Showing posts with label Dance. Show all posts
Showing posts with label Dance. Show all posts

Thursday, January 26, 2017

ಕಿಂಕಿಣಿ ನೃತ್ಯೋತ್ಸವ: ನಿರುಪಮಾ ರಾಜೇಂದ್ರ ‘ಯುಗಳ್’

ಕಿಂಕಿಣಿ ನೃತ್ಯೋತ್ಸವ:  ನಿರುಪಮಾ ರಾಜೇಂದ್ರ ‘ಯುಗಳ್

ಕಥಕ್ ಧಾರೆಯಾಗಿ ಹರಿಯಲಿದೆ ‘ಅಭಂಗ್ ಎಂಬ ಕಾವ್ಯಧಾರೆ
ಬೆಂಗಳೂರು:  ಶಿವಶರಣರ ವಚನಗಳು; ಹರಿದಾಸರ ಪದಗಳು; ಹಿಂದಿ ಸಂತರ ದೋಹಾಗಳು ಹಾಗೆಯೇ ಮಹಾರಾಷ್ಟ್ರ ಸಂತರು ‘ಅಭಂಗ್ಗಳ ರೂಪದಲ್ಲಿ ಭಕ್ತಿಯ ಭಾವಧಾರೆಯನ್ನು ಹರಿಸಿದ್ದಾರೆ... ವಿಶೇಷವೆಂದರೆ, ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಅವರು ಈ ‘ಅಭಂಗ್ ಎಂಬ ಭಕ್ತಿಯ ಕಾವ್ಯಧಾರೆಯನ್ನು ನೃತ್ಯಧಾರೆಯಾಗಿ ಹರಿಸಲಿದ್ದಾರೆ.

ಜನವರಿ ೨೭ರ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿರುವ ೩೩ನೇ ಕಿಂಕಿಣಿ ನೃತ್ಯೋತ್ಸವದಲ್ಲಿ ನಿರುಪಮಾ ರಾಜೇಂದ್ರರ ವಿಶೇಷ ‘ಯುಗಳ ಭಕ್ತಿಯ ನೃತ್ಯಧಾರೆಯಾಗಿ ಹರಿಯಲಿದೆ. ಮಹಾರಾಷ್ಟ್ರ ಸಂತರು, ಭಕ್ತಿಯ ಪರಾಕಾಷ್ಟೆಯಲ್ಲಿ ಸೃಷ್ಟಿಸಿದ ಅಭಂಗ್‌ಗಳನ್ನು ನಿರುಪಮಾ ರಾಜೇಂದ್ರ ನೃತ್ಯರೂಪಕ್ಕಿಳಿಸಲಿದ್ದಾರೆ.

ನಿರುಪಮಾ ರಾಜೇಂದ್ರ ಪ್ರಸ್ತುತಪಡಿಸುವ ‘ತಾಲ್ ಶುದ್ಧ ನೃತ್ಯದಲ್ಲಿ ಭಾರತದ ಸಂಸ್ಕೃತಿ, ಶ್ರದ್ದೆ ಮತ್ತು ಮೌಲ್ಯಗಳು ಅನಾವರಣಗೊಳ್ಳಲಿವೆ.

ರಾಮ ಮತ್ತು ಸೀತೆ ಲಂಕೆಯಿಂದ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಮರಳುತ್ತಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಅವರು ರಾಮಾಯಣದ ಒಂದೊಂದೇ ಘಟನಾವಳಿಯನ್ನು ನೆನಪಿಸಿಕೊಳ್ಳುತ್ತಾ ಸಾಗುವ ಸನ್ನಿವೇಶಗಳನ್ನು ನೃತ್ಯರೂಪದಲ್ಲಿ ನಿರುಪಮಾ ರಾಜೇಂದ್ರ ರಂಗದ ಮೇಲೆ ತೆರೆದಿಡಲಿದ್ದಾರೆ.

  ನಿರುಪಮಾ ರಾಜೇಂದ್ರ ಅವರ ಕಥಕ್ ಯುಗಳ ಬಂದಿಯ ಮತ್ತೊಂದು ವಿಶೇಷವೆಂದರೆ; ಖ್ಯಾತ ಗಾಯಕ ಫಯಾಜ್‌ಖಾನ್ ಅವರ ಕಂಠ ಮಾಧುರ್ಯದಲ್ಲಿ ಮೂಡಿಬರಲಿರುವ ತಿಲ್ಲಾನ ಮಾದರಿಯ ತರಾನಾ ನೃತ್ಯ.

ನಿರುಪಮಾ ರಾಜೇಂದ್ರ ಅವರ ಕಥಕ್‌ಗೆ ಪ್ರವೀಣ್ ಡಿ ರಾವ್ ಸಂಗೀತ ಸಾಥ್ ನೀಡಲಿದ್ದು, ತಬಲಾ- ತ್ರಿಲೋಚನ್ ಕಂಪ್ಲಿ, ಗುರುಮೂರ್ತಿ ವೈದ್ಯ; ಸಿತಾರ್- ಶ್ರುತಿ ಕಾಮತ್; ಸಾರಂಗಿ- ಸರ್ಫ್‌ರೋಜ್ ಖಾನ್; ಕೊಳಲು- ಶಿವಲಿಂಗ.


ಸ್ಥಳ: ಜೆಎಸ್ ಎಸ್ ಅಡಿಟೋರಿಯಂ, ಜಯನಗರ, 

ದಿನಾಂಕ: 27 ಜನವರಿ 2017, ಸಂಜೆ 7.30

Wednesday, June 15, 2016

ದಿಲ್ಲಿಯಲ್ಲಿ ‘ಏಕತೆಯ ಸಂದೇಶ’ ಸಾರಿದ ಕನ್ನಡದ ಕಥಕ್ ಜೋಡಿ

ದಿಲ್ಲಿಯಲ್ಲಿ ಏಕತೆಯ ಸಂದೇಶ ಸಾರಿದ ಕನ್ನಡದ ಕಥಕ್ ಜೋಡಿ
ಏರ್‌ಪೋರ್ಟ್ ದಶಮಾನೋತ್ಸವ ಸಂಭ್ರಮದಲ್ಲಿ ನಿರುಪಮಾ ರಾಜೇಂದ್ರ ರಸಾಭಿನಂದನೆ ಮೋಡಿ

ಬೆಂಗಳೂರು: ದೇಶದ ರಾಜಧಾನಿಯ ಏರ್‌ಪೋರ್ಟ್‌ಗೆ ದಶಮಾನೋತ್ಸವದ ಸಂಭ್ರಮ... ಜತೆಗೆ ಸತತ ಎರಡು ವರ್ಷಗಳಿಂದ ವಿಶ್ವದ ನಂ. ವಿಮಾನ ನಿಲ್ದಾಣ ಅನ್ನೋ ಹೆಗ್ಗಳಿಕೆ.. ಹೆಗ್ಗಳಿಕೆಗೆ ಕಾರಣರಾದ ಎಲ್ಲರಿಗೂ ನೃತ್ಯದ ಮೂಲಕ ನಮನ ಸಲ್ಲಿಸಿದ ಭಾರತ.. ಭಾರತದಿಂದ ಪರವಾಗಿ ನೃತ್ಯದ ರಾಯಭಾರಿಗಳಾಗಿ ರಸಾಭಿನಂದನೆ ಸಲ್ಲಿಸಿದ್ದು ಹೆಮ್ಮೆಯ ಕನ್ನಡದ ಕಥಕ್ ಜೋಡಿ ನಿರುಪಮಾ ರಾಜೇಂದ್ರ.



ಇಂಥಹ ಖುಷಿಯ ಕ್ಷಣಗಳಿಗೆ ಸಾಕ್ಷಿಯಾಗಿದ್ದು ದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದ ದಶಮಾನೋತ್ಸವ ಕಾರ್ಯಕ್ರಮ



ದಶಮಾನೋತ್ಸವದ ಶುಭ ಸಂದರ್ಭದಲ್ಲಿ ವಿಮಾನ ನಿಲ್ದಾಣವನ್ನು ವಿಶ್ವದರ್ಜೆಗೇರಿಸಲು ಸಹಕರಿಸಿದ ಎಲ್ಲ ಸಂಸ್ಥೆಗಳಿಗೆ, ಗಣ್ಯರಿಗೆ ಅಭಿನಂದನೆ ಸಲ್ಲಿಸಲೆಂದೇ ಜಿಎಂಆರ್ ಗ್ರೂಪ್ ಇಂಥದೊಂದು ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸಿತ್ತು.



ದಶಮಾನೋತ್ಸವ ಸಂಭ್ರಮದಲ್ಲಿ ರಸಾಭಿನಂದನ ಎಂಬ ನೃತ್ಯದ ಮೂಲಕ ಹೆಮ್ಮೆಯ ಕನ್ನಡದ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಇಡೀ ವಿಶ್ವಕ್ಕೆ ಏಕತೆಯ ಸಂದೇಶ ಸಾರಿದರು. ಹೊಂದಾಣಿಕೆ ಮಹತ್ವವನ್ನು ನೃತ್ಯದ ಮೂಲಕ ನಿರೂಪಿಸಿದ್ದು, ಅಭಿನಂದಿಸಿದ್ದು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು.

ಇಡೀ ಪ್ರಪಂಚದಲ್ಲೇ, ಸೃಷ್ಟಿಯಲ್ಲೇ ಹೊಂದಾಣಿಕೆಯ ಪಾಠವಿದೆ. ಮೋಡದಿಂದ ಮಳೆ ಬರುವಂತೆ; ಸೂರ್ಯನಿಂದ ಕಮಲ ಅರಳುವಂತೆ ಪರಸ್ಪರ ಸಹಕಾರ, ಹೊಂದಾಣಿಕೆ ಇದ್ದಾಗ ಅಲ್ಲೊಂದು ಶಕ್ತಿ ಸೃಷ್ಟಿಯಾಗುತ್ತದೆ. ಹೀಗೆ ದೇಶ ದೇಶಗಳ ಹೊಂದಾಣಿಕೆ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ಸಂದೇಶ ನೀಡುವ ಮೂಲಕ ಕಥಕ್ ಜೋಡಿ ಎಲ್ಲರ ಮೆಚ್ಚುಗೆ ಪಾತ್ರರಾದರು.

ನೃತ್ಯದ ಮೂಲಕವೇ ನಮನ ಸಲ್ಲಿಸಿದ ನಾಟ್ಯ ಜೋಡಿ, ಪ್ರಸ್ತುತಪಡಿಸಿದ ಮತ್ತೊಂದು ನೃತ್ಯರೂಪಕ ಸಾಥ್ ಸಾಥ್ ವಿಶ್ವದ ಗಣ್ಯರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಸಂಗತ್ಛದ್ವಂ ಸಂವದದ್ವಂ ಸಂವೋ ಮನಾಂಸಿ ಜಾನತಾಂ |
ದೇವಾ ಭಾಗಂ-ಯಥಾ ಪೂರ್ವೇ ಸಂಜಾನಾನಾ ಉಪಾಸತೇ ||

ಒಂದಾಗಿ ನಡೆಯುವ.. ಒಂದಾಗಿ ನುಡಿಯುವ.. ಬುದ್ಧಿ-ಮನಸ್ಸಿನಲ್ಲಿ ಕಲ್ಮಶವಿಲ್ಲದೆ ಜಗತ್ತಿನ ಜನರೆಲ್ಲಾ ಒಂದೇ ಎಂಬ ಭಾವನೆ ನಮ್ಮದಾಗಲಿ.. ಎಂಬ ವೇದಮಂತ್ರದ ಸಂದೇಶವನ್ನು ನೃತ್ಯದಲ್ಲಿ ಅದ್ಭುತವಾಗಿ ಮೂಡಿಸಿದ್ದು ನಿರುಪಮಾ ರಾಜೇಂದ್ರ ಅವರ ಹೆಗ್ಗಳಿಕೆ. ಹವಾಯಿ, ಚೀನಾ, ಆಫ್ರಿಕಾ ಸೇರಿದಂತೆ ವಿಶ್ವದ ಹಲವು ಸಂಸ್ಕೃತಿಗಳ ಪ್ರತಿಬಿಂಬವಾಗಿ ಸಾಥ್ ಸಾಥ್ ನೃತ್ಯರೂಪಕ ಅನಾವರಣಗೊಂಡಿತು. ಇನ್ಮುಂದೆಯೂ ದೇಶದ ಅಭಿವೃದ್ಧಿಯಲ್ಲಿ ವಿಶ್ವದ ಇತರ ರಾಷ್ಟ್ರಗಳ ಸಹಕಾರ ಹೀಗೆ ಮುಂದುವರಿಯಲಿ ಎಂಬ ಸಂದೇಶ ನೃತ್ಯದಲ್ಲಿ ಮೂಡಿಬಂದಿದ್ದು ವಿಶೇಷವಾಗಿತ್ತು. ನೃತ್ಯ ಸಂಭ್ರಮದಲ್ಲಿ ೨೦ ಮಂದಿ ಅಭಿನವ ಡ್ಯಾನ್ಸ್ ಕಂಪನಿಯ ಕಲಾವಿದರು ನಿರುಪಮಾ ರಾಜೇಂದ್ರ ಅವರಿಗೆ ಸಾಥ್ ನೀಡಿದರು.
 
