Friday, May 29, 2026

PARYAYA: ಛಾಯಾಚಿತ್ರ ನೆನಪು ಮೂಡಿಸಿದಾಗ

 ಛಾಯಾಚಿತ್ರ ನೆನಪು ಮೂಡಿಸಿದಾಗ

ಕಿರು ಲೇಖನ-1

ನಾನು ಹೇಳಲು ಹೊರಟಿರುವುದು 94-95ರ ಸಮಯದ ಘಟನೆ.ಪರಿಸರದ ವಿಷಯದಲ್ಲಿ  ಸ್ವಯಂ ಪ್ರೇರಣೆಯಿಂದ ಒಂದಷ್ಟು ಕೆಲಸ ಮಾಡುತ್ತಿದ್ದುದರ ನೆನಪು.ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದುದರ ನೆನಪು.

ವಿಶೇಷವಾಗಿ ಪಾಲಿಥೀನ್ ಚೀಲದಿಂದ ಪರಿಸರಕ್ಕೆ ಆಗುತ್ತಿರುವ ಹಾನಿ.ಆಗಿನ್ನೂ ಪ್ಲಾಸ್ಟಿಕ್ ಬಗ್ಗೆ ಯಾರಿಗೂ ಅಷ್ಟು ತಿಳಿದಿರಲಿಲ್ಲ.

ಅದರ ಸಂಬಂಧ ಒಂದು ರೀತಿಯ ಸಂಶೋಧನೆಯನ್ನೇ ನಡೆಸಿದ್ದೆ ಎನ್ನಬಹುದು.ಎಲ್ಲೆಲ್ಲೂ ಪಾಲಿಥೀನ್ ಚೀಲಗಳನ್ನು ಬಿಸಾಡಲ್ಪಟ್ಟು ರಸ್ತೆ,ಸ್ಥಳಗಳು ಅಸಹ್ಯ ಪರಿಸರವನ್ನು ನಿರ್ಮಿಸಿರುವುದನ್ನು ನೋಡಿ ಮನಸು ಖೇದವಾಗುತ್ತಿತ್ತು. ಈಗ ಬಹಳ ಜಾಗೃತಿ ಬಂದಿದೆ ಅಂತೇನಿಲ್ಲ.ಅದರ ಇನ್ನೊಂದು ಭಯಾನಕ ರೂಪ.

ಇದರ ಬಗ್ಗೆ ವಿಪರೀತವಾದ ಚರ್ಚೆಗಳು ನಡೆಯುತ್ತಿದ್ದವು.ನಿರ್ವಹಣೆ ವಿಷಯದಲ್ಲಿ ಹಲವಾರು ಉತ್ಸಾಹಿ ನಾಗರಿಕರು ಡಾಕ್ಟರ್ ಗಳು
ಸ್ವಚ್ಛ ಬೆಂಗಳೂರಿಗೆ ಸಾಕಷ್ಟು ಕೆಲಸ ಮಾಡುತ್ತಿದ್ದರು. ಇದರ ಸಂಬಂಧ ನನ್ನ ಪುಸ್ತಕ "ಫನತ್ಯಾಜ್ಯ ನಿರ್ವಹಣೆ"ಯಲ್ಲಿ ಸಂಪೂರ್ಣ ಮಾಹಿತಿ ಬರೆದಿದ್ದೇನೆ.

ಪಾಲಿಥೀನ್ ಚೀಲಕ್ಕೆ ಪರ್ಯಾಯ ಇದನ್ನು ಹುಡುಕುತ್ತಾ ಬೇಟಿ ನೀಡಿದ ಪ್ಲಾಸ್ಟಿಕ್ ತಯಾರು ಮಾಡುವ ಕಾರ್ಖಾನೆಗಳು ಎಷ್ಟೋ !

ಸಂಶೋಧನೆಯ ಸಂಸ್ಥೆಗಳೆಷ್ಟೊ!

