Showing posts with label BJP. Show all posts
Showing posts with label BJP. Show all posts

Saturday, February 8, 2025

Friday, February 7, 2025

PARYAYA: ದೆಹಲಿ ಯಾರಿಗೆ?

ದೆಹಲಿ ಯಾರಿಗೆ?


ಕ್ಷಣ ಕ್ಷಣದ ಫಲಿತಾಂಶಕ್ಕೆಇಲ್ಲಿ ಕ್ಲಿಕ್‌ ಮಾಡಿ
PARYAYA: ದೆಹಲಿ ಯಾರಿಗೆ?: ದೆಹಲಿ ಯಾರಿಗೆ? ಕ್ಷಣ ಕ್ಷಣದ ಫಲಿತಾಂಶಕ್ಕೆ ಇಲ್ಲಿ ಕ್ಲಿಕ್‌ ಮಾಡಿ

Monday, June 3, 2024

PARYAYA: ಬಲ್ಲಿರೇನಯ್ಯಾ? ಭಾರತವನ್ನಾಳುವವರು ಯಾರೆಂದುಕೊಂಡಿದ್ದೀರಿ?

ಬಲ್ಲಿರೇನಯ್ಯಾ? ಭಾರತವನ್ನಾಳುವವರು
ಯಾರೆಂದುಕೊಂಡಿದ್ದೀರಿ?

ಭಾರತವನ್ನು ಮತ್ತೆ ಆಳುವವರು ಯಾರೆಂದುಕೊಂಡಿದ್ದೀರಿ? ಕುತೂಹಲಕಾರಿ ಲೋಕಸಭಾ ಚುನಾವಣೆಯ ಫಲಿತಾಂಶಗಳು ಇಲ್ಲಿ ಕ್ಷಣ ಕ್ಷಣಕ್ಕೂ ಪ್ರತಿಫಲಿಸಲಿವೆ.

2024 ಜೂನ್‌ 4ರ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿರುವ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಮಾಹಿತಿಗಾಗಿ ಮೇಲಿನ ಚಿತ್ರ ಕ್ಲಿಕ್‌ ಮಾಡಿ.


PARYAYA: ಬಲ್ಲಿರೇನಯ್ಯಾ? ಭಾರತವನ್ನಾಳುವವರು ಯಾರೆಂದುಕೊಂಡಿದ್ದೀರಿ?:   ಬಲ್ಲಿರೇನಯ್ಯಾ? ಭಾರತವನ್ನಾಳುವವರು ಯಾರೆಂದುಕೊಂಡಿದ್ದೀರಿ? ಭಾ ರತವನ್ನು ಮತ್ತೆ ಆಳುವವರು ಯಾರೆಂದುಕೊಂಡಿದ್ದೀರಿ? ಕುತೂಹಲಕಾರಿ ಲೋಕಸಭಾ ಚುನಾವಣೆಯ ಫಲಿತಾಂಶಗಳು ಇಲ್...

Sunday, June 2, 2024

PARYAYA: ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ ಎ...

 ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ  ಎಸ್‌ಕೆಎಂ ಜಯಭೇರಿ

ವದೆಹಲಿಅರುಣಾಚಲ ಪ್ರದೇಶದಲ್ಲಿ ಬಿಜೆಪಿ 2024 ಜೂನ್‌ 2ರ ಭಾನುವಾರ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಹ್ಯಾಟ್ರಿಕ್‌ ಸಾಧಿಸಿತು. ಇದೇ ವೇಳೆಗೆ ಸಿಕ್ಕಿಂನಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಎರಡನೇ ಅವಧಿಗೆ ಅಧಿಕಾರವನ್ನು ಪಡೆದುಕೊಂಡಿತು.

2024 ರ ಏಪ್ರಿಲ್ 19 ರಂದು ಅರುಣಾಚಲ ಪ್ರದೇಶದ 60 ವಿಧಾನಸಭಾ ಸ್ಥಾನಗಳಿಗೆ ಮತ್ತು ಸಿಕ್ಕಿಂನ 32 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿತ್ತು.

ಚುನಾವಣಾ ಆಯೋಗದ ಪ್ರಕಾರಅರುಣಾಚಲ ಪ್ರದೇಶದಲ್ಲಿ ಬಿಜೆಪಿ 46 ಸ್ಥಾನಗಳನ್ನು ಗೆದ್ದು, ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. 60 ವಿಧಾನಸಭಾ ಸ್ಥಾನಗಳ ಪೈಕಿ 50 ಸ್ಥಾನಗಳಿಗೆ ಭಾನುವಾರ ಫಲಿತಾಂಶ ಪ್ರಕಟವಾಗಿದ್ದುಆಡಳಿತ ಪಕ್ಷ ಈಗಾಗಲೇ ಹತ್ತು ಸ್ಥಾನಗಳನ್ನು ಅವಿರೋಧವಾಗಿ ಗೆದ್ದುಕೊಂಡಿದೆ. ಈ ಹಿಂದೆ ಅವಿರೋಧವಾಗಿ ಗೆದ್ದಿದ್ದ ಹತ್ತು ಪಕ್ಷದ ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ಕೂಡ ಒಬ್ಬರು.

ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಐದು ಸ್ಥಾನಗಳನ್ನು ಗೆದ್ದರೆಅರುಣಾಚಲದ ಪೀಪಲ್ಸ್ ಪಾರ್ಟಿ ಎರಡು ಸ್ಥಾನಗಳನ್ನು ಮತ್ತು ಎನ್‌ಸಿಪಿ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಮಾತ್ರ ಪಡೆದಿದೆ. ಮೂರು ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ವಿಜಯಶಾಲಿಗಳಾಗಿದ್ದಾರೆ.

ಸಿಕ್ಕಿಂನಲ್ಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಎಸ್‌ಕೆಎಂ 31 ಸ್ಥಾನಗಳನ್ನು ಗೆದ್ದರೆಎಸ್‌ಡಿಎಫ್ ಒಂದು ಸ್ಥಾನವನ್ನು ಗೆದ್ದಿದೆ.

ಪವನ್ ಚಾಮ್ಲಿಂಗ್ ಸೋಲು

ಐದು ಬಾರಿ ಗೆದ್ದಿದ್ದ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಮತ್ತು ಎಸ್‌ಡಿಎಫ್ ಮುಖ್ಯಸ್ಥ ಪವನ್ ಕುಮಾರ್ ಚಾಮ್ಲಿಂಗ್ ಅವರು ಪೊಕ್ಲೋಕ್ ಕಮ್ರಾಂಗ್ ಮತ್ತು ನಾಮ್‌ಚೆಯ್‌ಬಂಗ್ ವಿಧಾನಸಭಾ ಕ್ಷೇತ್ರಗಳಲ್ಲಿ ಸೋತಿದ್ದಾರೆ.

ಎಂಟು ಬಾರಿ ಶಾಸಕರಾಗಿರುವ ಚಾಮ್ಲಿಂಗ್ ಅವರು ತಮ್ಮ ಹುಟ್ಟೂರು ನಾಮ್ಚಿ ಜಿಲ್ಲೆಯ ಪೊಕ್ಲೋಕ್ ಕಮ್ರಾಂಗ್ ಕ್ಷೇತ್ರದಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ ಭೋಜ್ ರಾಜ್ ರೈ ವಿರುದ್ಧ 3,063 ಮತಗಳಿಂದ ಸೋತರು.

ಪ್ರಧಾನಿ ಮೋದಿ ಧನ್ಯವಾದ

ಈಶಾನ್ಯ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದರು.

ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಮೂಲಕ ಸಂದೇಶ ನೀಡಿದ ಮೋದಿ, "ಧನ್ಯವಾದಗಳು ಅರುಣಾಚಲ ಪ್ರದೇಶ! ಈ ಅದ್ಭುತ ರಾಜ್ಯದ ಜನರು ಅಭಿವೃದ್ಧಿಯ ರಾಜಕೀಯಕ್ಕೆ ನಿಸ್ಸಂದಿಗ್ಧವಾದ ಜನಾದೇಶವನ್ನು ನೀಡಿದ್ದಾರೆ. @BJP4Arunachal ನಲ್ಲಿ ಮತ್ತೊಮ್ಮೆ ತಮ್ಮ ನಂಬಿಕೆಯನ್ನು ವ್ಯಕ್ತ ಪಡಿಸಿದ್ದಕ್ಕಾಗಿ ನನ್ನ ಕೃತಜ್ಞತೆಗಳುರಾಜ್ಯದ ಬೆಳವಣಿಗೆಗೆ ಹೆಚ್ಚಿನ ಶಕ್ತಿಯೊಂದಿಗೆ ನಮ್ಮ ಪಕ್ಷವು ಕೆಲಸ ಮಾಡುತ್ತದೆ” ಎಂದು ಹೇಳಿದ್ದಾರೆ.

ಸಿಕ್ಕಿಂ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಎಸ್‌ಕೆಎಂ ಮತ್ತು ಅದರ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರನ್ನು ಕೂಡಾ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.

"ಮುಂಬರುವ ದಿನಗಳಲ್ಲಿ ಸಿಕ್ಕಿಂನ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸಲು ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ" ಎಂದು ಅವರು ನಲ್ಲಿ ಸಂದೇಶ ಪೋಸ್ಟ್ ಮಾಡಿದರು.

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕಿದ ಎಲ್ಲರಿಗೂ ಪ್ರಧಾನಿ ಧನ್ಯವಾದ ಸಲ್ಲಿಸಿದರು.

ಶನಿವಾರ ಪ್ರಕಟವಾದ ಲೋಕ ಸಭಾ ಚುನಾವಣೆ ಸಂಬಂಧಿತ ಮತದಾನೋತ್ತರ ಸಮೀಕ್ಷೆಗಳು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ ಡಿಎ ಮೂರನೇ ಭಾರಿಗೆ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಾಗಿ ಭವಿಷ್ಯ ನುಡಿದಿರುವುದನ್ನು ಇಲ್ಲಿ ಸ್ಮರಿಸಬಹುದು.


PARYAYA: ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ ಎ...:   ಅರುಣಾಚಲ ಪ್ರದೇಶ : ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ   ಎಸ್‌ಕೆಎಂ ಜಯಭೇರಿ ನ ವದೆಹಲಿ : ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 2024 ಜೂನ್‌ 2ರ ಭಾನುವಾರ ಮತ್ತೆ ಅಧಿಕಾ...

Monday, July 29, 2019

ಬಹುಮತ ಗೆದ್ದ ಯಡಿಯೂರಪ್ಪ, ಸ್ಪೀಕರ್ ರಮೇಶ ಕುಮಾರ್ ರಾಜೀನಾಮೆ

ಬಹುಮತ ಗೆದ್ದ ಯಡಿಯೂರಪ್ಪ,
ಸ್ಪೀಕರ್ ರಮೇಶ ಕುಮಾರ್ ರಾಜೀನಾಮೆ
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2019 ಜುಲೈ 29ರ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯವನ್ನು ಮಂಡಿಸಿ ಯಶಸ್ವಿಯಾಗಿ ಬಹುಮತ ಸಾಬೀತು ಪಡಿಸಿದರು.
ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ ಕುಮಾರ್ ಅವರು ವಿಶ್ವಾಸಮತವನ್ನು ಧ್ವನಿಮತಕ್ಕೆ ಹಾಕಿ ಅದು ಅಂಗೀಕೃತವಾಗಿದೆ ಎಂದು ಘೋಷಿಸಿದರು.

ವಿಶ್ವಾಸಮತ ನಿರ್ಣಯದ ಅಂಗೀಕಾರ ಬಳಿಕ ಮುಖ್ಯಮಂತ್ರಿಯವರು ಪೂರಕ ಧನ ವಿನಿಯೋಗ ಗೊತ್ತುವಳಿಯನ್ನು ಮಂಡಿಸಿದರು. ಹೆಚ್ಚಿನ ಚರ್ಚೆ ಇಲ್ಲದೆ ಸದನವು ಮೂರು ತಿಂಗಳ ಅವಧಿಗೆ ಲೇಖಾನುದಾನಕ್ಕೆ ಸರ್ವಾನುಮತದ ಅನುಮೋದನೆ ನೀಡಿತು.

ಎಚ್.ಡಿ. ಕುಮಾರ ಸ್ವಾಮಿ ನೇತೃತ್ವದ ಕಾಂಗ್ರೆಸ್- ಜನತಾದಳ (ಎಸ್) ಮೈತ್ರಿ ಸರ್ಕಾರವು ವಿಶ್ವಾಸಮತದಲ್ಲಿ ಸೋಲು ಅನುಭವಿಸಿ ಪತನಗೊಂಡ ಬಳಿಕ ಯಡಿಯೂರಪ್ಪ 2019 ಜುಲೈ 26 ಶುಕ್ರವಾರ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಯಡಿಯೂರಪ್ಪ ವಿಶ್ವಾಸಮತ ಯಾಚನೆಗೆ ಒಂದು ದಿನ ಮುಂಚಿತವಾಗಿ ಸಭಾಧ್ಯಕ್ಷ ರಮೇಶ ಕುಮಾರ್ ಅವರು 14 ಮಂದಿ ಬಂಡಾಯ ಶಾಸಕರನ್ನು ಶಾಸಕತ್ವದಿಂದ ಅನರ್ಹಗೊಳಿಸಿದ್ದರು.

ವಿಶ್ವಾಸ ಮತ ಯಾಚನೆ ಮತ್ತು ಧನ ವಿನಿಯೋಗ ಗೊತ್ತುವಳಿ ನಿರ್ಣಯದ ಬಳಿಕ ಸದನ್ನು ಉದ್ದೇಶಿಸಿ ಸಂಕ್ಷಿಪ್ತ  ವಿದಾಯ ಭಾಷಣ ಮಾಡಿದ ಸಭಾಧ್ಯಕ್ಷ ಕೆ.ಆರ್.ರಮೇಶ ಕುಮಾರ್ ಅವರು ಸಭಾಧ್ಯಕ್ಷ ಸ್ಥಾನಕ್ಕೆ ತಾವು ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು.
ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ: 


Thursday, May 23, 2019

ಫಿರ್ ಏಕ್ ಬಾರ್ ಮೋದಿ ಸರ್ಕಾರ್

ಫಿರ್ ಏಕ್ ಬಾರ್ ಮೋದಿ ಸರ್ಕಾರ್
ನವದೆಹಲಿ: ಲೋಕಸಭೆಯಲ್ಲಿ ಬಹುಮತಕ್ಕೆ ಬೇಕಾದ ೨೭೨ ಸ್ಥಾನಗಳಮ್ಯಾಜಿಕ್ ಸಂಖ್ಯೆಯನ್ನು ಮೀರಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸ್ವಂತ ಬಲದಲ್ಲೇ ೩೦೩ಕ್ಕೂ ಹೆಚ್ಚಿನ ಸ್ಥಾನಗಳು ಹಾಗೂ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ಡಿಎ) ಮಿತ್ರ ಪಕ್ಷಗಳ ೪೫ಕ್ಕೂ ಹೆಚ್ಚಿನ ಸ್ಥಾನಗಳೊಂದಿಗೆ ೩೫೩ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸುವುದರೊಂದಿಗೆ  2019 ಮೇ 23ರ ಗುರುವಾರ  ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.

ತಮ್ಮ ಪರಾಭವವನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಅಮೇಥಿ ಕ್ಷೇತ್ರದಲ್ಲಿನ ತಮ್ಮ ಎದುರಾಳಿ ಸ್ಮೃತಿ ಇರಾನಿ ಅವರನ್ನು ಅಭಿನಂದಿಸಿದ್ದಾರೆ. ಪ್ರಧಾನಿ ಇಂದಿರಾ ಗಾಂಧಿಯವರು ಸಾಧಿಸಿದ್ದ ವಿಜಯವನ್ನೂ ಮೀರಿ ಪ್ರಚಂಡ ಜಯಭೇರಿ ಭಾರಿಸಿರುವ ಪ್ರಧಾನಿ ಮೋದಿ ಅವರನ್ನು ಪಾಕಿಸ್ತಾನದ ಪ್ರಧಾನಿ ಸೇರಿದಂತೆ ವಿಶ್ವದ ಪ್ರಮುಖರು ಅಭಿನಂದಿಸಿದ್ದಾರೆ.

ಮತಗಳ ಎಣಿಕೆ ಮುಂದುವರೆದಿದ್ದು ಘೋಷಿತ ಗೆಲುವು ಮತ್ತು ಮುನ್ನಡೆ ಪ್ರವೃತ್ತಿಗಳು ಬಿಜೆಪಿ ನೇತೃತ್ವದ ಎನ್ಡಿಎ ಸ್ಪಷ್ಟ ಬಹುಮತ ಸಾಧಿಸುವ ಸ್ಪಷ್ಟ ಸೂಚನೆ ನೀಡಿವೆ.

ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾತಾಂತ್ರಿಕ ಮೈತ್ರಿಕೂಟವು (ಯುಪಿಎ) ಮೂರಂಕಿ ತಲುಪುವ ಸಾಧ್ಯತೆ ಇಲ್ಲ ಎಂದು ಫಲಿತಾಂಶದ ಮುನ್ನಡೆ ಪ್ರವೃತ್ತಿಗಳು ತಿಳಿಸಿವೆ. ೫೧ ಸ್ಥಾನಗಳಲ್ಲಿ ವಿಜಯಕ್ಕೆ ಸಜ್ಜಾಗಿರುವ ಕಾಂಗ್ರೆಸ್ ೨೦೧೪ರಲ್ಲಿ ಗಳಿಸಿದ್ದ ೪೪ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. ೨೦೧೪ರಲ್ಲಿ ಪಕ್ಷವು ಅದರ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಸ್ಥಾನಗಳಿಗೆ ಇಳಿದಿತ್ತು. ಕಾಂಗೆಸ್ಸಿನ ಮಿತ್ರ ಪಕ್ಷಗಳು ಹಾಗೂ ಯುಪಿಎ ಅಂಗಪಕ್ಷವಾದ ಡಿಎಂಕೆ ೨೩ ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸಿದ್ದರೆ, ಕಾಂಗ್ರೆಸ್ ಮತ್ತು  ಡಿಎಂಕೆ ಸೇರಿದಂತೆ ಯುಪಿಎ ಮೈತ್ರಿಕೂಟವು ೯೦ ಸ್ಥಾನಗಳಲ್ಲಿ ಗೆಲವು/ ಮುನ್ನಡೆ ಸಾಧಿಸಿದೆ.

ವೈಎಸ್ಆರ್ಸಿಪಿ, ಟಿಎಂಸಿ, ಬಿಜೆಡಿ, ಬಿಎಸ್ಪಿ, ಟಿಆರ್ಎಸ್, ಎಸ್ಪಿ ಸೇರಿದಂತೆ ಇತರ ಪಕ್ಷಗಳು ಕೇವಲ ೯೯ ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸಿವೆ.

ಲೋಕಸಭೆಯಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಕಾಂಗ್ರೆಸ್ ವಿರೋಧ ಪಕ್ಷ ನಾಯಕನ ಹುದ್ದೆ ಪಡೆಯಲು ಬೇಕಾದ ಅರ್ಹತೆಯ ಸಮೀಪದಲ್ಲಿದೆ. (ಅಧಿಕೃತ ವಿರೋಧ ಪಕ್ಷದ ನಾಯಕ ಸ್ಥಾನ ಪಡೆಯಲು ಪಕ್ಷವು ಸಂಸತ್ತಿನ ೫೪೩ ಸ್ಥಾನಗಳ ಶೇಕಡಾ ೧೦ರಷ್ಟು ಸ್ಥಾನಗಳನ್ನು ಹೊಂದಿರಬೇಕಾಗುತ್ತದೆ.) ೨೦೧೪ರ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ಲಭಿಸಿರಲಿಲ್ಲ.

ಚೀನೀ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಅವರಿಂದ ಔಪಚಾರಿಕವಾಗಿ ಮೊತ್ತ ಮೊದಲ ಅಭಿನಂದನಾ ಸಂದೇಶ ತಲುಪುತ್ತಿದ್ದಂತೆಯೇ ಪ್ರಧಾನಿ ಮೋದಿ ಅವರುಭಾರತ ಮತ್ತೊಮ್ಮೆ ಗೆದ್ದಿದೆ ಎಂದು ಟ್ವೀಟ್ ಮಾಡಿದರು. ಬಿಜೆಪಿ ವಿಜಯದ ರೂವಾರಿಯಾಗಿರುವ ಪಕ್ಷದ ಮಹಾನ್ ವ್ಯೂಹ ತಜ್ಞ ಅಮಿತ್ ಶಾ ಅವರು ಬೃಹತ್ ಮೆರವಣಿಗೆಯಲ್ಲಿ ಪಕ್ಷದ ಕಚೇರಿಗೆ ಆಗಮಿಸಿದರು.  ಬಳಿಕ ಪ್ರಧಾನಿ ಮೋದಿ ಅವರೂ ಪಕ್ಷ ಕಚೇರಿಗೆ ಆಗಮಿಸಿದರು.

ಲೋಕಸಭಾ ಚುನಾವಣೆಯ ಜೊತೆಗೇ ನಡೆದ ನಾಲ್ಕು ರಾಜ್ಯಗಳ  ವಿಧಾನಸಭಾ ಚುನಾವಣೆಗಳ ಮತಗಳ ಎಣಿಕೆಯೂ ಗುರುವಾರ ನಡೆದಿದ್ದು ಆಂಧ್ರಪ್ರದೇಶದ ಮುಖ್ಯಮಂತ್ರಿ  ತೆಲುಗುದೇಶಂ ಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು ಅಧಿಕಾರ ಕಳೆದುಕೊಂಡಿದ್ದಾರೆ. ಅವರ ಎದುರಾಳಿ ಪಕ್ಷವಾದ ವೈಎಸ್ ಆರ್ ಕಾಂಗ್ರೆಸ್ ಪಕ್ಷವು ವಿಧಾನಸಭೆಯ ೧೭೫ ಸ್ಥಾನಗಳ ಪೈಕಿ ೧೫೨ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡು ಪ್ರಚಂಡ ಜಯಭೇರಿ ಭಾರಿಸಿದ್ದು, ಅದರ ನಾಯಕ ೪೬ರ ಹರೆಯದ ಜಗನ್ ಮೋಹನ ರೆಡ್ಡಿ ಆಂಧ್ರದ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ. ಜಗನ್ ಅವರ ವೈಎಸ್ ಆರ್ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲೂ ರಾಜ್ಯದ ೨೨ ಸ್ಥಾನಗಳಲ್ಲಿ ಗೆಲುವು / ಮುನ್ನಡೆ ದಾಖಲಿಸಿದೆ. ತೆಲುಗುದೇಶಂ ಪಕ್ಷವು ಕೇವಲ ೨೧ ಸ್ಥಾನಗಳಲ್ಲಿ ಗೆಲುವು / ಮುನ್ನಡೆ ದಾಖಲಿಸಿದೆ.

