Showing posts with label ಯುಗಾದಿ. Show all posts
Showing posts with label ಯುಗಾದಿ. Show all posts

Wednesday, April 15, 2026

PARYAYA: ಸೌರಮಾನ ಯುಗಾದಿ ʼವಿಶು-ಕಣಿʼ ಆಚರಣೆ

ಸೌರಮಾನ ಯುಗಾದಿ ʼವಿಶು-ಕಣಿʼ ಆಚರಣೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ  ೨೦೨೬ ಏಪ್ರಿಲ್‌ ೧೫ರ ಬುಧವಾರ ಸೌರಮಾನ ಯುಗಾದಿ ʼವಿಶು-ಕಣಿʼಯನ್ನು ಆಚರಿಸಲಾಯಿತು.

ಬೆಳಗ್ಗೆಯೇ ಸಮೃದ್ಧಿಯ ಸಂಕೇತವಾದ  ಹಲ-ಫಲ, ಹಣ್ಣುಗಳು, ತರಕಾರಿ, ಹೂ, ನಾಣ್ಯಗಳನ್ನು ಒಳಗೊಂಡ ʼವಿಶು-ಕಣಿʼ ದರ್ಶನ ವ್ಯವಸ್ಥೆ ಮಾಡಲಾಗಿತ್ತು.


ಶ್ರೀಮತಿ ಶ್ರೀವಿದ್ಯಾ ಡಿ. ಕಾರ್ತಿಕ್‌ ಮತ್ತು ಕುಟುಂಬದವರು ಶ್ರೀ ದೇವರಿಗೆ ವಸ್ತ್ರಾಲಂಕಾರ, ಕೆ.ಪಿ. ಸುಗುಣನ್‌ ಮತ್ತು ಕುಟುಂಬದವರು ʼಕಣಿ-ದರ್ಶನʼ ಹಾಗೂ ವಿಶೇಷ ಅಪ್ಪಂ ಪ್ರಸಾದ, ನೆತ್ರಕೆರೆ ಉದಯಶಂಕರ ನಾರಾಯಣ ಭಟ್‌ ಮತ್ತು ಕುಟುಂಬದವರು ನಾಣ್ಯ ಸೇವೆ, ಶ್ರೀಮತಿ ಉಮಾ ಜಯಶಂಕರ್‌ ಮತ್ತು ಕುಟುಂಬದವರು ಸಂಜೆಯ ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಶ್ರೀ ದೇವರಿಗೆ ಅಭಿಷೇಕ ವಿಶೇಷ ಅಲಂಕಾರದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದ ಕೆಲವು ಫೋಟೋ ಹಾಗೂ ವಿಡಿಯೋಗಳು ಇಲ್ಲಿವೆ. ಮಹಾಮಂಗಳಾರತಿವಿಡಿಯೋ ನೋಡಲು ಕೆಳಗಿನ ಚಿತ್ರ  ಕ್ಲಿಕ್‌ ಮಾಡಿ. ಇತರ ವಿಡಿಯೋಗಳನ್ನು ನೋಡಲು ಅವುಗಳನ್ನು ಕ್ಲಿಕ್‌ ಮಾಡಿ.


PARYAYA: ಸೌರಮಾನ ಯುಗಾದಿ ʼವಿಶು-ಕಣಿʼ ಆಚರಣೆ: ಸೌರಮಾನ ಯುಗಾದಿ ʼ ವಿಶು-ಕಣಿʼ ಆಚರಣೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ   ೨೦೨೬ ಏಪ್ರಿ...

Thursday, March 19, 2026

PARYAYA: ಯುಗಾದಿ ಉತ್ಸವ ಆಚರಣೆ

 ಯುಗಾದಿ ಉತ್ಸವ ಆಚರಣೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ಸೇವಾ ಸಮಿತಿಯ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ೨೦೨೬ ಮಾರ್ಚ್‌ ೧೯ರ ಗುರುವಾರ ಪರಾಭವ ಸಂವತ್ಸರದ ಯುಗಾದಿ ಉತ್ಸವವನ್ನು ಸಡಗರದೊಂದಿಗೆ ಆಚರಿಸಲಾಯಿತು.

ಹೊಸ ವರ್ಷದ ಸಲುವಾಗಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ಹಾಗೂ ಸಪರಿವಾರ ದೇವರನ್ನು ವಿಶೇಷವಾಗಿ ಹೂ ಹಾರಗಳಿಂದ ಅಲಂಕರಿಸಲಾಗಿತ್ತು.

ಪುಷ್ಪಾಲಂಕಾರ ಸೇವೆಯನ್ನು ಶ್ರೀ ಮುನಿರಾಜು ಮತ್ತು ಕುಟುಂಬ, ವಸ್ತ್ರ ಸೇವೆಯನ್ನು ಶ್ರೀ ನಾರಾಯಣ ಸ್ವಾಮಿ ಮತ್ತು ಕುಟುಂಬದವರು ಕೈಗೊಂಡಿದ್ದರು. ದೇವಾಲಯದ ಅರ್ಚಕ ಶ್ರೀ ನಾಗೇಂದ್ರ ಭಟ್‌ ಅವರು ಪಂಚಾಂಗದ ಫಲಾಫಲಗಳನ್ನು ವಿವರಿಸಿ, ಬಳಿಕ ಪೂಜಾ ಕೈಂಕರ್ಯ ನೆರವೇರಿಸಿದರು.

ಭಕ್ತರಿಂದ ಭಜನಾ ಸೇವೆ ನಡೆಯಿತು. ಬೇವು-ಬೆಲ್ಲ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದ ವಿಡಿಯೋ, ಕೆಲವು ಚಿತ್ರಗಳು ಇಲ್ಲಿವೆ. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಯುಗಾದಿ ಉತ್ಸವ ಆಚರಣೆ:   ಯುಗಾದಿ ಉತ್ಸವ ಆಚರಣೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ಸೇವಾ ಸಮಿತಿಯ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇ...