Showing posts with label ಶಬರಿಮಲೈ ದೇಗುಲ. Show all posts
Showing posts with label ಶಬರಿಮಲೈ ದೇಗುಲ. Show all posts

Thursday, November 15, 2018

ಶಬರಿಮಲೈಗೆ ಮಾರ್ಗವಿಲ್ಲ: ಕೋಚಿ ವಿಮಾನ ನಿಲ್ದಾಣದಲ್ಲೇ ‘ತೃಪ್ತಿ’

ಶಬರಿಮಲೈಗೆ ಮಾರ್ಗವಿಲ್ಲ: ಕೋಚಿ

ವಿಮಾನ ನಿಲ್ದಾಣದಲ್ಲೇತೃಪ್ತಿ

ಕೋಚಿ: ಶಬರಿಮಲೈ ದೇವಸ್ಥಾನಕ್ಕೆ ಭೇಟಿ ನೀಡಲು ಮಹಿಳಾ ಹಕ್ಕುಗಳ ಕಾರ್ಯಕರ್ತೆ ತೃಪ್ತಿ ದೇಸಾಯಿ 2018 ನವೆಂಬರ್ 16 ಶುಕ್ರವಾರ ಕೇರಳದ ಕೋಚಿಗೆ ಬಂದಿಳಿದಿದ್ದರೂ, ಶಬರಿಮಲೈಗೆ ಹೋಗುವ ಎಲ್ಲ ಮಾರ್ಗಗಳೂ ಬಂದ್ ಆದ ಪರಿಣಾಮವಾಗಿ ಕೋಚಿ ವಿಮಾನನಿಲ್ದಾಣದಲ್ಲೇ ಸಿಕ್ಕಿಹಾಕಿಕೊಂಡಿದ್ದಾರೆ.

ಶಬರಿಮಲೈ ದೇಗುಲ ಪ್ರವೇಶಿಸಿಯೇ ಸಿದ್ಧ ಎಂಬುದಾಗಿ ಘೋಷಿಸಿರುವ ತೃಪ್ತಿ ದೇಸಾಯಿ ಪ್ರಕಟಣೆ ವಿರುದ್ಧ ಭಾರೀ ಸಂಖ್ಯೆಯ ಅಯ್ಯಸ್ವಾಮಿ ಭಕ್ತರು ಕೋಚಿ ವಿಮಾನ ನಿಲ್ದಾಣಕ್ಕೇ ಮುತ್ತಿಗೆ ಹಾಕಿದ್ದು, ವಿಮಾನ ನಿಲ್ದಾಣದಿಂದ ಹೊರಕ್ಕೆ ಬರಲು ಕೂಡಾ ಸಾಧ್ಯವಾಗದಂತೆ ತೃಪ್ತಿ ದೇಸಾಯಿ ಮತ್ತು ಆಕೆಯ ಜೊತೆಗೆ ಬಂದ ಮಹಿಳೆಯರನ್ನು  ಅಡ್ಡಗಟ್ಟಿದ್ದಾರೆ.

ಪೊಲೀಸರು ತೃಪ್ತಿ ದೇಸಾಯಿ ಅವರನ್ನು ಪೊಲೀಸ್ ವ್ಯಾನಿನಲ್ಲಿ ಕರೆದೊಯ್ಯಲು ಯತ್ನಿಸಿದರೆ, ತಮ್ಮ ದೇಹಗಳ ಮೇಲೆಯೇ ಕರೆದೊಯ್ಯಬೇಕು ಎಂದು ಅಯ್ಯಪ್ಪ ಭಕ್ತರು ಎಲ್ಲ ಮಾರ್ಗಗಳಲ್ಲೂ ಮಲಗಿಕೊಂಡಿದ್ದಾರೆ. ಕೋಚಿ ವಿಮಾನ ನಿಲ್ದಾಣದಿಂದಲೇ ಮಹಾರಾಷ್ಟ್ರಕ್ಕೆ ವಾಪಸ್ ಹೋಗುವಂತೆ ತೃಪ್ತಿ ದೇಸಾಯಿ ಮತ್ತು ಸಂಗಡಿಗರನ್ನು ಪ್ರತಿಭಟನಕಾರರು ಒತ್ತಾಯಿಸಿದರು.

ಪೊಲೀಸರು ದೇಸಾಯಿಯನ್ನು  ಹೊಟೇಲಿಗೆ ಸ್ಥಳಾಂತರಿಸಲು ಯತ್ನಿಸಿದರೂ, ಪ್ರತಿಭಟನಾಕಾರರು ಹೊರಕ್ಕೆ ಬಿಡಲು ನಿರಾಕರಿಸಿದರು. ದೇವಸ್ಥಾನದ ಮೂಲ ಶಿಬಿರವಾದ ಪಂಬಾವರೆಗಿನ 5.5 ಕಿಮೀ ದೂರವನ್ನು ಕ್ರಮಿಸಲು ಬಾಡಿಗೆ ವಾಹನಗಳನ್ನು ಒದಗಿಸುವಂತೆ ತೃಪ್ತಿ ದೇಸಾಯಿ ಪೊಲೀಸರನ್ನು ಕೇಳಿಕೊಂಡಿದ್ದಾರೆ

ಆದರೆ ಯಾವ ಟ್ಯಾಕ್ಸಿ ಚಾಲಕರೂ ಆಕೆಯನ್ನು ಕರೆದೊಯ್ಯಲು ಒಪ್ಪಿಲ್ಲ. ಆನ್ ಲೈನ್ ಮೂಲಕ ಟ್ಯಾಕ್ಸಿ ಬುಕ್ ಮಾಡುವ ಯತ್ನವೂ ಸಫಲವಾಗಲಿಲ್ಲ. ಯಾವುದೇ ಟ್ಯಾಕ್ಸಿಚಾಲಕರೂ ಆನ್ ಲೈನಿನಲ್ಲಿ ಕರೆದೊಯ್ಯಲು ಮುಂದೆ ಬರಲಿಲ್ಲ. ಬೆಳಗ್ಗೆ 5 ಗಂಟೆಗೆ ವಿಮಾನಕ್ನನಿಲ್ದಾಣಕ್ಕೆ ಬಂದಿಳಿದರೂ, ನಿಲ್ದಾಣದಿಂದ ಹೊರಬರಲೂ ಅವರಿಗೆ ಸಾಧ್ಯವಾಗಲಿಲ್ಲ.

"ಏನಾದರೂ ಸರಿ, ನಾನು ಅಯ್ಯಪ್ಪನ ದರ್ಶನ ಇಲ್ಲದೆ ಹಿಂತಿರುಗುವುದಿಲ್ಲ"ಎಂದು ದೇಸಾಯಿ ಹೇಳಿದ್ದಾರೆ. ತಮ್ಮನ್ನು ಅಡ್ಡ ಗಟ್ಟಿರುವುದು ಭಕ್ತರಲ್ಲ ಗೂಂಡಾಗಳು ಎಂದು ಅವರು ನುಡಿದರು.

ಮಹಾರಾಷ್ಟ್ರದ ಅಹ್ಮದನಗರ  ಜಿಲ್ಲೆಯ ಶನಿ ಶಿಂಗ್ಣಾಪುರ ದೇವಸ್ಥಾನ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕಾಗಿ ತೃಪ್ತಿ ದೇಸಾಯಿ ಮತ್ತು ಅವರ ಭೂಮಾತಾ ಬ್ರಗೇಡ್ ತೀವ್ರ ಹೋರಾಟ ನಡೆಸಿ ಕಡೆಗು ಯಶಸ್ವಿಯಾಗಿತ್ತು.

ಎಲ್ಲ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ, ಶಬರಿಮಲೈ ವಿವಾದದ ಕೇಂದ್ರ ಬಿಂದುವಾಗಿದೆ. ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನಕ್ಕೆ ಬದ್ಧ ಎಂಬುದಾಗಿ ಕೇರಳ ಸರ್ಕಾರ ಪಟ್ಟು ಹಿಡಿದಿದ್ದರೆ, ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಲಾಗದು ಎಂದು ಮಹಿಳೆಯರೂ ಸೇರಿದಂತೆ ಭಕ್ತರು, ತಂತ್ರಿಗಳು, ಪಂದಳ ರಾಜಕುಟುಂಬ ಪಟ್ಟು ಹಿಡಿದಿದ್ದಾರೆ. ಬಿಜೆಪಿ ನೇತೃತ್ವದ  ಎನ್ ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾತಾಂತ್ರಕ ಮೈತ್ರಿಕೂಟ ಭಕ್ತರ ಹೋರಾಟಕ್ಕೆ ಬೆಂಬಲ ನೀಡಿವೆ.

ಶಬರಿಮಲೈ ವಿವಾದ ಇತ್ಯರ್ಥ ಸಲುವಾಗಿ ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆದ ಸರ್ವ ಪಕ್ಷ ಸಭೆ ವಿಫಲಗೊಂಡಿದೆ. ಬಳಿಕ ವಿಜಯನ್ ಅವರು ತಂತ್ರಿಗಳು ಮತ್ತು ಪಂದಳ ರಾಜ ಕುಟುಂಬದ ಜೊತೆಗೆ ಮಾತುಕತೆ ನಡೆಸಿದ್ದು, ಮಹಿಳೆಯರಿಗೆ ಪ್ರತ್ಯೇಕ ದಿನದಂದು ದೇವಾಲಯ ಭೇಟಿಗೆ ಅವಕಾಶ ಕಲ್ಪಿಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ.

ತಂತ್ರಿಗಳು ಮತ್ತು ರಾಜಕುಟುಂಬ ಸಲಹೆಯನ್ನು ತಿರಸ್ಕರಿಸಿಲ್ಲ, ಆದರೆ ಸಮಾಲೋಚನೆಗೆ ಕಾಲಾವಕಾಶ ಕೋರಿದ್ದಾರೆ ಎಂದು ವರದಿಗಳು ತಿಳಿಸಿವೆ. ತಿರುವಾಂಕೂರು ದೇವಸ್ವಂ ಮಂಡಳಿಗೆ ಸುಪ್ರೀಂಕೋರ್ಟಿನಲ್ಲಿ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಪಂದಳ ರಾಜಕುಟುಂಬ ಮುಖ್ಯಮಂತ್ರಿಗೆ ಸೂಚಿಸಿದೆ.

ಸುಪ್ರೀಂಕೋರ್ಟಿನ ಸೆಪ್ಟೆಂಬರ್ 28 ತೀರ್ಪು ಜಾರಿಗೆ ಕಾಲಾವಕಾಶ ನೀಡವಂತೆ ನ್ಯಾಯಾಲಯವನ್ನು ಕೋರಬಹುದು ಎಂಬ ಸಲಹೆಯನ್ನು ನೀಡುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಪಟ್ಟನ್ನು ಸ್ವಲ್ಪ ಸಡಿಲಿಸಿದ್ದಾರೆ ಎಂದೂ ವರದಿಗಳು ಹೇಳಿವೆ.

Saturday, October 27, 2018

ಶಬರಿಮಲೈ ತೀರ್ಪು ಬೆಂಬಲಿಸಿದ್ದ ಸ್ವಾಮಿ ಆಶ್ರಮದ ಮೇಲೆ ದಾಳಿ


ಶಬರಿಮಲೈ ತೀರ್ಪು ಬೆಂಬಲಿಸಿದ್ದ ಸ್ವಾಮಿ ಆಶ್ರಮದ ಮೇಲೆ ದಾಳಿ

ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಿಸಲು ಅನುಮತಿ ನೀಡಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಬೆಂಬಲಿಸಿದ್ದ ತಿರುವನಂತಪುರದ ಕುಂಡಮನ್ ಕಡಾವೂವಿನಲ್ಲಿರುವ ಸ್ವಾಮಿ ಸಂದೀಪಾನಂದಾ ಗಿರಿ ಅವರ ಆಶ್ರಮದ ಮೇಲೆ ಅಪರಿಚಿತ ವ್ಯಕ್ತಿಗಳು 2018 ಅಕ್ಟೋಬರ್ 27ರ ಶನಿವಾರ ನಸುಕಿನಲ್ಲಿ  ದಾಳಿ ನಡೆಸಿದ ಘಟನೆ ಘಟಿಸಿದೆ.

ಆಶ್ರಮದೊಳಗೆ ನುಗ್ಗಿದ ದುಷ್ಕರ್ಮಿಗಳು ಎರಡು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿರುವುದಾಗಿ ವರದಿ ವಿವರಿಸಿದೆ. ಸ್ವಾಮಿ ಗಿರಿ ಅವರು ಭಗವದ್ಗೀತಾ ಶಾಲೆಯ ನಿರ್ದೇಶಕರಾಗಿದ್ದಾರೆ.


ದಾಳಿಯ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೈ, ತಂಝಾಮೋನ್ ತಂತ್ರಿ ಹಾಗೂ ಪಂದಳಂ ರಾಜಮನೆತನದವರ ಕೈವಾಡ ಇದೆ ಎಂದು ಸ್ವಾಮಿ ಆಪಾದಿಸಿದ್ದಾರೆ.


 ಸಾರ್ವಜನಿಕವಾಗಿ ಯಾರು ಸತ್ಯ ಹೇಳುತ್ತಾರೋ ಅವರನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯರು ಘಟನೆ ಕುರಿತು ಮಾಹಿತಿ ನೀಡಿದ ನಂತರ ತನಗೆ ವಿಷಯ ತಿಳಿಯಿತು ಎಂದು ಸ್ವಾಮಿ ಹೇಳಿರುವುದಾಗಿ ಮಾತೃಭೂಮಿ ದೈನಿಕ ವರದಿ ಮಾಡಿತು.

ಸಂದೀಪಾನಂದ ಗಿರಿ ಸ್ವಾಮಿ ಅವರ ಆಶ್ರಮದ ಮೇಲೆ ನಡೆದಿರುವ ದಾಳಿ ಖಂಡನೀಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ. ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಾಗದಿದ್ದಾಗ ರೀತಿ ದೈಹಿಕ ಹಲ್ಲೆ ನಡೆಸುವ ಪ್ರವೃತ್ತಿ ಹೆಚ್ಚಳವಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಕಾನೂನನ್ನು
ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ಕೊಡುವುದಿಲ್ಲ ಎಂದು ಪಿಣರಾಯಿ ಹೇಳಿದ್ದಾರೆ.

Friday, October 19, 2018

ಶಬರಿಮಲೈ: ದೇವಾಲಯ ಪೂಜಾ ಕೈಂಕರ್ಯ ಕೆಲಕಾಲ ಸ್ಥಗಿತ


ಶಬರಿಮಲೈ: ದೇವಾಲಯ ಪೂಜಾ ಕೈಂಕರ್ಯ ಕೆಲಕಾಲ ಸ್ಥಗಿತ

ಶಬರಿಮಲೈ: ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯದ ಸುಮಾರು 500 ಮೀಟರ್ ಸಮಿಪಕ್ಕೆ ಬಂದಿದ್ದ ಹೈದರಾಬಾದ್ ಮೂಲದ ಮೋಜೋ ಟಿವಿಯ ಕವಿತಾ ಜಾಕ್ಕಲ್ ಮತ್ತು ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಅವರು ದೇವಸ್ಥಾನದ ಮುಖ್ಯತಂತ್ರಿ ದೇಗುಲ ಮುಚ್ಚುವ ಬೆದರಿಕೆ ಹಾಕಿದ ಬಳಿಕ 2018  ಅಕ್ಟೋಬರ್ 19 ಗುರುವಾರ ಹಿಂದಕ್ಕೆ ತೆರಳಬೇಕಾಯಿತು ಮತ್ತು 3ನೇಮಹಿಳೆ ಮೇರಿ ಸ್ವೀಟಿ ಅವರು ಪಂಬಾ ತಲುಪಿದ ಬಳಿಕ ಪ್ರತಿಭಟನೆಗಳ ನಡುವೆ ಯಾತ್ರೆ ಮುಂದುವರೆಸದೆ ಹಿಂದಿರುಗಿದರು.

ಇಬ್ಬರು ಮಹಿಳೆಯರು ಪ್ರತಿಭಟನೆಗಳ ನಡುವೆಯೇ ಪೊಲೀಸ್ ಸರ್ಪಗಾವಲಿನಲ್ಲಿ ದೇವಾಲಯದ ಅತಿ ಸಮೀಪಕ್ಕೆ ತಲುಪಿದಾಗ, ಅದನ್ನು ವಿರೋಧಿಸಿದ ತಂತ್ರಿಗಳ ಅರ್ಚಕ ಸಿಬ್ಬಂದಿ ಪ್ರತಿಭಟನಕಾರರಿಗೆ ಬೆಂಬಲ ಸೂಚಿಸಿ ಪೂಜಾ ಕೈಂಕರ್ಯಗಳನ್ನು ಕೆಲಕಾಲ ಸ್ಥಗಿತಗೊಳಿಸಿ, 18 ಮೆಟ್ಟಿಲುಗಳ ಬುಡದಲ್ಲಿ ಅಯ್ಯಪ್ಪ ಭಜನೆ ಮಾಡುತ್ತಾ ಧರಣಿ ಕುಳಿತರು.

"ಇದು ಅತ್ಯಂತ ನೋವಿನ ದಿನ. ಋತುಮತಿ ವಯಸ್ಸಿನ ಮಹಿಳೆಯರು ದೇವಾಲಯ ಸನ್ನಿಧಾನ ಪ್ರವೇಶಿಸಬೇಡಿ ಎಂದು ಮೊದಲೇ ಮನವಿ ಮಾಡಿದ್ದೇನೆ. ಆದರೂ ಪ್ರವೇಶಿಸಿದರೆ ಗರ್ಭಗುಡಿಯನ್ನು ಮುಚ್ಚಿ ಬೀಗ ಹಾಕಿಕೊಂಡು ಮನೆಗೆ ತೆರಳುತ್ತೇನೆ. ದೇವಸ್ಥಾನದ ವಿಧಿವಿಧಾನಗಳ ಉಲ್ಲಂಘನೆಯಲ್ಲಿ ನಾನು ಪಾಲುದಾರನಾಗಲಾರೆ, ವಿಚಾರದಲ್ಲಿ ನಾನು ಭಕ್ತರ ಜೊತೆಗಿದ್ದೇನೆಎಂದು ಮುಖ್ಯ ತಂತ್ರಿಗಳಲ್ಲಿ ಒಬ್ಬರಾದ ರಾಜೀವರು ಕಂದಾರರು ಸ್ಪಷ್ಟ ಶಬ್ಧಗಳಲ್ಲಿ ಎಚ್ಚರಿಸಿದರು.

ದೇವಾಲಯ ಮುಚ್ಚುವ ಬೆದರಿಕೆಯ ನಂತರ, ಇಬ್ಬರು ಮಹಿಳೆಯರು ಮುಂದಡಿ ಇಡದೆ ಪೊಲೀಸ್ ಭದ್ರತೆಯಲ್ಲೇ ಅಲ್ಲಿಂದ ವಾಪಸಾದರು.

ಇದಕ್ಕೆ ಮುನ್ನ ಪಂದಳ ರಾಜಕುಟುಂಬವು ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ರೂಢಿಗತ ಪೂಜಾ ವಿಧಾನ ಪರಂಪರೆಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ. ಯಾರಾದರೂ ಯುವತಿ ದೇವಾಲಯದ ಅಂಗಳವನ್ನು ಪ್ರವೇಶಿಸಿದರೆ ಅಥವಾ ದೇಗುಲ ಸಮೀಪ ಎಲ್ಲಾದರೂ ರಕ್ತಪಾತವಾಗಿ ಪಾವಿತ್ರಕ್ಕೆ ಧಕ್ಕೆಯಾದರೆ, ತತ್ ಕ್ಷಣ ಗರ್ಭಗುಡಿಯನ್ನು ಮುಚ್ಚುವಂತೆ ರಾಜಕುಟುಂಬವು ತಂತ್ರಿಗಳಿಗೆ ಸಂದೇಶ ನೀಡಿತ್ತು.

ದರೆ  ರನ್ನು ಹಿಂತಿರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪಂದಳ ಅರಮನೆಯ ವ್ಯವಸ್ಥಾಪಕ ಸಮಿತಿ ಕಾರ್ಯದರ್ಶಿ ಪಿ.ಎನ್. ನಾರಾಯಣ ವರ್ಮ ಅವರು ವಿಶೇಷ ದೂತನ ಮೂಲಕ ರಾಜಕುಟುಂಬದ ಸಂದೇಶವನ್ನು ರವಾನಿಸಿರುವುದಾಗಿ ಹೇಳಿದರು.

ಮಧ್ಯೆ ತಿರುವಾಂಕೂರು ದೇವಸ್ವಂ ಮಂಡಳಿಯು ಈದಿನ ತಿರುವನಂತಪುರದಲ್ಲಿ ಸಭೆ ಸೇರಲಿದ್ದು, ಪ್ರತಿಭಟನೆ ಹಿಂತೆಗೆದುಕೊಂಡರೆ, ಬಿಕ್ಕಟ್ಟು ಇತ್ಯರ್ಥಕ್ಕಾಗಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆ ಸೇರಿದಂತೆ ಯಾವುದೇ ರಾಜಿಗೆ ಸಿದ್ಧ ಎಂಬ ಸಂದೇಶವನ್ನು ಮಂಡಳಿ ಅಧ್ಯಕ್ಷ . ಪದ್ಮ ಕುಮಾರ್ ಬುಧವಾರ ರಾತ್ರಿ ನೀಡಿದ್ದರು.

ನಡುವೆ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ನೇತಾರ ರಮೇಶ ಚೆನ್ನಿತ್ತಲ ಕಟು ಪ್ರಹಾರ ನಡೆಸಿದರು. ಯಾರು ಬೇಕಾದರೂ ಬರಲು ಶಬರಿಮಲೈ ಪ್ರವಾಸೀ ತಾಣವಲ್ಲ. ದೇವಸ್ಥಾನ ಭಕ್ತರ ಭಾವನೆಗಳಿಗೆ ನೋವುಂಟು ಮಾಡಬಾರದು ಎಂದು ಅವರು ಹೇಳಿದರು. ಬಿಜೆಪಿ ನಾಯಕರೂ ಸರ್ಕಾರವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡರು.

ಪೊಲೀಸ್ ಬೆಂಗಾವಲಿನೊಂದಿಗೆ ದೇವಾಲಯದತ್ತ ಸಮೀಪಿಸಿದ್ದ ಇಬ್ಬರು ಮಹಿಳೆಯರು ಭಕ್ತರಾಗಿರಲಿಲ್ಲ, ಬದಲಿಗೆ ಸಾಮಾಜಿಕ ಕಾರ್ಯಕರ್ತರಾಗಿದ್ದರು ಎಂಬುದು ಗೊತ್ತಾಗಿದೆ. ಪೊಲೀಸರು ಇದಕ್ಕೆ ಅವಕಾಶ ನೀಡಬಾರದಿತ್ತು. ಭಕ್ತರ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದರು.