Showing posts with label ಹಸು. Show all posts
Showing posts with label ಹಸು. Show all posts

Sunday, November 28, 2021

PARYAYA: ಹಸುವು ನಕ್ಕಿತು…ಏಕೆ..?

ಹಸುವು ನಕ್ಕಿತು…ಏಕೆ..?

 ಹಸುವು ನಕ್ಕಿತು…ಏಕೆ..?


ಕಸಾಯಿಖಾನೆಯಲ್ಲಿ ಒಬ್ಬ ಕಟುಕ ಹಸುವನ್ನು ಕೊಲ್ಲಲು ಬಂದಾಗ
ಹಸುವು ಕಟುಕನನ್ನು ನೋಡಿ ನಗುತ್ತಿತ್ತು.

ಇದನ್ನ ನೋಡಿ ಕಟುಕ ಹೇಳಿದ…

‘ನಾನು ನಿನ್ನನ್ನು ಕೊಲ್ಲಲು ಬಂದಿದ್ದೇನೆ. ಅದನ್ನು ತಿಳಿದು ನೀನು ಏಕೆ ಹೀಗೆ
ನಗುತ್ತಾ ಇದ್ದೀಯ?’

ಹಸು ಹೇಳಿತು:
‘ನಾನು ಯಾವತ್ತಿಗೂ ಮಾಂಸವನ್ನು ತಿಂದಿಲ್ಲ, ಹಾಗಿದ್ದೂ ನನ್ನ ಸಾವು ಇಷ್ಟು ಘೋರವಾಗಿದೆ.

 ತಪ್ಪು ಮಾಡದ, ಯಾರಿಗೂ ಕೆಡಕು ಮಾಡದ
ನನ್ನನ್ನು ನೀನು ಕೊಂದು
ನನ್ನ
ಮಾಂಸವನ್ನು ತಿನ್ನುವೆಯಲ್ಲ?
ನಿನ್ನ
ಸಾವು ಎಷ್ಟು  ಘೋರವಾಗಿರುವುದೋ ಎನ್ನುವುದನ್ನು ಯೋಚಿಸಿ
ನಾನು ನಗುತ್ತಿದ್ದೇನೆ….

ಹಾಲು ಕೊಟ್ಟು ನಿಮ್ಮನ್ನು ಬೆಳೆಸಿದೆ, ನಿಮ್ಮ
ಮಕ್ಕಳಿಗೂ ಹಾಲು ಕೊಡುತ್ತಿದ್ದೀನೆ.,ಆದರೆ
ನಾನು ತಿನ್ನುತ್ತಿದ್ದದ್ದು ಹುಲ್ಲು ಮಾತ್ರ.

 ಹಾಲಿನಿಂದ ಬೆಣ್ಣೆ ಮಾಡಿಕೊಂಡಿರಿ, ಬೆಣ್ಣೆಯಿಂದ

ತುಪ್ಪ ಮಾಡಿಕೊಂಡಿರಿ,

ಸಗಣಿಯಿಂದ ಬೆರಣಿ

ಮಾಡಿಕೊಂಡಿರಿ,

ಸಗಣಿ ಮತ್ತು ಗಂಜಲದಿಂದ ನಿಮ್ಮ ಜಮೀನಿನ

ಭೂಮಿಯನ್ನು ಹಸನು ಮಾಡಿಕೊಂಡಿರಿ,

 ಭೂಮಿಯಲ್ಲಿ ಒಳ್ಳೆಯ ಬೆಳೆ ಬೆಳೆದಿರಿ,
ಆದರೆ
ನನಗೆ ಕೊಡುತ್ತಿದ್ದದ್ದು ಮಾತ್ರ
ಹಾಳಾಗಿ ಕೊಳೆತು ಹೋದ ತರಕಾರಿಗಳನ್ನ. !

ನನ್ನ ಸಗಣಿಯಿಂದ ಗೋಬರ್ ಗ್ಯಾಸ್
ತಯಾರಿಸಿ ನಿಮ್ಮ ಮನೆಯನ್ನು
ಕತ್ತಲಿನಿಂದ ಬೆಳಕು ಮಾಡಿಕೊಂಡಿರಿ,

ಆದರೆ
ನನನ್ನೇ ಕುರುಡನಂತೆ ಕೊಲ್ಲಲು ಬಂದಿರುವೆ,

ಹಾಲಿನಿಂದ ಸಿಕ್ಕ
ಶಕ್ತಿಯಿಂದ ನನ್ನನ್ನು ಕೊಲ್ಲಲು ಆಯುಧ ಎತ್ತಿರುವೆ,
ಆ ಆಯುಧವನ್ನು ಹಿಡಿಯುವ ಶಕ್ತಿ
ನಿನಗೆ ಬಂದದ್ದು ನನ್ನಿಂದಲೇ.

ನನ್ನಿಂದ ಒಳ್ಳೆಯ
ಆದಾಯವನ್ನು ಮಾಡಿಕೊಂಡು
ಮನೆ ಮಾಡಿಕೊಂಡೆ,

ಆದರೆ,
ನನ್ನನ್ನು ಮಾತ್ರ ಮನೆಯಿಂದ ಹೊರಗೆ
ಒಂದು ಗುಡಿಸಿಲಿನಲ್ಲಿರಿಸಿದೆ.

ನಿಮ್ಮ ಹೆತ್ತ ತಾಯಿಗಿಂತಲು ನಾನೇ ನಿಮಗೆ
ಹೆಚ್ಚು ಆಸರೆಯಾದೆ,

ಶ್ರೀ  ಕೃಷ್ಣನ ಪ್ರಿಯಳು ನಾನು.

ನನಗೇ ಇಂತಹ ಶಿಕ್ಷೆ ಇರುವಾಗ

ನಿನ್ನ ಗತಿ ಎನಿರಬಹುದು,

 ನಿನ್ನ

ಭವಿಷ್ಯವನ್ನು ನೆನೆದು ನಾನು ನಗುತ್ತಿರುವೆ..

(ವಾಟ್ಸಪ್ಪಿನಲ್ಲಿ ಬಂದ  ಒಂದು ಸಂದೇಶ)

ವಿಡಿಯೋ ನೋಡಲು ಮೇಲಿನ/ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ


PARYAYA: ಹಸುವು ನಕ್ಕಿತು…ಏಕೆ..?:   ಹಸುವು ನಕ್ಕಿತು…ಏಕೆ..? ಕಸಾಯಿಖಾನೆಯಲ್ಲಿ ಒಬ್ಬ ಕಟುಕ ಹಸುವನ್ನು ಕೊಲ್ಲಲು ಬಂದಾಗ ಹಸುವು ಕಟುಕನನ್ನು ನೋಡಿ ನಗುತ್ತಿತ್ತು. ಇದನ್ನ ನೋಡಿ ಕಟುಕ ಹೇಳಿದ… ‘ನಾನು...