Showing posts with label ಮರ. Show all posts
Showing posts with label ಮರ. Show all posts

Monday, September 1, 2025

PARYAYA: ಹಿಮಾಚಲ ʼದಿಮ್ಮಿ ಪ್ರವಾಹʼ ಕರ್ನಾಟಕಕ್ಕೂ ಎಚ್ಚರಿಕೆಯ ಗಂಟೆ

 ಹಿಮಾಚಲ ʼದಿಮ್ಮಿ ಪ್ರವಾಹʼ ಕರ್ನಾಟಕಕ್ಕೂ ಎಚ್ಚರಿಕೆಯ ಗಂಟೆ

ಹಿಮಾಚಲ ಪ್ರದೇಶದ ಚಂಬಾದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಚಿತ್ರಿಸಿದ ವಿಡಿಯೋ ಪೋಸ್ಟ್‌ ಒಂದು ಸಾಮಾಜಿಕ ಜಾಲಗಳಲ್ಲಿ ವೈರಲ್‌ ಆಗಿದೆ. @GoHimachal_ ಎಂಬ X (ಟ್ವಿಟರ್) ಎಂಬ ಈ ಟ್ವೀಟ್‌ ಸಂದೇಶದಲ್ಲಿ ಹಿಮಾಚಲ ಪ್ರದೇಶದ ಚಂಬಾದ ರಾವಿ ನದಿಯು ಮರದ ದಿಮ್ಮಿಗಳಿಂದ ತುಂಬಿಹೋಗಿರುವ ಪುಟ್ಟ ವಿಡಿಯೋ ಇದೆ.

ನದಿಯಲ್ಲಿ ಮರದ ದಿಮ್ಮಿಗಳ ಪ್ರವಾಹಕ್ಕೆ ಅರಣ್ಯ ಮಾಫಿಯಾಗಳ ಅಕ್ರಮ ಮರ ಕಡಿಯುವಿಕೆಯ ಕಾರಣಇಂತಹ ಕೃತ್ಯಗಳು ಪ್ರವಾಹದ ವಿನಾಶಕಾರಿ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಪರಿಸರ ಹಾನಿ ಮತ್ತು ನೈಸರ್ಗಿಕ ವಿಕೋಪಗಳ ನಡುವಿನ ಸಂಬಂಧವನ್ನು ಈ ಘಟನೆ ಎತ್ತಿ ತೋರಿಸುತ್ತದೆ. ಅಕ್ರಮ ಮರ ಕಡಿಯುವಿಕೆಯು ಕೇವಲ ಕಾಡು ನಾಶ ಮಾಡುವುದಲ್ಲ, ನೆಲದಲ್ಲಿ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆಇದರಿಂದ ಪ್ರವಾಹದ ಅಪಾಯ ಹೆಚ್ಚುತ್ತದೆ. ನದಿಯಲ್ಲಿ ಕಂಡುಬಂದ ಅಧಿಕ ಪ್ರಮಾಣದ ಮರದ ದಿಮ್ಮಿಗಳು ಭಾರತದಲ್ಲಿ ನಡೆಯುತ್ತಿರುವ ಅಕ್ರಮ ಅರಣ್ಯ ನಾಶಕ್ಕೆ ಪುರಾವೆಯಾಗಿದೆ. 1988ರಿಂದ ಮರ ಕಡಿಯುವಿಕೆಗೆ ನಿಷೇಧವಿದ್ದರೂಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ.


ವರ್ಲ್ಡ್ ರೈನ್‌ಫಾರೆಸ್ಟ್ ಮೂವ್‌ಮೆಂಟ್‌ನಂತಹ ಅಧ್ಯಯನಗಳು
ಭಾರತದ ಅರಣ್ಯಗಳು ನಿರಂತರವಾಗಿ ತಮ್ಮ ವ್ಯಾಪ್ತಿಯನ್ನು ಕಳೆದುಕೊಳ್ಳುತ್ತಿವೆ ಎಂದು ಸೂಚಿಸುತ್ತವೆ. ಭ್ರಷ್ಟಾಚಾರ ಮತ್ತು ಕಾನೂನು ಜಾರಿ ಕೊರತೆಯಿಂದಾಗಿ ಸಂಘಟಿತ ಅಪರಾಧ ಸಿಂಡಿಕೇಟ್‌ಗಳು ಅಕ್ರಮ ಮರ ಹತ್ಯೆಯಲ್ಲಿ ತೊಡಗಿಕೊಂಡಿವೆ. (ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ)

ಮರದ ದಿಮ್ಮಿಗಳ ಪ್ರವಾಹದ ಈ ಘಟನೆಯು ಹಿಮಾಚಲ ಪ್ರದೇಶದಲ್ಲಿ ಮುಂಗಾರು ಸಂಬಂಧಿತ ದುರಂತಗಳ ಹೆಚ್ಚಳದ ಒಂದು ಭಾಗ. ಹವಾಮಾನ ಬದಲಾವಣೆಯಿಂದಾಗಿ ಅನಿಶ್ಚಿತ ಮಳೆಯ ಜೊತೆಗೆ ಅಕ್ರಮ ಮರ ಮಾರಣದಂತಹ ಮಾನವ ಚಟುವಟಿಕೆಗಳು ವಿಪರೀತ ಪ್ರವಾಹಕ್ಕೆ ಕಾರಣವಾಗುತ್ತಿವೆ.

2025ರ ಪ್ರವಾಹದಲ್ಲಿ ಸಾವು ನೋವಿನ ಜೊತೆಗೆ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದೆ. ಅರಣ್ಯಗಳ ಮೇಲೆ ಕಟ್ಟುನಿಟ್ಟಾದ ನಿಗಾ ಇಡುವುದು ಮತ್ತು ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾದ ಅಗತ್ಯವನ್ನು ಇದು ಒತ್ತಿಹೇಳುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ಈ ವಿಡಿಯೋ ಮೇಲಿನ ಮಾಧ್ಯಮ ಮತ್ತು ಸಾರ್ವಜನಿಕ ಚರ್ಚೆಗಳು ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರದ ವೈಫಲ್ಯವನ್ನು ಟೀಕಿಸಿವೆ.


ಹಿಮಾಚಲ ಪ್ರದೇಶದ ರಾವಿ ನದಿಯ ಮರದಿಮ್ಮಿ ಪ್ರವಾಹದ ವಿಡಿಯೋಕ್ಕೆ ಪ್ರತಿಕ್ರಿಯೆಯಾಗಿ ʼಮೊದಲು ಕುಲ್ಲುಈಗ ಚಂಬಾ!ʼ ಎಂಬುದಾಗಿ ಎಂಬುದಾಗಿ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು ಕುಲ್ಲು ಮನಾಲಿಯಲ್ಲಿ ಬಿಯಾಸ್ ನದಿ ಪ್ರವಾಹದಲ್ಲಿ ಕಾಣಿಸಿಕೊಂಡ ಮರಗಳ ದಿಮ್ಮಿಗಳ ಪ್ರವಾಹದ ವಿಡಿಯೋ ಹಾಕಿದ್ದರು.

ಈ ಘಟನೆ ಬಗ್ಗೆ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ. ಆದರೆ ನಾವು ಇನ್ನೆಷ್ಟು ದಿನ ಈ ವಿಷಯವನ್ನು ನಿರ್ಲಕ್ಷಿಸುತ್ತೇವೆದುರಾಸೆಯೇ ಹಿಮಾಲಯದ ಪರಿಸರ ಹಾನಿಗೆ ಕಾರಣ ಮತ್ತು ಪ್ರತಿ ವರ್ಷ ಅಮಾಯಕರು ಇದರ ಬೆಲೆಯನ್ನು ತೆರುತ್ತಿದ್ದಾರೆ ಎಂಬ ಪ್ರತಿಕ್ರಿಯೆಗಳು ಟ್ವೀಟಿಗರಿಂದ ಕೇಳಿ ಬಂದಿದೆ.