ಒಡಿಶಾ ವಿಧಾನಸಭೆಯ ೧೪೭ ಸ್ಥಾನಗಳ ಪೈಕಿ ೧೧೧ ಸ್ಥಾನಗಳನ್ನು ಬಿಜು ಜನತಾ ದಳ ಗೆದ್ದಿದ್ದು ಪಕ್ಷದ ನಾಯಕ ನವೀನ್ ಪಟ್ನಾಯಕ್ ಅವರು ಐದನೆ ಬಾರಿಗೆ ಸರ್ಕಾರ ರಚಿಸಲಿದ್ದಾರೆ. ಬಿಜೆಪಿಯು ೨೩, ಕಾಂಗ್ರೆಸ್ ೧೦ ಮತ್ತು ಇತರರು ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸಿದ್ದಾರೆ.

ಅರುಣಾಚಲ ಪ್ರದೇಶ ವಿಧಾನಸಭೆಯ ೬೦ ಸ್ಥಾನಗಳ ಪೈಕಿ ೩೨ ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ , ಎನ್ಪಿಪಿ , ಇತರರು ೧೧ ಸ್ಥಾನ ಗಳಿಸಿದ್ದಾರೆ.

೩೨ ಸದಸ್ಯ ಬಲದ ಸಿಕ್ಕಿಂನಲ್ಲಿ ಎಸ್ಡಿಎಫ್ ಮತ್ತು ಎಸ್ಕೆಎಂ ತಲಾ ೧೪ ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚನೆ ಅತಂತ್ರವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಶೂನ್ಯ ಸಂಪಾದನೆ ಮಾಡಿವೆ.

ಬಿಜೆಪಿಯ ಇಂದಿನ ಗೆಲುವಿಗೆ ಪ್ರಮುಖ ಕಾಣಿಕೆ ಹಿಂದಿ ಹೃದಯಭಾಗದ ರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ರಾಜಸ್ಥಾನದಿಂದ ಬಂದಿವೆ. ರಾಜ್ಯಗಳಲ್ಲಿ ಪಕ್ಷವು ೨೦೧೪ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಎದುರು ಸೋತು ಅಧಿಕಾರ ಕಳೆದುಕೊಂಡಿತ್ತು.  ಮಮತಾ ಬ್ಯಾನರ್ಜಿ ಅವರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗಂಭೀರ ಪ್ರವೇಶ ಮಾಡಿದ್ದು, ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮೈತ್ರಿಕೂಟದ ಸವಾಲಿನ ಹೊರತಾಗಿಯೂ ತನ್ನ ನಷ್ಟವನ್ನು ಕಡಿಮೆ ಮಾಡಿಕೊಳ್ಯ್ಳುವಲ್ಲಿ ಯಶಸ್ವಿಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ೨೧ ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸಿದರೆ, ಬಿಜೆಪಿಯ ೨೦ ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ಸಾಧಿಸುವ ಮೂಲಕ ಹಣಾಹಣಿ ಸ್ಪರ್ಧೆ ನೀಡಿದೆ. ೨೦೧೪ರಲ್ಲಿ ರಾಜ್ಯದಲ್ಲಿ ಬಿಜೆಪಿ ಕೇವಲ ಸ್ಥಾನ ಗೆದ್ದರೆ, ಮಮತಾ ಪಕ್ಷವು ೩೪ ಸ್ಥಾನಗಳನ್ನು ಗೆದ್ದಿತ್ತು.

ಕರ್ನಾಟಕ ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಪ್ರಚಂಡವಾಗಿ ಕೆಲಸ ಮಾಡಿದ್ದು ಅದರ ಹೊಡೆತಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಧೂಳೀಪಟವಾಗಿವೆ.

ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಐತಿ ಹಾಸಿಕ ಗೆಲುವು ಸಾಧಿಸಿದ್ದು ೨೮ ಸ್ಥಾನಗಳ ಪೈಕಿ ೨೫ ಸ್ಥಾನ ಅದರ ವಶವಾಗಿದ್ದರೆ ಮೈತ್ರಿ ಕೂಟದ ಅಂಗಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ತಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರಲ್ಲೇ ಸುಸ್ತಾಗಿ ಕುಳಿತಿವೆ.

ಮೋದಿ ಅಲೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿ ಕಾರ್ಜುನ ಖರ್ಗೆ, ಮಾಜಿ ಮುಖ್ಯ ಮಂತ್ರಿ ಎಂ. ವೀರಪ್ಪ ಮೊಯಿಲಿ, ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಸಂಸದ ಕೆ.ಎಚ್. ಮುನಿ ಯಪ್ಪ, ಪಂಚಾಯತ್ರಾಜ್ ಸಚಿವ ಕೃ?ಬೈರೇಗೌಡ ಹಾಗೂ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋತು ಮೂಲೆಗುಂಪಾಗಿದ್ದಾರೆ.

ಸಿಎಲ್ಪಿ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯಅವರಯಾವ ಬೆಂಬಲಿಗರೂ ಗೆಲುವು ಸಾಧಿಸಲು ವಿಫಲ ರಾಗಿದ್ದು ಸಚಿವ ಡಿ.ಕೆ.ಶಿ ಸಹೋದರ, ಡಿ.ಕೆ. ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಹಾಗೂ ಶ್ರೀನಿವಾಸಪ್ರಸಾದ್ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ವತಿಯಿಂದ ಗೆಲುವು ಸಾಧಿಸಿದ್ದಾರೆ.

ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಲು ಸಫಲರಾಗಿದ್ದು ಇದರಿಂದ ಜೆಡಿಎಸ್ ಬಾವುಟ ಸಂಸ ತ್ತಿನಲ್ಲಿ ಉಳಿಯುವಂತಾ ಗಿದೆ. ಜಿದ್ದಾಜಿದ್ದಿಗೆ ಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಭಾರೀ ಅಂತರದಿಂದ ಪರಾಭವಗೊಳಿಸಿ, ಇತ್ತೀಚಿನ ದಿನಗ ಳಲ್ಲಿ ಕರ್ನಾಟಕದಿಂದ ಮೊದಲ ಪಕ್ಷೇತರ ಅಭ್ಯರ್ಥಿ ಯಾಗಿ ಲೋಕಸಭೆಗೆ ಆಯ್ಕೆ ಆಗಿದ್ದಾರೆ.

ಕೇಂದ್ರ ಸಚಿವ ರಮೇಶ್ಜಿಗಜಿಣಗಿ, ಡಿವಿ ಸದಾನಂದಗೌಡ, ಅನಂತಕುಮಾರ್ ಹೆಗ್ಡೆ, ಶೋಭಾ ಕರಂದ್ಲಾಜೆ, ಪಿಸಿ ಗದ್ದಿಗೌಡರ್, ಸುರೇಶ್ ಅಂಗಡಿ, ಕರಡಿ ಸಂಗಣ್ಣ, ಶಿವಕುಮಾರ್ ಉದಾಸಿ, ಪಿಸಿ ಮೋಹನ್ ಮತ್ತೆ ಬಿಜೆಪಿಯಿಂದ ಗೆಲುವು ಸಾಧಿಸಿ ದ್ದಾರೆ. ಇವರಲ್ಲದೆ, ಪ್ರಹ್ಲಾದ್ ಜೋಶಿ, ಜಿ.ಎಸ್. ಸಿದ್ದೇಶ್ವರ್, ಬಿ.ವೈ. ರಾಘವೇಂದ್ರ, ನಳೀನ್ಕುಮಾರ್ ಕಟೀಲ್, ಭಗವಂತ ಖೂಬಾ, ಪ್ರತಾಪ್ ಸಿಂಹ ಪುನರ್ ಆಯ್ಕೆಗೊಂಡಿದ್ದಾರೆ.

ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ ಕುಮಾರ್ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆರ್ಎಸ್ಎಸ್ ಕಾರ್ಯಕರ್ತ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಬಚ್ಚೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರನ್ನು ಸೋಲಿಸಿ ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರೆ, ಕೋಲಾರದಲ್ಲಿ ಸತತವಾಗಿ ಏಳು ಬಾರಿ ಲೋಕಸಭೆ ಪ್ರವೇಶಿಸಿದ ಮುನಿಯಪ್ಪ ಅವರನ್ನು ಬಿಜೆಪಿಯ ಮುನಿಸ್ವಾಮಿ ಭಾರೀ ಅಂತರದಿಂದ ಪರಾಭವಗೊಳಿಸಿದ್ದಾರೆ.
 
