರಮಿಸುತ್ತಿರುವ ಹಾಗೂ ಇದಕ್ಕಾಗಿಯೇ ಪುಸ್ತಕಗಳನ್ನು ಬರೆದಿರುವ ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಸಂಸ್ಥಾಪಕ ಡಾ. ಶಂಕರ ಕೆ ಪ್ರಸಾದ್‌ ಹಾಗೂ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿಗಳ ಸಾಮರ್ಥ್ಯ ವೃದ್ಧಿಗಾಗಿ ಶ್ರಮಿಸುತ್ತಿರುವ ರೆಸ್‌ ಗೌ (ಫೌಂಡೇಶನ್‌ ಫಾರ್‌ ರೆಸ್ಪಾನ್ಸಿವ್‌ ಗವರ್ನೆನ್ಸ್‌) ಸಂಸ್ಥೆಯ ಹಿರಿಯ ರಾಜ್ಯ ಒಡನಾಡಿ ಶೈಲಜಾ ಎಸ್‌ ಅವರು ಬಿರಡಹಳ್ಳಿ ಗ್ರಾಮ ಪಂಚಾಯಿತಿಯನ್ನು ಈ ಸಾಧನೆಗಾಗಿ ಅಭಿನಂದಿಸಿದ್ದಾರೆ.

ಇವುಗಳನ್ನೂ ಓದಿರಿ: 

ರೆಸ್ಪಾನ್ಸಿವ್‌ ಗವರ್ನೆನ್ಸ್‌ ಗೆ ʼಸಂಪೂರ್ಣʼ ಸಹಕಾರ
ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್‌ ಭರವಸೆ
ಭ್ರಷ್ಟಾಚಾರಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ
ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ
ಏನಿದೆ ಈ ಪುಸ್ತಕಗಳಲ್ಲಿ?
ಪುಸ್ತಕಗಳ ಬಿಡುಗಡೆ ಸಮಾರಂಭ
ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?
ಇದೀಗ ಬಿಡುಗಡೆಯಾಗಿದೆ……
ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ
ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ
ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

ಆತ್ಮ ನಿರ್ಭರ ಗ್ರಾಮ ಪಂಚಾಯ್ತಿ ಪುಸ್ತಕ ಮತ್ತು ಅದರ ಇಂಗ್ಲಿಷ್‌ ಆವೃತ್ತಿ ರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ ಪಂಚಾಯತ್ಸ್‌ ಪುಸ್ತಕದ ಡಿಜಿಟಲ್‌ ಆವೃತ್ತಿಯೂ ಇದೀಗ ಲಭ್ಯ. ಶೇಕಡಾ 50ರಷ್ಟು ದರ ಪಾವತಿಸಿ ಡಿಜಿಟಲ್‌ ಪುಸ್ತಕವನ್ನು ಪಡೆಯಬಹುದು. ಪುಸ್ತಕ ಪಡೆಯಲು ಸಂಪರ್ಕಿಸಿ: ಮೊಬೈಲ್‌ ನಂಬರ್‌ 9480215706 ಅಥವಾ 9845049970.
ಡಿಜಿಟಲ್‌ ಪುಸ್ತಕ ನೋಡಲು ಕೆಳಗಿನ ಚಿತ್ರಗಳನ್ನು ಕ್ಲಿಕ್‌ ಮಾಡಿರಿ:

Click the Images to view Digital Books


PARYAYA: ಪರಿಸರ ರಕ್ಷಣೆ: ಬಿರಡಹಳ್ಳಿಗೆ ರಾಷ್ಟ್ರೀಯ ಪ್ರಶಸ್ತಿ ಕಿರೀಟ:   ಪರಿಸರ ರಕ್ಷಣೆ: ಬಿರಡಹಳ್ಳಿಗೆ ರಾಷ್ಟ್ರೀಯ  ಪ್ರಶಸ್ತಿ  ಕಿರೀಟ ಬೆಂ ಗಳೂರು: ಪರಿಸರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರದಿಂದ ನೀಡಲಾಗುವ ೨೦೨೫ರ ಸಾಲಿನ ರಾಷ್ಟ್ರೀಯ ಪಂಚಾಯಿ...