ಏರ್‌ಪೋರ್ಟ್ ದಶಮಾನೋತ್ಸವ ಸಂಭ್ರಮದಲ್ಲಿ ನಿರುಪಮಾ ರಾಜೇಂದ್ರ ಅವರ ಅಭಿವ್ಯಕ್ತಿಯ ರಸಾಭಿನಂದನೆ ಮೋಡಿಗೆ ಕೇಂದ್ರದ ಸಚಿವರಾದ ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಕಥಕ್ ಜೋಡಿಯನ್ನು ಅಭಿನಂದಿಸಿದರು. ಜಿಎಂಆರ್ ಗ್ರೂಪ್‌ನ ಅಧ್ಯಕ್ಷ ಜಿ. ಮಲ್ಲಿಕಾರ್ಜುನ್ ರಾವ್ ಸೇರಿದಂತೆ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಿರುಪಮಾ ಅವರ ನೃತ್ಯವೈಭವಕ್ಕೆ ಸಾಹಿತ್ಯದ ಸಾಥ್ ನೀಡಿದ್ದು ಶತಾವಧಾನಿ ಡಾ. ಆರ್.ಗಣೇಶ್. ಪ್ರವೀಣ್ ಡಿ.ರಾವ್ ಅವರ ಸಂಗೀತದ ಜತೆ ವಿನೋದ್‌ಗೌಡ ಹಾಗೂ ಸಂತೋಷ್‌ಕುಮಾರ್ ಅವರ ದೃಶ್ಯ-ಬೆಳಕಿನಾಟ ಮೇಳೈಸಿತ್ತು.

Friday, June 3, 2016

ಬೆಂಗಳೂರಿನಲ್ಲಿ ‘ಕಲಾರ್ಣವ- ೨೦೧೬’

ಬೆಂಗಳೂರಿನಲ್ಲಿ ಕಲಾರ್ಣವ- ೨೦೧೬
ಜೂನ್ ಮತ್ತು ೫ರಂದು
ಬೆಂಗಳೂರು: ಅಬ್ಬಬ್ಬಾ ! ಒಂದೇ ಸೂರಿನಡಿಯಲ್ಲಿ ಸಂಗೀತ, ನೃತ್ಯ, ಸಾಂಸ್ಕೃತಿಕ ಹಬ್ಬದ ದಿಬ್ಬಣ. ಅಲ್ಲಿ ಸಂಗೀತವಿದೆ. ನೃತ್ಯವಿದೆ. ನೃತ್ಯ ರೂಪಕವಿದೆ. ಹಾಸ್ಯವಿದೆ. ಅತಿರಥ ಮಹಾರಥ ಕಲಾವಿದರು, ಸಂಗೀತ ಲೋಕದ ದಿಗ್ಗಜರ ಒಟ್ಟು ಸೇರುವಿಕೆಯಿದೆ, ಹೆಸರು ಕಲಾರ್ಣವ. ಅರ್ಥಾತ್ ಕಲಾಸಾಗರ.

ಜೂನ್ ಮತ್ತು ಶನಿವಾರ ಭಾನುವಾರದಂದು ಬೆಂಗಳೂರಿನ ಜನತೆಗೆ ಇದು ವೀಕೆಂಡ್ ವಿಶೇಷ. ವರ್ಷದಿಂದ ವರ್ಷಕ್ಕೆ ಹಲವು ಹೊಸತನಗಳ ಮೂಲಕ ಸಂಗೀತ, ಸಾಂಸ್ಕೃತಿಕ ಆಸಕ್ತರು ಹುಬ್ಬೇರುವಂತೆ ಮಾಡುವ ಕಲಾರ್ಣವ-೨೦೧೬ ಅನ್ನು ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ದಯಾನಂದ ಸಾಗರ ಕಾಲೇಜ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ನಗರದ
ಗೋಕುಲಂ ಸಂಗೀತ ಶಾಲೆ ಕಾರ್ಯಕ್ರಮದ ಪ್ರೇರಕ ಶಕ್ತಿ. ದಿನವಿಡೀ ನಡೆಯುವ ಸಾಂಸ್ಕೃತಿಕ ಉತ್ಸವದಲ್ಲಿ ಹಿರಿಯ- ಕಿರಿಯ ಸಂಗೀತಗಾರರು ನೃತ್ಯಕಲಾವಿದರು ಕಲೆಯ ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ.

ದಯಾನಂದ ಸಾಗರ ಕಾಲೇಜ್ ಆಫ್ ಎಂಜಿನಿಯರಿಂಗ್, ದಯಾನಂದ ಸಾಗರ ಯುನಿವರ್ಸಿಟಿ ಮತ್ತು ಡಾ. ಡಿ.ಪ್ರೇಮಚಂದ್ರ ಸಾಗರ್ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್ ಸಹಯೋಗದಲ್ಲಿ ಗೋಕುಲಂ ಸಂಗೀತ ಶಾಲೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ. ಗೋಕುಲಂ ಸಂಗೀತ ಶಾಲೆ, ಖ್ಯಾತ ಕೊಳಲುವಾದಕರಾದ ವೇಣುಗೋಪಾಲ್ ಅವರ ಪರಿಕಲ್ಪನೆಯ ಕೂಸು.

ಕಾರ್ಯಕ್ರಮ ವೈವಿಧ್ಯ :
ಕೃಷ್ಣ ಲೀಲಾರ್ಣವ:  ಭಾರತದ ಸಾಂಪ್ರದಾಯಿಕ ನೃತ್ಯ ಪ್ರಕಾರಗಳನ್ನು ಬಳಸಿ ಕೃಷ್ಣ ಲೀಲಾರ್ಣವ ರೂಪಕಕ್ಕೆ ನೃತ್ಯ ಸಂಯೋಜನೆ ಮಾಡಲಾಗಿದೆ. ಇದು ಬಾರಿಯ ವಿಶೇಷ. ಹುಟ್ಟಿನಿಂದ- ಭಗವದ್ಗೀತೆಯವರೆಗೆ ಕೃಷ್ಣನ ಅದ್ಭುತ, ರಮ್ಯ ಸಾಹಸಗಾಥೆಯನ್ನು ಸಾರುವ ವಿಶಿಷ್ಟ ನೃತ್ಯರೂಪಕ ಇದಾಗಿದ್ದು, ೧೦ಕ್ಕೂ ಹೆಚ್ಚು ನೃತ್ಯಪಟುಗಳ ತಂಡಗಳು, ಕೃಷ್ಣ ಲೀಲಾರ್ಣವ ನೃತ್ಯರೂಪಕವನ್ನು ಪ್ರಸ್ತುತಪಡಿಸುತ್ತಿರುವುದು ವಿಶೇಷಸುಮಾರು ೧೨೦ಕ್ಕೂ ಹೆಚ್ಚು ಮಂದಿ ನೃತ್ಯಪಟುಗಳ ನಾಟ್ಯದಲ್ಲಿ ಕೃಷ್ಣಲೀಲಾಮೃತದ ಮಂಥನ ನಡೆಯಲಿದೆ.

 ಮರು ಭೂಮಿ ಸಂಗೀತ ಬೆಂಗಳೂರಿನಲ್ಲಿ :  ಖ್ಯಾತ ರಾಜಸ್ತಾನಿ ಜಾನಪದ ಸಂಗೀತಗಾರ ಮಂಗನಿಯಾರ್ ದಿಯು ಖಾನ್ ಅವರಿಂದ ರಾಜಸ್ತಾನಿ ಜಾನಪದ ಸಂಗೀತ. ಕಮೈಚಾರ್, ಕರ್‌ತಾಲ್ ಮತ್ತು ಡೋಲಕ್ ಸಾಂಪ್ರದಾಯಿಕ ವಾದ್ಯಗಳನ್ನು ಬಳಸಿ ಹಾಡುವ ರಾಜಸ್ತಾನದ ಜಾನಪದ ಸಂಗೀತ ಕೇಳುವುದೇ ಒಂದು ಖುಷಿ. ಬಾರಿ ಇಂಥ ವಿಶಿಷ್ಟ ಮರುಭೂಮಿಯ ಜಾನಪದ ಸಂಗೀತ ಕಲಾರ್ಣವದಲ್ಲಿ ಕೇಳಿಬರಲಿದೆ.
ಇಷ್ಟೇ ಅಲ್ಲ, ತಾಳಯೋಗಿ ಎಂದೇ ಖ್ಯಾತರಾಗಿರುವ ಪಂ. ಸುರೇಶ್ ತಲ್ವಲ್ಕರ್ ಅವರಿಂದ ತಾಳಕೀರ್ತನ್ ಎಂಬ ಶಾಸ್ತ್ರೀಯ ಕೀರ್ತನೆ. ರಂಗ ಸೌರಭದಿಂದ ಗಂಗಾವತರಣಶತಾವಧಾನಿ ಡಾ. ಆರ್ ಗಣೇಶ್ ಅವರಿಂದ ಬೆಳ್ಳಿತೆರೆಯ ಹೊನ್ನಿನ ಹಾಡು ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ದಕ್ಷಿಣ ಭಾರತದ ಎವರ್‌ಗ್ರೀನ್ (ನಿತ್ಯನೂತನ) ಸಿನಿಮಾ ಗೀತೆಗಳ ಸಾಹಿತ್ಯದ ಕುರಿತು ವಿಶಿಷ್ಟ ವಿಶ್ಲೇಷಣೆ ನಡೆಸಲಿದ್ದಾರೆ. ಪ್ರೊ. ಕೃಷ್ಣೇಗೌಡರಿಂದ ಚಟಾಕಿ, ಪ್ರವೀಣ್ ಡಿ ರಾವ್ ಅವರ ಪುತ್ರ ಸೂರ್ಯ ಪ್ರವೀಣ್ ಅವರಿಂದ, ಸ್ಟ್ರಮ್ ಸ್ಟೇಷನ್, ಖ್ಯಾತ ಕಲಾವಿದರಾದ ವಿಲಾಸ್ ನಾಯಕ್, ರಾಘವೇಂದ್ರ ಹೆಗಡೆ ಪ್ರಹ್ಲಾದ ಆಚಾರ್ಯ, ವಿನೋದ್ ಗೌಡ ಮತ್ತು ಸಹ ಕಲಾವಿದರಿಂದ ವಿಷುವಲ್ ಆರ್ಟ್... ಹೀಗೆ ತರಾವರಿ ಕಾರ್ಯಕ್ರಮಗಳ ಉತ್ಸವ ಕಲಾಭಿಮಾನಿಗಳನ್ನು ಕೈ ಬೀಸಿ ಕರೆಯಲಿದೆ.

ಖ್ಯಾತ ದ್ವಂದ್ವ ಪಿಟೀಲು ವಾದಕರಾದ ಶ್ರೀ ಮೈಸೂರು ನಾಗರಾಜ್ ಹಾಗೂ ಡಾ. ಶ್ರೀ ಮೈಸೂರು ಮಂಜುನಾಥ್ ಲಯತರಂಗ ತಂಡದೊಂದಿಗೆ ವಿಶಿಷ್ಟ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಕು.ವಾರಿಜಶ್ರೀ ಮತ್ತು ವರುಣ್ ಪ್ರದೀಪ್ ಅವರಿಂದ ಮೆಡ್ಲಿ ಕಾರ್ಯಕ್ರಮ ನಡೆಯಲಿದೆ.  ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮಾಜಿ ಸಚಿವ ಆರ್. ಅಶೋಕ್ ಪಾಲ್ಗೊಳ್ಳಲಿದ್ದಾರೆ.


ವಿದ್ಯಾರ್ಣವ ಮತ್ತು ಕಲಾವತಂಸ ಪ್ರಶಸ್ತಿ ಬಾರಿ ಶ್ರೇಷ್ಠ ವಿದ್ವಾಂಸರಿಗೆ ಹಾಗೂ ಕಲಾವಿದರಿಗೆ ವಿದ್ಯಾರ್ಣವ ಮತ್ತು ಕಲಾವತಂಸ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಗಾನ ಗಾರುಡಿಗ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಖ್ಯಾತ ಗಾಯಕ ಹರಿಹರನ್ ವಿದ್ಯಾರ್ಣವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜತೆಗೆ ವೇಗದ ಚಿತ್ರಕಲಾವಿದ ಎಂದೇ ಖ್ಯಾತರಾಗಿರುವ ವಿಲಾಸ್ ನಾಯಕ್, ಖ್ಯಾತ ಸ್ಯಾಂಡ್ ಆರ್ಟಿಸ್ಟ್ (ಮರಳು ಚಿತ್ರಕಾರ) ರಾಘವೇಂದ್ರ ಹೆಗಡೆ ಮತ್ತು ಖ್ಯಾತ ನೆರಳು ಬೆಳಕಿನಾಟದ ಮಾಂತ್ರಿಕ ಪ್ರಹ್ಲಾದ ಆಚಾರ್ಯ ಅವರಿಗೆ ಕಲಾವತಂಸ ಪ್ರಶಸ್ತಿ ನೀಡಲಾಗುವುದು.