Showing posts with label ಮಿನಿ ವಿಧಾನಸೌಧ. Show all posts
Showing posts with label ಮಿನಿ ವಿಧಾನಸೌಧ. Show all posts

Saturday, June 6, 2026

PARYAYA: ಬ್ರಹ್ಮಾವರದಲ್ಲಿ ವಿಶ್ವ ಪರಿಸರ ದಿನ

ಬ್ರಹ್ಮಾವರದಲ್ಲಿ ವಿಶ್ವ ಪರಿಸರ ದಿನ 


ಡುಪಿ ಜಿಲ್ಲೆಯ ಬ್ರಹ್ಮಾವರದ ಮಿನಿ ವಿಧಾನಸೌಧದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ೨೦೨೬ ಜೂನ್‌ -೫ರ ಶುಕ್ರವಾರ ಆಚರಿಸಲಾಯಿತು. ಬ್ರಹ್ಮಾವರ ಜಯಂಟ್ಸ್‌ ಗ್ರೂಪ್‌ ವತಿಯಿಂದ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶ್ರೀಮತಿ ಅನುಷಾ ಭಟ್‌ ನೆತ್ರಕೆರೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪರಿಸರ ಸಂರಕ್ಷಣೆ ಮತ್ತು ಗಿಡ ನೆಡುವಿಕೆಯ ಮಹತ್ವವನ್ನು ವಿವರಿಸಿದರು. ಬ್ರಹ್ಮಾವರ ಉಪ ತಹಶೀಲ್ದಾರ್‌ ಶ್ರೀ ಅಶೋಕ ಎನ್‌ ಭಟ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಹೇಗೆ ಮಹತ್ವ ಪೂರ್ಣ ಎಂದು ವಿವರಿಸಿದರು. ಈ ಸಂದರ್ಭದ ಚಿತ್ರಗಳು ಹಾಗೂ ಸ್ಥಳೀಯ PublicNext  ವೆಬ್‌ ಸೈಟ್‌ ಪುಟಗಳಲ್ಲಿ ಬಂದ ವರದಿ, ವಿಡಿಯೋ ಇಲ್ಲಿದೆ. 
ವರದಿಗಳ ಸಮೀಪ ನೋಟಕ್ಕೆ ಮೇಲಿನ ಬರಹ ಚಿತ್ರಗಳನ್ನು ಕ್ಲಿಕ್‌ ಮಾಡಿ.  ಪರ್ಯಾಯ.ಕಾಮ್ ವೆಬ್‌ ಸೈಟಿನ ʼವಾಟ್‌-ಸುದ್ದಿʼ ಪುಟ ಕ್ಲಿಕ್‌ ಮಾಡಿ.
PARYAYA: ವಿಶ್ವ ಪರಿಸರ ದಿನ: ಬ್ರಹ್ಮಾವರದಲ್ಲಿ ವಿಶ್ವ ಪರಿಸರ ದಿನ  ಉ ಡುಪಿ ಜಿಲ್ಲೆಯ ಬ್ರಹ್ಮಾವರದ ಮಿನಿ ವಿಧಾನಸೌಧದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ೨೦೨೬ ಜೂನ್‌ -೫ರ ಶುಕ್ರವಾರ ಆಚರಿಸಲಾ...