2019: ಬ್ಯಾಂಕಾಕ್: ಚೀನಾದಿಂದ ಅಗ್ಗದ ವಸ್ತುಗಳು ಪ್ರವಾಹದೋಪಾದಿಯಲ್ಲಿ ಹರಿದು ಬರಬಹುದು ಎಂಬ ಹಿನ್ನೆಲೆಯಲ್ಲಿ ಭಾರತವು ಹೊಸ ಬೇಡಿಕೆಗಳನ್ನು ಮುಂದಿಟ್ಟ ಪರಿಣಾಮವಾಗಿ ೧೬ ರಾಷ್ಟ್ರಗಳ ಪ್ರಾದೇಶಿಕ
ಸಮಗ್ರ ಆರ್ಥಿಕ ಪಾಲುದಾರಿಕೆ (
ಆರ್
ಸಿಇಪಿ)
ಒಪ್ಪಂದಕ್ಕೆ ಸಹಿ ಬೀಳುವುದು ೨೦೨೦ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ಆಗ್ನೇಯ ಏಷ್ಯಾ ನಾಯಕರ ಕರಡು ಹೇಳಿಕೆಯು 2019
ನವೆಂಬರ್ 03ರ ಭಾನುವಾರ ತಿಳಿಸಿತು. ಭಾರತದಿಂದ
ನ್ಯೂಜಿಲೆಂಡ್
ವರೆಗಿನ ದೇಶಗಳನ್ನು ಒಳಗೊಳ್ಳುವ ಆರ್
ಸಿಇಪಿ ವಾಣಿಜ್ಯ ಒಪ್ಪಂದವು ಜಾಗತಿಕ ಜಿಡಿಪಿಯ ಶೇಕಡಾ ೩೦ರಷ್ಟು ಮತ್ತು ವಿಶ್ವದ ಜನರ ಅರ್ಧದಷ್ಟು ಜನರಿಗೆ ಅನ್ವಯವಾಗಲಿದೆ.
ಭಾರತದ ಆಕ್ಷೇಪಗಳ ಪರಿಣಾಮವಾಗಿ ಬ್ಯಾಂಕಾಕಿಲ್ಲಿ ನಡೆಯುವ ಅಸಿಯಾನ್ ಶೃಂಘಸಭೆಯಲ್ಲಿ ಒಪ್ಪಂದಕ್ಕೆ ಅಂತಿಮ ರೂಪ ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ಒಪ್ಪಂದದ ಪರಿಣಾಮವಾಗಿ ಚೀನಾದ ಅಗ್ಗದ ವಸ್ತುಗಳು ಭಾರತಕ್ಕೆ ಪ್ರವಾಹದೋಪಾದಿಯಲ್ಲಿ ಹರಿದು ಬರಬಹುದು.
ಇದರಿಂದಾಗಿ ದೇಶದ ಸಣ್ಣ ಉದ್ಯಮಕ್ಕೆ ಭಾರೀ ಧಕ್ಕೆ ಆಗಬಲ್ಲುದು ಎಂದು ಭಾರತ ಚಿಂತೆ ವ್ಯಕ್ತಪಡಿಸಿತು. ಪ್ರಧಾನಿ
ನರೇಂದ್ರ ಮೋದಿ ಅವರು ಭಾನುವಾರ ಅಸಿಯಾನ್ ನಾಯಕರ ಸಭೆಯಲ್ಲಿ ತಮ್ಮ ದೇಶದ ಕಳವಳವನ್ನು ಪುನರಾವರ್ತನೆ ಮಾಡಿದರು ಎಂದು ಮೂಲಗಳು ಹೇಳಿದವು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ: ಮುಖ್ಯಮಂತ್ರಿ ಸ್ಥಾನ ಮತ್ತು ಅಧಿಕಾರದ ಸಮಾನ ಹಂಚಿಕೆಗಾಗಿ ಮಿತ್ರ ಪಕ್ಷ ಬಿಜೆಪಿ ಜೊತೆಗಿನ ತನ್ನ ಪಟ್ಟನ್ನು 2019
ನವೆಂಬರ್ 3ರ ಭಾನುವಾರ ಇನ್ನಷ್ಟು ಬಿಗಿಗೊಳಿಸಿದ ಶಿವಸೇನೆಯು,
ಇದೇ ಮೊದಲನೇ ಬಾರಿಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (
ಎನ್
ಸಿಪಿ)
ನಾಯಕ ಅಜಿತ್ ಪವಾರ್ ಅವರಿಗೆ ’
ಮೊಬೈಲ್ ಸಂದೇಶ’ ಕಳುಹಿಸಿತು. ಇದೇ
ವೇಳೆಗೆ ಶಿವಸೇನೆಯು ಮೊದಲು ಸರ್ಕಾರ ರಚಿಸುವುದಿಲ್ಲ ಎಂದು ಸೇನಾ ಮುಖವಾಣಿ ’
ಸಾಮ್ನಾ’ ಸಂಪಾದಕೀಯದಲ್ಲಿ ಬರೆಯಿತು. ಶಿವಸೇನೆಯಿಂದ ತನಗೆ ಮೊತ್ತ ಮೊದಲ ಸಂದೇಶ ಬಂದಿರುವುದನ್ನು ಅಜಿತ್ ಪವಾರ್ ಅವರು ದೃಢ ಪಡಿಸಿದ್ದು,
ಸಂಜಯ್ ರಾವತ್ ಅವರನ್ನು ಸಂಪರ್ಕಿಸುವುದಾಗಿ ಹೇಳಿದರು. ಮುಖ್ಯಮಂತ್ರಿ ಸ್ಥಾನ ಮತ್ತು
ಅಧಿಕಾರದ ಸಮಾನ ಹಂಚಿಕೆಗಾಗಿ ಬಿಜೆಪಿ-
ಶಿವಸೇನೆ ನಡುವಣ ಹಗ್ಗ ಜಗ್ಗಾಟವು ಈದಿನ ೧೦ನೇ ದಿನಕ್ಕೆ ಕಾಲಿರಿಸಿದ್ದು,
ತನ್ನ ಬೇಡಿಕೆ ಈಡೇರಿಕೆಗೆ ಬಿಜೆಪಿ ಸಿದ್ಧವಿಲ್ಲವಾದರೆ ಬೇರೆ ಆಯ್ಕೆಗಳನ್ನು ತಾನು ಪರಿಶೀಲಿಸುವುದಾಗಿ ಹೇಳಿದೆ.
ಕಾಂಗ್ರೆಸ್ ಮತ್ತು ಎನ್
ಸಿಪಿ ಹಾಗೂ ಕೆಲವು ಪಕ್ಷೇತರರ ಜೊತೆಗೆ ಬಹುಮತ ಗಳಿಸಲು ತಾನು ಹೊಂದಬಹುದಾದ ಸಂಖ್ಯಾಬಲವನ್ನು ಉಲ್ಲೇಖಿಸಿದ ಸೇನೆಯ ಮುಖವಾಣಿ ’
ಸಾಮ್ನಾ’,
ಆದರೆ ಸೇನೆಯು ಮೊದಲ ಸರ್ಕಾರ ರಚಿಸುವುದಿಲ್ಲ ಎಂದು ಸಂಪಾದಕೀಯದಲ್ಲಿ ಘೋಷಿಸಿತು. ‘
ರಾಷ್ಟ್ರಪತಿ ಆಳ್ವಿಕೆ ಹೇರುವ ಧೈರ್ಯ ಮಾಡಿ,
ಅಥವಾ ಸದನದಲ್ಲಿ ಬಹುಮತ ಸಾಬೀತು ಪಡಿಸಿ’ ಎಂದು ಸೇನೆಯು ತನ್ನ ಮುಖವಾಣಿಯ ಸಂಪಾದಕೀಯದಲ್ಲಿ ಬಿಜೆಪಿಗೆ ಸವಾಲು ಹಾಕಿತು. ’
ಬಿಜೆಪಿಯು ಸದನದಲ್ಲಿ ಬಹುಮತ ಸಾಬೀತು ಪಡಿಸಲು ವಿಫಲವಾದರೆ ಅಗ ಸೇನೆಯು ಎರಡನೇ
ದೊಡ್ಡ ಪಕ್ಷವಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವುದು’ ಎಂದು
ಸಂಪಾದಕೀಯ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ:
ಬಳಕೆದಾರರ ಮೇಲೆ ಬೇಹುಗಾರಿಕೆ ನಡೆಸುವ ಉದ್ದೇಶಕ್ಕಾಗಿ ನಡೆದ ಫೋನ್ ಕನ್ನದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನೂ ಗುರಿಮಾಡಲಾಗಿತ್ತು ಎಂದು ಕಾಂಗ್ರೆಸ್ ಪಕ್ಷವು 2019
ನವೆಂಬರ್ 03ರ ಭಾನುವಾರ ಗಂಭೀರ ಆರೋಪ ಮಾಡಿತು. ’
ಇದು ಇಲ್ಲದೇ ಇದ್ದುದರ ಕಲ್ಪನೆ ಮಾತ್ರ’ ಎಂದು ಬಿಜೆಪಿ ಇದಕ್ಕೆ ಪ್ರತಿಕ್ರಿಯಿಸಿತು.
ಪ್ರಿಯಾಂಕಾ
ಗಾಂಧಿ ಅವರಿಗೆ ವಾಟ್ಸಪ್
ನಿಂದ ಆಕೆಯ ಫೋನ್ ಹ್ಯಾಕ್ ಬಗ್ಗೆ ’
ಸಂದೇಶ’
(
ಮೆಸ್ಸೇಜ್)
ಬಂದಿತ್ತು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದರು. ‘
ನಿಮ್ಮ
ಫೋನ್
ಗಳು ಹ್ಯಾಕ್ ಆಗಿವೆ ಎಂಬುದಾಗಿ ವಾಟ್ಸಪ್ ಸಂದೇಶಗಳನ್ನು ಕಳಿಸಿತ್ತು.
ಪ್ರಿಯಾಂಕಾ ಗಾಂಧಿ ಅವರ ಫೋನಿಗೂ ಅಂತಹ ಒಂದು ಸಂದೇಶ ಬಂದಿತ್ತು’
ಎಂದು ಸುರ್ಜೆವಾಲ ನುಡಿದರು.
ಹ್ಯಾಕ್
ಗೆ ಗುರಿಯಾದವರ ಪಟ್ಟಿಯಲ್ಲಿ
ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್ ಮತ್ತು ಮಾಜಿ ಲೋಕಸಭಾ ಸದಸ್ಯ ಸಂತೋಷ ಭಾರತೀಯ ಅವರೂ ಇದ್ದರು ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.
ಇಸ್ರೇಲ್ ಸಂಸ್ಥೆಯೊಂದು ವಿಶ್ವಾದ್ಯಂತ ಸುಮಾರು ೧೪೦೦ ಜನರ ಮೇ ಬೇಹುಗಾರಿಕೆ ನಡೆಸುವ
ಸಲುವಾಗಿ ತನ್ನ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ವಾಟ್ಸಪ್ ಆಪಾದಿಸಿತ್ತು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ತಮ್ಮ ಫೋನಿಗೂ ಕನ್ನ ಹಾಕಲಾಗಿದ್ದು ಇದಕ್ಕೆ ತಮ್ಮ ಬಳಿ ಸಾಕ್ಷ್ಯ ಇದೆ ಎಂದು ಹೇಳಿದ್ದರು. ‘
ಇದು ಅತ್ಯಂತ ಗಂಭೀರ ವಿಷಯ.
ಇಬ್ಬರು ರಾಜಕಾರಣಿಗಳು ಈವರೆಗೆ ತಮ್ಮ ಫೋನುಗಳು ಹ್ಯಾಕ್ ಆಗಿರುವ ಬಗ್ಗೆ ಹೇಳಿದ್ದಾರೆ’ ಎಂದು
ಕಾಂಗ್ರೆಸ್ ನಾಯಕ ನುಡಿದರು.
(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯನ್ನು ಕಾಡುತ್ತಿರುವ ವಾಯುಮಾಲಿನ್ಯ ಸ್ಥಿತಿ 2019
ನವೆಂಬರ್ 3ರ ಭಾನುವಾರ ಗಂಭೀರ ಮಟ್ಟಕ್ಕೆ ಹೋಗಿದ್ದು,
ಅತಿಯಾದ ಹೊಗೆ,
ದೂಳಿನ ಮಬ್ಬು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ೩೭ ವಿಮಾನಗಳ ಮಾರ್ಗಗಳನ್ನು
ಬದಲಾಯಿಸಲಾಯಿತು. ರಾಜಧಾನಿಯ ಹಾನಿಕಾರ ಅಂಶಗಳ ಪ್ರಮಾಣ ವಾತಾವರಣದಲ್ಲಿ ಹೆಚ್ಚಿದ್ದರಿಂದ ಗಾಳಿಯಲ್ಲಿನ ಆಮ್ಲಜನಕದ ಪ್ರಮಾಣ ತಗ್ಗಿದ್ದು,
ಉಸಿರಾಟಕ್ಕೆ ಕಷ್ಟಕರವಾಗುವ ಭೀತಿ ಉದ್ಭವವಾಯಿತು. ದಟ್ಟ ಹೊಗೆಯಿಂದಾಗಿ ಅಂದಾಜು ೩೭ ವಿಮಾನಗಳ ಹಾರಾಟ
ಮಾರ್ಗವನ್ನು ಬದಲಿಸಲಾಗಿದೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು. ನಗರದ ಹಲವು ಭಾಗಗಳಲ್ಲಿ ಹೊಗೆಯ ಪದರ ಆವರಿಸಿಕೊಂಡು, ಏನೂ ಕಾಣದಂತಹ ಸ್ಥಿತಿ ನಿರ್ಮಾಣಗೊಂಡಿತು. ಈದಿನ ಮಧ್ಯಾಹ್ನದ
ವೇಳೆಗೆ ದೆಹಲಿಯ ಹಲವು ಪ್ರದೇಶಗಳಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (
ಎನ್ ಸಿಆರ್)
ಮಾಲಿನ್ಯ ಸ್ಥಿತಿ ಸೂಚ್ಯಂಕವು ೧೬೦೦ ಅಂಕಗಳನ್ನು ದಾಟಿದ್ದು ಇದು ಗಂಭೀರ ಅಪಾಯದ ಸೂಚನೆಯಾಗಿದೆ ಎಂದು ವರದಿಗಳು ಹೇಳಿದವು. ಜಹಾಂಗೀರಪುರಿಯಲ್ಲಿ ವಾಯು ಗುಣಮಟ್ಟ ಮಾಪನದಲ್ಲಿ ಸೂಚ್ಯಂಕವು ೧೬೯೦,
ದೆಹಲಿ ವಿಮಾನ ನಿಲ್ದಾಣ ಪ್ರದೇಶದಲ್ಲಿ ೧೧೨೦,
ಗುಡಗಾಂವ್
ನಲ್ಲಿ ೯೯೦
ಮತ್ತು ನೋಯ್ಡಾದಲ್ಲಿ ೧೯೭೪ ಅಂಕಗಳು ದಾಖಲಾದವು. ದೀಪಾವಳಿ ಆಚರಣೆಯ ಬಳಿಕ ದೆಹಲಿ ನಗರ ಪರಿಸರದಲ್ಲಿ ವಾಯು ಗುಣಮಟ್ಟ ಪಾತಾಳಕ್ಕೆ ಇಳಿದಿದೆ.
ಇದು ಕಳೆದ ಐದು ವರ್ಷಗಳಲ್ಲೇ ಅತೀ ಕಳಪೆ ಗುಣಮಟ್ಟವಾಗಿದೆ.
ಈ ವಿಚಾರದಲ್ಲಿ ಕೇಂದ್ರ
ಸರ್ಕಾರ ತತ್ ಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ದೆಹಲಿ
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ರಾಷ್ಟ್ಟೀಯ ರಾಜಧಾನಿ ಪ್ರದೇಶ ಮತ್ತು ದೆಹಲಿ ಸುತ್ತು ಮುತ್ತಣ ಉಪನಗರಗಳಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟ ತಲುಪಿದ ಹಿನ್ನೆಲೆಯಲ್ಲಿ 2019
ನವೆಂಬರ್ 3ರ ಭಾನುವಾರ ತುರ್ತು ಸಭೆ ನಡೆಸಿದ ಕೇಂದ್ರ ಸರ್ಕಾರವು ಸುಡುವಿಕೆಯನ್ನು ಕಡಿಮೆಗೊಳಿಸಿ,
ದೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಸೂಚನೆ ನೀಡಿತು.
ಪ್ರಧಾನ ಮಂತ್ರಿಯವರ ಪ್ರಿನ್ಸಿಪಲ್ ಕಾರ್ಯದರ್ಶಿ ಮತ್ತು ಸಂಪುಟ ಕಾರ್ಯದರ್ಶಿಯವರು ಉನ್ನತ ಮಟ್ಟದ ಸಭೆ ನಡೆಸಿ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದರು.
ದೆಹಲಿಯ ಅಧಿಕಾರಿಗಳಲ್ಲದೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ಪ್ರತಿನಿಧಿಗಳು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಸಭೆಗೆ ಹಾಜರಾದರು.
ಪ್ರಧಾನಿಯವರ ಪ್ರಿನ್ಸಿಪಲ್ ಕಾರ್ಯದರ್ಶಿ ಪಿ.
ಕೆ.
ಮಿಶ್ರ,
ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಸಭೆಯನ್ನು ನಡೆಸಿದರು.
ಸಂಪುಟ ಕಾರ್ಯದರ್ಶಿಯವರು ಈ ರಾಜ್ಯಗಳಲ್ಲಿನ ಪರಿಸ್ಥಿತಿಯ
ಮೇಲೆ ಪ್ರತಿದಿನವೂ ನಿಗಾ ಇಡಬೇಕು ಎಂದು ಸಭೆಯು ನಿರ್ಧರಿಸಿತು.
ಈ ರಾಜ್ಯಗಳ ಮುಖ್ಯ
ಕಾರ್ಯದರ್ಶಿಗಳಿಗೆ ತಮ್ಮ ತಮ್ಮ ರಾಜ್ಯಗಳ ವಿವಿಧ ಜಿಲ್ಲೆಗಳ ಪರಿಸ್ಥಿತಿ ಮೇಲೆ ಪ್ರತಿದಿನವೂ ನಿರಂತರ ನಿಗಾ ಇಟ್ಟುಕೊಳ್ಳುವಂತೆ ಸೂಚನೆ ನೀಡಲಾಯಿತು.
(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಇಸ್ಲಾಮಾಬಾದ್: ಜಮ್ಮು
ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ,
ಜಮು-
ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ ವಿಭಜನೆ ಅಕ್ಟೋಬರ್ ೩೧ರಂದು ಕಾರ್ಯಗತವಾದ ಬಳಿಕ,
ಕೇಂದ್ರ ಸರ್ಕಾರವು ಹಿಂದಿನ ದಿನ ಬಿಡುಗಡೆ
ಮಾಡಿದ ಹೊಸ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-
ಕಾಶ್ಮೀರ ಮತ್ತು ಲಡಾಖ್ ಒಳಗೊಂಡ ಭಾರತದ ಭೂಪಟವು ಪಾಕಿಸ್ತಾನದ ನಿದ್ದೆಗೆಡಿಸಿತು. ಕಾಶ್ಮೀರದ ಸಂಪೂರ್ಣ ಭೂಭಾಗವು ಭಾರತಕ್ಕೇ ಸೇರಿದ್ದು ಎಂದು ಭೂಪಟದಲ್ಲಿ ಚಿತ್ರಿಸಿದ್ದಕ್ಕೆ ಪಾಕಿಸ್ತಾನ 2019
ನವೆಂಬರ್ 3ರ ಭಾನುವಾರ ಆಕ್ಷೇಪ ವ್ಯಕ್ತಪಡಿಸಿತು. ‘
ಇದೊಂದು ಅಸಮರ್ಪಕ ಮತ್ತು ಕಾನೂನುಬದ್ಧವಾಗಿ ಒಪ್ಪಲಾಗದ ನಕ್ಷೆ’ ಎಂದು ಪಾಕಿಸ್ತಾನ ಹೇಳಿತು.
ಭಾರತ ಬಿಡುಗಡೆ ಮಾಡಿದ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಹೊಸ ಕೇಂದ್ರಾಡಳಿತ ಪ್ರದೇಶ ಜಮ್ಮು-
ಕಾಶ್ಮೀರದೊಳಗೆ ಹಾಗೂ ಗಿಲ್ಗಿಟ್ -
ಬಾಲ್ಟಿಸ್ತಾನವನ್ನು ಲಡಾಖ್ ಒಳಗೆ ಸೇರಿಸಿ ಚಿತ್ರಿಸಿದ್ದು,
ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ
ಪಾಕ್ ವಿದೇಶಾಂಗ ಇಲಾಖೆ,
ಇದೊಂದು ಕಾನೂನುಬಾಹಿರ ಕೃತ್ಯ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಸಂಪೂರ್ಣ ಉಲ್ಲಂಘನೆ ಎಂದು ಆರೋಪಿಸಿತು.
ಅಲ್ಲದೆ,
ಈ ಭೂಪಟವನ್ನು ಪಾಕಿಸ್ತಾನವು
ನಿರಾಕರಿಸುತ್ತದೆ ಎಂದೂ ಹೇಳಿತು.
(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ 2019
ನವೆಂಬರ್ 02ರ ಶನಿವಾರ ರಾತ್ರಿ ಸ್ಪಷ್ಟಪಡಿಸಿದರು.
ಬಿಜೆಪಿ
ಜತೆ ಸರ್ಕಾರ ರಚನೆಗೆ ಮುಂದಾಗದ ಶಿವಸೇನೆಗೆ ಎನ್
ಸಿಪಿ-
ಕಾಂಗ್ರೆಸ್ ಮೈತ್ರಿಕೂಟ್ರ ಬೆಂಬಲ ನೀಡಲಿದೆ ಎನ್ನಲಾಗಿತ್ತು.
ಶಿವಸೇನೆ
ಜೊತೆಗೆ ಸೇರಿ ಮೈತ್ರಿ ಸರ್ಕಾರ ರಚಿಸಬಹುದು ಎಂದು ಮಹಾರಾಷ್ಟ್ರದ ಕೆಲವು ಕಾಂಗ್ರೆಸ್ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಶಿವಸೇನೆ ಜತೆಗಿನ ಮೈತ್ರಿ ಬಗ್ಗೆ ಸೋನಿಯಾ ಗಾಂಧಿ ಸ್ಥಳೀಯ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿದ್ದು ಈ ವೇಳೆಯಲ್ಲಿ ಕಾಂಗ್ರೆಸ್
ವಿರೋಧಿ ನಿಲುವು ಹೊಂದಿರುವ ಹಾಗೂ ಬಿಜೆಪಿಯೊಂದಿಗೆ ಚುನಾವಣಾಪೂರ್ಣ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ವರದಿಗಳು ತಿಳಿಸಿದವು. ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ನೇತೃತ್ವದ ತಂಡ ಸೋನಿಯಾ ಗಾಂಧಿಯವರ ಮುಂದೆ ಶಿವಸೇನೆ ಜತೆಗಿನ ಮೈತ್ರಿ ಕುರಿತು ಪ್ರಸ್ತಾಪ ಮಾಡಿತ್ತು.
ಬಾಳಾಸಾಹೇಬ್ ಥೋರಟ್ ಜತೆಗೆ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್,
ವಿಜಯ್ ವಡೇಟ್ಟಿವಾರ್ ಮತ್ತು ಮಣಿಕ್ರಾವ್ ಠಾಕ್ರೆ ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದರು. (
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ಮುಂಬೈ:
ಮುಖ್ಯಮಂತ್ರಿ ಹುದ್ದೆ ಹಾಗೂ ಅಧಿಕಾರದ ಸಮಾನ ಹಂಚಿಕೆಯ ಪಟ್ಟು ಹಿಡಿದಿರುವ ಶಿವಸೇನೆ ತನ್ನ ಪಟ್ಟನ್ನು ಸ್ವಲ್ಪ ಸಡಿಸಿಲಿದ್ದರೂ ಸರ್ಕಾರ ರಚನೆಯ ತಿಕ್ಕಾಟವನ್ನು ಮುಂದುವರೆಸಿವೆ ಎಂಬ ವರದಿಗಳ ಮಧ್ಯೆಯೇ ನ್ಯಾಷನಲಿಸ್ಟ್ ಕಾಂಗ್ರೆಸ್
ಪಕ್ಷದ (
ಎನ್
ಸಿಪಿ)
ಮುಖ್ಯಸ್ಥ ಶರದ್ ಪವಾರ್ ಅವರು 2019
ನವೆಂಬರ್ 02ರ ಶನಿವಾರ ಮಳೆಹಾನಿ ಪ್ರದೇಶಗಳ ತಮ್ಮ ಭೇಟಿಯನ್ನು ದಿಢೀರನೆ ರದ್ದುಪಡಿಸಿ ಮುಂಬೈಗೆ ವಾಪಸಾಗಿ,
ಪಕ್ಷ ಪ್ರಮುಖರ ಸಭೆ ಕರೆದರು. ಶರದ್ ಪವಾರ್ ಅವರು ತಮ್ಮ ದೆಹಲಿ ಭೇಟಿಯನ್ನೂ ಹಿಂದೂಡಿದ್ದಾರೆ ಎಂದು ನಂಬಲಾಗಿದ್ದು,
ದೆಹಲಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾಗಾಂಧಿ ಅವರನ್ನು ಭೇಟಿಯಾಗಲು ತೆರಳುವ ಮುನ್ನವೇ ಮುಂಬೈಯಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ಕರೆದರು. ಶರದ್ ಪವಾರ್ ಅವರು ಶಿವಸೇನೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಬಗ್ಗೆ ಕಾಂಗ್ರೆಸ್
ಮುಖ್ಯಸ್ಥೆ ಜೊತೆಗೆ ಚರ್ಚಿಸಲು ನವೆಂಬರ್ ೪ರ ಸೋಮವಾರ ದೆಹಲಿಗೆ
ತೆರಳಬೇಕಾಗಿತ್ತು.
ಈಗಿನ ವರದಿಗಳ ಪ್ರಕಾರ ಪವಾರ್ ಅವರು ಭಾನುವಾರವೇ ದೆಹಲಿಗೆ ತೆರಳಬಹುದು ಎಂದು ಹೇಳಲಾಯಿತು.ಬೆಳವಣಿಗೆಗಳ ಬಗ್ಗೆ ಅರಿವು ಇರುವ ವ್ಯಕ್ತಿಗಳ ಪ್ರಕಾರ ಶಿವಸೇನೆಯ ಜೊತೆಗೆ ಸರ್ಕಾರ ರಚಿಸಿ ಕಾಂಗ್ರೆಸ್ ಪಕ್ಷದಿಂದ ಪರೋಕ್ಷ ಬೆಂಬಲ ಪಡೆಯುವ ಸಾಧ್ಯತೆಗಳನ್ನು ಎನ್
ಸಿಪಿಯು ಶೋಧಿಸುತ್ತಿದೆ ಎನ್ನಲಾಯಿತು. ಸೇನೆಯ ‘
ಪ್ಲಾನ್ ಬಿ’ ಎಂಬುದಾಗಿ ಬಣ್ಣಿಸಲಾಗಿರುವ ಈ ವ್ಯವಸ್ಥೆಯ ಪ್ರಕಾರ
ಸಣ್ಣ ಪಕ್ಷಗಳು ಮತ್ತು ಪಕ್ಷೇತರರ ಬೆಂಬಲದ ಜೊತೆಗೆ ಸರ್ಕಾರ ರಚನೆಯ ಹಂಚಿಕೆ ರೂಪುಗೊಳ್ಳುತ್ತಿದೆ ಎಂದು
ಹೇಳಲಾಯಿತು. ಪಕ್ಷದ ಕೆಲವು ವಲಯಗಳಲ್ಲಿ ಶಿವಸೇನೆ ಜೊತೆಗೆ ಸರ್ಕಾರ ರಚನೆಗೆ ವಿರೋಧ ಇರುವ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಬಯಸುತ್ತಿಲ್ಲ ಎಂದು ಹೇಳಲಾಯಿತು. (
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ: ಜಮ್ಮು –ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ 2019 ಅಕ್ಟೋಬರ್ 31ರ ಗುರುವಾರ ಅಸ್ತಿತ್ವಕ್ಕೆ ಬಂದಿವೆ. ಇದರೊಂದಿಗೆ ಭಾರತದ ನಕ್ಷೆಯೂ (ಮ್ಯಾಪ್) ಹೊಸದಾಗಿದೆ. ಹೊಸ ನಕ್ಷೆಯನ್ನು ಕೇಂದ್ರ ಸರ್ಕಾರ 2019 ನವೆಂಬರ್ 02ರ ಶನಿವಾರ ಬಿಡುಗಡೆ ಮಾಡಿತು.
ಉಭಯ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಾಗುವುದಕ್ಕೂ ಮುನ್ನ ದೇಶದ ಒಟ್ಟು ರಾಜ್ಯಗಳ ಸಂಖ್ಯೆ 29 ಆಗಿತ್ತು. ಇದರಲ್ಲಿ ಜಮ್ಮು–ಕಾಶ್ಮೀರ ಮತ್ತು ಲಡಾಖ್ ಸಹ ಸೇರಿತ್ತು. ಒಟ್ಟು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 7 ಆಗಿತ್ತು. ಇದೀಗ ರಾಜ್ಯಗಳ ಸಂಖ್ಯೆ 28ಕ್ಕೆ ಇಳಿಕೆಯಾಗಿದೆ. ಹಾಗೆಯೇ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9ಕ್ಕೆ ತಲುಪಿದೆ. ಜಮ್ಮು–ಕಾಶ್ಮೀರ ಪುನರ್ ವಿಂಗಡಣೆ ಕಾಯ್ದೆ 2019ನ್ನು ಸಂಸತ್ತು ಮೂರು ತಿಂಗಳ ಹಿಂದೆ ಆಗಸ್ಟ್ 5ರಂದು ಅಂಗೀಕರಿಸಿತ್ತು. ಅದರ ಅನ್ವಯ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳು ಕಾರ್ಯಾರಂಭ ಮಾಡಿದವು.
(
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ಬ್ಯಾಂಕಾಕ್/ ನವದೆಹಲಿ:
’
ಭಾರತದ ಮೌಲ್ಯಗಳು ಮುಂಬರುವ ವರ್ಷಗಳಲ್ಲಿ ವಿಶ್ವವನ್ನು ರೂಪಿಸುವುದರಲ್ಲಿ ಮಹತ್ವದ ಕಾಣಿಕೆ ಸಲ್ಲಿಸಲಿವೆ’ ಎಂದು
ಥಾಯ್ಲೆಂಡ್ ಭೇಟಿಯ ತಮ್ಮ ಮೊದಲ ದಿನವೇ (2019 ನವೆಂಬರ್ 02ರ ಶನಿವಾರ)
ಪ್ರತಿಪಾದಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಬೆಳೆಯುತ್ತಿರುವ ಪ್ರಭಾವವನ್ನು ಸಂಭ್ರಮಿಸಿದರು. ‘
ಇದು ಥಾಯ್ಲೆಂಡಿಗೆ ನನ್ನ ಮೊದಲ ಅಧಿಕೃತ ಭೇಟಿ.
ಇಲ್ಲಿ ಭಾರತೀಯತೆಯ ಅಗಾಧ ಅನುಭವ ನನಗೆ ಆಗುತ್ತಿದೆ.
ಇಡೀ ವಿಶ್ವವೇ ಭಾರತದ ಜೊತೆಗೆ ದೀಪಾವಳಿಯನ್ನು ಆಚರಿಸಿದೆ,
ಇಲ್ಲಿ ಕೂಡಾ ಅದೇ ಮರುಕಳಿಸಿರುವುದು ನನಗೆ ಕಾಣುತ್ತಿದೆ’ ಎಂದು
ಬ್ಯಾಂಕಾಕಿನಲ್ಲಿ ’
ಸ್ವಾಸ್ದೀ ಪಿಎಂ ಮೋದಿ’ ಸಮಾರಂಭದಲ್ಲಿ ಭಾರತೀಯ ಸಮುದಾಯದ ಸದಸ್ಯರ ಜೊತೆ ಸಂವಹನ ನಡೆಸುತ್ತಾ ಮೋದಿ ಹೇಳಿದರು.
ಥಾಯ್ಲೆಂಡ್ ಜೊತೆಗೆ ಭಾರತವು ಪ್ರಬಲ ಬಾಂಧವ್ಯವನ್ನು ಹೊಂದಿದೆ.
ರಾಣಿ ಮಹಾಚಕ್ರಿ ಸಿರಿಂಧೋರ್
ನ್ ಅವರು ಕೂಡಾ
ಸಂಸ್ಕೃತ ವಿದ್ವಾಂಸರಾಗಿದ್ದು ಭಾರತದೊಂದಿಗೆ ಆಳವಾದ ಬಾಂಧವ್ಯ ಹೊಂದಿದ್ದರು ಎಂದು ಪ್ರಧಾನಿ ನುಡಿದರು. ‘
ಗೆಳೆಯರೇ,
ನಮ್ಮ ಬಾಂಧವ್ಯವು ಭಾರತದ ಜೊತೆಗೆ ಇಷ್ಟೊಂದು ಪ್ರಬಲವಾಗಿರುವುದು ಹೇಗೆ?
ಇದಕ್ಕೆ ಕಾರಣವೇನು ಎಂದು ಯೋಚಿಸಿದ್ದೀರಾ?
ಇದಕ್ಕೆ ಸರಳವಾದ ಉತ್ತರ ಇದೆ:
ನಮ್ಮ ಬಾಂಧವ್ಯವು ಸರ್ಕಾರಗಳ ನಡುವೆ ಇರುವ ಬಾಂಧವ್ಯ ಅಲ್ಲ.
ಇತಿಹಾಸದ ಮೂಲಕ ಬೆಸೆದಿರುವ ಬಾಂಧವ್ಯ ಅದು.
ಏಕೆಂದರೆ ಪ್ರತಿಯೊಂದು ಚಾರಿತ್ರಿಕ ಘಟನೆಯೂ ನಮ್ಮ ಬಾಂಧವ್ಯಗಳನ್ನು ಹೊಸ ಎತ್ತರಕ್ಕೆ ಏರಿಸಿದೆ’ ಎಂದು ಪ್ರಧಾನಿ ಹೇಳುತ್ತಿದ್ದಂತೆಯೇ ಜನ ಸಮೂಹವು ’
ಮೋದಿ,
ಮೋದಿ’ ಮಂತ್ರದೊಂದಿಗೆ
ಸ್ಪಂದಿಸಿತು. ‘
ನೀವು ನನ್ನನ್ನು
ಸ್ವಾಸ್ದೀ ಮೋದಿ ಎಂಬುದಾಗಿ
ಹರಸಿದಿರಿ.
ಆದರೆ ಅದರ ಅರ್ಥ ಏನು ಎಂಬುದು ನಿಮಗೆ ಗೊತ್ತಿದೆಯೇ?
ಇದು ಸಂಸ್ಕೃತ ಪದ-
ಸು ಮತ್ತು ಅಸ್ತಿ
ಪದಗಳ ಜೋಡಣೆ- ’
ಸ್ವಸ್ತಿ’ ಇದರ ಅರ್ಥ ’
ಕಲ್ಯಾಣ’ ಎಂಬುದಾಗಿ ಮೋದಿ ವಿವರಿಸಿದರು. (
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ: ರಾಷ್ಟ್ರದ
ರಾಜಧಾನಿ ಪ್ರದೇಶದ ವಾಯುಮಾಲಿನ್ಯ ವಿಷಮ ಸ್ಥಿತಿಗೆ ತಲುಪಿದ ಸಂದರ್ಭದಲ್ಲೇ ಕಾಕತಾಳೀಯವಾಗಿ ದೆಹಲಿಗೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ ಜರ್ಮನ್ ಚಾನ್ಸಲರ್ ಅಂಗೇಲಾ ಮರ್ಕೆಲ್ ಅವರು ಡೀಸೆಲ್ ಚಾಲಿತ ಬಸ್ಸುಗಳನ್ನು ವಿದ್ಯುತ್ ಚಾಲಿತ ಬಸ್ಸುಗಳಾಗಿ ಪರಿವರ್ತಿಸುವ ಮೂಲಕ ವಾಯುಮಾಲಿನ್ಯ ತಡೆಗಟ್ಟುವಂತೆ 2019
ನವೆಂಬರ್ 02ರ ಶನಿವಾರ ಇಲ್ಲಿ ಸಲಹೆ
ಮಾಡಿದರು.
ಜರ್ಮನಿ -
ಭಾರತ ಸಹಭಾಗಿತ್ವ ಯೋಜನೆಗಳ ಅಂಗವಾಗಿ ಭಾರತದಲ್ಲಿ ಪರಿಸರ ಮಿತ್ರ ಹಸಿರು ಸಂಚಾರಕ್ಕೆ ಮುಂದಿನ ಐದು ವರ್ಷಗಳಲ್ಲಿ ಒಂದು ಬಿಲಿಯನ್ ಯೂರೋ ಅಂದರೆ ಪ್ರಸ್ತುತ ವಿನಿಮಯ ದರದಲ್ಲಿ ಸುಮಾರು ೮೦೦೦
ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುವುದಾಗಿ ವಚನ ನೀಡಿದರು.
ತಮಿಳುನಾಡಿನ ಬಸ್ಸುಗಳ ರಂಗದಲ್ಲಿ ಸುಧಾರಣೆಗಾಗಿಯೂ ನಾವು ೨೦೦ ಮಿಲಿಯನ್ ಯೂರೋಗಳನ್ನು ನಿಗದಿ ಪಡಿಸಿದ್ದೇವೆ.
ದೆಹಲಿಯು ಶುಕ್ರವಾರ ಎದುರಿಸಿದ ವಾಯುಮಾಲಿನ್ಯವನ್ನು ಕಂಡ ಯಾರೇ ಆದರೂ ಡೀಸೆಲ್ ಚಾಲಿತ ಬಸ್ಸುಗಳನ್ನು ವಿದ್ಯುತ್ ಚಾಲಿತ ಬಸ್ಸುಗಳಾಗಿ ಮಾರ್ಪಡಿಸುವುದು ಅತ್ಯುತ್ತಮ ಎಂದು ಅರಿತುಕೊಳ್ಳಬಲ್ಲರು ಎಂದು ಮರ್ಕೆಲ್ ಹೇಳಿದರು.
ರಾಷ್ಟ್ರೀಯ ರಾಜಧಾನಿ ಪ್ರದೇಶವು (
ಎನ್
ಸಿಆರ್)
ಕಳೆದ ಎರಡು ವರ್ಷಗಳ ಅವಧಿಯಲ್ಲೇ ಅತ್ಯಂತ ಗರಿಷ್ಠ ವಾಯುಮಾಲಿನ್ಯವನ್ನು ಶುಕ್ರವಾರ ಅನುಭವಿಸಿತ್ತು.
ವಾಯು ಗುಣಮಟ್ಟ ಸೂಚ್ಯಂಕವು ಸಂಜೆ ೪ ಗಂಟೆಯ ವೇಳೆಗೆ
೪೮೪ಕ್ಕೆ ತಲುಪಿತ್ತು. (
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ: ದೆಹಲಿಯ
ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಮತ್ತು ವಕೀಲರ ನಡುವೆ 2019
ನವೆಂಬರ್ 02ರ ಶನಿವಾರ ಘರ್ಷಣೆಯಲ್ಲಿ
ಓರ್ವ ವಕೀಲ ತೀವ್ರ ಗಾಯಗೊಂಡರು.
ಶನಿವಾರ ಮಧ್ಯಾಹ್ನ ನ್ಯಾಯಲಯದ ಆವರಣದಲ್ಲಿ ಪಾರ್ಕಿಂಗ್ ವಿಚಾರವಾಗಿ ಪೊಲೀಸ್ ಮತ್ತು ವಕೀಲರ ನಡುವೆ ಈ ಘರ್ಷಣೆ ನಡೆದಿದ್ದು,
ಗೋಲಿಬಾರ್ ಮಾಡಲಾಗಿದ್ದು,
ಪೊಲೀಸರ ಗುಂಡೇಟಿಗೆ ವಕೀಲರು ಗಾಯಗೊಂಡಿದ್ದು,
ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವರದಿ ತಿಳಿಸಿತು.
ಕೋರ್ಟ್ ಆವರಣದೊಳಗೆ ಆಗಮಿಸುವಾಗ ಪೊಲೀಸರ ವಾಹನ ವಕೀಲರಿಗೆ ಗುದ್ದಿತು.
ಈ ವೇಳೆ ಪೊಲೀಸರ ವಿರುದ್ಧ ವಕೀಲರು ಕಿರುಚಾಡಿದರು.
ಆಗ ಪೊಲೀಸರು ವಕೀಲರನ್ನು
ವಾಹನದೊಳಗೆ ಹಾಕಿ ಹಿಗ್ಗಾಮುಗ್ಗಾ ಥಳಿಸಿದರು.
ಒಟ್ಟು ಆರು ಮಂದಿ ಪೊಲೀಸರು ವಕೀಲರಿಗೆ ಮನಬಂದತೆ ಥಳಿಸಿದರು ಎಂದರು ತೀಸ್ ಹಜಾರಿ ಅಸೊಸಿಯೇಷನ್ ಪದಾಧಿಕಾರಿ ಜೈ ಬಿಸ್ವಾಲ್ ಆಪಾದಿಸಿದರು.
ಘಟನಾ ಸ್ಥಳಕ್ಕೆ ಯಾರನ್ನೂ ಬಿಡುತ್ತಿಲ್ಲ.
ಸ್ಥಳೀಯ ಪೊಲೀಸರು ನಮ್ಮನ್ನು ಕೋರ್ಟ್ ಆವರಣದೊಳಗೆ ಬಿಡದೇ ತಡೆಯುತ್ತಿದ್ದಾರೆ.
ಈ ವಿಚಾರ ನಾವು
ದೆಹಲಿ ಹೈಕೋರ್ಟಿಗೆ ತಿಳಿಸಿದ್ದೇವೆ.
ಆರು ಮಂದಿ ವಕೀಲರನ್ನು ಒಳಗೊಂಡ ನಿಯೋಗ
ಹೈಕೋರ್ಟಿಗೆ ತೆರಳಿದೆ ಎಂದು ಜೈ ಬಿಸ್ವಾಲ್ ತಿಳಿಸಿದರು.
ಇನ್ನೊಂದೆಡೆ ವಾಹನ ಪಾರ್ಕಿಂಗ್ ವಿಚಾರಕ್ಕೆ ಪೊಲೀಸರು ಮತ್ತು ವಕೀಲರ ಮಧ್ಯೆ ಕೋರ್ಟ್ ಆವರಣದಲ್ಲೇ ವಾಗ್ವಾದ ನಡೆದು,
ಹಿಂಸಾಚಾರಕ್ಕೆ ತಿರುಗಿದ್ದು,
ಪೊಲೀಸರು ಮತ್ತು ವಕೀಲರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. (
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
