Thursday, August 18, 2016

ವಿಶ್ವದಾಖಲೆಗೆ ಅಂತರ್ಮನ ’ರಕ್ಷಾಬಂಧನ’

ವಿಶ್ವದಾಖಲೆಗೆ ಅಂತರ್ಮನ ’ರಕ್ಷಾಬಂಧನ

ವಿಶ್ವಕ್ಕೆ ಸ್ನೇಹದ ಸಂದೇಶ ಸಾರಿದ ನ್ಯಾಷನಲ್ ಕಾಲೇಜು ಮೈದಾನ
ಬೆಂಗಳೂರು: ಅಲ್ಲಿ ಅಸೂಯೆ ಬದಲು ಸ್ನೇಹ ಮನೆಮಾಡಿತ್ತು., ಅಹಂ ಬದಲು ವಿನಮ್ರತೆ ಮೇಳೈಸಿತ್ತು. ದ್ವೇಷಿಸುವ ಬದಲು ಪ್ರೀತಿಸುವ ಸಾವಿರಾರು ಹೃದಯಗಳು ಒಂದೆಡೆ ಸೇರಿದ್ದವು. ಹೀಗೆ ಸಾವಿರಾರು ಮನಸ್ಸುಗಳನ್ನು ಒಂದಾಗಿಸಿದ್ದು ಸ್ನೇಹದಸೂತ್ರವಾಗಿರುವಸಹೋದರತೆಯ ಶ್ರೋತವಾಗಿರುವ  ರಾಖಿಹಬ್ಬ.  

ಹೌದು, ಶ್ರಾವಣಹುಣ್ಣಿಮೆಯ ಪವಿತ್ರ ದಿನವಾದ ಗುರುವಾರ, 18 ಆಗಸ್ಟ್ 2016ರಂದು  ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ಅಭೂತಪೂರ್ವ ಸ್ನೇಹಪರ್ವಕ್ಕೆ, ಅಣ್ಣ-ತಂಗಿಯರ ಸಹೋದರತೆಗೆ ಸಾಕ್ಷಿಯಾಯಿತು. ಪರಮಪೂಜ್ಯ ದಿಗಂಬರ ಸಂತಶ್ರೇಷ್ಠ ಅಂತರ್ಮನ ಶ್ರೀ ೧೦೮ ಪ್ರಸನ್ನ ಸಾಗರಜೀ ಮಹಾರಾಜರ ನೇತೃತ್ವದಲ್ಲಿ ರಾಖಿ ಹಬ್ಬ ವಿಶ್ವದಾಖಲೆ ಸೇರಿತು

ಮುನಿಶ್ರೀ ೧೦೮ ಪಿಯೂಷ ಸಾಗರಜೀ ಮಹಾರಾಜ್ ಅವರ ಮಾರ್ಗದರ್ಶನಲ್ಲಿ ಒಡಹುಟ್ಟಿದ ನೂರಾರು ಅಣ್ಣ-ತಂಗಿಯರು ಪರಸ್ಪರ ರಾಖಿ ಕಟ್ಟುವ ಮೂಲಕ ಸಹೋದರತೆಯ ಸಂದೇಶ ಸಾರಿದರು.

ಅಣ್ಣ-ತಂಗಿಯರ ಸಹೋದರತೆ ಸಾರುವ ರಾಖಿಹಬ್ಬದ ಪ್ರಯುಕ್ತ ತ್ಯಾಗಿ ಸೇವಾ ಸಮಿತಿ ಟ್ರಸ್ಟ್ ವಿಶೇಷ ಧರ್ಮ ಧ್ವಜಾರೋಹಣದೊಂದಿಗೆ ವಿಶ್ವದಾಖಲೆಯ ರಕ್ಷಾಬಂಧನ  ಕಾರ್ಯಕ್ರಮಕ್ಕೂ ಮುನ್ನ ಅಂತರ್ಮನ ಶ್ರೀ ೧೦೮ ಪ್ರಸನ್ನ ಸಾಗರಜೀ ಮಹಾರಾಜ್, ಮುನಿಶ್ರೀ ೧೦೮ ಪಿಯೂಷ ಸಾಗರಜೀ ಮಹಾರಾಜ್, ಕ್ಷುಲ್ಲಕ ೧೦೫ ಶ್ರೀ ಪರ್ವಸಾಗರ್ಜೀ ಮಹಾರಾಜ್ ಅವರಿಂದಅಹಿಂಸಾ ಸಂಸ್ಕಾರ ಪಾದಯಾತ್ರೆನಡೆಯಿತು. ವಿವಿಪುರಂನ ಮಹಾವೀರ ಧರ್ಮಶಾಲಾದಿಂದ ಆರಂಭಗೊಂಡ ಪವಿತ್ರ ಯಾತ್ರೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡಿತು. ನಂತರ ಜೈನ ಮನಿಶ್ರೀಗಳಿಂದ ಧರ್ಮ ಧ್ವಜಾರೋಹಣ ನಡೆಯಿತು. ಮೂಲಕ ವಿಶ್ವದಾಖಲೆಯಅಂತರ್ಮನ ರಕ್ಷಾಬಂಧನ ಮಹೋತ್ಸವಕ್ಕೆ ಚಾಲನೆ ದೊರೆಯಿತು.

ಇದೇವೇಳೆ, ಅಂತರ್ಮನ ಶ್ರೀ ೧೦೮ ಪ್ರಸನ್ನ ಸಾಗರಜೀ ಮಹಾರಾಜ್ಜೀ ಅವರಿಗೆ ಜೈನ ಬಂಧುಗಳು ಚಿನ್ನ ಮತ್ತ ಬೆಳ್ಳಿಯ ಎಳೆಗಳಿಂದ ಮಾಡಿದ ರಾಖಿಯನ್ನು ಕಟ್ಟಿ ಆಶೀರ್ವಾದ ಪಡೆದರು. ಬಳಿಕ ರಕ್ಷಾಬಂಧನದ ಮಹತ್ವದ ಬಗ್ಗೆ ಮಾತನಾಡಿದ  ಶ್ರೀ ೧೦೮ ಪ್ರಸನ್ನ ಸಾಗರಜೀ ಮಹಾರಾಜ್ಜೀ,    ವಿವಿಧತೆಯಲ್ಲಿ ಏಕತೆ ನಮ್ಮ ವಿಶೇಷತೆ. ಪರಸ್ಪರರು ವ್ಯಕ್ತಿಗೌರವ ನೀಡುವ ಮೂಲಕ ಸಹೋದರರಂತೆ ಬಾಳಬೇಕು. ಅಸೂಯೆ ಬದಲು ಸ್ನೇಹ, ಅಹಂ ಬದಲು ವಿನಮ್ರತೆ, ನಮ್ಮ ಹೃದಯದಲ್ಲಿ ಮನೆಮಾಡಲಿ ಎಂದು ಹಾರೈಸಿದರು.

ಬೃಹತ್ ವಿಶೇಷ ರಕ್ಷಾಬಂಧನ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

No comments:

Post a Comment