Wednesday, June 5, 2024

PARYAYA: ಪ್ರಧಾನಿ ಮೋದಿ ರಾಜೀನಾಮೆ, ಶನಿವಾರ ಪ್ರಮಾಣ ವಚನ?

 ಪ್ರಧಾನಿ ಮೋದಿ ರಾಜೀನಾಮೆ, ಶನಿವಾರ ಪ್ರಮಾಣ ವಚನ?

ವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು 2024 ಜೂನ್‌ 08ರ ಶನಿವಾರ ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಇದರೊಂದಿಗೆಕಾಂಗ್ರೆಸ್ ನಾಯಕ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ನಂತರ ದೇಶದ ಮೊದಲ (ಮತ್ತು ಏಕೈಕ) ಮೂರು ಅವಧಿಯ ನಾಯಕರೆಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಈದಿನ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆಗೆ ಬೇಟಿ ಮಾಡಿದ ಮೋದಿ ಮುಂದಿನ ಸರ್ಕಾರದ ರಚನೆಗೆ ಮುಂಚಿತವಾಗಿ ರಾಷ್ಟ್ರಪತಿಯವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ಅವರ ರಾಜೀನಾಮೆಯನ್ನು ಸ್ವೀಕರಿಸಿದ ರಾಷ್ಟ್ರಪತಿ, ನೂತನ ವ್ಯವಸ್ಥೆ ಆಗುವವವರೆಗೆ ಪ್ರಧಾನಿಯಾಗಿ ಮುಂದುವರೆಯಲು ಸೂಚಿಸಿದರು.

ಮಿತ್ರ ಪಕ್ಷಗಳ ಜೊತೆಗಿನ ಸಭೆಗಳ ನಂತರ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

2014 ರಲ್ಲಿ 282 ಸ್ಥಾನಗಳನ್ನು ಮತ್ತು 2019 ರ ಚುನಾವಣೆಯಲ್ಲಿ 303 ಸ್ಥಾನಗಳನ್ನು ಗಳಿಸಿದ್ದ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು ಈ ಬಾರಿ 240 ಸ್ಥಾನಗಳನ್ನು ಗೆದ್ದಿದೆ. ಇದು ಬಹುಮತಕ್ಕೆ ಬೇಕಾದ 272 ಸ್ಥಾನಗಳಿಗಿಂತ 32ರಷ್ಟು ಕಡಿಮೆಯಾಗಿದೆ. ಹೀಗಾಗಿ ಈಗ ಈಗ ಮೂರನೇ ಅವಧಿಗೆ ಅಧಿಕಾರದ ಮುದ್ರೆಯೊತ್ತಲು ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ರಂಗದ (ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್‌- ಎನ್‌ ಡಿಎ) ಅಂಗಪಕ್ಷಗಳ ಸದಸ್ಯರು ಗೆದ್ದಿರುವ 53 ಸ್ಥಾನಗಳನ್ನು ಅವಲಂಬಿಸಬೇಕಾಗಿದೆ.

ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಂಗ್ರೆಸ್‌ನ ಅಜಯ್ ರೈ ಅವರನ್ನು 1.5 ಲಕ್ಷಕ್ಕಿಂತ ಕಡಿಮೆ ಮತಗಳಿಂದ ಸೋಲಿಸಿ ಮ್ಮ ಲೋಕಸಭಾ ಸ್ಥಾನವನ್ನು ಉಳಿಸಿಕೊಂಡರು. ಇದರೊಂದಿಗೆ ದೇಗುಲ ಪಟ್ಟಣದಲ್ಲಿ ಹ್ಯಾಟ್ರಿಕ್‌ ಸಂಸದರಾದರು.

ಮಂಗಳವಾರ ರಾತ್ರಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಭೆ ಹಾಗೂ ಇಂದು ಮುಂಜಾನೆ ಮೋದಿಯವರು ಎನ್‌ಡಿಎ ಮೂರನೇ ಬಾರಿಗೆ ಸರ್ಕಾರ ರಚಿಸಲು ಹಕ್ಕು ಸಾಧಿಸಲಿದೆ ಎಂದು ದೃಢಪಡಿಸಿದರುಚುನಾವಣಾ ಫಲಿತಾಂಶಗಳನ್ನು "ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವಿಜಯ" ಎಂದು ಅವರು ಕರೆದರು. ಈದಿನ ಬೆಳಗ್ಗೆ ಕೇಂದ್ರ ಸಚಿವ ಸಂಪುಟದ ಈ ಅವಧಿಯ ಅಂತಿಮ ಸಭೆಯ ಅಧ್ಯಕ್ಷತೆ ವಹಿಸಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 370 ಸ್ಥಾನಗಳನ್ನು (ಎನ್‌ಡಿಎ ಪಾಲುದಾರರು ಸೇರಿದಂತೆ 400+) ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿತ್ತು ಆದರೆ  ಕಾಂಗ್ರೆಸ್-ನೇತೃತ್ವದ ʼಇಂಡಿʼ ಮೈತ್ರಿಕೂಟವು ಬಿಜೆಪಿಗೆ ಅಡ್ಡಗಾಲು ಹಾಕಿ, ಹಿನ್ನಡೆಯನ್ನು ಉಂಟು ಮಾಡಿತು. ಪ್ರತಿಪಕ್ಷಗಳ ಮೈತ್ರಿಕೂಟ 232 ಸ್ಥಾನಗಳನ್ನು ಪಡೆದಿದೆ.

ಒಡಿಶಾ (21 ಸ್ಥಾನಗಳಲ್ಲಿ 20), ಆಂಧ್ರಪ್ರದೇಶ (25 ರಲ್ಲಿ 21), ಮಧ್ಯಪ್ರದೇಶ (29 ರಲ್ಲಿ 29) ಮತ್ತು ಬಿಹಾರ (40 ರಲ್ಲಿ 30), ಎನ್‌ ಡಿಎಗೆ ಉತ್ತಮ ಫಲಿತಾಂಶ ತಂದುಕೊಟ್ಟವು. ಬಿಜೆಪಿಯು ಮತ್ತೊಮ್ಮೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಮತ್ತು ಇತರ ರಾಜ್ಯಗಳಲ್ಲಿ ಆದ ನಷ್ಟವನ್ನು ಸರಿದೂಗಿಸಲು ಈ ಫಲಿತಾಂಶಗಳು ಸಾಕಷ್ಟು ಸಹಕಾರಿಯಾದವು.

ಗಮನಾರ್ಹವಾಗಿಬಿಜೆಪಿಯು ದಕ್ಷಿಣ ರಾಜ್ಯದಲ್ಲಿ ತನ್ನ ಮೊದಲ ಲೋಕಸಭಾ ಸ್ಥಾನವನ್ನು ಕೇರಳದಲ್ಲಿ ಗೆದ್ದುಕೊಂಡಿತು. ಬಿಜೆಪಿಯು ದಕ್ಷಿಣದಲ್ಲಿ ನೆಲೆಯೂರಲು ಚಾರಿತ್ರಿಕ ಹೋರಾಟ ನಡೆಸಿತು. ಕೇರಳ ಮತ್ತು ಆಂಧ್ರಪ್ರದೇಶ, ಮತ್ತು ತೆಲಂಗಾಣದ ಫಲಿತಾಂಶಗಳು ಇಲ್ಲಿ ಆದ ಬದಲಾವಣೆಗೆ ಸಾಕ್ಷಿಯಾಗಿವೆ.

ಆದರೂ, ತಮಿಳುನಾಡಿನಲ್ಲಿ ಸತತ ಎರಡನೇ ಚುನಾವಣೆಯಲ್ಲೂ ಪಕ್ಷವು ಶೂನ್ಯ ಸಾಧನೆಗೆ ತೃಪ್ತಿ ಪಡಬೇಕಾಯಿತು. ಆಡಳಿತಾರೂಢ ಡಿಎಂಕೆ ಮತ್ತು ಇಂಡಿ ಮೈತ್ರಿಕೂಟದ ಮಿತ್ರಪಕ್ಷಗಳು ಎಲ್ಲ 39 ಸ್ಥಾನಗಳನ್ನೂ ತಮಿಳುನಾಡಿನಲ್ಲಿ ಬಾಚಿಕೊಂಡವು.

ಮಂಗಳವಾರ ತಡರಾತ್ರಿ ಪಕ್ಷದ ದೆಹಲಿಯ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿಭಾರತದ ಜನರು ಮೂರನೇ ಬಾರಿಗೆ ಎನ್‌ ಡಿಎಯಲ್ಲಿ "ನಂಬಿಕೆಯನ್ನು" ಇಟ್ಟಿದ್ದಾರೆ ಎಂದರು. "ಈ ಪ್ರೀತಿಗಾಗಿ ನಾನು ಜನರಿಗೆ ನಮಸ್ಕರಿಸುತ್ತೇನೆ ಮತ್ತು ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕಳೆದ ದಶಕದಲ್ಲಿ ಮಾಡಿದ ಉತ್ತಮ ಕೆಲಸವನ್ನು ನಾವು ಮುಂದುವರಿಸುತ್ತೇವೆ ಎಂದು ಅವರಿಗೆ ಭರವಸೆ ನೀಡುತ್ತೇನೆ” ಎಂದು ಹೇಳಿದರು.