ಮಾಲಿನ್ಯ ನಿಯಂತ್ರಣ ಮಂಡಳಿ,ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್ ,ಟಾಟಾ ಇನ್ಸ್ಟಿಟ್ಯೂಟ್ ಹೀಗೆ ಹಲವು.ಎಲ್ಲೂ ಇದರ ಬಗ್ಗೆ ಸಂಶೋಧನೆ ನಡೆದಿರಲಿಲ್ಲ.ಕೇವಲ ಪ್ಲಾಸ್ಟಿಕ್ ಉಪಯೋಗದ ಬಗ್ಗೆ ಸಾಕಷ್ಟು ಮಾಹಿತಿ ಸಿಗುತ್ತಿತ್ತು.

ಆಗ ಪಾಲಿಥೀನ್ ಚೀಲಕ್ಕೆ ಪರ್ಯಾಯ ಏನಾಗಬಹುದು!! ಎನ್ನುವ ಕುತೂಹಲ ಪ್ರಶ್ನೆ ಪತ್ರಿಕೆಗಳಲ್ಲಿ ಬರುತ್ತಿದ್ದವು.

ಕೆಲವಷ್ಟು ಜನ ತಮ್ಮದೇ ರೀತಿಯಲ್ಲಿ ವಾದಮಾಡುತ್ತಿದ್ದರು .ಅವು ಕೇವಲ ವಾದವಾಗಿರುತ್ತಿತ್ತು ಅಷ್ಟೆ.

ಆಗಷ್ಟೇ ಬಯೋ ಡಿ ಗ್ರೇಡಬಲ್ ಪ್ಲಾಸ್ಟಿಕ್ ಪರ್ಯಾಯ ಆಗಬಹುದು ಎನ್ನುವ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿತ್ತು.

ಆಗ ಮೈಸೂರು ರಸ್ತೆಯ ನಾಯಿಂಡನ ಹಳ್ಳಿ,ಮಾಗಡಿ ರಸ್ತೆ,ಬೆಂಗಳೂರಿನ ವಿಜಯನಗರದ ರೈಲ್ವೇ ಕಂಬಿಗಳ ಎರಡು ಪಕ್ಕದಲ್ಲಿ ರಾಶಿ,ರಾಶಿ ಪ್ಲಾಸ್ಟಿಕ್ ಚೀಲಗಳು ಬೆಟ್ಟದಂತೆ ಕಾಣಿಸುತ್ತಿದ್ದವು. 

ಹಸುಗಳು ಈ ಪ್ಲಾಸ್ಟಿಕ್ ಗಳನ್ನು ತಿನ್ನುತ್ತಿದ್ದವು. ಅವುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸೇರಿ ಸಾಯುತ್ತಿದ್ದವು.ಕೊಳಚೆ ನೀರು ಹರಿದು ಹೋಗುವ ಮೋರಿಗಳಲ್ಲಿ ಈ ಪಾಲಿಥೀನ್ ಚೀಲಗಳು ಸಿಲುಕಿ ರಸ್ತೆಯೆಲ್ಲಾ ಅಸಹ್ಯ ಪರಿಸರ ಸೃಷ್ಟಿಯಾಗುತ್ತಿತ್ತು.

ಇದರ ನೂರಾರು ವರದಿಗಳು ಬರುತ್ತಿದ್ದವು .

ಮಾಮೂಲಿನಂತೆ ಸರಿಯಾದ ಗುರಿ ಇಲ್ಲದ ಅಧಿಕಾರ,ಲಂಚ, ಭ್ರಷ್ಟಾಚಾರ ಇವುಗಳಿಂದ ಪರಿಸರ ನಲುಗಿತು,ನಲುಗುತ್ತಿದೆ.

ಆಗ ಕೆಲವು ಸ್ವಯಂಸೇವಾ ಸಂಘಗಳು ಈ ವಿಷಯದಲ್ಲಿ  ಕೆಲಸಮಾಡಲು ಸಾಕಷ್ಟು ಪ್ರಯತ್ನಿಸುತ್ತಿದ್ದವು .ಇದರ ವಿವರಣೆಯನ್ನು ನನ್ನ "ಘನ ತ್ಯಾಜ್ಯ ನಿರ್ವಹಣೆ"ಪುಸ್ತಕದಲ್ಲಿ ಸಂಪೂರ್ಣ ವಿವರಣೆ ನೀಡಿದ್ದೇನೆ.

ಮೈಸೂರಿನಲ್ಲಿ ಡಾ!! ಜಗದೀಶ, ಈಗ ನಿವೃತ್ತ ಪ್ರಾಧ್ಯಾಪಕರು ,ಪಾಲಿಮರ್ ವಿಜ್ಞಾನದಲ್ಲಿ ಪರಿಣಿತರು.ಹಲವಾರು ಪರಿಸರ ಸಂಬಂಧಿ ಕಾರ್ಯಕ್ರಮಗಳನ್ನು ಮೈಸೂರಿನಲ್ಲಿ ನಡೆಸುತ್ತಿದ್ದರು.

ನಾನು  ದೂರದರ್ಶನಲ್ಲಿ ಇದರ ಸಂಬಂಧ ಚರ್ಚೆ ನಡೆಸುತ್ತಿದ್ದೆ. ಇದರಲ್ಲಿ  ಸ್ನೇಹಿತರಾದ ಡಾ !!ಜಗದೀಶ್, ಕೆಲವು ಪರಿಣಿತರು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕಾರ್ಪೊರೇಷನ್ ಅಧಿಕಾರಿಗಳು ಭಾಗಿಯಾಗುತ್ತಿದ್ದರು.

ನಂತರ ನಾನು :"ಪ್ಲಾಸ್ಟಿಕ್ ಮತ್ತು ಪರಿಸರ "ಎನ್ನುವ ಸಾಕ್ಷ್ಯ ಚಿತ್ರ ತಯಾರಿಸಿದ್ದೆ.ಇದು ದೂರದರ್ಶನದಲ್ಲಿ 30_40 ಬಾರಿ ಪ್ರಸಾರವಾಗುತ್ತು.

ವಿಷಯ ಸ್ವಲ್ಪ ಹೊಸದಾದ್ದರಿಂದ ನಾನು ಪದಗಳನ್ನು ಹುಡುಕಿ,ಸೃಷ್ಟಿಸಿ ಬಳಸುತ್ತಿದ್ದುದೂ ಉಂಟು.ಈಗ ಇವೆಲ್ಲ ಇತಿಹಾಸ.

 - ಎಂ.ನರಸಿಂಹಮೂರ್ತಿ


ಇದನ್ನೂ ಓದಿ: (ಪರ್ಯಾಯ.ಕಾಮ್‌ ವೆಬ್‌ ಸೈಟಿನ ಲೇಖನಗಳು ಪುಟಕ್ಕೆ ಭೇಟಿ ಕೊಡಿ)

ಪ್ಲಾಸ್ಟಿಕ್ ಬಾಟಲಿ ನೀರು ವಿಷಕಾರಿ, ಪರಿಸರಕ್ಕೆ ಹಾನಿಕರ; ಪರ್ಯಾಯ ಹುಡುಕಿ: ಕೇಂದ್ರಕ್ಕೆ ಮದ್ರಾಸ್ ಹೈ ಸೂಚನೆ

PARYAYA: ಛಾಯಾಚಿತ್ರ ನೆನಪು ಮೂಡಿಸಿದಾಗ:   ಛಾಯಾಚಿತ್ರ ನೆನಪು ಮೂಡಿಸಿದಾಗ ಕಿರು ಲೇಖನ-1 ನಾ ನು ಹೇಳಲು ಹೊರಟಿರುವುದು 94-95 ರ ಸಮಯದ ಘಟನೆ.ಪರಿಸರದ ವಿಷಯದಲ್ಲಿ   ಸ್ವಯಂ ಪ್ರೇರಣೆಯಿಂದ ಒಂದಷ್ಟು ಕೆಲಸ ಮಾಡುತ್...

No comments:

Post a Comment