Friday, January 1, 2021

ಇಂದಿನ ಇತಿಹಾಸ History Today ಜನವರಿ 01

 ಇಂದಿನ ಇತಿಹಾಸ  History Today ಜನವರಿ 01

2021: ನವದೆಹಲಿ: ದೇಶದ ಆರ್ಥಿಕತೆಯ ಪುನರುಜ್ಜೀವನದ ಸೂಚಕವಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಡಿಸೆಂಬರ್ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯ ಗರಿಷ್ಠ .೧೫ ಲಕ್ಷ ಕೋಟಿ ರೂ.ಗಳನ್ನು ಮುಟ್ಟಿದೆ. ಡಿಸೆಂಬರ್ ತಿಂಗಳ ಜಿಎಸ್ಟಿ ಸಂಗ್ರಹವು ಸರಣಿ ಹಬ್ಬಗಳ ಬೇಡಿಕೆ ಹಿನ್ನೆಲೆಯಲ್ಲಿ ಹೆಚ್ಚಿದ್ದು, ಆರ್ಥಿಕತೆಯ ಪುನಃಶ್ಚೇತವನ್ನು ಪ್ರತಿಬಿಂಬಿಸುತ್ತದೆ ಎಂದು ಹಣಕಾಸು ಸಚಿವಾಲಯ 2021ರ ಜನವರಿ 01ರ ಶುಕ್ರವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿತು. ೨೦೨೦ ಡಿಸೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯ ,೧೫,೧೭೪ ಕೋಟಿ ರೂಪಾಯಿಗಳಾಗಿದ್ದು, ಇದು ೨೦೧೭ರ ಜುಲೈ ೧ರಂದು ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸಿದ ನಂತರದ ಗರಿಷ್ಠ ಮೊತ್ತವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿತು. "ಇದು ಕಳೆದ ೨೧ ತಿಂಗಳುಗಳಿಂದ ಮಾಸಿಕ ಆದಾಯದಲ್ಲಿ ಅತ್ಯಧಿಕ ಬೆಳವಣಿಗೆಯಾಗಿದೆ. ಇದು ಸಾಂಕ್ರಾಮಿಕ ನಂತರದ ತ್ವರಿತ ಆರ್ಥಿಕ ಚೇತರಿಕೆ ಮತ್ತು ಜಿಎಸ್ಟಿ ತಪ್ಪಿಸಿಕೊಳ್ಳುವವರ ವಿರುದ್ಧದ ರಾಷ್ಟ್ರವ್ಯಾಪಿ ಅಭಿಯಾನದ ಪರಿಣಾಮವಾಗಿದೆ. ಇತ್ತೀಚೆಗೆ ಪರಿಚಯಿಸಲಾದ ಅನೇಕ ವ್ಯವಸ್ಥಿತ ಬದಲಾವಣೆಗಳು ಕೂಡಾ ಸುಧಾರಿತ ಅನುಸರಣೆಗೆ ಕಾರಣವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ೨೦೨೦ ಡಿಸೆಂಬರ್ ೩೧ ರವರೆಗೆ ನವೆಂಬರ್ ತಿಂಗಳಿಗಾಗಿ ಸಲ್ಲಿಸಲಾದ ಒಟ್ಟು ಜಿಎಸ್ಟಿಆರ್ - ಬಿ ರಿಟರ್ನ್ಸ್ ಸಂಖ್ಯೆ ೮೭ ಲಕ್ಷ ಎಂದು ಪ್ರಕಟಣೆ ಹೇಳಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2021: ನವದೆಹಲಿ: ಖೈಬರ್ ಪಖ್ತೂನ್ಕ್ವಾದ ಕರಕ್ ಜಿಲ್ಲೆಯಲ್ಲಿ ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸಿದ ಘಟನೆಯ ಬಗ್ಗೆ ಖಾರವಾಗಿ ಪ್ರತಿಕ್ರಿಸಿರುವ ಭಾರತ ಪಾಕಿಸ್ತಾನಕ್ಕೆ ಔಪಚಾರಿಕ ಪ್ರತಿಭಟನೆಯನ್ನು ಸಲ್ಲಿಸಿದೆ.  " ವಿಷಯವನ್ನು ಪಾಕಿಸ್ತಾನದ ಜೊತೆಗೆ ಅಧಿಕೃತವಾಗಿ ಕೈಗೆತ್ತಿಕೊಳ್ಳಲಾಯಿತು ಮತ್ತು ಪ್ರಬಲ ಪ್ರತಿಭಟನೆ ಸಲ್ಲಿಸಲಾಯಿತು ಎಂದ ಹೆಸರು ಹೇಳಲು ಇಚ್ಛಿಸದ, ಸುದ್ದಿ ಮೂಲ 2021ರ ಜನವರಿ 01ರ ಶುಕ್ರವಾರ  ತಿಳಿಸಿತು. ವಾಯುವ್ಯ ಪಟ್ಟಣವಾದ ಕರಕ್ ತೇರಿ ಗ್ರಾಮದಲ್ಲಿರುವ ಕೃಷ್ಣ ದ್ವಾರ ಮಂದಿರದೊಂದಿಗೆ ಶ್ರೀ ಪರಮಂ ಜಿ ಮಹಾರಾಜರ ಸಮಾದಿಯನ್ನು ಬುಧವಾರ ಜನಸಮೂಹ ಧ್ವಂಸಗೊಳಿಸಿದೆ.  ದೇವಾಲಯವು ಹೆಚ್ಚುವರಿ ಭೂಮಿಯನ್ನು ಅತಿಕ್ರಮಣ ಮಾಡಿ ಬೆಂಕಿ ಹಚ್ಚಿದೆ ಎಂದು ಜನಸಮೂಹ ಹೇಳಿಕೊಂಡಿದೆ. ಹಿಂದೂ ದೇವಾಲಯದ ಮೇಲೆ ಬುಧವಾರ ದಾಳಿ ನಡೆದ ನಂತರ ನಡೆಸಲಾದ ರಾತ್ರಿ  ಕಾರ್ಯಾಚರಣೆಯಲ್ಲಿ ಕನಿಷ್ಠ ಎರಡು ಡಜನ್ ಜನರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸುಮಾರು ,೫೦೦ ಜನರು ದೇವಾಲಯದ ಮೇಲಿನ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ವರದಿ ಹೇಳಿದೆ. ಟೆರಿ ಗ್ರಾಮದಲ್ಲಿ ಪೂಜಾ ಸ್ಥಳದ ಮೇಲೆ ನಡೆದ ದಾಳಿಯ ಬಗ್ಗೆ ದೇಶದ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಗುರುವಾರ ಸ್ವ ಇಚ್ಛೆಯಿಂದ ಗಮನ ಸೆಳೆದ ನಂತರ ಬಂಧನಗಳು ನಡೆದಿವೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2021: ಇಸ್ಲಾಮಾಬಾದ್: ವಾಯವ್ಯ ಪಾಕಿಸ್ತಾನದಲ್ಲಿನ ಖೈಬರ್ ಪಖ್ತೂನ್ ಕ್ವಾದಲ್ಲಿ ಮುಸ್ಲಿಂ ಜನಸಮೂಹದಿಂದ ನಾಶವಾದ ಹಿಂದೂ ದೇವಾಲಯವನ್ನು ಪ್ರಾಂತೀಯ ಸರ್ಕಾರದ ಹಣವನ್ನು ಬಳಸಿಕೊಂಡು ಪುನರ್ನಿರ್ಮಿಸಲಾಗುವುದು ಪ್ರಾದೇಶಿಕ ಸರ್ಕಾರದ ಮಾಹಿತಿ ಸಚಿವರು 2021ರ ಜನವರಿ 01ರ ಶುಕ್ರವಾರ ತಿಳಿಸಿರುವುದಾಗಿಅಲ್ ಜಜೀರಾ ಪತ್ರಿಕೆ ವರದಿ ಮಾಡಿದೆ. ಪ್ರಾಂತೀಯ ರಾಜಧಾನಿ ಪೇಶಾವರದಿಂದ ಆಗ್ನೇಯಕ್ಕೆ ಸುಮಾರು ೧೦೦ ಕಿ.ಮೀ (೬೨ ಮೈಲಿ) ದೂರದಲ್ಲಿರುವ ಕರಕ್ ಪಟ್ಟಣದ ಶ್ರೀ ಪರಮಹಂಸ ಜಿ ಮಹಾರಾಜ್ ಸಮಾಧಿ ಮತ್ತು  ದೇವಾಲಯದ ಮೇಲೆ ಬುಧವಾರ ನಡೆದ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಸ್ಥಳೀಯ ಮುಸ್ಲಿಂ ನಾಯಕ ಸೇರಿದಂತೆ ಸುಮಾರು ಎರಡು ಡಜನ್ ಜನರನ್ನು ಪೊಲೀಸರು ಬಂಧಿಸಿದ್ದಾರೆ. "ದಾಳಿಯಿಂದ ಉಂಟಾದ ಹಾನಿಗೆ ನಾವು ವಿಷಾದಿಸುತ್ತೇವೆ" ಎಂದು ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್--ಇನ್ಸಾಫ್ (ಪಿಟಿಐ) ಪಕ್ಷಕ್ಕೆ ಸೇರಿದ ಪ್ರಾಂತೀಯ ಮಾಹಿತಿ ಸಚಿವ ಕಮ್ರಾನ್ ಬಂಗಾಶ್ ಹೇಳಿದ್ದಾರೆ. "ದೇವಾಲಯ ಮತ್ತು ಪಕ್ಕದ ಮನೆಯ ಪುನರ್ನಿರ್ಮಾಣಕ್ಕೆ ಮುಖ್ಯಮಂತ್ರಿ ಆದೇಶಿಸಿದ್ದಾರೆ" ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2021: ನವದೆಹಲಿ: ಚೀನಾದ ಜಲಪ್ರದೇಶದಲ್ಲಿ ಕೆಲವು ತಿಂಗಳುಗಳಿಂದ ಎರಡು ವ್ಯಾಪಾರಿ ಹಡಗುಗಳಲ್ಲಿನ ೩೯ ಮಂದಿ ಭಾರತೀಯ ನಾವಿಕರು ಸಿಕ್ಕಿ ಹಾಕಿಕೊಂಡಿದ್ದು, ಅವರನ್ನು ರಕ್ಷಿಸಿ ಸ್ವದೇಶಕ್ಕೆ ಕರೆತರುವ ಬಗ್ಗೆ ವಿವಿಧ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಭಾರತ 2021ರ ಜನವರಿ 01ರ ಶುಕ್ರವಾರ ತಿಳಿಸಿತು. ಸಮುದ್ರದಲ್ಲಿ ಅಥವಾ ಚೀನಾದ ಬಂದರಿನಲ್ಲಿ ಸಿಬ್ಬಂದಿ ಬದಲಾವಣೆ ಸೇರಿದಂತೆ ಹಲವಾರು ಆಯ್ಕೆಗಳನ್ನು ನೋಡಲಾಗುತ್ತಿದೆ ಎಂದು ಭಾರತ ಹೇಳಿತು. ಭಾರತೀಯ ನಾವಿಕರು ಎಂ.ವಿ.ಜಗ್ ಆನಂದ್ ಮತ್ತು ಎಂ.ವಿ. ಅನಸ್ತಾಸಿಯಾದಲ್ಲಿದ್ದಾರೆ, ಅವರು ಆಸ್ಟ್ರೇಲಿಯಾದ ಕಲ್ಲಿದ್ದಲನ್ನು ಹೊತ್ತೊಯ್ದಿದ್ದಾರೆ. ಆದರೆ ಅವರ ಸರಕುಗಳನ್ನು ಇಳಿಸಲು ಚೀನಾದಲ್ಲಿ ಅನುಮತಿ ನೀಡಲಾಗಿಲ್ಲ. ಚೀನಾ-ಆಸ್ಟ್ರೇಲಿಯಾ ನಡುವಣ ವ್ಯಾಪಾರೀ ಬಿಕ್ಕಟ್ಟು ಇದಕ್ಕೆ ಕಾರಣ ಎಂದು ಹೇಳಲಾಗಿದೆ.  ವಿಷಯವನ್ನು ಚೀನಾದ ವಿದೇಶಾಂಗ ಸಚಿವಾಲಯ ಮತ್ತು ಸ್ಥಳೀಯ ಪ್ರಾಂತೀಯ ಅಧಿಕಾರಿಗಳೊಂದಿಗೆ ಕೈಗೆತ್ತಿಕೊಳ್ಳಲಾಗಿದ್ದು, ಹಡಗುಗಳನ್ನು ಹಡಗುಕಟ್ಟೆಗೆ ಒಯ್ಯಲು ಅಥವಾ ಅವರ ಸಿಬ್ಬಂದಿಯನ್ನು ಬದಲಾಯಿಸಲು ಅನುಮತಿ ನೀಡುವಂತೆ ಕೋರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ. ಬೃಹತ್ ಸರಕು ಸಾಗಣೆ ಹಡಗು ಎಂ.ವಿ.ಜಗ್ ಆನಂದ್, ೨೩ ಭಾರತೀಯ ಸಿಬ್ಬಂದಿಯೊಂದಿಗೆ ಜೂನ್ ೧೩ ರಿಂದ ಹೆಬೈ ಪ್ರಾಂತ್ಯದ ಜಿಂಗ್ಟಾಂಗ್ ಬಂದರಿನ ಬಳಿ ಲಂಗರು ಹಾಕಿದ್ದರೆ, ಎಂ.ವಿ.ಅನಾಸ್ತಾಸಿಯಾ ಸೆಪ್ಟೆಂಬರ್ ೨೦ ರಿಂದ ೧೬ ಭಾರತೀಯರೊಂದಿಗೆ ಕಾಫಿಡಿಯನ್ ಬಂದರಿನ ಬಳಿ ಲಂಗರು ಹಾಕಿದೆ.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2021: ನವದೆಹಲಿ: ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯ ತುರ್ತು ಬಳಕೆಯ ಅಧಿಕಾರವನ್ನು ನೀಡಲು ಸರ್ಕಾರ ನೇಮಿಸಿದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿಯು (ಎಸ್ಇಸಿ)  2021ರ ಜನವರಿ 01ರ ಶುಕ್ರವಾರ ಶಿಫಾರಸು ಮಾಡಿದ್ದು ಕೋವಿಡ್ ೧೯ ವಿರುದ್ಧ ಲಸಿಕೆ ಪರವಾನಗಿ ನೀಡುವ ನಿಟ್ಟಿನಲ್ಲಿ ಭಾರತ ಅತ್ಯಂತ ಸಮೀಪದಲ್ಲಿದೆ. ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ -ಸಿಡಿಎಸ್ಕೊ) ವಿಷಯ ತಜ್ಞರ ಸಮಿತಿಯ ಅನುಮೋದನೆಯು ಮುಂದಿನ ಕೆಲವು ದಿನಗಳಲ್ಲಿ ಲಸಿಕೆಯೊಂದಿಗೆ ಸಾಮೂಹಿಕ ರೋಗನಿರೋಧಕ ಅಭಿಯಾನ ಪ್ರಾರಂಭಿಸಲು ದಾರಿ ಮಾಡಿಕೊಡುತ್ತದೆ. ಅಸ್ಟ್ರಾಜೆನೆಕಾ ಲಸಿಕೆಯ ಕೋಟಿಗೂ ಹೆಚ್ಚು ಪ್ರಮಾಣವನ್ನು ಈಗಾಗಲೇ ಅದರ ಸ್ಥಳೀಯ ಉತ್ಪಾದಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಸಂಗ್ರಹಿಸಿದೆ ಮತ್ತು ಶನಿವಾರದಂದು ಶೈತ್ಯಾಗಾರದಿಂದ ಎಲ್ಲ ರಾಜ್ಯಗಳಿಗೆ ಅದನ್ನು ಸಾಗಿಸಲು ಪ್ರಾರಂಭಿಸಬಹುದು ಎಂದು ಸುದ್ದಿ ಮೂಲಗಳು ತಿಳಿಸಿವೆ. ಶನಿವಾರದ ದಿನವೇ ಚುಚ್ಚುಮದ್ದು ಅಭಿಯಾನ (ವ್ಯಾಕ್ಸಿನೇಷನ್) ಕಾರ್ಯಕ್ರಮದ ವ್ಯಾಪಕ ಡ್ರೈ ರನ್ ಕೂಡಾ ನಡೆಯಲಿದೆ. ಅಮೆರಿಕದ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಕೋವಿಡ್-೧೯ ಸೋಂಕನ್ನು ಹೊಂದಿರುವ ಭಾರತ, ಮುಂದಿನ ಆರರಿಂದ ಎಂಟು ತಿಂಗಳಲ್ಲಿ ೩೦ ಕೋಟಿ ಜನರಿಗೆ ಚುಚ್ಚುಮದ್ದು ನೀಡಲು ಯೋಜಿಸಿದೆ. ಕೈಗೆಟುಕುವ ಆಕ್ಸ್ಫರ್ಡ್ ಲಸಿಕೆ ಅದರ ದೊಡ್ಡ ಭರವಸೆಯಾಗಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2021: ನವದೆಹಲಿ: ಇಂಗ್ಲೆಂಡಿನಲ್ಲಿ ಕಂಡುಬಂದ ರೂಪಾಂತರೀ ಕೋವಿಡ್ -೧೯ ಸೋಂಕು ಭಾರತದಲ್ಲಿ ಇನ್ನೂ ನಾಲ್ಕು ಮಂದಿಗೆ ತಗುಲಿದ್ದು, ’ಇಂಗ್ಲೆಂಡ್ ವೈರಸ್ ಸೋಂಕಿತರ ಸಂಖ್ಯೆ 2021ರ ಜನವರಿ 01ರ ಶುಕ್ರವಾರ ೨೯ಕ್ಕೆ ಏರಿತು.  ಮಂಗಳವಾರ ಮತ್ತು ಬುಧವಾರ ೨೦ ಜನರಲ್ಲಿ ಸೋಂಕು ಕಂಡು ಬಂದಿದ್ದರೆ, ಗುರುವಾರ ಮಂದಿಯಲ್ಲಿ ಮತ್ತು ಶುಕ್ರವಾರ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.  ೨೯ ಪ್ರಕರಣಗಳಲ್ಲಿ ಎಂಟು ಪ್ರಕರಣಗಳು ನವದೆಹಲಿಯ ಎನ್ಸಿಡಿಸಿ, ಐಜಿಐಬಿ ನವದೆಹಲಿಯಲ್ಲಿ ಎರಡು, ಎನ್ಐವಿ ಪುಣೆಯಲ್ಲಿ ಐದು, ಸಿಸಿಎಂಬಿ ಹೈದರಾಬಾದ್ನಲ್ಲಿ ಮೂರು, ನಿಮ್ಹಾನ್ಸ್ ಬೆಂಗಳೂರಿನಲ್ಲಿ ೧೦ ಮತ್ತು ಎನ್ಐಬಿಎಂಜಿ ಕಲ್ಯಾಣಿಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ಡಿಸೆಂಬರಿನಲ್ಲಿ ಮೊದಲ ಬಾರಿಗೆ ಇಂಗ್ಲೆಂಡಿನಲ್ಲಿ ಪತ್ತೆಯಾದ ಹೊಸ ತಳಿ ಪ್ರಪಂಚದಾದ್ಯಂತ ಹೊಸ ಆತಂಕಗಳನ್ನು ಹರಡಿದೆ. ಹೆಚ್ಚಿನ ದೇಶಗಳು ತಮ್ಮ ವಾಯುಪ್ರದೇಶವನ್ನು ಹೊಸ ತಳಿ ಕಂಡುಬಂದ ದೇಶಗಳಿಗೆ ಮುಚ್ಚಿವೆ. ಭಾರತವೂ ಇಂಗ್ಲೆಂಡಿನಿಂದ ಜನವರಿ ರವರೆಗೆ ವಿಮಾನಯಾನವನ್ನು ಅಮಾನತುಗೊಳಿಸಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜನವರಿ 01 (2020+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment