Showing posts with label ಗುಂಡಿನ ಘರ್ಷಣೆ. Show all posts
Showing posts with label ಗುಂಡಿನ ಘರ್ಷಣೆ. Show all posts

Thursday, November 22, 2018

ಕಾಶ್ಮೀರ ಗುಂಡಿನ ಘರ್ಷಣೆ: 6 ಉಗ್ರರ ಹತ್ಯೆ


ಕಾಶ್ಮೀರ ಗುಂಡಿನ ಘರ್ಷಣೆ: 6 ಉಗ್ರರ ಹತ್ಯೆ

ಶ್ರೀನಗರ: ದಕ್ಷಿಣ ಕಾಶ್ಮೀರದ ಬಿಜ್ ಬೆಹರಾ ಪ್ರದೇಶದಲ್ಲಿ ಭದ್ರತಾ ಪಡೆಗಳ ಜೊತೆ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ 6 ಮಂದಿ ಉಗ್ರಗಾಮಿಗಳು 2018 ನವೆಂಬರ್ 23 ಶುಕ್ರವಾರ ಹತರಾದರು.

ಭಾರತೀಯ ಸೇನೆ ಮತ್ತು ರಾಜ್ಯ ಪೊಲೀಸರ ಕಾರ್ಯಾಚರಣೆ ಪ್ರಾರಂಭಿಸಿದ ಬಳಿಕ ಉಗ್ರಗಾಮಿಗಳು ಭದ್ರತಾ ಪಡೆಗಳ ಜೊತೆ ಗುಂಡಿನಘರ್ಷಣೆ ಆರಂಭಿಸಿದ್ದರು.

"ಗುಂಡಿನ ಘರ್ಷಣೆ ಸಂಭವಿಸಿದ ಸ್ಥಳದಲ್ಲಿ  ಸಮರದಲ್ಲಿ ಬಳಸುವಂತಹ ಸೊತ್ತುಗಳ ಸಂಗ್ಹವನ್ನು ನಾವು ವಶ ಪಡಿಸಿಕೊಂಡಿದ್ದೇವೆಎಂದು ಸೇನಾ ವಕ್ತಾರ ರಾಜೇಶ್ ಕಾಲಿಯಾ ಹೇಳಿದರು.

ಘರ್ಷಣೆ- ಕಾರ್ಯಾಚರಣೆ ಇನ್ನು ಮುಂದುವರೆದಿದೆ ಎಂದು ಅಧಿಕಾರಿಗಳು ಅಧಿಕಾರಿಗಳು ತಿಳಿಸಿದ್ದಾರೆ.

ಆರು ಅಥವಾ ಏಳು ಉಗ್ರಗಾಮಿಗಳು  ಸೀಕ್ಪೋರಾ  ಹಳ್ಳಿಯಲ್ಲಿ ಅಡಗಿಕೊಂಡಿದ್ದಾರೆ ಎಂಬ ವಿಶ್ವಸನೀಯ ಮಾಹಿತಿಯ ಮೇರೆಗೆ ಸ್ಥಳಕ್ಕೆ ಮುತ್ತಿಗೆ ಹಾಕಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು ಎಂದು ಅವರು ಹೇಳಿದರು.

ಇದಕ್ಕೆ ಮುನ್ನ ಇನ್ನೊಂದು  ಘಟನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ  ಕುಲಗಂ ಖುದ್ವಾನಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಘರ್ಷಣೆ  ಸಂಭವಿಸಿ, ಒಬ್ಬ ನಾಗರಿಕ ಮೃತನಾಗಿದ್ದು, ಹಲವರು ಗಾಯಗೊಂಡಿದ್ದರು.

ಗಾಯಾಳುಗಳೆಲ್ಲರನ್ನೂ  ಆಸ್ಪತ್ರೆಗೆ ಸೇರಿಸಲಾಗಿದ್ದು, ಶೋಧ ಕಾರ್ಯಾಚರಣೆಗಾಗಿ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿವೆ.

ನವೆಂಬರ್ ೧೮ ರಂದು ಸಂಭವಿಸಿದ್ದ ಘಟನೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಶೊಪಿಯಾನ್ ಜಿಲ್ಲೆಯ ಜೈನಪೊರಾ ಗ್ರಾಮದ ರೆಬ್ಬಾನ್  ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಸಂಭವಿಸಿ  ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ಉಗ್ರಗಾಮಿಗಳು ೧೯ ವರ್ಷದ ಹದಿಹರೆಯದ ಯುವಕನನ್ನು ಅಪಹರಿಸಿ ಕೊಂದ ಘಟನೆಯ ಬಳಿಕ  ಗುಂಡಿನ ಘರ್ಷಣೆ ಸಂಭವಿಸಿತ್ತು.

ಭಯೋತ್ಪಾದಕರು ಪ್ರದೇಶದಲ್ಲಿ ಅವಿತಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ಲಭಿಸಿದ್ದನ್ನು ಅನುಸರಿಸಿ ಪ್ರದೇಶಕ್ಕೆ ಮುತ್ತಿಗೆ ಹಾಕಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.

"ಶೋಧ ಕಾರ್ಯಾಚರಣೆಯು ನಡೆಯುತ್ತಿದ್ದಾಗ ಅಡಗಿದ್ದ ಭಯೋತ್ಪಾದಕರು ಗುಂಡು ಹಾರಿಸಿದರು. ಭದ್ರತಾ ಸಿಬ್ಬಂದಿಯೂ  ಗುಂಡಿನ ಉತ್ತರ ನೀಡಿದರು. ಬಳಿಕ ನಡೆದ ಗುಂಡಿನ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾದರು.  ಘಟನಾ ಸ್ಥಳದಲ್ಲಿ ಸತ್ತ ಭಯೋತ್ಪಾದಕರ ಶವ ಪತ್ತೆ ಹಚ್ಚಲಾಗಿದ್ದು, ಗುರುತು ಪತ್ತೆಗೆ ಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.