Showing posts with label ಲೋಕಪಾಲ. Show all posts
Showing posts with label ಲೋಕಪಾಲ. Show all posts

Saturday, March 23, 2019

ಭಾರತದ ಮೊದಲ ಲೋಕಪಾಲರಾಗಿ ನ್ಯಾಯಮೂರ್ತಿ ಪಿ.ಸಿ. ಘೋಷ್ ಪ್ರಮಾಣ

ಭಾರತದ ಮೊದಲ ಲೋಕಪಾಲರಾಗಿ

ನ್ಯಾಯಮೂರ್ತಿ ಪಿ.ಸಿ. ಘೋಷ್ ಪ್ರಮಾಣ

ನವದೆಹಲಿ: ನ್ಯಾಯಮೂರ್ತಿ  ಪಿನಾಕಿ ಚಂದ್ರ ಘೋಷ್ ಅವರು ಭಾರತದ ಮೊತ್ತ ಮೊದಲನೆಯ ಲೋಕಪಾಲರಾಗಿ 2019 ಮಾರ್ಚ್ 23 ಶನಿವಾರ ಅಧಿಕಾರ ವಹಿಸಿಕೊಂಡರು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್  (ಪಿಸಿ ಘೋಷ್) ಅವರಿಗೆ ಭಾರತದ ಮೊತ್ತ ಮೊದಲ ಲೋಕಪಾಲರಾಗಿ ಪ್ರತಿಜ್ಞಾ ವಿಧಿ ಬೋಧಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ನಡೆಯಿತು ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿತು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

2019 ಮಾರ್ಚ್ 20ರಂದು ರಾಷ್ಟ್ರದ ಮೊದಲ ಲೋಕಪಾಲರಾಗಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಘೋಷ್ ಅವರನ್ನ ನೇಮಕ ಮಾಡಲಾಗಿತ್ತು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:



Tuesday, March 19, 2019

ದೇಶದ ಮೊದಲ ಲೋಕಪಾಲ: ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್‌

ದೇಶದ ಮೊದಲ ಲೋಕಪಾಲ: ನ್ಯಾಯಮೂರ್ತಿ
ಪಿನಾಕಿ ಚಂದ್ರ ಘೋಷ್

ನವದೆಹಲಿ: ದೇಶದ ಮೊದಲ ಲೋಕಪಾಲರಾಗಿ  ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ಅವರು 2019 ಮಾರ್ಚ್ 19ರ ಮಂಗಳವಾರ ನೇಮಕಗೊಂಡರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್ಹೆಸರನ್ನು ಅಂತಿಮಗೊಳಿಸಿ ರಾಷ್ಟ್ರಪತಿಯವರಿಗೆ ಕಳುಹಿಸಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್ಅವರು ಘೋಷ್ಮತ್ತು ಇತರ ಸದಸ್ಯರ ನೇಮಕಕ್ಕೆ ಸಹಿ ಮಾಡಿದರು.

ನ್ಯಾಯಮೂರ್ತಿಗಳಾದ ದಿಲೀಪ್ ಬಿ ಬೊಸ್ಸಾಲೆ, ಪ್ರದೀಪ ಕುಮಾರ್ ಮೊಹಂತಿ, ಅಭಿಲಾಶಾ ಕುಮಾರಿ ಮತ್ತು ಅಜಯ ಕುಮಾರ್ ತ್ರಿಪಾಠಿ ಲೋಕಪಾಲದ ಮೂವರು ನ್ಯಾಯಾಂಗ ಸದಸ್ಯರಾಗಿದ್ದಾರೆ.  ನ್ಯಾಯಾಂಗೇತರ ಸದಸ್ಯರಾಗಿ ದಿನೇಶ ಕುಮಾರ್ ಜೈನ್, ಅರ್ಚನಾ ರಾಮಸುಂದರ್, ಮಹೇಂದರ್ ಸಿಂಗ್ ಮತ್ತು ಡಾ.ಇಂದ್ರಜಿತ್ ಪ್ರಸಾದ ಗೌತಮ್ ಅವರು ನೇಮಕಗೊಂಡರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ಗೊಗೋಯ್‌, ಲೋಕಸಭೆ ಸ್ಪೀಕರ್ಸುಮಿತ್ರಾ ಮಹಾಜನ್ಹಾಗೂ ನ್ಯಾಯಾಂಗ ತಜ್ಞರನ್ನು  ಒಳಗೊಂಡ ಆಯ್ಕೆ ಸಮಿತಿ ನಿರ್ಧಾರ ಕೈಗೊಂಡಿತ್ತು. ಈಗಾಗಲೇ ಲೋಕ ಪಾಲ ಶೋಧ ಸಮಿತಿಯು ಪಟ್ಟಿ ಮಾಡಿದ 10 ಸಂಭಾವ್ಯ ಅಭ್ಯರ್ಥಿಗಳ ಪೈಕಿ ನ್ಯಾಯಮೂರ್ತಿ ಘೋಷ್ಮೊದಲ ಸ್ಥಾನದಲ್ಲಿ ಇದ್ದರು.
2017 ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್‌ ನಿಂದ ನಿವೃತ್ತರಾದ ಘೋಷ್‌, ಸದ್ಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿದ್ದಾರೆ.