ರಾಷ್ಟ್ರವ್ಯಾಪಿ ಹಿಂಸಾಚಾರ ಸಾಧ್ಯತೆಯ ಬಗ್ಗೆ ಕೇಂದ್ರ ಗೃಹ ಇಲಾಖೆಯು ನೀಡಿದ್ದ ಮುನ್ನೆಚ್ಚರಿಕೆಯ ನಡುವೆ ಗುರುವಾರ ಬೆಳಗ್ಗೆ ಗಂಟೆಗೆ ಬಿಗಿಭದ್ರತೆಯ ಮಧ್ಯೆ ಮತಗಳ ಎಣಿಕೆ ಆರಂಭವಾಗಿತ್ತು.

ರಾಷ್ಟ್ರೀಯ ಚುನಾವಣೆಯಲ್ಲಿ  ಮುಖ್ಯವಾಗಿ ಬಿಜೆಪಿಯ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ  ಯಪಿಎ ಮಧ್ಯೆ ಕದನ ನಡೆದಿತ್ತು. ಏನಿದ್ದರೂ ಯುಪಿಎ ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ- ಬಹುಜನ ಸಮಾಜ ಪಕ್ಷ- ರಾಷ್ಟ್ರೀಯ ಲೋಕದಳ ಮೈತ್ರಿಕೂಟ, ಹಾಗೂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಒಡಿಶಾದಲಿ ಬಿಜು ಜನತಾದಳಗಳ ಜೊತೆಗೆ ಬಿಜೆಪಿ ಸ್ಪರ್ಧಿಸಬೇಕಾಗಿತ್ತು. ದಕ್ಷಿಣದ ಉಳಿದ ರಾಜ್ಯಗಳಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳ ಜೊತೆ ಬಿಜೆಪಿಯ ಸೆಣಸಾಟ ಇತ್ತು.

ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಮತ್ತೆ ಅಧಿಕಾರಕ್ಕೆ ಏರುವ ಬಗ್ಗೆ ಭವಿಷ್ಯ ನುಡಿದಿದ್ದವು. ವಿರೋಧ ಪಕ್ಷಗಳು ಸಮೀಕ್ಷೆಗಳನ್ನು ತಳ್ಳಿ ಹಾಕಿದ್ದವು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಮೀಕ್ಷೆಗಳನ್ನುಕಪಟ ಎಂಬುದಾಗಿ ಬಣ್ಣಿಸಿದ್ದರು.

೫೪೨ ಸ್ಥಾನಗಳಿಗೆ ಹಂತಗಳಲ್ಲಿ ಚುನಾವಣೆಗಳು ನಡೆದಿದ್ದವು. ಭಾರತದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಅಂದರೆ ಶೇಕಡಾ ೬೭.೧ರಷ್ಟು ಮತದಾನ ಬಾರಿ ನಡೆದಿತ್ತು. ೨೦೧೪ರ ಚುನಾವಣೆಯಲ್ಲಿ ಶೇಕಡಾ ೬೬.೪ರಷ್ಟು ಮತದಾನವಾಗಿತ್ತು.

ಚುನಾವಣಾ ಫಲಿತಾಂಶ ಬರುತ್ತಿದ್ದಂತೆಯೇ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರ ಸಂಭ್ರಮೋತ್ಸಾಹ ಮುಗಿಲು ಮುಟ್ಟಿತ್ತು. ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರು ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರು ಪ್ರಿಯಾಂಕಾ ಜೊತೆ ತಮ್ಮ ನಿವಾಸದಲ್ಲಿ ಫಲಿತಾಂಶದ ಬಗ್ಗೆ ಚರ್ಚಿಸಿದರು.

ರಾಹುಲ್ ಗಾಂಧಿಯರನ್ಯಾಯ ಯೋಜನೆಯ ಘೋಷಣೆ, ಚೌಕೀದಾರ್ ಚೋರ್ ಹೈ ಘೋಷಣೆ, ರಫೇಲ್ ಅವ್ಯವಹಾರದ ಆರೋಪಗಳು ಮತದಾರರ ಮೇಲೆ ಪ್ರಭಾವ ಬೀರಲಿಲ್ಲ ಎಂಬುದು ಫಲಿತಾಂಶದೊಂದಿಗೆ ಖಚಿತವಾಯಿತು.

ಬದಲಿಗೆ ರಾಷ್ಟ್ರದ ರಕ್ಷಣೆ, ಉಗ್ರ ನಿಗ್ರಹ, ಆರ್ಥಿಕ ಸುಧಾರಣಾ ಕ್ರಮಗಳು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಿ ಬಿಜೆಪಿ ಗೆಲುವಿಗೆ ಸಹಕಾರಿಯಾದವು.