Friday, April 18, 2025

PARYAYA: ವಿಪತ್ತು, ಸಂಘರ್ಷಗಳ ಬೆದರಿಕೆಯಲ್ಲಿ ಪರಂಪರೆ

 ವಿಪತ್ತು, ಸಂಘರ್ಷಗಳ ಬೆದರಿಕೆಯಲ್ಲಿ ಪರಂಪರೆ

ಏಪ್ರಿಲ್‌ ೧೮ ವಿಶ್ವ ಪರಂಪರೆ ದಿನ: ಇದು ಸುವರ್ಣ ನೋಟ

ಪ್ರಿಲ್‌ ೧೮ರ ಈ ದಿನವನ್ನು ʼವಿಶ್ವ ಪರಂಪರೆಯ ದಿನʼವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಇದನ್ನು ಅಂತಾರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ದಿನ ಎಂದೂ ಕರೆಯಲಾಗುತ್ತದೆ. ʼವಿಪತ್ತು ಮತ್ತು ಸಂಘರ್ಷಗಳ ಬೆದರಿಕೆಯಲ್ಲಿ ಪರಂಪರೆʼ ಎಂಬುದು ಈ ವರ್ಷದ ವಿಶ್ವ ಪರಂಪರೆ ದಿನದ ʼಥೀಮ್‌ʼ ಅಥವಾ ʼಕೇಂದ್ರ ವಿಷಯʼವಾಗಿದೆ.

ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯನ್ನು ಗೌರವಿಸಲು ಮತ್ತು ರಕ್ಷಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

ವ್ಯಕ್ತಿಗಳು ಮತ್ತು ಸ್ಥಳೀಯ ಸಮುದಾಯಗಳು ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪಾಲಿಸುವಂತೆ ಮತ್ತು ರಕ್ಷಿಸುವಂತೆ ಪ್ರೋತ್ಸಾಹ ನೀಡುವುದು ಈ ವಿಶ್ವಪರಂಪರೆ ದಿನ ಆಚರಣೆಯ ಪ್ರಮುಖ ಗುರಿ. ಸ್ಮಾರಕಗಳ ಸಂರಕ್ಷಣೆಯ ಜೊತೆಗೆಸಾಂಸ್ಕೃತಿಕ ಸ್ವತ್ತುಗಳ ವೈವಿಧ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲೂ ಈ ದಿನಾಚರಣೆ ಯತ್ನಿಸುತ್ತದೆ.


ಅಂತಾರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ಮಂಡಳಿಯು (ICOMOS) 1983ರಿಂದ  ಏಪ್ರಿಲ್‌ ೧೮ರ ಈ ದಿನವನ್ನು ಆಚರಿಸಲು ಒಂದು ಕೇಂದ್ರ ವಿಷಯವನ್ನು ನಿರ್ಧರಿಸುತ್ತದೆ. 2025 ರ ವಿಶ್ವ ಪರಂಪರೆಯ ದಿನದ ವಿಷಯವು "ವಿಪತ್ತುಗಳು ಮತ್ತು ಸಂಘರ್ಷಗಳಿಂದ ಬೆದರಿಕೆಯಲ್ಲಿರುವ ಪರಂಪರೆ: ಮಂಡಳಿಯ 60 ವರ್ಷಗಳ ಅನುಭವ, ಕ್ರಮಗಳಿಂದ ಸಿದ್ಧತೆ ಮತ್ತು ಕಲಿಕೆ" ಎಂಬುದಾಗಿದೆ.

"2025ರ ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ದಿನಾಚರಣೆಯು ವಿಪತ್ತುಗಳು ಮತ್ತು ಸಂಘರ್ಷಗಳ ಬೆದರಿಕೆಯ ಅಡಿಯಲ್ಲಿ ಪರಂಪರೆಯನ್ನು ರಕ್ಷಿಸುವ ಸಂಬಂಧ 60 ವರ್ಷಗಳ ಕ್ರಮಗಳ ಮೇಲೆ ಹಾಗೂ ಬಿಕ್ಕಟ್ಟಿನ ಸಮಯದಲ್ಲಿ ಪರಂಪರೆಯನ್ನು ರಕ್ಷಿಸಲು ನಾವು ತೆಗೆದುಕೊಳ್ಳಬಹುದಾದ ಮುಂಜಾಗರೂಕತೆಸಿದ್ಧತೆತುರ್ತು ಪ್ರತಿಕ್ರಿಯೆ ಮತ್ತು ಚೇತರಿಕೆಗಾಗಿ ಅದರ ಭವಿಷ್ಯದ ಉದ್ದೇಶಗಳ ಮೇಲೆ ಕೇಂದ್ರೀಕರಿಸುತ್ತದೆ" ಎಂದು ಸಂಸ್ಥೆ ತಿಳಿಸಿದೆ.

ಹಂಪಿಯಲ್ಲಿರುವ ಸ್ಮಾರಕಗಳು

ಕರ್ನಾಟಕದ ಹಂಪಿಯು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಇರುವ ಒಂದು ಭವ್ಯ ಸ್ಥಳ. ಇದು ವಿಜಯನಗರದ ಮಹಾನ್ ಹಿಂದೂ ಸಾಮ್ರಾಜ್ಯದ ಕೊನೆಯ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ಆಡಳಿತ ಕಾಲದಲ್ಲಿ ದ್ರಾವಿಡ ಶೈಲಿಯ ದೇವಾಲಯಗಳು ಮತ್ತು ಅರಮನೆಗಳನ್ನು ನಿರ್ಮಿಸಿದ್ದರು. ಇದು 14 ನೇ ಮತ್ತು 16 ನೇ ಶತಮಾನಗಳ ನಡುವೆ ಪ್ರವಾಸಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ನಗರದ ರಸ್ತೆಗಳಲ್ಲಿ ಮುತ್ತು ರತ್ನಗಳನ್ನು ಮಾರಲಾಗುತ್ತಿತ್ತು ಎಂದು ಈ ಪ್ರವಾಸಿಗರು ಬಣ್ಣಿಸಿದ್ದರು. 1565ರಲ್ಲಿ ದಕ್ಕಣದ ಮುಸ್ಲಿಂ ಪಡೆಗಳು ಈ ನಗರವನ್ನು ವಶಪಡಿಸಿಕೊಂಡವು. ಆ ಬಳಿಕ ಆರು ತಿಂಗಳ ಅವಧಿಯಲ್ಲಿ ಈ ನಗರವನ್ನು ಲೂಟಿ ಮಾಡಿ ಹಾಳು ಗೆಡವಲಾಯಿತು. ಆ ಬಳಿಕ ಇದಕ್ಕೆ ʼಹಾಳು ಹಂಪೆʼ ಎಂಬ ಹೆಸರು ಬಂದು ಬಿಟ್ಟಿತು.

ವಿಜಯನಗರ ಸಾಮ್ರಾಜ್ಯದ  ಈ ರಾಜಧಾನಿ ನಗರ 14 ನೇ-16 ನೇ ಶತಮಾನ ಅವಶೇಷಗಳನ್ನು ಒಳಗೊಂಡಿದೆ. ಈ ಆಸ್ತಿಯು 4187,24 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದ್ದುಮಧ್ಯ ಕರ್ನಾಟಕದ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿದೆ.

ತುಂಗಭದ್ರಾ ನದಿಕಡಿದಾದ ಬೆಟ್ಟಗಳ ಶ್ರೇಣಿಗಳು ಮತ್ತು ತೆರೆದ ಬಯಲು ಪ್ರದೇಶಗಳ ಮಧ್ಯೆ ಇರುವ ಈ ಹಂಪಿಯು ಇಂದಿಗೂ ಅದ್ಭುತವಾದ ಪರಿಸರವನ್ನು ಹೊಂದಿದೆ. ಭೌತಿಕ ಅವಶೇಷಗಳು, ಕೋಟೆಗಳುನದಿ ತೀರದ ವೈಶಿಷ್ಟ್ಯಗಳುರಾಜರಿಗೆ ಸಂಬಂಧಿಸಿದ ಹಾಗೂ ಪವಿತ್ರ ದೇವಾಲಯಗಳ ಸಂಕೀರ್ಣಗಳು ಈ ದೇವಾಲಯಗಳ ಕಂಬಗಳ ಸಭಾಂಗಣಗಳುಮಂಟಪಗಳುಸ್ಮಾರಕ ರಚನೆಗಳುದ್ವಾರಗಳುರಕ್ಷಣಾ ತಾಣಗಳುಅಶ್ವಶಾಲೆಗಳುಕಲ್ಯಾಣಿಗಳ ರಚನೆಗಳು, ಕಲ್ಲಿನ ರಥ ಇತ್ಯಾದಿಗಳನ್ನು ಒಳಗೊಂಡಂತೆ 1600ಕ್ಕೂ ಹೆಚ್ಚು ಅವಶೇಷಗಳು ಇಲ್ಲಿವೆ.

ಇವುಗಳಲ್ಲಿಕೃಷ್ಣ ದೇವಾಲಯ ಸಮುಚ್ಚಯ, ನರಸಿಂಹಗಣೇಶಹೇಮಕೂಟ ದೇವಾಲಯಗಳ ಗುಂಪುಅಚ್ಯುತರಾಯ ದೇವಾಲಯ ಸಂಕೀರ್ಣವಿಠ್ಠಲ ದೇವಾಲಯ ಸಂಕೀರ್ಣಪಟ್ಟಾಭಿರಾಮ ದೇವಾಲಯ ಸಂಕೀರ್ಣಕಮಲ ಮಹಲ್ ಸಂಕೀರ್ಣವನ್ನು ಮುಖ್ಯವೆಂದು ಹೇಳಬಹುದು.

