Showing posts with label Sri Balaji. Show all posts
Showing posts with label Sri Balaji. Show all posts

Thursday, June 11, 2026

PARYAYA: ಅಧಿಕ ಮಾಸದ ಪರಮ ಏಕಾದಶಿ ಸಂಭ್ರಮ

 ಅಧಿಕ ಮಾಸದ ಪರಮ ಏಕಾದಶಿ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಜೂನ್‌ ೧೧ರ ಗುರುವಾರ ಅಧಿಕ ಮಾಸದ ಪರಮ ಏಕಾದಶಿಯನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು.

ದೇವಾಲಯದ ಭಕ್ತರು ವಿಷ್ಣು ಸಹಸ್ರನಾಮ, ಅಷ್ಟೋತ್ತರ, ಭಜನೆ, ಪ್ರಸಾದ ಸೇವೆಯೊಂದಿಗೆ ಈ ಸಂಭ್ರಮದಲ್ಲಿ ಪಾಲ್ಗೊಂಡರು.

ಇದೇ ಸಂದರ್ಭದಲ್ಲಿ ಬೆಳಗ್ಗೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಿರಿಯ ಮಕ್ಕಳು, ಶಿಕ್ಷಕ ಮತ್ತಿತರ ಸಿಬ್ಬಂದಿ ದೇವಸ್ಥಾನಕ್ಕೆ ಆಗಮಿಸಿ, ಭಜನೆ, ಭಗವದ್ಗೀತೆ ಹಾಡುವ ಮೂಲಕ ಭಗವಂತನ ಸೇವಾ ಕೈಂಕರ್ಯ ನೆರವೇರಿಸಿದರು.

ಕಾಕತಾಳೀಯವಾಗಿ ಅಮೃತಹಳ್ಳಿಯ ಮಕ್ಕಳು ಯಕ್ಷಗುರು ಉಮೇಶರಾಜ್‌ ನೇತೃತ್ವದಲ್ಲಿ ಚೆಂಡೆ ಸಹಿತವಾಗಿ ʼಕಂಸವಧೆʼ ಯಕ್ಷಗಾನ ಅಭ್ಯಾಸ ಸೇವೆಯನ್ನು ಮಾಡಿದರು. ಭಕ್ತ ಸತೀಶ್‌ ಮತ್ತು ಕುಟುಂಬ ಸದಸ್ಯರು ಇದೇ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರನಿಗೆ ತೂಗುದೀಪವನ್ನು ಸಮರ್ಪಿಸಿದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ☝ ಇಲ್ಲಿವೆ. ಚಿತ್ರಗಳನ್ನು ಕ್ಲಿಕ್ಕಿಸುವ ಮೂಲಕ ಚಿತ್ರಗಳ ಸಮೀಪ ನೋಟ ಹಾಗೂ ವಿಡಿಯೋಗಳನ್ನು ನೋಡಬಹುದು.👇

ಅಧಿಕಮಾಸದ ಕೊನೆಯವಾರದ ಪ್ರಯುಕ್ತ ಸಂಪಿಗೆಹಳ್ಳಿಯ ಕೋದಂಡರಾಮ ಭಜನಾ ಮಂಡಳಿಯ ಸದಸ್ಯರು ಶನಿವಾರ ಸಂಜೆ ದೇವಾಲಯದಲ್ಲಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.





PARYAYA: ಅಧಿಕ ಮಾಸದ ಪರಮ ಏಕಾದಶಿ ಸಂಭ್ರಮ:   ಅಧಿಕ ಮಾಸದ ಪರಮ ಏಕಾದಶಿ ಸಂಭ್ರಮ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವ...

Monday, November 3, 2025

PARYAYA: ತುಳಸೀ ಪೂಜಾ

 ತುಳಸೀ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೫ ನವೆಂಬರ್‌ ೨ರ ಭಾನುವಾರ ತುಳಸೀ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.



PARYAYA: ತುಳಸೀ ಪೂಜಾ:   ತುಳಸೀ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೫ ನವೆಂಬರ್‌ ೨ರ ಭಾನುವಾರ ತುಳಸೀ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರ...