Showing posts with label Bangalore Buddha Education/ General Knowledge Flash News Lokeshwar Rao Nature News Painting. Show all posts
Showing posts with label Bangalore Buddha Education/ General Knowledge Flash News Lokeshwar Rao Nature News Painting. Show all posts

Sunday, April 21, 2019

ಭೂ ದಿನ: ‘ಪ್ರಕೃತಿ’ ವರ್ಣಚಿತ್ರ ಪ್ರದರ್ಶನ

ಭೂ ದಿನ: ‘ಪ್ರಕೃತಿವರ್ಣಚಿತ್ರ ಪ್ರದರ್ಶನ
ಬೆಂಗಳೂರು: ಪ್ರಕೃತಿಗೂ  ಗೌತಮ ಬುದ್ಧ ಮತ್ತು ಆತ ಬೋಧಿಸಿದ ಬೌದ್ಧಮತಕ್ಕೂ ಅವಿನಾಭಾವ ಸಂಬಂಧವಿದೆ. ಸಂಬಂಧವನ್ನು ಚಿತ್ರಿಸಿರುವಪ್ರಕೃತಿವಿಶಿಷ್ಟ ವರ್ಣಚಿತ್ರ ಪ್ರದರ್ಶನವನ್ನು ಏಪ್ರಿಲ್ 22ಭೂ ದಿನ ಸಲುವಾಗಿ ಬೆಂಗಳೂರಿನ ಮಹಾತ್ಮಾಗಾಂಧಿ ರಸ್ತೆಯ ನವರತನ್  ಕಲಾ ಗ್ಯಾಲರಿಯಲ್ಲಿ ಸಂಘಟಿಸಲಾಗಿದೆ.

ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಪ್ರಸ್ತುತ ಅರಣ್ಯಪಡೆಯ ಮುಖ್ಯಸ್ಥರಾಗಿರುವ ಎಂ. ಲೋಕೇಶ್ವರ ರಾವ್ (ಐಎಫ್ಎಸ್) ಅವರು ವರ್ಣ ಚಿತ್ರಗಳನ್ನು ರಚಿಸಿದ್ದಾರೆ.

          ಲೋಕೇಶ್ವರ ರಾವ್ ಅವರು ಪ್ರಸ್ತುತ ನಮ್ಮ ತಳಿಗಳನ್ನು ಸಂರಕ್ಷಿಸಲು ಯೋಜಿಸಲಾಗಿರುವಭೂ ದಿನ ಜಾಲ ಪ್ರಚಾರಾಭಿಯಾನದ ನಿರ್ದೇಶಕರೂ ಆಗಿದ್ದು ಏಪ್ರಿಲ್ 20ರಿಂದಲೇ ಆರಂಭವಾಗಿರುವ ವರ್ಣಚಿತ್ರ ಪ್ರದರ್ಶನವು ಏಪ್ರಿಲ್ 23ರವರೆಗೂ ಮುಂದುವರೆಯುತ್ತದೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ: