Showing posts with label ನ್ಯಾಯಮೂರ್ತಿ ವಿ ಕೆ ತಾಹಿಲ್‌ರಮಣಿ. Show all posts
Showing posts with label ನ್ಯಾಯಮೂರ್ತಿ ವಿ ಕೆ ತಾಹಿಲ್‌ರಮಣಿ. Show all posts

Saturday, July 21, 2018

ಮದ್ರಾಸ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿ ಕೆ ತಾಹಿಲ್‌ರಮಣಿ


ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿ ಕೆ ತಾಹಿಲ್ರಮಣಿ

ನವದೆಹಲಿ : ಮದ್ರಾಸ್ ಹೈಕೋರ್ಟಿನ  ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಶೀಘ್ರವೇ ಮುಂಬೈ ಹೈಕೋರ್ಟಿನ ನ್ಯಾಯಮೂರ್ತಿ ವಿಜಯ ಕಮ್ಲೇಶ್ ತಾಹಿಲ್ರಮಣಿ (ವಿ.ಕೆ. ತಾಹಿಲ್ ರಮಣಿ) ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ಪ್ರಸ್ತುತ ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ  ಇಂದಿರಾ ಬ್ಯಾನರ್ಜಿ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಭಡ್ತಿ ನೀಡಲಾಗಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ  ದೀಪಕ್ ಮಿಶ್ರಾ ನೇತೃತ್ವದ ವರಿಷ್ಠ ನ್ಯಾಯ ಮಂಡಳಿ ಬಿಡುಗಡೆ ಮಾಡಿರುವ ಟಿಪ್ಪಣಿ ಪ್ರಕಾರ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನು ಸುಪ್ರೀಂ ಕೋರ್ಟಿಗೆ ಶಿಫಾರಸು ಮಾಡಲಾಗಿದೆ. ಹೀಗಾಗಿ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನ ತೆರವಾಗಲಿರುವುದರಿಂದ "ಎಲ್ಲ ದೃಷ್ಟಿಯಿಂದಲೂ ಸೂಕ್ತ' ಎನಿಸಿರುವ ನ್ಯಾಯಮೂರ್ತಿ ತಾಹಿಲ್ರಮಣಿ ಅವರನ್ನು ಹುದ್ದೆಗೆ ನೇಮಿಸಿದೆ.

ಇದೇ ವೇಳೆ ಪಟ್ನಾ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಅವರು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಲ್ಲಿ ಈಗ ಪ್ರಭಾರ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ  ಗೀತಾ ಮಿತ್ತಲ್ ಅವರನ್ನು ಜಮ್ಮು ಕಾಶ್ಮೀರ ಹೈಕೋರ್ಟ್  ಮುಖ್ಯ ನ್ಯಾಯಮೂರ್ತಿಯಾಗಿ  ನೇಮಿಸಲಾಗಿದೆ. ಇಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನ್ಯಾಯಮೂರ್ತಿ ಬಿ ಡಿ ಅಹ್ಮದ್ ಅವರು ವರ್ಷ ಮಾರ್ಚ್ 15ರಂದು ನಿವೃತ್ತರಾಗಿದ್ದರು.