ಇದು ಕೇವಲ ಹಿಮಾಚಲದ ಸಮಸ್ಯೆಯಷ್ಟೇ ಅಲ್ಲ. ಕರ್ನಾಟಕದಲ್ಲೂ ಮರಗಳ ಮಾರಣ ಹೋಮ ಪರಿಣಾಮವಾಗಿ ಮುಂಗಾರು ಮಳೆಯ ಹೊತ್ತಿನಲ್ಲಿ ಭೂಕುಸಿತಗಳು ಹೆಚ್ಚುತ್ತಿರುವ ವರದಿಗಳು ಕಳೆದ ಹಲವಾರು ವರ್ಷಗಳಿಂದ ಬರುತ್ತಲೇ ಇವೆ.

ಆದರೆ ಮರ ಮಾರಣಹೋಮ ನಿಂತಿದೆಯೇ?

-ನೆತ್ರಕೆರೆ ಉದಯಶಂಕರ

PARYAYA: ಹಿಮಾಚಲ ʼದಿಮ್ಮಿ ಪ್ರವಾಹʼ ಕರ್ನಾಟಕಕ್ಕೂ ಎಚ್ಚರಿಕೆಯ ಗಂಟೆ:   ಹಿಮಾಚಲ ʼ ದಿಮ್ಮಿ ಪ್ರವಾಹ ʼ ಕರ್ನಾಟಕಕ್ಕೂ ಎಚ್ಚರಿಕೆಯ ಗಂಟೆ ಹಿ ಮಾಚಲ ಪ್ರದೇಶದ ಚಂಬಾದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಚಿತ್ರಿಸಿ ದ ವಿಡಿಯೋ ಪೋಸ್ಟ್‌ ಒಂದು ಸಾಮಾಜಿಕ...

Sunday, August 18, 2024

PARYAYA: ಬಡಾವಣೆ ಮಧ್ಯದ ನಿರುಪದ್ರವಿ ಮರದ ಕಗ್ಗೊಲೆ..!

 ಬಡಾವಣೆ ಮಧ್ಯದ ನಿರುಪದ್ರವಿ ಮರದ ಕಗ್ಗೊಲೆ..!

ಬೆಂಗಳೂರು: ಮರಕ್ಕೆ ಕೊಡಲಿ, ಕಾಡುನಾಶಗಳಿಂದ ಆಗುತ್ತಿರುವ ಅನಾಹುತಗಳು, ಭೂ ಕುಸಿತಗಳು, ಗುಡ್ಡ ಕುಸಿತಗಳು ಮಳೆ, ಬಿಸಿಲಿನ ಏರುಪೇರು ಸೇರಿದಂತೆ ಹವಾಮಾನ ವೈಪರೀತ್ಯಗಳ ವರದಿಯನ್ನು ನಿತ್ಯವೂ ಪತ್ರಿಕೆಗಳಲ್ಲಿ ನೋಡುತ್ತಲೇ ಇದ್ದೇವೆ. ಮರ ಕಡಿಯಬಾರದು ಎಂಬುದಾಗಿ ಎಲ್ಲೆಡೆಯಲ್ಲಿ ಜೋರಾದ ಕೂಗು ಕೇಳಿ ಬರುತ್ತಿದೆ.

ಆದರೆ ಯಾವುದೇ ಸಾರ್ವಜನಿಕ ಹಿತದ ಯೋಜನೆಗಾಗಿ ಅಲ್ಲ, ವಾಹನ ಸಂಚಾರ, ಜನ ನಿಬಿಡ ರಸ್ತೆಯಲ್ಲಿ ಸಂಚಾರ ಅಡ್ಡವಾಗುತ್ತಿದೆ ಎಂದು ಅಲ್ಲ, ಯಾವುದೇ ಮನೆ ಕಟ್ಟಡದ ಮೇಲೆ ಬಿದ್ದು ಮನೆಗೆ ಹಾನಿ ಜೀವಹಾನಿ ಆದೀತು ಎಂಬ ಭೀತಿಗಾಗಿಯೂ ಅಲ್ಲ, ಸುಖಾ ಸುಮ್ಮನೆ ಮರ ಗುತ್ತಿಗೆದಾರರ ಖಯಾಲಿಗಾಗಿ ಜನವಸತಿ ಇರುವ ಬಡಾವಣೆಯ ರಸ್ತೆಯೊಂದರಲ್ಲಿನ ಬೃಹತ್‌ ʼಮಳೆ ಮರʼವನ್ನು 2024 ಆಗಸ್ಟ್‌ 17ರ ಶನಿವಾರ ನಿವಾಸಿಗಳ ಪ್ರತಿಭಟನೆಯ ನಡುವೆಯೇ ʼಕಗ್ಗೊಲೆʼ ಮಾಡಲಾಗಿದೆ.

ಈ ಕಗ್ಗೊಲೆಗೆ ಮರ ಗುತ್ತಿಗೆದಾರರ ಜೊತೆಗೆ ಬಿಬಿಎಂಪಿಯೂ ಕೈಜೋಡಿಸಿದೆ ಎಂಬ ಆಪಾದನೆಗಳು ಕೇಳಿ ಬಂದಿವೆ.

ಈ ದೊಡ್ಡ ಮಳೆ ಮರವು 40 ವರ್ಷಗಳಿಂದ ರಾಜರಾಜೇಶ್ವರಿನಗರದ ಸಚ್ಚಿದಾನಂದ ನಗರ ಬಡಾವಣೆಯ ಜನರಿಗೆ ಅಮೂಲ್ಯವಾದ ಪರಿಸರ ಸೇವೆಯನ್ನು ನೀಡಿತ್ತು.

ಮರ ಆರೋಗ್ಯಕರವಾಗಿತ್ತು. ಹುಳಬಾಧೆ ಸೇರಿದಂತೆ ಯಾವುದೇ ರೋಗಬಾಧೆಯೂ ಇದಕ್ಕೆ ಇರಲಿಲ್ಲ. ಈ ಮರದಿಂದ ಯಾರಿಗೂ ಯಾವುದೇ ಬೆದರಿಕೆಯೂ ಇರಲಿಲ್ಲ.

ಆದರೆ ಅದನ್ನು ನಿರ್ದಯಿ ಮರಗುತ್ತಿಗೆದಾರರು ಗುತ್ತಿಗೆದಾರರು ಆಗಸ್ಟ್ 17 ರಂದು ಒಂದೆರಡು ಮರಕತ್ತರಿಸುವ ಯಂತ್ರವನ್ನು ಬಳಸಿ ಕೆಲವೇ ಗಂಟೆಗಳಲ್ಲಿ ತುಂಡುಗಳಾಗಿ ಕತ್ತರಿಸಿದರು.

ಬಿ ಎನ್ ಪ್ರಸನ್ನ ಕುಮಾರ್ ಎಂಬವರು ಈ ಕೃತ್ಯದ ರೂವಾರಿಯಾಗಿದ್ದು, ಮರ ಕಡಿಯಲು ಅವರಿಗೆ ಅನುಮತಿ ನೀಡುವ ಮೂಲಕ ಬಿಬಿಎಂಪಿ ಅರಣ್ಯಕೋಶ ಅವರೊಂದಿಗೆ ಶಾಮೀಲಾಗಿರುವುದು ದಾಖಲೆಗಳಲ್ಲಿ ಕಂಡುಬಂದಿದೆ.

ಈ ಹಿತಚಿಂತಕ ಮರ ಇರುವ ಸ್ಥಳವನ್ನು ಟ್ರೀ ಆಫೀಸರ್‌ ಪರಿಶೀಲಿಸದೆಯೇ ಮರಕ್ಕೆ ಕೊಡಲಿ ಏಟು ನೀಡಲು ಆಗಸ್ಟ್‌ 12ರಂದು ಬಿಬಿಎಂಪಿ ಅರಣ್ಯ ಕೋಶವು ಆದೇಶ ನೀಡಿದೆ

ಟ್ರೀ ಆಫೀಸರ್ ಮರವನ್ನು ಪರೀಕ್ಷಿಸಿ ತನ್ನ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ...ಹಾಗೆ ಮಾಡದೆಯೇ ಗುತ್ತಿಗೆದಾರ ಒತ್ತಾಯದ ಮೇರೆಗೆ ಬಿಬಿಎಂಪಿಯ ವೃಕ್ಷಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಹಿಯಡಿಯಲ್ಲಿ ಮರ ಕಡಿಯುವ ಆದೇಶ ಹೊರಡಿಸಲಾಗಿತ್ತು ಎಂದು ತಿಳಿದುಬಂದಿದೆ. ವಿವಾದಾತ್ಮಕ ರಾಜಕೀಯ ನಾಯಕರೊಂದಿಗಿನ ನಿಕಟ ಸಂಬಂಧದಿಂದಾಗಿ ಗುತ್ತಿಗೆದಾರರು  ಬಿಬಿಎಂಪಿ ಅರಣ್ಯ ಕೋಶದ ಅಧಿಕಾರಿಗಳ ಮೇಲೆ ಪ್ರಾಬಲ್ಯ ಹೊಂದಿದ್ದಾರೆ ಎನ್ನಲಾಗಿದೆ.

74 ವರ್ಷದ ಶಂಕರ್ ನಾರಾಯಣ್ ಅವರು ಮರವನ್ನು ಉಳಿಸಲು ಶತ ಪ್ರಯತ್ನ ಮಾಡಿದರು. ಆದರೆ ಆಸ್ತಿ ಮಾಲೀಕರು ಮತ್ತು ಬಿಬಿಎಂಪಿ ಗುತ್ತಿಗೆದಾರರು ಅವರ ಮನವಿಗೆ ಕಿವಿಗೊಡಲಿಲ್ಲ. ಅಕ್ಕ ಪಕ್ಕದ ನಿವಾಸಿಗಳ ಪ್ರತಿಭಟನೆ ಕೂಡಾ ಫಲ ನೀಡಲಿಲ್ಲ.

ಅರಣ್ಯ ಉಪ ಸಂರಕ್ಷಣಾಧಿಕಾರಿಬಿಬಿಎಂಪಿಅರಣ್ಯ ಕೋಶದ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

ನಮ್ಮ ಪರಿಸರ ವ್ಯವಸ್ಥೆಯನ್ನು ಉಳಿಸುವುದು ಸಂವಿಧಾನದ  51-ಎ (ಜಿ) ವಿಧಿಯ ಅಡಿಯಲ್ಲಿ ನಮ್ಮ ಸಾಂವಿಧಾನಿಕ ಕರ್ತವ್ಯವಾಗಿದೆ.

ನಾಗರಿಕರ ಮೂಲಭೂತ ಕರ್ತವ್ಯಗಳ ಬಗ್ಗೆ ವ್ಯವಹರಿಸುವ ವಿಧಿ 51-A (g) ಹೀಗೆ ಹೇಳುತ್ತದೆ: “ಕಾಡುಗಳುಸರೋವರಗಳುನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಮತ್ತು ಸುಧಾರಿಸುವುದು ಮತ್ತು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ."

ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮತ್ತು ಭವಿಷ್ಯದಲ್ಲಿ ಇಂತಹ ಸಂಶಯಾಸ್ಪದ ಮರ ಕಡಿಯುವ ಆದೇಶಗಳು ಹೊರಬೀಳದಂತೆ ನೋಡಿಕೊಳ್ಳಲು ಶಂಕರ ನಾರಾಯಣ ಅವರಂತಹ ವೃಕ್ಷಪ್ರೇಮಿಗಳ ಜೊತೆಗೆ ಇತರರು ಜೊತೆಗೂಡತೊಡಗಿದ್ದಾರೆ.

ಕಲುಷಿತ ಬೆಂಗಳೂರಿನಲ್ಲಿ ಉಸಿರಾಡಲು ಶುದ್ಧ ಗಾಳಿಯ ಅವಶ್ಯಕತೆ ಇದ್ದಾಗ ಬಿಬಿಎಂಪಿಯು ಇಂತಹ ಬೃಹತ್ ಮರಕ್ಕೆ ಕೊಡಲಿ ಪೆಟ್ಟು ಕೊಡುವ ಮೂಲಕ ನಮಗೆ ಘೋರ ಅನ್ಯಾಯ ಮಾಡಿದೆ ಎಂದು ಆಸುಪಾಸಿನ ನಿವಾಸಿಗಳೂ ದೂರುತ್ತಿದ್ದಾರೆ.

ಪರಿಸರದ ಬಗ್ಗೆ ನಿಮಗೆ ಕಾಳಜಿ ಇರುವವರು ತಮ್ಮ ಪ್ರತಿಭಟನೆಯನ್ನು ಬರೆದು ಬಿಬಿಎಂಪಿ ಡಿಸಿಎಫ್‌, ಬಿಬಿಎಂಪಿ ಕಮೀಷನರ್‌, ಕರ್ನಾಟಕದ ಮುಖ್ಯಮಂತ್ರಿ ಮತ್ತು ಪಿಸಿಸಿಎಫ್‌ ಅವರ ಮಿಂಚಂಚೆಗಳಿಗೆ ಕಳುಹಿಸುವಂತೆ ಅವರು ಕೋರಿದ್ದಾರೆ.

ಮಿಂಚಂಚೆಗಳು ಹೀಗಿವೆ:

dcfbbmp12@gmail.com

comm@bbmp.gov.in

cm.kar@nic.in

pccfkar@gmail.com

ಸುದ್ದಿ ನೋಡಿ- ಇತರ ಮಾಧ್ಯಮಗಳಲ್ಲಿ: ಕೆಳಗೆ ಕ್ಲಿಕ್‌ ಮಾಡಿರಿ.

ಪ್ರಜಾವಾಣಿ: 


https://www.prajavani.net/district/bengaluru-city/a-tree-that-has-been-providing-shade-for-four-decades-cut-accused-2932495

ಸ್ಪೀಡ್‌ ನ್ಯೂಸ್‌ ಕನ್ನಡ: https://www.youtube.com/watch?v=piGXwT1u55s

ಡೆಕ್ಕನ್‌ ಹೆರಾಲ್ಡ್‌ :

 https://www.deccanherald.com/india/karnataka/bengaluru/bbmp-axes-mature-rain-tree-in-rr-nagar-3155232 

PARYAYA: ಬಡಾವಣೆ ಮಧ್ಯದ ನಿರುಪದ್ರವಿ ಮರದ ಕಗ್ಗೊಲೆ..!:   ಬಡಾವಣೆ ಮಧ್ಯದ ನಿರುಪದ್ರವಿ ಮರದ ಕಗ್ಗೊಲೆ..! ಬೆಂ ಗಳೂರು: ಮರಕ್ಕೆ ಕೊಡಲಿ, ಕಾಡುನಾಶಗಳಿಂದ ಆಗುತ್ತಿರುವ ಅನಾಹುತಗಳು, ಭೂ ಕುಸಿತಗಳು, ಗುಡ್ಡ ಕುಸಿತಗಳು ಮಳೆ, ಬಿಸಿಲಿ...