ಕ್ಲಿಕ್‌ ಮಾಡಿ ನೋಡಿ- ತಪ್ಪದೇ ಓದಿ. ಇ-ಬುಕ್‌ ಕೂಡಾ ಲಭಿಸುತ್ತದೆ.

ಪ್ರಸ್ತುತ ಕಿಂಗ್‌ ಮೇಕರ್‌ ಗಳಾಗಿ ಕಾಣುತ್ತಿರುವ ಸಮ್ಮಿಶ್ರ ಯುಗದ ರಾಜಕಾರಣಿಗಳಾದ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಮತ್ತು ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಅವರನ್ನು ಮೋದಿ ತಮ್ಮ ಭಾಷಣದಲ್ಲಿ ವಿಶೇಷವಾಗಿ ಉಲ್ಲೇಖಿಸಿದ್ದರು.

ನಾಯ್ಡು ಅವರ ಟಿಡಿಪಿ 16 ಲೋಕಸಭಾ ಸಂಸದರನ್ನು ಹೊಂದಿದೆ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು 12 ಸಂಸದರನ್ನು ಹೊಂದಿದೆ.

ಎನ್‌ ಡಿಎ ಈ 28 ಸ್ಥಾನಗಳನ್ನು ಕಳೆದುಕೊಂಡರೆಅದರ ಸಂಖ್ಯಾಬಲ 293ರಿಂದ 265 ಕ್ಕೆ ಇಳಿಯುತ್ತದೆ

ಇಂಡಿ ಮೈತ್ರಿಕೂಟದ ಸ್ಥಾಪಕ ಸದಸ್ಯರಾದ ನಿತೀಶ್ ಕುಮಾರ್ ಮತ್ತು ಹಿಂದೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್‌ನೊಂದಿಗೆ ಇದ್ದ ಚಂದ್ರಬಾಬು ನಾಯ್ಡು ಅವರನ್ನು ಸೆಳೆಯಲು ಇಂಡಿ ಮೈತ್ರಿಕೂಟದ ನಾಯಕರು ಇನ್ನಿಲ್ಲದ ಪ್ರಯತ್ನಗಳಲ್ಲಿ ತಲ್ಲೀನರಾಗಿದ್ದಾರೆ.

ವರದಿಗಳ ಪ್ರಕಾರ ಇಂಡಿ ಮೈತ್ರಿಕೂಟವು ನಾಯ್ಡು ಅವರಿಗೆ ಪ್ರಧಾನಿ ಸ್ಥಾನ ಮತ್ತು ನಿತೀಶ್‌ ಕುಮಾರ್‌ ಅವರಿಗೆ ಉಪ ಪ್ರಧಾನಿ ಸ್ಥಾನದ ಆಮಿಷ ಒಡ್ಡಿವೆ.

ಆದರೆ ಈ ಬಗ್ಗೆ ನಿತೀಶ್ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲಆದರೆ ನಾಯ್ಡು ಅವರು ಇಂದು ದೆಹಲಿಯಲ್ಲಿ ಸುದ್ದಿಗಾರರಿಗೆ "ನಾನು ಎನ್‌ಡಿಎಯಲ್ಲಿದ್ದೇನೆ ... ಸಭೆಗೆ ಹೋಗುತ್ತಿದ್ದೇನೆ" ಎಂದು ಹೇಳಿದರು.

ಚುನಾವಣಾ ಫಲಿತಾಂಶಗಳ ಪರಿಶೀಲನೆ ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಲು ಎನ್‌ಡಿಎ ಮತ್ತು ಇಂಡಿ ಮೈತ್ರಿಕೂಟ ದೆಹಲಿಯಲ್ಲಿ ಹಗ್ಗಜಗ್ಗಾಟ ನಿರತವಾಗಿವೆ.

ಇವುಗಳನ್ನೂ ಓದಿ:
ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?
ಕನ್ಯಾಕುಮಾರಿಯ ಧ್ಯಾನ: ಪ್ರಧಾನಿ ಮೋದಿ ಹೊಸ ಸಂಕಲ್ಪಗಳು
ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ ಎಸ್‌ಕೆಎಂ ಜಯಭೇರಿ

PARYAYA: ಪ್ರಧಾನಿ ಮೋದಿ ರಾಜೀನಾಮೆ, ಶನಿವಾರ ಪ್ರಮಾಣ ವಚನ?:   ಪ್ರಧಾನಿ ಮೋದಿ ರಾಜೀನಾಮೆ, ಶನಿವಾರ ಪ್ರಮಾಣ ವಚನ ? ನ ವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು 2024 ಜೂನ್‌ 08ರ ಶನಿವಾರ ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ...

Tuesday, June 4, 2024

PARYAYA: ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?

 ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?

ವದಹಲಿವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಲೋಕಸಭೆಯ 543 ಸ್ಥಾನಗಳಿಗೆ ನಡೆದಿರುವ ಚುನಾವಣೆಯ ಫಲಿತಾಂಶಗಳು ದೇಶವನ್ನು ಕುತೂಹಲಕಾರೀ ಘಟ್ಟಕ್ಕೆ ತಂದು ನಿಲ್ಲಿಸಿವೆ. ಸುಮಾರು 292 ಸ್ಥಾನಗಳ ಸನಿಹದಲ್ಲಿ ಬಂದು ನಿಂತಿರುವ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟವು ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆಯ ಘೋಷಣೆ ಮಾಡಿದೆ.

233 ಸ್ಥಾನಗಳ ಅಂಚಿನಲ್ಲಿ ಇರುವ ಕಾಂಗ್ರೆಸ್‌ ನೇತೃತ್ವದ ‌ʼಇಂಡಿʼ ಐಎನ್‌ ಡಿಐ ಮೈತ್ರಿಕೂಟದೊಂದಿಗೆ ಇಡೀ ದಿನ ಹಾವು -ಏಣಿ ಆಟ ನಡೆಸಿದರೂ, ಅಂತಿಮವಾಗಿ ನಿತೀಶ್‌ ಕುಮಾರ್‌ ನೇತೃತ್ವದ ಜನತಾ ದಳ (ಯು) ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ (ಟಿಡಿಪಿ) ಎನ್‌ ಡಿಎ ಜೊತೆಗೇ ನಿಲ್ಲುವುದಾಗಿ ಸ್ಪಷ್ಟನೆ ನೀಡುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಿ ಮುಂದುವರೆಯುವ ಘೋಷಣೆಯನ್ನು ಬಿಜೆಪಿ ಮಾಡಿದೆ.

ರಾತ್ರಿ ದೆಹಲಿಯ ಪಕ್ಷ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮೂರನೇ ಬಾರಿಗೆ ಆಡಳಿತ ನಡೆಸಲು ಬಿಜೆಪಿ ಹಾಗೂ ಎನ್‌ ಡಿಎ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಿದ್ದಕ್ಕಾಗಿ ದೇಶದ ಜನತೆಗೆ ವಂದನೆಗಳನ್ನು ಸಲ್ಲಿಸಿದ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಅಗತ್ಯ ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಗಳಿಸಿರುವ ಎನ್‌ ಡಿಎ ಸರ್ಕಾರ ರಚಿಸುವುದು ಎಂಬುದಾಗಿ ಸ್ಪಷ್ಟ ಪಡಿಸಿದರು.

(ವಿವರಗಳಿಗೆ ಪಕ್ಕದಲ್ಲಿರುವ ಪ್ರಧಾನಿ ಮೋದಿ ಚಿತ್ರ ಕ್ಲಿಕ್‌ ಮಾಡಿ)

ಸುಮಾರು 240 ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸುವುದರೊಂದಿಗೆ ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ), ಎನ್‌ ಡಿಎ ಮೈತ್ರಿಕೂಟಕ್ಕೆ ಬಹುಮತ (292 ಸ್ಥಾನ) ಲಭಿಸಿದ್ದು ಸರ್ಕಾರ ರಚಿಸುವುದು ಖಚಿತ ಎಂಬುದಾಗಿ ಇದಕ್ಕೂ ಮುನ್ನವೇ ಘೋಷಿಸಿತು. ಇಂಡಿ ಮೈತ್ರಿಕೂಟದಿಂದ ಬಿಹಾರದ ಮುಖ್ಯಮಂತ್ರಿ ಉಪಪ್ರಧಾನಿ ಹುದ್ದೆಯ ಆಮಿಷ ಬಂದಿದ್ದರೂ ಜನತಾಳ (ಯು) ಎನ್‌ ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವುದಾಗಿ ಪಕ್ಷದ ನಾಯಕ ಕೆ.ಸಿ. ತ್ಯಾಗಿ ಪ್ರಕಟಿಸಿದರು.

ಚುನಾವಣೆಯಲ್ಲಿ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಬಿಜೆಪಿಯು ಭಾರೀ ಹಿನ್ನಡೆ ಅನುಭವಿಸಿದ್ದು ದಿಟವಾಗುತ್ತಿದ್ದಂತೆಯೇ ಎನ್‌ ಡಿಎಯ ಅಂಗಪಕ್ಷವಾದ ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಲು ಯತ್ನಿಸಿದ ಇಂಡಿ ಮೈತ್ರಿಕೂಟವು ಆಂದ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಕೊಡುಗೆ ನೀಡುವ ಘೋಷಣೆ ಮಾಡಿದ್ದರೂ, ತೆಲುಗು ದೇಶಂ ಪಕ್ಷ ಕೂಡಾ ಎನ್‌ ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವುದಾಗಿ ಘೋಷಿಸಿತು.

ಈ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟವು ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವುದು ಖಚಿತವಾಗುವಂತೆ ಕಂಡು ಬರುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಜಯಭೇರಿ ಭಾರಿಸಿದ್ದರೆ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌  ಕೂಡಾ ಜಯಭೇರಿ ಭಾರಿಸಿದ್ದಾರೆ. ಆದರೆ ಅವರ ಸಂಪುಟದ ಸದಸ್ಯರಾದ ಸ್ಮೃತಿ ಇರಾನಿ, ರಾಜೀವ ಚಂದ್ರಶೇಖರ್‌  ಸೋಲುಂಡಿದ್ದಾರೆ.

ಕ್ಲಿಕ್‌ ಮಾಡಿ ನೋಡಿ- ತಪ್ಪದೇ ಓದಿ. ಇ-ಬುಕ್‌ ಕೂಡಾ ಲಭಿಸುತ್ತದೆ.

ಬಿಜೆಪಿಯು ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಅಸ್ಸಾಂ, ಒಡಿಶಾ, ಬಿಹಾರ,ಗುಜರಾತ್‌, ಕರ್ನಾಟಕ, ಆಂದ್ರ ಪ್ರದೇಶ, ತೆಲಂಗಾಣ ಮತ್ತಿತರ ಕಡೆ ಉತ್ತಮ ಸಾಧನೆ ಮಾಡಿದೆ. ಬಿಜೆಪಿಗೆ ಹಿನ್ನಡೆಯಾಗಿರುವ ರಾಜ್ಯಗಳಲ್ಲಿ ಇಂಡಿ ಮೈತ್ರಿಕೂಟದ ಕಾಂಗ್ರೆಸ್‌, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್‌, ಡಿಎಂಕೆ ಮುನ್ನಡೆ ಸಾಧಿಸಿವೆ. ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಕಾಂಗ್ರೆಸ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತ್ವತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುನ್ನಡೆ/ ಗೆಲುವು ದಾಖಲಿಸಿವೆ.

ಆಂಧ್ರಪ್ರದೇಶ ವಿಧಾನಸಭೆಗೆ ನಡೆದಿರುವ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ, ಬಿಜೆಪಿ ಮತ್ತು ಜನಸೇನಾ ಪಕ್ಷಗಳನ್ನು ಒಳಗೊಂಡ ಎನ್‌ ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು, ಒಡಿಶಾ ವಿಧಾನಸಭೆಯಲ್ಲೂ ಬಿಜೆಪಿ ಜಯಭೇರಿ ದಾಖಲಿಸಿದೆ. ಈ ಎರಡೂ ರಾಜ್ಯಗಳಲ್ಲಿ ಎನ್‌ ಡಿಎ ಸರ್ಕಾರ ರಚನೆಯಾಗಲಿದೆ. ಆಂಧ್ರಪ್ರದೇಶದಲ್ಲಿ ಈ ವಾರದಲ್ಲೇ ಸರ್ಕಾರ ರಚಿಸುವುದಾಗಿ ತೆಲುಗುದೇಶಂ ಪಕ್ಷ (ಟಿಡಿಪಿ) ಘೋಷಿಸಿದೆ.

ಈ ಮಧ್ಯೆ, ಜೆಡಿಯುನ ನಿತೀಶ್‌ ಕುಮಾರ್‌ ಅವರಿಗೆ ಉಪ ಪ್ರಧಾನಿ ಹುದ್ದೆ ನೀಡುವುದಾಗಿ ಹೇಳಿರುವ ಇಂಡಿ ಮೈತ್ರಿಕೂಟಕ್ಕೆ ತನ್ನ ಪ್ರಧಾನಿ ಯಾರು ಎಂಬುದೇ ಸ್ಪಷ್ಟವಾಗಿಲ್ಲ. ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ ಬಣವು ರಾಹುಲ್‌ ಗಾಂಧಿ ಪ್ರಧಾನಿಯಾಗಲಿ ಎಂಬುದಾಗಿ ಹೇಳಿದರೆ, ಸಮಾಜವಾದಿ ಪಕ್ಷವು ಅಖಿಲೇಶ  ಯಾದವ್‌ ಪ್ರಧಾನಿಯಾಗಬೇಕು ಎಂದು ಬಯಸಿದೆ. ಎನ್‌ ಸಿಪಿಯ ನಾಯಕ ಶರದ್‌ ಪವಾರ್‌ ಅವರು ಟಿಡಿಪಿಯ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಿದ್ದಕ್ಕೆ ಅಸಮಾಧಾನ ವ್ಯಕ್ತ ಪಡಿಸಿರುವ ಜಮ್ಮು  ಕಾಶ್ಮೀರದ ಒಮರ್‌ ಅಬ್ದುಲ್ಲ ʼಚುನಾವಣಾ ಪೂರ್ವ ಮೈತ್ರಿಯ ಪ್ರಕಾರವೇ ಮುಂದುವರೆಯೋಣ, ಕುದುರೆ ವ್ಯಾಪಾರ ಬೇಡʼ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ, ಕೇಂದ್ರದಲ್ಲಿ ಸರ್ಕಾರ ರಚನೆಯ ಕಸರತ್ತು ಆರಂಭವಾಗಿದ್ದು, ಒಂದು ವಾರದ ಒಳಗೆ ʼಭಾರತವನ್ನು ಆಳುವವವರು ಯಾರು?ʼ ಎಂಬ ಪ್ರಶ್ನೆಗೆ ಉತ್ತರ ಲಭಿಸಲಿದೆ.

ಚುನಾವಣೆಯ ನಿಖರ ಫಲಿತಾಂಶಕ್ಕಾಗಿ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


PARYAYA: ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?:   ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ? ನ ವದಹಲಿ : ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಲೋಕಸಭೆಯ 543 ಸ್ಥಾನ...

Monday, June 3, 2024

PARYAYA: ಕನ್ಯಾಕುಮಾರಿಯ ಧ್ಯಾನ: ಪ್ರಧಾನಿ ಮೋದಿ ಹೊಸ ಸಂಕಲ್ಪಗಳು

 ನ್ಯಾಕುಮಾರಿಯ ಧ್ಯಾನ: ಪ್ರಧಾನಿ ಮೋದಿ ಹೊಸ ಸಂಕಲ್ಪಗಳು

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯಲ್ಲಿ ೨೦೨೪ ಮೇ ೩೦ರಿಂದ ಜೂನ್‌ ೧ರವರೆಗೆ ಕೈಗೊಂಡ ಧ್ಯಾನದ ಬಳಿಕ ತಾವು ಮಾಡಿಕೊಂಡ ಹೊಸ ಸಂಕಲ್ಪಗಳನ್ನು ಜೂನ್ ರಂದು ಸಂಜೆ 4:15 ರಿಂದ ರವರೆಗೆ ಕನ್ಯಾಕುಮಾರಿಯಿಂದ ದೆಹಲಿಗೆ ಹಿಂದಿರುಗುವ ವಿಮಾನದಲ್ಲಿ ಬರೆದಿದ್ದಾರೆ. ಅವರ ಬರಹದ ಪೂರ್ಣ ಪಾಠ ಇಲ್ಲಿದೆ:

ನ್ನ ಸಹ ಭಾರತೀಯರೇ,

ಪ್ರಜಾಪ್ರಭುತ್ವದ ತಾಯಿಯಾಗಿರುವ ನಮ್ಮ ದೇಶದ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾದ 2024 ರ ಲೋಕಸಭಾ ಚುನಾವಣೆಗಳು ಇಂದು ಮುಕ್ತಾಯಗೊಳ್ಳುತ್ತಿವೆ. ಕನ್ಯಾಕುಮಾರಿಯಲ್ಲಿ ಮೂರು ದಿನಗಳ ಆಧ್ಯಾತ್ಮಿಕ ಪಯಣ ಮುಗಿಸಿ ಈಗಷ್ಟೇ ದೆಹಲಿಗೆ ವಿಮಾನ ಹತ್ತಿದೆ. ದಿನವಿಡೀ ಕಾಶಿ ಮತ್ತು ಇತರ ಹಲವಾರು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ನನ್ನ ಮನಸ್ಸು ಹಲವಾರು ಅನುಭವಗಳು ಮತ್ತು ಭಾವನೆಗಳಿಂದ ತುಂಬಿದೆ ... ನನ್ನೊಳಗೆ ಮಿತಿಯಿಲ್ಲದ ಶಕ್ತಿಯ ಹರಿವನ್ನು ನಾನು ಅನುಭವಿಸಿದ್ದೇನೆ. 2024ರ ಲೋಕಸಭೆ ಚುನಾವಣೆಯು ಅಮೃತ ಕಾಲದ ಮೊದಲನೆಯ ಚುನಾವಣೆ. 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಾಡಾದ ಮೀರತ್‌ನಿಂದ ನಾನು ಕೆಲವು ತಿಂಗಳ ಹಿಂದೆ ನನ್ನ ಅಭಿಯಾನವನ್ನು ಪ್ರಾರಂಭಿಸಿದೆ. ಅಂದಿನಿಂದನಾನು ನಮ್ಮ ಮಹಾನ್ ರಾಷ್ಟ್ರದ ಉದ್ದ ಮತ್ತು ಅಗಲವನ್ನು ಕ್ರಮಿಸಿದ್ದೇನೆ. ಈ ಚುನಾವಣೆಗಳ ಅಂತಿಮ ಸಭೆಯನ್ನು ನಾನು ಪಂಜಾಬಿನ ಹೋಶಿಯಾರ್‌ಪುರದಲ್ಲಿ ನಡೆಸಿದೆ. ಹೋಶಿಯಾರ್‌ ಪುರ ಮಹಾನ್ ಗುರುಗಳ ನಾಡು ಮತ್ತು ಸಂತ ರವಿದಾಸ್ ಜಿ ಅವರಿಗೆ ಸಂಬಂಧಿಸಿದ ಭೂಮಿ. ಅದರ ನಂತರನಾನು ಕನ್ಯಾಕುಮಾರಿಗೆ ಬಂದೆಮಾತೆ ಭಾರತಿಯ ಪಾದಗಳಿಗೆ.

ಚುನಾವಣೆಯ ಕಾವು ನನ್ನ ಹೃದಯ ಮತ್ತು ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿರುವುದು ಸಹಜ. ಸಭೆಗಳು ಮತ್ತು ರೋಡ್ ಶೋಗಳಲ್ಲಿ ಕಂಡ ಬಹಳಷ್ಟು ಮುಖಗಳು ನನ್ನ ಕಣ್ಣ ಮುಂದೆ ಬಂದವು. ನಮ್ಮ ನಾರಿ ಶಕ್ತಿಯ ಆಶೀರ್ವಾದ...ನಂಬಿಕೆವಾತ್ಸಲ್ಯ ಇವೆಲ್ಲವೂ ಬಹಳ ವಿನಮ್ರ ಅನುಭವ. ನನ್ನ ಕಣ್ಣುಗಳು ತೇವವಾಗುತ್ತಿದ್ದವು... ನಾನು 'ಸಾಧನೆ' (ಧ್ಯಾನದ) ಸ್ಥಿತಿಗೆ ಪ್ರವೇಶಿಸಿದೆ. ತದನಂತರಬಿಸಿ ಬಿಸಿಯಾದ ರಾಜಕೀಯ ಚರ್ಚೆಗಳುದಾಳಿಗಳು ಮತ್ತು ಪ್ರತಿದಾಳಿಗಳುಚುನಾವಣೆಯ ವಿಶಿಷ್ಟವಾದ ಆರೋಪಗಳ ಧ್ವನಿಗಳು ಮತ್ತು ಮಾತುಗಳು.. ಅವೆಲ್ಲವೂ ಶೂನ್ಯವಾಗಿ ಮಾಯವಾದವು. ನನ್ನೊಳಗೆ ನಿರ್ಲಿಪ್ತತೆಯ ಭಾವ ಬೆಳೆಯತೊಡಗಿತು...ನನ್ನ ಮನಸ್ಸು ಬಾಹ್ಯ ಪ್ರಪಂಚದಿಂದ ಸಂಪೂರ್ಣ ಬೇರ್ಪಟ್ಟಿತು.

ಅಂತಹ ದೊಡ್ಡ ಜವಾಬ್ದಾರಿಗಳ ನಡುವೆ ಧ್ಯಾನವು ಸವಾಲಿನದಾಗುತ್ತದೆಆದರೆ ಕನ್ಯಾಕುಮಾರಿ ಭೂಮಿ ಮತ್ತು ಸ್ವಾಮಿ ವಿವೇಕಾನಂದರ ಸ್ಫೂರ್ತಿ ಅದನ್ನು ಪ್ರಯತ್ನವಿಲ್ಲದೆ ಮಾಡಿತು. ನಾನೇ ಅಭ್ಯರ್ಥಿಯಾಗಿದ್ದ ನನ್ನ ಪ್ರೀತಿಯ ಕಾಶಿಯ ಜನರ ಕೈಗೆ ನನ್ನ ಪ್ರಚಾರವನ್ನು ಬಿಟ್ಟು ಇಲ್ಲಿಗೆ ಬಂದಿದ್ದೇನೆ.

ಹುಟ್ಟಿನಿಂದಲೇ ನಾನು ಪಾಲಿಸಿಕೊಂಡು ಬದುಕಲು ಪ್ರಯತ್ನಿಸಿದ ಈ ಮೌಲ್ಯಗಳನ್ನು ನನಗೆ ತುಂಬಿದ ದೇವರಿಗೆ ನಾನು ಕೃತಜ್ಞನಾಗಿದ್ದೇನೆ. ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಈ ಸ್ಥಳದಲ್ಲಿ ಧ್ಯಾನ ಮಾಡುವಾಗ ಏನನ್ನು ಅನುಭವಿಸಿರಬಹುದು ಎಂದು ನಾನು ಯೋಚಿಸುತ್ತಿದ್ದೆ! ನನ್ನ ಧ್ಯಾನದ ಒಂದು ಭಾಗವು ಇದೇ ರೀತಿಯ ಆಲೋಚನೆಗಳ ಹೊಳೆಯಲ್ಲಿ ಕಳೆಯಿತು.

ಈ ನಿರ್ಲಿಪ್ತತೆಯ ನಡುವೆಶಾಂತಿ ಮತ್ತು ಮೌನದ ನಡುವೆನನ್ನ ಮನಸ್ಸು ಭಾರತದ ಉಜ್ವಲ ಭವಿಷ್ಯದ ಬಗ್ಗೆಭಾರತದ ಗುರಿಗಳ ಬಗ್ಗೆ ನಿರಂತರವಾಗಿ ಯೋಚಿಸುತ್ತಿತ್ತು. ಕನ್ಯಾಕುಮಾರಿಯಲ್ಲಿ ಉದಯಿಸಿದ ಸೂರ್ಯ ನನ್ನ ಆಲೋಚನೆಗಳಿಗೆ ಹೊಸ ಎತ್ತರವನ್ನು ನೀಡಿದ. ಸಾಗರದ ವೈಶಾಲ್ಯವು ನನ್ನ ಆಲೋಚನೆಗಳನ್ನು ವಿಸ್ತರಿಸಿತು ಮತ್ತು ದಿಗಂತದ ವಿಸ್ತಾರವು ಬ್ರಹ್ಮಾಂಡದ ಆಳದಲ್ಲಿ ಹುದುಗಿರುವ ಏಕತೆಯನ್ನುನಿರಂತರವಾಗಿ ಮೂಡಿಸಿತು. ದಶಕಗಳ ಹಿಂದೆ ಹಿಮಾಲಯದ ಮಡಿಲಲ್ಲಿ ಕೈಗೊಂಡ ಅವಲೋಕನಗಳು ಮತ್ತು ಅನುಭವಗಳು ಪುನರುಜ್ಜೀವನಗೊಳ್ಳುತ್ತಿರುವಂತೆ ತೋರಿತು.

ಸ್ನೇಹಿತರೇ,

ಕನ್ಯಾಕುಮಾರಿ ಯಾವತ್ತೂ ನನ್ನ ಹೃದಯಕ್ಕೆ ತುಂಬಾ ಹತ್ತಿರ. ಕನ್ಯಾಕುಮಾರಿಯಲ್ಲಿ ವಿವೇಕಾನಂದ ಶಿಲಾ ಸ್ಮಾರಕವನ್ನು ಶ್ರೀ ಏಕನಾ ರಾನಡೆ ಅವರ ನೇತೃತ್ವದಲ್ಲಿ ನಿರ್ಮಿಸಲಾಯಿತು. ಏಕನಾ ಜೀ ಅವರೊಂದಿಗೆ ವ್ಯಾಪಕವಾಗಿ ಪ್ರಯಾಣಿಸುವ ಅವಕಾಶ ನನಗೆ ಸಿಕ್ಕಿತ್ತು. ಈ ಸ್ಮಾರಕದ ನಿರ್ಮಾಣದ ಸಮಯದಲ್ಲಿ ಕನ್ಯಾಕುಮಾರಿಯಲ್ಲಿಯೂ ಸ್ವಲ್ಪ ಸಮಯ ಕಳೆಯುವ ಅವಕಾಶ ಸಿಕ್ಕಿತ್ತು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ... ಇದು ದೇಶದ ಪ್ರತಿಯೊಬ್ಬ ಪ್ರಜೆಯ ಹೃದಯದಲ್ಲಿ ಆಳವಾಗಿ ಬೇರೂರಿರುವ ಸಾಮಾನ್ಯ ಗುರುತು. ಮಾತೆ  ಶಕ್ತಿಯು (ಪಾರ್ವತಿ) ಕನ್ಯಾ ಕುಮಾರಿಯಾಗಿ ಅವತರಿಸಿದ 'ಶಕ್ತಿ ಪೀಠ' (ಶಕ್ತಿಯ ಆಸನ) ಇದಾಗಿದೆ. ಈ ದಕ್ಷಿಣದ ತುದಿಯಲ್ಲಿಮಾತೆ ಶಕ್ತಿಯು ತಪಸ್ಸು ಮಾಡಿದ್ದಳು ಮತ್ತು ಭಾರತದ ಉತ್ತರದ ಭಾಗವಾದ ಹಿಮಾಲಯದಲ್ಲಿ ನೆಲೆಸಿರುವ ಭಗವಾನ್ ಶಿವನಿಗಾಗಿ ಕಾದಿದ್ದಳು.

ಕನ್ಯಾಕುಮಾರಿ ಸಂಗಮಗಳ ನಾಡು. ನಮ್ಮ ದೇಶದ ಪವಿತ್ರ ನದಿಗಳು ವಿವಿಧ ಸಮುದ್ರಗಳಿಗೆ ಹರಿಯುತ್ತವೆ ಮತ್ತು ಇಲ್ಲಿಆ ಸಮುದ್ರಗಳು ಸಂಗಮಿಸುತ್ತವೆ. ಇಲ್ಲಿನಾವು ಇನ್ನೊಂದು ಮಹಾ ಸಂಗಮಕ್ಕೆ ಸಾಕ್ಷಿಯಾಗಿದ್ದೇವೆ-ಭಾರತದ ಸೈದ್ಧಾಂತಿಕ ಸಂಗಮ! ಇಲ್ಲಿನಾವು ವಿವೇಕಾನಂದ ಶಿಲಾ ಸ್ಮಾರಕಸಂತ ತಿರುವಳ್ಳುವರ್ ಅವರ ಭವ್ಯವಾದ ಪ್ರತಿಮೆಗಾಂಧಿ ಮಂಟಪ ಮತ್ತು ಕಾಮರಾಜ ಮಣಿ ಮಂಟಪವನ್ನು ಕಾಣುತ್ತೇವೆ. ಈ ದಿಗ್ಗಜರ ಈ ಚಿಂತನಾ ಧಾರೆಗಳು ಇಲ್ಲಿ ಒಮ್ಮುಖವಾಗಿ ರಾಷ್ಟ್ರೀಯ ಚಿಂತನೆಯ ಸಂಗಮವನ್ನು ರೂಪಿಸುತ್ತವೆ. ಇದು ರಾಷ್ಟ್ರ ನಿರ್ಮಾಣಕ್ಕೆ ಮಹತ್ತರವಾದ ಸ್ಫೂರ್ತಿಯನ್ನು ನೀಡುತ್ತದೆ. ಕನ್ಯಾಕುಮಾರಿಯ ಈ ಭೂಮಿ ಐಕ್ಯತೆಯ ಅಳಿಸಲಾಗದ ಸಂದೇಶವನ್ನು ನೀಡುತ್ತದೆವಿಶೇಷವಾಗಿ ಭಾರತದ ರಾಷ್ಟ್ರೀಯತೆ ಮತ್ತು ಏಕತೆಯ ಭಾವನೆಯನ್ನು ಅನುಮಾನಿಸುವ ಯಾವುದೇ ವ್ಯಕ್ತಿಗೆ.

ಕನ್ಯಾಕುಮಾರಿಯಲ್ಲಿರುವ ಸಂತ ತಿರುವಳ್ಳುವರ್ ಅವರ ಭವ್ಯವಾದ ಪ್ರತಿಮೆಯು ಸಮುದ್ರದಿಂದ ಮಾತೆ ಭಾರತಿಯ ವಿಸ್ತಾರವನ್ನು ನೋಡುತ್ತಿದೆ. ಅವರ ಕೃತಿ ತಿರುಕ್ಕುರಳ್ ಸುಂದರ ತಮಿಳು ಭಾಷೆಯ ಮುಕುಟಮಣಿಗಳಲ್ಲಿ ಒಂದಾಗಿದೆ. ಇದು ಜೀವನದ ಪ್ರತಿಯೊಂದು ಅಂಶವನ್ನು ಒಳಗೊಂಡಿದೆನಮಗಾಗಿ ಮತ್ತು ರಾಷ್ಟ್ರಕ್ಕಾಗಿ ನಮ್ಮ ಅತ್ಯುತ್ತಮವಾದದ್ದನ್ನು ನೀಡಲು ಪ್ರೇರೇಪಿಸುತ್ತದೆ. ಅಂತಹ ಮಹಾನ್ ವ್ಯಕ್ತಿಗೆ ನಮನ ಸಲ್ಲಿಸುವುದು ನನ್ನ ಅದೃಷ್ಟ.

ಸ್ನೇಹಿತರೇ,

ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದ್ದರು, 'ಪ್ರತಿಯೊಂದು ರಾಷ್ಟ್ರಕ್ಕೂ ತಲುಪಿಸಲು ಸಂದೇಶವಿದೆಪೂರೈಸಲು ಒಂದು ಧ್ಯೇಯವಿದೆತಲುಪಲು ಗಮ್ಯವಿದೆ.ʼ

ಸಾವಿರಾರು ವರ್ಷಗಳಿಂದ ಭಾರತವು ಈ ಅರ್ಥಪೂರ್ಣ ಉದ್ದೇಶದ ಪ್ರಜ್ಞೆಯೊಂದಿಗೆ ಮುನ್ನಡೆಯುತ್ತಿದೆ. ಭಾರತವು ಸಾವಿರಾರು ವರ್ಷಗಳಿಂದ ಕಲ್ಪನೆಗಳ ತೊಟ್ಟಿಲು. ನಾವು ಸ್ವಾಧೀನಪಡಿಸಿಕೊಂಡದ್ದನ್ನು ನಮ್ಮ ವೈಯಕ್ತಿಕ ಸಂಪತ್ತು ಎಂದು ಪರಿಗಣಿಸಿಲ್ಲ ಅಥವಾ ಅದನ್ನು ಆರ್ಥಿಕ ಅಥವಾ ವಸ್ತು ನಿಯತಾಂಕಗಳಿಂದ ಸಂಪೂರ್ಣವಾಗಿ ಅಳೆಯುವುದಿಲ್ಲ. ಆದ್ದರಿಂದ, 'ಇದಂ-ನಾ-ಮಮ' (ಇದು ನನ್ನದಲ್ಲ) ಎಂಬುದು ಭಾರತದ ಅಂತರ್ಗತ ಮತ್ತು ನೈಸರ್ಗಿಕ ಭಾಗವಾಗಿದೆ.

ಭಾರತದ ಕಲ್ಯಾಣವು ನಮ್ಮ ಗ್ರಹದ ಪ್ರಗತಿಯ ಪ್ರಯಾಣಕ್ಕೂ ಪ್ರಯೋಜನವನ್ನು ನೀಡುತ್ತದೆ. ಸ್ವಾತಂತ್ರ್ಯ ಚಳವಳಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಭಾರತವು ಆಗಸ್ಟ್ 15, 1947 ರಂದು ಸ್ವಾತಂತ್ರ್ಯವನ್ನು ಗಳಿಸಿತು. ಆ ಸಮಯದಲ್ಲಿಪ್ರಪಂಚದಾದ್ಯಂತದ ಅನೇಕ ದೇಶಗಳು ವಸಾಹತುಶಾಹಿ ಆಳ್ವಿಕೆಯಲ್ಲಿದ್ದವು. ಭಾರತದ ಸ್ವಾತಂತ್ರ್ಯ ಯಾತ್ರೆಯು ಆ ದೇಶಗಳಲ್ಲಿ ಅನೇಕರಿಗೆ ತಮ್ಮದೇ ಆದ ಸ್ವಾತಂತ್ರ್ಯವನ್ನು ಸಾಧಿಸಲು ಸ್ಫೂರ್ತಿ ಮತ್ತು ಅಧಿಕಾರವನ್ನು ನೀಡಿತು. ಅದೇ ಚೈತನ್ಯವು ದಶಕಗಳ ನಂತರ ಒಂದು ಶತಮಾನದ COVID-19 ಸಾಂಕ್ರಾಮಿಕದೊಂದಿಗೆ ಜಗತ್ತು ಮುಖಾಮುಖಿಯಾದಾಗ ಕಂಡುಬಂದಿತು. ಬಡವರು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದಾಗಭಾರತ ಯಶಸ್ವಿ ಪ್ರಯತ್ನಗಳು ಅನೇಕ ರಾಷ್ಟ್ರಗಳಿಗೆ ಧೈರ್ಯ ಮತ್ತು ಸಹಾಯವನ್ನು ನೀಡಿದವು.

ಇಂದುಭಾರತದ ಆಡಳಿತ ಮಾದರಿಯು ಪ್ರಪಂಚದಾದ್ಯಂತದ ಅನೇಕ ದೇಶಗಳಿಗೆ ಉದಾಹರಣೆಯಾಗಿದೆ. ಕೇವಲ 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಲು ಅಧಿಕಾರ ನೀಡಿರುವುದು ಅಭೂತಪೂರ್ವ. ಜನಪರ ಉತ್ತಮ ಆಡಳಿತಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಮಹತ್ವಾಕಾಂಕ್ಷೆಯ ವಿಭಾಗಗಳಂತಹ ನವೀನ ಅಭ್ಯಾಸಗಳು ಇಂದು ಜಾಗತಿಕವಾಗಿ ಚರ್ಚಿಸಲ್ಪಡುತ್ತವೆ. ನಮ್ಮ ಪ್ರಯತ್ನಗಳುಬಡವರಿಗೆ ಅಧಿಕಾರ ನೀಡುವುದರಿಂದ ಹಿಡಿದು ಕೊನೆಯ ಮೈಲಿ ತಲುಪಿಸುವವರೆಗೆಸಮಾಜದ ಕೊನೆಯ ಹಂತದಲ್ಲಿ ನಿಂತಿರುವ ವ್ಯಕ್ತಿಗಳಿಗೆ ಆದ್ಯತೆ ನೀಡುವ ಮೂಲಕ ಜಗತ್ತನ್ನು ಪ್ರೇರೇಪಿಸಿದೆ. ಭಾರತ್‌ನ ಡಿಜಿಟಲ್ ಇಂಡಿಯಾ ಅಭಿಯಾನವು ಈಗ ಇಡೀ ಜಗತ್ತಿಗೆ ಒಂದು ಉದಾಹರಣೆಯಾಗಿದೆಬಡವರನ್ನು ಸಬಲೀಕರಣಗೊಳಿಸಲುಪಾರದರ್ಶಕತೆಯನ್ನು ತರಲು ಮತ್ತು ಅವರ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ನಾವು ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದನ್ನು ತೋರಿಸುತ್ತದೆ. ಭಾರತದಲ್ಲಿರುವ ಅಗ್ಗದ ದತ್ತಾಂಶವು ಬಡವರಿಗೆ ಮಾಹಿತಿ ಮತ್ತು ಸೇವೆಗಳ ತಲುಪುವಿಕೆಯನ್ನು ಖಾತ್ರಿಪಡಿಸುವ ಮೂಲಕ ಸಾಮಾಜಿಕ ಸಮಾನತೆಯ ಸಾಧನವಾಗುತ್ತಿದೆ. ಇಡೀ ಜಗತ್ತು ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣವನ್ನು ನೋಡುತ್ತಿದೆ ಮತ್ತು ಅಧ್ಯಯನ ಮಾಡುತ್ತಿದೆ ಮತ್ತು ಪ್ರಮುಖ ಜಾಗತಿಕ ಸಂಸ್ಥೆಗಳು ನಮ್ಮ ಮಾದರಿಯಿಂದ ಅಂಶಗಳನ್ನು ಅಳವಡಿಸಿಕೊಳ್ಳಲು ಅನೇಕ ದೇಶಗಳಿಗೆ ಸಲಹೆ ನೀಡುತ್ತಿವೆ.

ಇಂದುಭಾರತದ ಪ್ರಗತಿ ಮತ್ತು ಉನ್ನತಿಯು ಭಾರತಕ್ಕೆ ಮಾತ್ರ ಮಹತ್ವದ ಅವಕಾಶವಲ್ಲ,ಬದಲು ಪ್ರಪಂಚದಾದ್ಯಂತದ ನಮ್ಮ ಎಲ್ಲ ಪಾಲುದಾರ ದೇಶಗಳಿಗೆ ಐತಿಹಾಸಿಕ ಅವಕಾಶವಾಗಿದೆ. G-20 ಯಶಸ್ಸಿನ ನಂತರಪ್ರಪಂಚವು ಭಾರತಕ್ಕೆ ಹೆಚ್ಚಿನ ಪಾತ್ರವನ್ನು ಕಲ್ಪಿಸುತ್ತಿದೆ. ಇಂದುಭಾರತವು ಜಾಗತಿಕ ದಕ್ಷಿಣದ ಪ್ರಬಲ ಮತ್ತು ಪ್ರಮುಖ ಧ್ವನಿಯಾಗಿ ಅಂಗೀಕರಿಸಲ್ಪಟ್ಟಿದೆ. ಭಾರತ ಉಪಕ್ರಮವು ಅದನ್ನು ಆಫ್ರಿಕನ್ ಯೂನಿಯನ್ G-20 ಗುಂಪಿನ ಭಾಗವಾಗುವಂತೆ ಮಾಡಿದೆ. ಇದು ಆಫ್ರಿಕನ್ ದೇಶಗಳ ಭವಿಷ್ಯಕ್ಕೆ ನಿರ್ಣಾಯಕ ತಿರುವು ನೀಡಲಿದೆ.

ಸ್ನೇಹಿತರೇ,

ಭಾರತದ ಅಭಿವೃದ್ಧಿ ಪಥವು ನಮಗೆ ಹೆಮ್ಮೆ ಮತ್ತು ವೈಭವವನ್ನು ತುಂಬುತ್ತದೆಆದರೆ ಅದೇ ಸಮಯದಲ್ಲಿಇದು 140 ಕೋಟಿ ನಾಗರಿಕರಿಗೆ ಅವರ ಜವಾಬ್ದಾರಿಗಳನ್ನು ನೆನಪಿಸುತ್ತದೆ. ಈಗಒಂದು ಕ್ಷಣವನ್ನು ವ್ಯರ್ಥ ಮಾಡದೆನಾವು ಹೆಚ್ಚಿನ ಕರ್ತವ್ಯಗಳು ಮತ್ತು ದೊಡ್ಡ ಗುರಿಗಳ ಕಡೆಗೆ ಹೆಜ್ಜೆ ಹಾಕಬೇಕು. ನಾವು ಹೊಸ ಕನಸುಗಳನ್ನು ಕಾಣಬೇಕುಅವುಗಳನ್ನು ವಾಸ್ತವಕ್ಕೆ ಪರಿವರ್ತಿಸಬೇಕು ಮತ್ತು ಆ ಕನಸುಗಳನ್ನು ಬದುಕಲು ಪ್ರಾರಂಭಿಸಬೇಕು.

ನಾವು ಭಾರತದ ಅಭಿವೃದ್ಧಿಯನ್ನು ಜಾಗತಿಕ ಸನ್ನಿವೇಶದಲ್ಲಿ ನೋಡಬೇಕು ಮತ್ತು ಇದಕ್ಕಾಗಿ ನಾವು ಭಾರತದ ಆಂತರಿಕ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ನಾವು ಭಾರತದ ಶಕ್ತಿಗಳನ್ನು ಅಂಗೀಕರಿಸಬೇಕುಅವುಗಳನ್ನು ಪೋಷಿಸಬೇಕು ಮತ್ತು ಪ್ರಪಂಚದ ಪ್ರಯೋಜನಕ್ಕಾಗಿ ಬಳಸಿಕೊಳ್ಳಬೇಕು. ಇಂದಿನ ಜಾಗತಿಕ ಸನ್ನಿವೇಶದಲ್ಲಿಯುವ ರಾಷ್ಟ್ರವಾಗಿ ಭಾರತದ ಶಕ್ತಿಯು ಒಂದು ಅವಕಾಶವಾಗಿದೆಇದರಿಂದ ನಾವು ಹಿಂತಿರುಗಿ ನೋಡಬಾರದು.

21ನೇ ಶತಮಾನದ ಜಗತ್ತು ಹಲವು ಭರವಸೆಗಳೊಂದಿಗೆ ಭಾರತದತ್ತ ನೋಡುತ್ತಿದೆ. ಮತ್ತು ಜಾಗತಿಕ ಸನ್ನಿವೇಶದಲ್ಲಿ ಮುಂದುವರಿಯಲು ನಾವು ಹಲವಾರು ಬದಲಾವಣೆಗಳನ್ನು ಮಾಡಬೇಕಾಗಿದೆ. ಸುಧಾರಣೆಗೆ ಸಂಬಂಧಿಸಿದಂತೆ ನಮ್ಮ ಸಾಂಪ್ರದಾಯಿಕ ಚಿಂತನೆಯನ್ನೂ ನಾವು ಬದಲಾಯಿಸಬೇಕಾಗಿದೆ. ಭಾರತವು ಸುಧಾರಣೆಯನ್ನು ಕೇವಲ ಆರ್ಥಿಕ ಸುಧಾರಣೆಗಳಿಗೆ ಸೀಮಿತಗೊಳಿಸುವುದಿಲ್ಲ. ಸುಧಾರಣೆಯ ದಿಕ್ಕಿನತ್ತ ನಾವು ಜೀವನದ ಪ್ರತಿಯೊಂದು ಅಂಶದಲ್ಲೂ ಮುನ್ನಡೆಯಬೇಕು. ನಮ್ಮ ಸುಧಾರಣೆಗಳು 2047 ರ ವೇಳೆಗೆ 'ವಿಕಸಿತ ಭಾರ' (ಅಭಿವೃದ್ಧಿ ಹೊಂದಿದ ಭಾರತ) ದ ಆಶಯಗಳೊಂದಿಗೆ ಹೊಂದಾಣಿಕೆಯಾಗಬೇಕು.

ಸುಧಾರಣೆಯು ಯಾವುದೇ ದೇಶಕ್ಕೆ ಒಂದೇ ಆಯಾಮದ ಪ್ರಕ್ರಿಯೆಯಾಗುವುದಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆದ್ದರಿಂದನಾನು ದೇಶಕ್ಕಾಗಿ ಸುಧಾರಣೆಸಾಧನೆ ಮತ್ತು ಪರಿವರ್ತನೆಯ ದೃಷ್ಟಿಕೋನವನ್ನು ಹಾಕಿದ್ದೇನೆ. ಸುಧಾರಣೆಯ ಜವಾಬ್ದಾರಿ ನಾಯಕತ್ವದ ಮೇಲಿದೆ. ಅದರ ಆಧಾರದ ಮೇಲೆನಮ್ಮ ಅಧಿಕಾರಶಾಹಿಯು ಕಾರ್ಯನಿರ್ವಹಿಸುತ್ತದೆಮತ್ತು ಜನರು ಪಾಲುದಾರಿಕೆಯ ಉತ್ಸಾಹದೊಂದಿಗೆ ಸೇರಿದಾಗನಾವು ಪರಿವರ್ತನೆಗೆ ಸಾಕ್ಷಿಯಾಗುತ್ತೇವೆ.

ನಮ್ಮ ದೇಶವನ್ನು 'ವಿಕಸಿತ ಭಾರತ'ವನ್ನಾಗಿ ಮಾಡಲು ನಾವು ಶ್ರೇಷ್ಠತೆಯನ್ನು ಮೂಲಭೂತ ತತ್ವವನ್ನಾಗಿ ಮಾಡಬೇಕು. ವೇಗ (ಸ್ಪೀಡ್), ಪ್ರಮಾಣ (ಸ್ಕೇಲ್), ಅವಕಾಶ (ಸ್ಕೋಪ್) ಮತ್ತು ಮಾನದಂಡಗಳು (ಸ್ಟ್ಯಾಂಡರ್ಡ್ಸ್)‌ ಈ ನಾಲ್ಕು ದಿಕ್ಕುಗಳಲ್ಲಿ ನಾವು ತ್ವರಿತವಾಗಿ ಕೆಲಸ ಮಾಡಬೇಕಾಗಿದೆ. ಉತ್ಪಾದನೆಯ ಜೊತೆಗೆನಾವು ಗುಣಮಟ್ಟವನ್ನು ಕೇಂದ್ರೀಕರಿಸಬೇಕು ಮತ್ತು 'ಶೂನ್ಯ ದೋಷ-ಶೂನ್ಯ ಪರಿಣಾಮಮಂತ್ರಕ್ಕೆ ಬದ್ಧರಾಗಿರಬೇಕು.

ಸ್ನೇಹಿತರೇ,

ಭಗವಂತ ನಮಗೆ ಭರತ ನಾಡಿನಲ್ಲಿ ಜನ್ಮ ನೀಡಿದ್ದಾನೆ ಎಂದು ಪ್ರತಿ ಕ್ಷಣದಲ್ಲಿ ಹೆಮ್ಮೆ ಪಡಬೇಕು. ಭಾರತಕ್ಕೆ ಸೇವೆ ಸಲ್ಲಿಸಲು ಮತ್ತು ನಮ್ಮ ದೇಶದ ಉತ್ಕೃಷ್ಟತೆಯ ಪ್ರಯಾಣದಲ್ಲಿ ನಮ್ಮ ಪಾತ್ರವನ್ನು ಪೂರೈಸಲು ದೇವರು ನಮ್ಮನ್ನು ಆರಿಸಿದ್ದಾನೆ.

ಆಧುನಿಕ ಸಂದರ್ಭದಲ್ಲಿ ಪ್ರಾಚೀನ ಮೌಲ್ಯಗಳನ್ನು ಅಳವಡಿಸಿಕೊಂಡು ನಮ್ಮ ಪರಂಪರೆಯನ್ನು ಆಧುನಿಕ ರೀತಿಯಲ್ಲಿ ಪುನರ್ ವ್ಯಾಖ್ಯಾನಿಸಬೇಕು.

ಒಂದು ರಾಷ್ಟ್ರವಾಗಿನಾವು ಹಳೆಯ ಆಲೋಚನೆಗಳು ಮತ್ತು ನಂಬಿಕೆಗಳನ್ನು ಮರುಮೌಲ್ಯಮಾಪನ ಮಾಡಬೇಕಾಗಿದೆ. ವೃತ್ತಿಪರ ನಿರಾಶಾವಾದಿಗಳ ಒತ್ತಡದಿಂದ ನಮ್ಮ ಸಮಾಜವನ್ನು ಮುಕ್ತಗೊಳಿಸಬೇಕಾಗಿದೆ. ನಕಾರಾತ್ಮಕತೆಯಿಂದ ಸ್ವಾತಂತ್ರ್ಯವು ಯಶಸ್ಸನ್ನು ಸಾಧಿಸುವ ಮೊದಲ ಹೆಜ್ಜೆ ಎಂದು ನಾವು ನೆನಪಿನಲ್ಲಿಡಬೇಕು. ಸಕಾರಾತ್ಮಕತೆಯ ಮಡಿಲಲ್ಲಿ ಯಶಸ್ಸು ಅರಳುತ್ತದೆ.

ಭಾರತದ ಅನಂತ ಮತ್ತು ಶಾಶ್ವತ ಶಕ್ತಿಯಲ್ಲಿ ನನ್ನ ನಂಬಿಕೆಭಕ್ತಿ ಮತ್ತು ನಂಬಿಕೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಕಳೆದ 10 ವರ್ಷಗಳಲ್ಲಿಭಾರತ ಈ ಸಾಮರ್ಥ್ಯವು ಇನ್ನಷ್ಟು ಬೆಳೆಯುತ್ತಿರುವುದನ್ನು ನಾನು ನೋಡಿದ್ದೇನೆ ಮತ್ತು ಅದನ್ನು ನೇರವಾಗಿ ಅನುಭವಿಸಿದ್ದೇನೆ.

ನಾವು 20 ನೇ ಶತಮಾನದ ನಾಲ್ಕು ಮತ್ತು ಐದನೇ ದಶಕಗಳನ್ನು ಸ್ವಾತಂತ್ರ್ಯ ಚಳುವಳಿಗೆ ಹೊಸ ವೇಗವನ್ನು ನೀಡಲು ಬಳಸಿಕೊಂಡಂತೆ, 21 ನೇ ಶತಮಾನದ ಈ 25 ವರ್ಷಗಳಲ್ಲಿ ನಾವು 'ವಿಕಸಿತ ಭಾರತ'ಕ್ಕೆ ಅಡಿಪಾಯ ಹಾಕಬೇಕು. ಸ್ವಾತಂತ್ರ್ಯ ಹೋರಾಟವು ಮಹಾನ್ ತ್ಯಾಗಕ್ಕೆ ಕರೆ ನೀಡಿದ ಸಮಯ. ಪ್ರಸ್ತುತ ಸಮಯವು ಪ್ರತಿಯೊಬ್ಬರಿಂದ ಉತ್ತಮ ಮತ್ತು ನಿರಂತರ ಕೊಡುಗೆಗಳನ್ನು ಕೇಳುತ್ತದೆ.

1897ರಲ್ಲಿ ಸ್ವಾಮಿ ವಿವೇಕಾನಂದರು ಮುಂದಿನ 50 ವರ್ಷಗಳನ್ನು ದೇಶಕ್ಕಾಗಿ ಮೀಸಲಿಡಬೇಕು ಎಂದು ಹೇಳಿದ್ದರು. ಈ ಕರೆಗೆ ಸರಿಯಾಗಿ 50 ವರ್ಷಗಳ ನಂತರಭಾರತವು 1947 ರಲ್ಲಿ ಸ್ವಾತಂತ್ರ್ಯವನ್ನು ಗಳಿಸಿತು.

ಇಂದು ನಮಗೆ ಅದೇ ಸುವರ್ಣಾವಕಾಶವಿದೆ. ಮುಂದಿನ 25 ವರ್ಷಗಳನ್ನು ದೇಶಕ್ಕಾಗಿ ಮುಡಿಪಾಗಿಡೋಣ. ನಮ್ಮ ಪ್ರಯತ್ನಗಳು ಮುಂಬರುವ ಪೀಳಿಗೆಗೆ ಮತ್ತು ಮುಂಬರುವ ಶತಮಾನಗಳಿಗೆ ಬಲವಾದ ಅಡಿಪಾಯವನ್ನು ಸೃಷ್ಟಿಸುತ್ತದೆಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ದೇಶದ ಶಕ್ತಿ ಮತ್ತು ಉತ್ಸಾಹವನ್ನು ನೋಡಿದರೆ ಗುರಿ ಈಗ ದೂರವಿಲ್ಲ ಎಂದು ಹೇಳಬಹುದು. ಶೀಘ್ರ ಹೆಜ್ಜೆಗಳನ್ನು ಇಡೋಣ...ಒಟ್ಟಾಗಿ ವಿಕಸಿತ ಭಾರತವನ್ನು ನಿರ್ಮಿಸೋಣ.

PARYAYA: ಕನ್ಯಾಕುಮಾರಿಯ ಧ್ಯಾನ: ಪ್ರಧಾನಿ ಮೋದಿ ಹೊಸ ಸಂಕಲ್ಪಗಳು:   ಕ ನ್ಯಾ ಕುಮಾರಿಯ ಧ್ಯಾನ: ಪ್ರಧಾನಿ ಮೋದಿ ಹೊಸ ಸಂಕಲ್ಪಗಳು ನ ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯಲ್ಲಿ ೨೦೨೪ ಮೇ ೩೦ರಿಂದ ಜೂನ್‌ ೧ರವರೆಗೆ ಕೈಗೊಂ...

PARYAYA: ಬಲ್ಲಿರೇನಯ್ಯಾ? ಭಾರತವನ್ನಾಳುವವರು ಯಾರೆಂದುಕೊಂಡಿದ್ದೀರಿ?

ಬಲ್ಲಿರೇನಯ್ಯಾ? ಭಾರತವನ್ನಾಳುವವರು
ಯಾರೆಂದುಕೊಂಡಿದ್ದೀರಿ?

ಭಾರತವನ್ನು ಮತ್ತೆ ಆಳುವವರು ಯಾರೆಂದುಕೊಂಡಿದ್ದೀರಿ? ಕುತೂಹಲಕಾರಿ ಲೋಕಸಭಾ ಚುನಾವಣೆಯ ಫಲಿತಾಂಶಗಳು ಇಲ್ಲಿ ಕ್ಷಣ ಕ್ಷಣಕ್ಕೂ ಪ್ರತಿಫಲಿಸಲಿವೆ.

2024 ಜೂನ್‌ 4ರ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿರುವ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಮಾಹಿತಿಗಾಗಿ ಮೇಲಿನ ಚಿತ್ರ ಕ್ಲಿಕ್‌ ಮಾಡಿ.


PARYAYA: ಬಲ್ಲಿರೇನಯ್ಯಾ? ಭಾರತವನ್ನಾಳುವವರು ಯಾರೆಂದುಕೊಂಡಿದ್ದೀರಿ?:   ಬಲ್ಲಿರೇನಯ್ಯಾ? ಭಾರತವನ್ನಾಳುವವರು ಯಾರೆಂದುಕೊಂಡಿದ್ದೀರಿ? ಭಾ ರತವನ್ನು ಮತ್ತೆ ಆಳುವವರು ಯಾರೆಂದುಕೊಂಡಿದ್ದೀರಿ? ಕುತೂಹಲಕಾರಿ ಲೋಕಸಭಾ ಚುನಾವಣೆಯ ಫಲಿತಾಂಶಗಳು ಇಲ್...

PARYAYA: ರಸ ಪ್ರಸಂಗಗಳು! ಸಮಸ್ಯೆ ಯಾರದ್ದು?

ಸಮಸ್ಯೆ ಯಾರದ್ದು?

ತಿಳಿಯಲು ಮೇಲೆ ಕ್ಲಿಕ್‌ ಮಾಡಿ ನೋಡಿ.

PARYAYA: ರಸ ಪ್ರಸಂಗಗಳು!: ಸಮಸ್ಯೆ ಯಾರದ್ದು?
 ತಿಳಿಯಲು ಮೇಲೆ ಕ್ಲಿಕ್‌ ಮಾಡಿ ನೋಡಿ.
 &&&  

 ಅಂಬಿಗನನ್ನು ಏಕೆ ನಂಬಬೇಕು? ಅಂಬಿಗ ನಾ ನಿನ್ನ ನಂಬಿದೆ ಎಂಬ ಪುರಂದರದಾಸರ ಪದ ಯಾರಿಗೆ ಗೊ...

Sunday, June 2, 2024

PARYAYA: ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ ಎ...

 ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ  ಎಸ್‌ಕೆಎಂ ಜಯಭೇರಿ

ವದೆಹಲಿಅರುಣಾಚಲ ಪ್ರದೇಶದಲ್ಲಿ ಬಿಜೆಪಿ 2024 ಜೂನ್‌ 2ರ ಭಾನುವಾರ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಹ್ಯಾಟ್ರಿಕ್‌ ಸಾಧಿಸಿತು. ಇದೇ ವೇಳೆಗೆ ಸಿಕ್ಕಿಂನಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಎರಡನೇ ಅವಧಿಗೆ ಅಧಿಕಾರವನ್ನು ಪಡೆದುಕೊಂಡಿತು.

2024 ರ ಏಪ್ರಿಲ್ 19 ರಂದು ಅರುಣಾಚಲ ಪ್ರದೇಶದ 60 ವಿಧಾನಸಭಾ ಸ್ಥಾನಗಳಿಗೆ ಮತ್ತು ಸಿಕ್ಕಿಂನ 32 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿತ್ತು.

ಚುನಾವಣಾ ಆಯೋಗದ ಪ್ರಕಾರಅರುಣಾಚಲ ಪ್ರದೇಶದಲ್ಲಿ ಬಿಜೆಪಿ 46 ಸ್ಥಾನಗಳನ್ನು ಗೆದ್ದು, ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. 60 ವಿಧಾನಸಭಾ ಸ್ಥಾನಗಳ ಪೈಕಿ 50 ಸ್ಥಾನಗಳಿಗೆ ಭಾನುವಾರ ಫಲಿತಾಂಶ ಪ್ರಕಟವಾಗಿದ್ದುಆಡಳಿತ ಪಕ್ಷ ಈಗಾಗಲೇ ಹತ್ತು ಸ್ಥಾನಗಳನ್ನು ಅವಿರೋಧವಾಗಿ ಗೆದ್ದುಕೊಂಡಿದೆ. ಈ ಹಿಂದೆ ಅವಿರೋಧವಾಗಿ ಗೆದ್ದಿದ್ದ ಹತ್ತು ಪಕ್ಷದ ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ಕೂಡ ಒಬ್ಬರು.

ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಐದು ಸ್ಥಾನಗಳನ್ನು ಗೆದ್ದರೆಅರುಣಾಚಲದ ಪೀಪಲ್ಸ್ ಪಾರ್ಟಿ ಎರಡು ಸ್ಥಾನಗಳನ್ನು ಮತ್ತು ಎನ್‌ಸಿಪಿ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಮಾತ್ರ ಪಡೆದಿದೆ. ಮೂರು ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ವಿಜಯಶಾಲಿಗಳಾಗಿದ್ದಾರೆ.

ಸಿಕ್ಕಿಂನಲ್ಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಎಸ್‌ಕೆಎಂ 31 ಸ್ಥಾನಗಳನ್ನು ಗೆದ್ದರೆಎಸ್‌ಡಿಎಫ್ ಒಂದು ಸ್ಥಾನವನ್ನು ಗೆದ್ದಿದೆ.

ಪವನ್ ಚಾಮ್ಲಿಂಗ್ ಸೋಲು

ಐದು ಬಾರಿ ಗೆದ್ದಿದ್ದ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಮತ್ತು ಎಸ್‌ಡಿಎಫ್ ಮುಖ್ಯಸ್ಥ ಪವನ್ ಕುಮಾರ್ ಚಾಮ್ಲಿಂಗ್ ಅವರು ಪೊಕ್ಲೋಕ್ ಕಮ್ರಾಂಗ್ ಮತ್ತು ನಾಮ್‌ಚೆಯ್‌ಬಂಗ್ ವಿಧಾನಸಭಾ ಕ್ಷೇತ್ರಗಳಲ್ಲಿ ಸೋತಿದ್ದಾರೆ.

ಎಂಟು ಬಾರಿ ಶಾಸಕರಾಗಿರುವ ಚಾಮ್ಲಿಂಗ್ ಅವರು ತಮ್ಮ ಹುಟ್ಟೂರು ನಾಮ್ಚಿ ಜಿಲ್ಲೆಯ ಪೊಕ್ಲೋಕ್ ಕಮ್ರಾಂಗ್ ಕ್ಷೇತ್ರದಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ ಭೋಜ್ ರಾಜ್ ರೈ ವಿರುದ್ಧ 3,063 ಮತಗಳಿಂದ ಸೋತರು.

ಪ್ರಧಾನಿ ಮೋದಿ ಧನ್ಯವಾದ

ಈಶಾನ್ಯ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದರು.

ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಮೂಲಕ ಸಂದೇಶ ನೀಡಿದ ಮೋದಿ, "ಧನ್ಯವಾದಗಳು ಅರುಣಾಚಲ ಪ್ರದೇಶ! ಈ ಅದ್ಭುತ ರಾಜ್ಯದ ಜನರು ಅಭಿವೃದ್ಧಿಯ ರಾಜಕೀಯಕ್ಕೆ ನಿಸ್ಸಂದಿಗ್ಧವಾದ ಜನಾದೇಶವನ್ನು ನೀಡಿದ್ದಾರೆ. @BJP4Arunachal ನಲ್ಲಿ ಮತ್ತೊಮ್ಮೆ ತಮ್ಮ ನಂಬಿಕೆಯನ್ನು ವ್ಯಕ್ತ ಪಡಿಸಿದ್ದಕ್ಕಾಗಿ ನನ್ನ ಕೃತಜ್ಞತೆಗಳುರಾಜ್ಯದ ಬೆಳವಣಿಗೆಗೆ ಹೆಚ್ಚಿನ ಶಕ್ತಿಯೊಂದಿಗೆ ನಮ್ಮ ಪಕ್ಷವು ಕೆಲಸ ಮಾಡುತ್ತದೆ” ಎಂದು ಹೇಳಿದ್ದಾರೆ.

ಸಿಕ್ಕಿಂ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಎಸ್‌ಕೆಎಂ ಮತ್ತು ಅದರ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರನ್ನು ಕೂಡಾ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.

"ಮುಂಬರುವ ದಿನಗಳಲ್ಲಿ ಸಿಕ್ಕಿಂನ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸಲು ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ" ಎಂದು ಅವರು ನಲ್ಲಿ ಸಂದೇಶ ಪೋಸ್ಟ್ ಮಾಡಿದರು.

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕಿದ ಎಲ್ಲರಿಗೂ ಪ್ರಧಾನಿ ಧನ್ಯವಾದ ಸಲ್ಲಿಸಿದರು.

ಶನಿವಾರ ಪ್ರಕಟವಾದ ಲೋಕ ಸಭಾ ಚುನಾವಣೆ ಸಂಬಂಧಿತ ಮತದಾನೋತ್ತರ ಸಮೀಕ್ಷೆಗಳು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ ಡಿಎ ಮೂರನೇ ಭಾರಿಗೆ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಾಗಿ ಭವಿಷ್ಯ ನುಡಿದಿರುವುದನ್ನು ಇಲ್ಲಿ ಸ್ಮರಿಸಬಹುದು.


PARYAYA: ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ ಎ...:   ಅರುಣಾಚಲ ಪ್ರದೇಶ : ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ   ಎಸ್‌ಕೆಎಂ ಜಯಭೇರಿ ನ ವದೆಹಲಿ : ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 2024 ಜೂನ್‌ 2ರ ಭಾನುವಾರ ಮತ್ತೆ ಅಧಿಕಾ...