ದೊಡ್ಡ ದ್ರಾವಿಡ ದೇವಾಲಯ ಸಂಕೀರ್ಣಗಳನ್ನು ಸಣ್ಣ ಪರಿವಾರ ದೇವರ ದೇವಾಲಯಗಳುಬಜಾರುಗಳುವಸತಿ ಪ್ರದೇಶಗಳು ಮತ್ತು ಕಲ್ಯಾಣಿಗಳನ್ನು ಉಪನಗರ ಪಟ್ಟಣಗಳು ​​(ಪುರಗಳು) ಸುತ್ತುವರೆದಿವೆ. ಸುತ್ತಮುತ್ತಲಿನ ಭೂದೃಶ್ಯವು ಪಟ್ಟಣ ಮತ್ತು ರಕ್ಷಣಾ ವಾಸ್ತುಶಿಲ್ಪವನ್ನು ಕೌಶಲ್ಯದಿಂದ ಮತ್ತು ಸಾಮರಸ್ಯದಿಂದ ಸಂಯೋಜಿಸುತ್ತದೆ. ಈ ಸ್ಥಳದಲ್ಲಿ ಪತ್ತೆಯಾಗಿರುವ ಅವಶೇಷಗಳು ಒಂದು ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಆರ್ಥಿಕ ಸಮೃದ್ಧಿ ಮತ್ತು ರಾಜಕೀಯ ಸ್ಥಾನಮಾನದ ವ್ಯಾಪ್ತಿಯನ್ನು ವಿವರಿಸುತ್ತವೆ. ಹೆಚ್ಚು ಅಭಿವೃದ್ಧಿ ಹೊಂದಿದ ಶ್ರೀಮಂತ ಸಮಾಜ ಇದಾಗಿತ್ತು ಎಂಬುದನ್ನು ಇದು ಸೂಚಿಸುತ್ತದೆ.

ʼಮಳೆ ಬಂದ ಹೊತ್ತಿನಲ್ಲಿ ಈ ಹಂಪಿʼ ಹೇಗಿರುತ್ತದೆ ಎಂಬ ಸಜೀವ ದೃಶ್ಯವನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ತಮ್ಮ ಕ್ಯಾಮರಾ ಮೂಲಕ ಇಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಇಂತಹ ಅದ್ಭುತ ಪಾರಂಪರಿಕ ತಾಣಗಳನ್ನು ರಕ್ಷಿಸಿಕೊಳ್ಳಬೇಕಾದ್ದು ನಮ್ಮೆಲ್ಲರ ಕರ್ತವ್ಯವೂ ಹೌದು ಎಂಬುದನ್ನು ಈದಿನ ನಾವು ನೆನಪಿಸಿಕೊಳ್ಳಬೇಕಾಗಿದೆ.





ಚಿತ್ರಗಳ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿಯೂ ಟ್ಯೂಬ್‌ ವಿಡಿಯೋ ನೋಡಲು 
ಕೆಳಗಿನ ಚಿತ್ರ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ.




ಕೆಳಗಿನವುಗಳನ್ನೂ ಓದಿರಿ: 

ವಿಧಾನಸೌಧಕ್ಕೆ ವರ್ಣಾಲಂಕಾರ
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ
೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!
ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ
ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!
ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ
ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)
ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ
ಬದುಕಿನ ಹೋರಾಟ….!
ಬದ್ಧ ವೈರಿಗಳ ಅಪರೂಪದ ಮೈತ್ರಿ.!
ಡಾ. ರಾಜಕುಮಾರ್ ಆರೋಗ್ಯ ಸೂತ್ರ…!
ಕಥೆ ಹೇಳುವೆ… ನನ್ನ ಕಥೆ ಹೇಳುವೆ..!
‘ಸ್ನೇಕ್ ಬರ್ಡ್’ ಭೋಜನ ಚಮತ್ಕಾರ..!

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಕೇವಲ ಅರ್ಧ ಬೆಲೆ ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

PARYAYA: ವಿಪತ್ತು, ಸಂಘರ್ಷಗಳ ಬೆದರಿಕೆಯಲ್ಲಿ ಪರಂಪರೆ:   ವಿಪತ್ತು, ಸಂಘರ್ಷಗಳ ಬೆದರಿಕೆಯಲ್ಲಿ ಪರಂಪರೆ ಏಪ್ರಿಲ್‌ ೧೮ ವಿಶ್ವ ಪರಂಪರೆ ದಿನ: ಇದು ಸುವರ್ಣ ನೋಟ ಏ ಪ್ರಿಲ್‌ ೧೮ರ ಈ ದಿನವನ್ನು ʼ ವಿಶ್ವ ಪರಂಪರೆಯ ದಿನ ʼ ವಾಗಿ ಜ...