Showing posts with label LPG. Show all posts
Showing posts with label LPG. Show all posts

Sunday, March 15, 2026

PARYAYA: ಕೇಂದ್ರದ ಮಹತ್ವದ ಆದೇಶ: ಪಿಎನ್‌ ಜಿ (PNG) ಇದ್ದರೆ ಎಲ್‌ಪಿ...

 ಕೇಂದ್ರದ ಮಹತ್ವದ ಆದೇಶ: ಪಿಎನ್‌ಜಿ (PNG) ಇದ್ದರೆ ಎಲ್‌ಪಿಜಿ (LPG) ಇಲ್ಲ

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಒಂದು ಪ್ರಮುಖ ಅಧಿಸೂಚನೆಯನ್ನು ಹೊರಡಿಸಿದ್ದುಪೈಪ್‌ಡ್ ನ್ಯಾಚುರಲ್ ಗ್ಯಾಸ್ (PNG) ಸೌಲಭ್ಯ ಹೊಂದಿರುವ ಗ್ರಾಹಕರು ತಮ್ಮಲ್ಲಿರುವ ಎಲ್‌ಪಿಜಿ ಸಂಪರ್ಕವನ್ನು ಕೂಡಲೇ ಸರ್ಕಾರಕ್ಕೆ ಒಪ್ಪಿಸಬೇಕೆಂದು ಆದೇಶಿಸಿದೆ. ಈ ವಿಚಾರವನ್ನು ಸರ್ಕಾರವು 2026 ಮಾರ್ಚ್‌ 14ರ ಶನಿವಾರ ಅಧಿಸೂಚನೆ ಮೂಲಕ ಪ್ರಕಟಿಸಿದೆ.

ಪ್ರಮುಖ ಮಾರ್ಗಸೂಚಿಗಳು:

  • ಒಂದೇ ಸಂಪರ್ಕಕ್ಕೆ ಅವಕಾಶ: PNG ಸಂಪರ್ಕ ಹೊಂದಿರುವವರು ಇನ್ನು ಮುಂದೆ ಗೃಹಬಳಕೆಯ LPG ಸಿಲಿಂಡರ್‌ಗಳನ್ನು ಹೊಂದುವಂತಿಲ್ಲ ಅಥವಾ ರೀಫಿಲ್ ಪಡೆಯುವಂತಿಲ್ಲ.
  • ಹೊಸ ಸಂಪರ್ಕಕ್ಕೆ ತಡೆ: ಈಗಾಗಲೇ ಪೈಪ್‌ಲೈನ್ ಅನಿಲ ಸೌಲಭ್ಯ ಇರುವವರಿಗೆ ಭವಿಷ್ಯದಲ್ಲಿ ಹೊಸ LPG ಸಂಪರ್ಕವನ್ನು ನೀಡಲಾಗುವುದಿಲ್ಲ.
  • ತೈಲ ಕಂಪನಿಗಳಿಗೆ ಸೂಚನೆ: ಸರ್ಕಾರದ ಸ್ವಾಮ್ಯದ ತೈಲ ಕಂಪನಿಗಳು ಮತ್ತು ವಿತರಕರು ಅಂತಹ ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈ ಕ್ರಮ ಏಕೆ?
ಅಡುಗೆ ಅನಿಲದ ಪೂರೈಕೆಯಲ್ಲಿನ ದ್ವಿಗುಣತೆಯನ್ನು ತಡೆಯಲು ಮತ್ತು PNG ಸೌಲಭ್ಯವಿಲ್ಲದ ಮನೆಗಳಿಗೆ LPG ಸಿಲಿಂಡರ್‌ಗಳು ಸುಲಭವಾಗಿ ಸಿಗುವಂತೆ ಮಾಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನಿಂದಾಗಿ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವೂ ಇದಕ್ಕೆ ಒಂದು ಕಾರಣವಾಗಿದೆ.

ಕಡಲ ಬಿಕ್ಕಟ್ಟಿನ ನಡುವೆ ಸಿಹಿ ಸುದ್ದಿ: ಭಾರತದ ಹಡಗುಗಳಿಗೆ ಸುರಕ್ಷಿತ ಹಾದಿ

ಭಾರತದ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿಇರಾನ್ ದೇಶವು ಪರ್ಷಿಯನ್ ಕೊಲ್ಲಿಯ 'ಹಾರ್ಮುಜ್ ಜಲಸಂಧಿಮೂಲಕ ಭಾರತದ ಎರಡು LPG ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

  • ಶಿವಾಲಿಕ್ ಮತ್ತು ನಂದಾದೇವಿ: ಈ ಎರಡು ಬೃಹತ್ ಹಡಗುಗಳು ಸುಮಾರು 92,700 ಟನ್ ಅಡುಗೆ ಅನಿಲದೊಂದಿಗೆ ಗುಜರಾತಿನ ಮುದ್ರಾ ಮತ್ತು ಕಾಂಡ್ಲಾ ಬಂದರುಗಳತ್ತ ಸಾಗಿವೆ.
  • ಇವು ಮಾರ್ಚ್ 16 ಅಥವಾ 17 ರಂದು ಭಾರತವನ್ನು ತಲುಪಲಿವೆ.
  • ಇನ್ನೂ ಬಾಕಿ ಉಳಿದಿರುವ 22 ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಸರ್ಕಾರ ಮಾತುಕತೆ ನಡೆಸುತ್ತಿದೆ.

ಸಾರ್ವಜನಿಕರಲ್ಲಿ ಮನವಿ: ಗಾಬರಿ ಬೇಡ!

ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ನಾಗರಿಕರಲ್ಲಿ ವಿಶೇಷ ಮನವಿ ಮಾಡಿದ್ದಾರೆ:

  1. ಪ್ಯಾನಿಕ್ ಬುಕಿಂಗ್ ಬೇಡ: ಅಗತ್ಯವಿದ್ದಾಗ ಮಾತ್ರ ಸಿಲಿಂಡರ್ ಬುಕ್ ಮಾಡಿಗಾಬರಿಯಿಂದ ಮುಂಗಡ ಬುಕಿಂಗ್ ಮಾಡಬೇಡಿ.
  2. ವಾಣಿಜ್ಯ ಸಿಲಿಂಡರ್ ಲಭ್ಯತೆ: ರಾಜ್ಯ ಸರ್ಕಾರಗಳ ಬಳಿ ಸಾಕಷ್ಟು ವಾಣಿಜ್ಯ ಸಿಲಿಂಡರ್‌ಗಳ ದಾಸ್ತಾನು ಇದ್ದುಈಗಾಗಲೇ 29 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿತರಣೆ ಆರಂಭವಾಗಿದೆ.

    ‌                      https://www.paryaya.com/search?q=%E0%B2%87%E0%B2%B0%E0%B2%BE%E0%B2%A8%E0%B3%8D&updated-max=2020-01-09T01:03:00%2B05:30&max-results=20&start=2&by-date=false
PARYAYA: ಕೇಂದ್ರದ ಮಹತ್ವದ ಆದೇಶ: ಪಿಎನ್‌ ಜಿ (PNG) ಇದ್ದರೆ ಎಲ್‌ಪಿ...:   ಕೇಂದ್ರದ ಮಹತ್ವದ ಆದೇಶ: ಪಿಎನ್‌ಜಿ ( PNG) ಇದ್ದರೆ ಎಲ್‌ಪಿಜಿ ( LPG) ಇಲ್ಲ ಕೇಂ ದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಒಂದು ಪ್ರಮುಖ ಅಧಿಸೂಚನೆಯನ್...

Saturday, May 24, 2025

PARYAYA: ಇನ್ನು ನೀರಿನ ಬೆಂಕಿಯಿಂದಲೇ ಅಡುಗೆ ಮಾಡಿ, ಎಲ್‌ಪಿಜಿಗೆ ವಿದ...

 ಇನ್ನು ನೀರಿನ ಬೆಂಕಿಯಿಂದಲೇ ಅಡುಗೆ ಮಾಡಿ, ಎಲ್‌ಪಿಜಿಗೆ ವಿದಾಯ ಹೇಳಿ!

ನಾಲ್ಕೈದು ದಿನಗಳ ಹಿಂದಿನ ಮಾತು. ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಸಮಾವೇಶವೊಂದರಲ್ಲಿ ಮಹಾರಾಷ್ಟ್ರದ ಸಚಿವ, ಕೋರೆಗಾಂವ್‌ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೃಷ್ಣ ಕಣಿವೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಮಹೇಶ ದಾದಾ ಶಿಂಧೆ ತಮ್ಮ ಒಂದು ಹೊಸ ಆವಿಷ್ಕಾರದ ಪ್ರಕಟಣೆಯನ್ನು ಮಾಡಿದರು.

ಈ ಆವಿಷ್ಕಾರ ಭಾರತದ ಆರ್ಥಿಕ ಸ್ಥಿತಿಯನ್ನು ಉತ್ತುಂಗಕ್ಕೆ ಒಯ್ಯುವುದರ ಜೊತೆಗೆ ಜನತೆ ವಿದ್ಯುತ್‌ ಅಥವಾ ಅಡುಗೆ ಅನಿಲ ಬಳಸದೆಯೇ ಶುದ್ಧ ಅಡುಗೆ ಮಾಡಲು ಸಾಧ್ಯವಾಗುವಂತೆ ಮಾಡಲಿದೆ ಎಂದು ಶಿಂಧೆ ಹೇಳಿದರು.

ಏನಿದು ಈ ಅವಿಷ್ಕಾರ?


ಇದೊಂದು ಸಣ್ಣ ಉಪಕರಣ. ಈ ಉಪಕರಣವನ್ನು ಸೌರವಿದ್ಯುತ್ತಿನಿಂದ ಚಲಾಯಿಸಬಹುದು. ಇದಕ್ಕೆ ಜೋಡಿಸಿದ ಒಂದು ಜಾಡಿಯಲ್ಲಿ ಸುಮಾರು ಅರ್ಧ ಲೀಟರಿನಷ್ಟು ನೀರು ತುಂಬಿ ಇಡಲಾಗಿದೆ. ಯಂತ್ರದ ಗುಂಡಿ ಅದುಮಿದರೆ ಈ ನೀರಿನಿಂದ ಪೈಪಿನ ಮೂಲಕ ನೈಸರ್ಗಿಕ ಅನಿಲವಾದ ಜಲಜನಕ ಬರುತ್ತದೆ. ಆ ಪೈಪನ್ನು ಒಂದು ಅಡುಗೆ ತಯಾರಿಸುವ ಗ್ಯಾಸ್‌ ಸ್ಟವ್‌ ಒಂದಕ್ಕೆ ಜೋಡಿಸಲಾಗಿದೆ.

ಈ ಸ್ವವ್‌ಗೆ ನೈಸರ್ಗಿಕ ಅನಿಲ ಬರುತ್ತಿದ್ದಂತೆ ನೀವು ಲೈಟರ್‌ ಮೂಲಕ ಸ್ವವ್‌ ಉರಿಸಬಹುದು. ಗ್ಯಾಸ್‌ ಸ್ಟವ್‌ನಲ್ಲಿ ಬರುವಂತಹ ಖಾರವಾದ ನೀಲ ಬೆಂಕಿ ಸ್ಟೌವಿನಲ್ಲಿ ಬರತೊಡಗುತ್ತದೆ. ಗ್ಯಾಸ್‌ ಸ್ಟವಿನಲ್ಲಿ ಹೇಗೆ ಅಡುಗೆ ಮಾಡುವಿರೋ ಅದೇ ರೀತಿ ನೀವು ಈ ಸ್ಟೌವಿನಲ್ಲೂ ಅಡಿಗೆ ಮಾಡಬಹುದು.

ಅಂದರೆ ಇನ್ನು ಮುಂದೆ ನಿಮ್ಮ ಅಡುಗೆ ಮನೆಯಲ್ಲಿ ಅಡುಗೆ ಮಾಡಲು ವಿದ್ಯುತ್‌ ಬೇಕಾಗಿಲ್ಲ, ಅಡುಗೆ ಅನಿಲದ ಸಿಲಿಂಡರೂ ಬೇಕಾಗಿಲ್ಲ. ಕೇವಲ ಒಂದರ್ಧ ಲೀಟರ್‌ ನೀರಿದ್ದರೆ ಸಾಕು ಸುಮಾರು ಆರು ತಿಂಗಳ ಕಾಲ ನೀವು ನಿರುಮ್ಮಳರಾಗಿ ಇರಬಹುದು.

ಇದನ್ನು ಬಳಸುವುದರಿಂದ ಇನ್ನೂ ಒಂದು ಪ್ರಯೋಜನವಿದೆ. ಈ ಯಂತ್ರವು ನೀರಿನಿಂದ ಜಲಜನಕವನ್ನು ಬಿಡುಗಡೆ ಮಾಡಿ ಸ್ಟವ್‌ಗೆ ಒದಗಿಸುವುದರ ಜೊತೆಗೇ ನೀರಿನಲ್ಲಿನ ಆಮ್ಮಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ.

ಎಲ್‌ ಪಿಜಿ ಅನಿಲ ಬಳಸುವುದರಿಂದ ಮಿಥೇನ್‌ ಉರಿದು ಅಂಗಾರಾಮ್ಲ ಅಂದರೆ ಇಂಗಾಲದ ಡೈ ಆಕ್ಸೈಡ್‌ ಬಿಡುಗಡೆಯಾಗುವುದರಿಂದ ವಾಯುಮಾಲಿನ್ಯ ಉಂಟಾಗುತ್ತದೆ. ಆದರೆ ಹೊಸ ಆವಿಷ್ಕಾರದಲ್ಲಿ ನೀರಿನಿಂದ ಬಿಡುಗಡೆಯಾಗುವ ಜಲಜನಕ ಸ್ಟೌವಿನಲ್ಲಿ ಉರಿಯುವುದರಿಂದ ವಾಯುಮಾಲಿನ್ಯ ಉಂಟಾಗುವುದಿಲ್ಲ. ಒಂದೇ ಪ್ರಕ್ರಿಯೆಯಲ್ಲಿ ಅಡುಗೆ ಇಂಧನ ವೆಚ್ಚ ಸಂಪೂರ್ಣ ಉಳಿತಾಯ ಮತ್ತು ಜೀವಿಗಳ ಉಸಿರಾಟಕ್ಕೆ ಅತ್ಯಗತ್ಯವಾದ ಆಮ್ಲಜನಕ ವಾತಾವರಣಕ್ಕೆ ಸೇರ್ಪಡೆ.

ತಮ್ಮ ಸಹಚರರಾದ ಆಟೋ ಕ್ಲೀನ್‌ ಸಂಸ್ಥೆಯ ವಿಶಾಲ್‌ ಮತ್ತು ಅವರ ತಂಡ ಮಾಡಿದ ಈ ಅವಿಷ್ಕಾರದ ಬಗ್ಗೆ ವಿವರಿಸಿದ ಮಹೇಶ ದಾದಾ ಶಿಂಧೆ ಅವರು ದಶಕಗಳ ಹಿಂದೆ ತಾವು ಇಥೆನಾಲ್‌ ಬಳಸಿ ವಾಹನಗಳನ್ನು ಓಡಿಸಬಹುದು ಎಂಬುದನ್ನು ಬೆಳಕಿಗೆ ತಂದಿದ್ದುದನ್ನು ನೆನಪಿಸಿದರು. ಈಗ ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ಜೊತೆಗೆ ಇದೇ ಇಥೆನಾಲ್‌ ಬಳಸಿ ವಾಹನಗಳನ್ನು ಓಡಿಸಲಾಗುತ್ತದೆ.

ಈಗ ರೂಪಿಸಿರುವ ಯಂತ್ರವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಹಳ್ಳಿ ಹಳ್ಳಿಗಳಲ್ಲೂ ಮನೆ ಮನೆಗಳಿಗೂ ತಲುಪಿಸಲಾಗುವುದು. ಇದರಿಂದ ಪರಿಸರ ಮಾಲಿನ್ಯ ನಿವಾರಣೆಗೂ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು ಮಹೇಶ ಶಿಂಧೆ.

ಅಂದ ಹಾಗೆ ಈ ಯಂತ್ರ ದುಬಾರಿಯದ್ದೂ ಅಲ್ಲ. ಶ್ರೀ ರವಿ ಶಂಕರ ಗುರೂಜಿ ಅವರು ಹೇಳುವ ಹಾಗೆ ಎರಡು ಮೂರು ಸಾವಿರ ರೂಪಾಯಿಗಳಷ್ಟೆ. ಎರಡ್ಮೂರು ಸಾವಿರ ರೂಪಾಯಿ ವೆಚ್ಚ ಮಾಡುವುದರಿಂದ ಜೀವನ ಪರ್ಯಂತ ಇಂಧನ ವೆಚ್ಚವೇ ಇರುವುದಿಲ್ಲ.

ಇಂತಹುದೊಂದು ಆವಿಷ್ಕಾರ ಸಾಧ್ಯವೇ ಎಂದು ಮೂಗು ಮುರಿಯುವವರು ಇರುವುದು ಸಹಜ. ಆದರೆ ಸುಮಾರು ಆರು ತಿಂಗಳ ಹಿಂದೆ ತಾನು ನೀರಿನಿಂದ ಗ್ಯಾಸ್‌ ಸ್ಟವ್‌ ಉರಿಸಿದ್ದು ಹೇಗೆ ಎಂಬುದನ್ನು ಪ್ರಯೋಗಾಸಕ್ತರೊಬ್ಬರು ಯೂ ಟ್ಯೂಬ್‌ ವಿಡಿಯೋ ಒಂದರಲ್ಲಿ ವಿವರಿಸಿದ್ದರು.

ಆ ವಿಡಿಯೋವನ್ನು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ಲಿಂಕ್‌ ಕ್ಲಿಕ್‌ ಮಾಡಿ ನೋಡಬಹುದು.

ಮಹೇಶ ದಾದಾ ಶಿಂಧೆ ಅವರು ಶ್ರೀ ಶ್ರೀ ರವಿ ಶಂಕರ ಗುರೂಜಿ ಅವರ ಮುಂದೆ ಪ್ರದರ್ಶಿಸಿದ್ದು ಇದರ ಪರಿಷ್ಕೃತ ರೂಪ. ಖಂಡಿತವಾಗಿ ಇದು ದೇಶಕ್ಕೆ, ಜನತೆಗೆ ಮಹೋನ್ನತ ಕೊಡುಗೆಯಾಗಬಲ್ಲುದು. 

-ನೆತ್ರಕೆರೆ ಉದಯಶಂಕರ

PARYAYA: ಇನ್ನು ನೀರಿನ ಬೆಂಕಿಯಿಂದಲೇ ಅಡುಗೆ ಮಾಡಿ, ಎಲ್‌ಪಿಜಿಗೆ ವಿದ...:  ಇನ್ನು ನೀರಿನ ಬೆಂಕಿಯಿಂದಲೇ  ಅಡುಗೆ ಮಾಡಿ, ಎಲ್‌ಪಿಜಿಗೆ ವಿದಾಯ ಹೇಳಿ! ನಾ ಲ್ಕೈದು ದಿನಗಳ ಹಿಂದಿನ ಮಾತು. ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಸಮಾವೇಶವೊಂದರಲ್ಲಿ  ಮಹಾರ...